Andolana originals

ರೈಲ್ವೆ ಕೆಳಸೇತುವೆ ಶಿಥಿಲ

ಎಸ್.ಎಸ್.ಭಟ್

ನಂ.ಗೂಡು: ಕಳಚಿ ಬೀಳುತ್ತಿದೆ ಸೀಲಿಂಗ್ ಕಾಂಕ್ರೀಟ್; ವಾಹನ ಸವಾರರಲ್ಲಿ ಆತಂಕ 

ನಂಜನಗೂಡು: ನಗರದ ರೈಲು ನಿಲ್ದಾಣಕ್ಕೆ ತಾಗಿದಂತೆ ಮಹಾತ್ಮ ಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳಸೇತುವೆಯ ಸೀಲಿಂಗ್ ಕಾಂಕ್ರೀಟ್ ಚಾವಣಿ ಸಹಿತ ಕಳಚಿ ಬೀಳುತ್ತ ತುಕ್ಕು ಹಿಡಿದ ಕಬ್ಬಿಣದ ಸರಳುಗಳ ದರ್ಶನವಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

೨೦೦೪ರಲ್ಲಿ ಕಾಮಗಾರಿ ಆರಂಭವಾಗಿ ೨೦೦೯ರಲ್ಲಿ ನಂಜನಗೂಡು-ಚಾಮರಾಜನಗರಕ್ಕೆ ರೈಲು ಸಂಚಾರಕ್ಕೆ ಅನುವಾದ ಈ ಸೇತುವೆಯ ಕೆಳಭಾಗದ ಸೀಲಿಂಗ್ ಕಾಂಕ್ರೀಟ್ ಕೇವಲ ೨೪ ವರ್ಷಗಳಲ್ಲಿ ಉದುರಿ ಬೀಳುವಂತಾಗಿರುವುದು ಈ ಸೇತುವೆಯ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.

ಗುರುವಾರ ತಡ ರಾತ್ರಿ ಹಗಲಿನವೇಳೆ ಈ ಸೇತುವೆಯ ಕೆಳ ಭಾಗದ ಸೀಲಿಂಗ್ ಕಾಂಕ್ರೀಟ್ ಪ್ಲಾಸ್ಟರ್ ಕಳಚಿ ಬಿದ್ದಿದೆ. ಆ ಸಮಯದಲ್ಲಿ ಯಾವುದೇ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸದಿದ್ದರಿಂದ ಅನಾಹುತ ತಪ್ಪಿದೆ. ಹಗಲಿನ ವೇಳೆ ಏನಾದರೂ ಈ ಸೀಲಿಂಗ್ ಕಾಂಕ್ರೀಟ್ ಕಳಚಿ ಬಿದ್ದಿದ್ದರೆ ಭಾರಿ ಅನಾಹುತ ವಾಗುತ್ತಿತ್ತು. ಹಾಗಾಗಿ ಈಗ ಈ ಕೆಳಸೇತುವೆಯಲ್ಲಿ ಸಂಚರಿಸುವುದಕ್ಕೆ ಭಯಪಡು ವಂತಾಗಿದೆ.

೨೦೦೪ರಲ್ಲಿ ಕಾಮಗಾರಿ ಆರಂಭವಾದಾಗಲೇ ಕೆಳ ಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂಬ ಕೂಗು ಕೇಳಿ ಬಂದಿತ್ತು. ಕಪಿಲೆಯಲ್ಲಿ ಪ್ರವಾಹ ಬಂದಾಗಲೆಲ್ಲ ನದಿಯಿಂದ ಸಾಕಷ್ಟು ದೂರವಿರುವ ಇಲ್ಲಿ ಪ್ರವಾಹದ ನೀರು ೨-೩ ಅಡಿಯವರೆಗೂ ಬಂದು ನಿಲ್ಲುತ್ತಿರುವುದು ಈ ಸೇತುವೆಯ ಅವೈಜ್ಞಾನಿಕತೆಗೆ ಸಾಕ್ಷಿಯಾಗಿದೆ. ನಾಲ್ಕು ಶತಮಾನಗಳ ಹಿಂದೆ ಕಪಿಲಾ ನದಿಗೆ ನಿರ್ಮಿಸಿದ ಸೇತುವೆ ಮೂರೂ ದಶಕಗಳಿಂದ ನಿರ್ವ ಹಣೆಯೇ ಇಲ್ಲದಿದ್ದರೂ ಇಂದಿಗೂ ಸಾಕಷ್ಟು ಭದ್ರವಾಗಿಯೇ ಇದೆ. ಆದರೆ, ಈ ಕೆಳಸೇತುವೆ ೨೪ ವರ್ಷಕ್ಕೇ ಉದುರಿ ಬೀಳುವಂತಾಗಿರುವುದು ನಮ್ಮ ಆಧುನಿಕ ತಾಂತ್ರಿಕತೆಯ ವೈ-ಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಶಾಸಕ ದರ್ಶನ್ ಧ್ರುವನಾರಾಯಣ ಅವರು ಎರಡೂ ಕಡೆಯ ಗೋಡೆಗಳಿಗೆ ಬಣ್ಣ ಬಳಿಸಿ ಆ ಗೋಡೆಯ ಮೇಲೆ ಕಲಾಕೃತಿಗಳ ಚಿತ್ರ ಬಿಡಿಸಿ ಆಕರ್ಷಕ ರೂಪ ಕೊಡುತ್ತಿರುವ ಹೊತ್ತಿನಲ್ಲೇ ಸೇತುವೆಯ ಕೆಳಭಾಗದ ಕಾಂಕ್ರೀಟ್ ಕಳಚಿ ಬೀಳಲಾರಂಭಿಸಿರುವುದು ವಿಪರ್ಯಾಸ.

” ರೈಲ್ವೆ ಕೆಳಸೇತುವೆಯ ಸೀಲಿಂಗ್ ಕಾಂಕ್ರೀಟ್ ಬೀಳುತ್ತಿದ್ದು ಅದನ್ನು ದುರಸ್ತಿಪಡಿಸುವ ಹೊಣೆಗಾರಿಕೆ ರೈಲ್ವೆ ಇಲಾಖೆಯದ್ದಾಗಿದ್ದು , ತಕ್ಷಣ ದುರಸ್ತಿಪಡಿಸಿ ಆಗಬಹುದಾದ ಅನಾಹುತವನ್ನು ತಪ್ಪಿಸಬೇಕು ಎಂದು ನಗರಸಭೆಯಿಂದ ಶುಕ್ರವಾರವೇ ರೈಲ್ವೆ ಇಲಾಖೆಯ ಹಿರಿಯ ಇಂಜಿನಿಯರ್‌ಗೆ ಪತ್ರ ಬರೆಯಲಾಗಿದೆ. ಅನಾಹುತವಾದಲ್ಲಿ ರೈಲ್ವೆ ಇಲಾಖೆಯೇ ಜವಾಬ್ದಾರಿ.”

ಬಸವರಾಜು, ಪೌರಾಯುಕ್ತ, ಮಹೇಶ, ಇಂಜಿನಿಯರ್

 

 

ಆಂದೋಲನ ಡೆಸ್ಕ್

Recent Posts

80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ: ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ನವದೆಹಲಿ: ದೇಶದಾದ್ಯಂತ ಇಂದು 80ನೇ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ…

4 mins ago

ಓದುಗರ ಪತ್ರ: ಮಹಿಳಾ ಸಿಬ್ಬಂದಿ ಲಂಚದ ಮಸಿ ಅಂಟಿಸಿಕೊಳ್ಳದಂತೆ ಎಚ್ಚರ ವಹಿಸಬೇಕು

ಪ್ರಾಮಾಣಿಕತೆ, ದಕ್ಷತೆ ವಿಷಯ ಬಂದಾಗ ಹೆಂಗಸರಿಗೆ ಸಿಗುವ ‘ಅಂಕ’ ಸ್ವಲ್ಪ ಹೆಚ್ಚೆ ಎಂಬ ಭಾವನೆ ಈ ಹಿಂದಿನಿಂದಲೂ ಇದೆ. ಅದೇ…

18 mins ago

ಓದುಗರ ಪತ್ರ: ಅಡಕೆ ಬೆಳೆಗಾರರ ಹಿತವೂ ಮುಖ್ಯವಲ್ಲವೇ?

ರಾಜ್ಯ ಸರ್ಕಾರವು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದ ಮೇಲೆ ಒಂದು…

20 mins ago

ಓದುಗರ ಪತ್ರ: ಈ ಬಾರಿಯ ದಸರಾ ಉದ್ಘಾಟನೆಗೆ ಹೆಚ್.ಡಿ.ದೇವೇಗೌಡರನ್ನು ಆಯ್ಕೆಮಾಡಲಿ

ಪ್ರತಿ ವರ್ಷ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಬಹು ವಿಜೃಂಭಣೆಯಿಂದ ಮೈಸೂರಿನಲ್ಲಿ ಹತ್ತು ದಿನಗಳ ಕಾಲ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ…

21 mins ago

ಮೈಸೂರು ಸ್ವಚ್ಛವಾಗಿಡಲು ಜನರಿಗೆ ಕೆಲ ಅಭ್ಯಾಸ ಅಗತ್ಯ

ಟಿ.ಕೆ.ಹರೀಶ್ ಮನೆ ಮುಂದಿನ ರಸ್ತೆಯ ಕಸ ವಿಲೇವಾರಿಗೆ ನಾಗರಿಕರು ಜಾಗೃತರಾಗಬೇಕು ಮೈಸೂರು ಎಂದರೆ ಕೇವಲ ಒಂದು ನಗರವಲ್ಲ. ಅದು ಕರ್ನಾಟಕದ…

24 mins ago

ಜೆನ್ ಝೀಗಳಿಗೆ ಒಂದೆಡೆ ದೇಶಾಭಿಮಾನ; ಮತ್ತೊಂದೆಡೆ ಅಸಮಾಧಾನ

ಕೆ.ಎಸ್. ಚಂದ್ರಶೇಖರ ಮೂರ್ತಿ ಮೈಸೂರು: ಸ್ವಾತಂತ್ರ್ಯವೆಂದರೆ ಕೇವಲ ಧ್ವಜಾರೋಹಣ, ದೇಶಭಕ್ತಿ ಗೀತೆಗಳು ಮತ್ತು ಸಿಹಿ ಹಂಚಿಕೆಯ ಸಂಭ್ರಮವಲ್ಲ. ಅದು ಸ್ವಾತಂತ್ರ್ಯದ…

33 mins ago