ದೂರ ನಂಜುಂಡಸ್ವಾಮಿ
ಜಯಪುರ ಹೋಬಳಿ ವ್ಯಾಪ್ತಿಯಲ್ಲಿ ಬೆಳೆ ಒಣಗುತ್ತಿರುವ ಹಿನ್ನೆಲೆಯಲ್ಲಿ ಅನ್ನದಾತರು ಕಂಗಾಲು
ದೂರ: ಮೈಸೂರು ತಾಲ್ಲೂಕಿನ ಜಯಪುರ ಹೋಬಳಿ ವ್ಯಾಪ್ತಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಮುಂಗಾರು ಮಳೆಯಾಗದ ಕಾರಣ ರೈತರು ಬೆಳೆ ಬೆಳೆಯಲಾಗದೆ ಹಾಗೂ ಬೆಳೆದ ಬೆಳೆಯೂ ಒಣಗುತ್ತಿರುವುದರಿಂದ ಆತಂಕದಿಂದ ಆಗಸದತ್ತ ಮುಖ ಮಾಡಿದ್ದಾರೆ.
ಜಯಪುರ ಹೋಬಳಿ ವ್ಯಾಪ್ತಿಯ ದೂರ, ಮುರುಡಗಳ್ಳಿ, ಉದ್ಬೂರು, ದೊಡ್ಡಕಾಟೂರು, ತಳೂರು, ಮಾರ್ಬಳ್ಳಿ, ಮಾರ್ಬಳ್ಳಿಹುಂಡಿ, ಕೆಲ್ಲಹಳ್ಳಿ, ಟಿ.ಕಾಟೂರು, ಅರಸಿನಕೆರೆ, ಹಾರೋ ಹಳ್ಳಿ, ಗುಜ್ಜೇಗೌಡನಪುರ, ಮಂಡನಹಳ್ಳಿ, ಮದ್ದೂರು, ಕಲ್ಲಹಳ್ಳಿ ಮುಂತಾದ ಗ್ರಾಮಗಳ ಬಹುತೇಕ ರೈತರು ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದಾರೆ.
ಅಲ್ಲದೇ ವಿವಿಧ ಗ್ರಾಮಗಳಲ್ಲಿ ರೈತರು ಧಾನ್ಯಗಳಾದಹೆಸರು, ಅಲಸಂದೆ, ಉದ್ದು, ಅವರೆ ಕಾಯಿ ಹಾಗೂ ಕೆಲವು ತರಕಾರಿಗಳನ್ನು ಬೆಳೆದಿದ್ದರು. ಹೂ ಬಿಡುವ ಹಂತದಲ್ಲಿದ್ದ ಬೆಳೆಗೆ ಮಳೆ ಕೈಕೊಟ್ಟ ಕಾರಣ ಶೇ.೨೫ರಷ್ಟು ಬೆಳೆ ಕೈ ಸೇರುತ್ತದೆ ಎಂಬ ಭರವಸೆಯೂ ರೈತರಲ್ಲಿ ಕಾಣುತ್ತಿಲ್ಲ. ರೈತರು ಒಂದು ಎಕರೆಗೆ ಕನಿಷ್ಠ ರೂ. ಹತ್ತು ಸಾವಿರದಿಂದ ಗರಿಷ್ಟ ಮೂವತ್ತು ಸಾವಿರ ರೂ.ವರೆಗೆ ಖರ್ಚು ಮಾಡಿದ್ದಾರೆ. ಕಳೆದ ವರ್ಷ ಉತ್ತಮವಾಗಿ ಮಳೆ ಬಿದ್ದರೂ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆತಿರಲಿಲ್ಲ. ಕಳೆದ ಐದಾರು ವರ್ಷಗಳಿಂದ ರೈತರಿಗೆ ಬಿತ್ತನೆಗೆಂದು ಮಾಡಿದ ಖರ್ಚು ಕೂಡ ದೊರಕುತ್ತಿಲ್ಲ.
ಹೋಬಳಿ ವ್ಯಾಪ್ತಿಯಲ್ಲಿ ಕೆರೆಕಟ್ಟೆಗಳ ನೀರು ದಿನ ಕಳೆದಂತೆ ಬರಿದಾಗುತ್ತಿದೆ. ಅಂತರ್ಜಲ ಮಟ್ಟ ಕುಸಿತಗೊಂಡು ಬೋರ್ವೆಲ್ಗಳಲ್ಲಿಯೂ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಆದ್ದರಿಂದ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಹೋಬಳಿ ಕೇಂದ್ರಗಳಲ್ಲಿ ದನ-ಕರುಗಳಿಗೆ ಮೇವು ಕೇಂದ್ರಗಳನ್ನು ತೆರೆಯಬೇಕೆಂದು ಹಾಗೂ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕೆಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ.
” ಈ ಬಾರಿ ಸಕಾಲಕ್ಕೆ ಮಳೆಯಾಗದೆ ಮಳೆ ಕೊರತೆಯಾದರೂ ರೈತರು ವಾರ್ಷಿಕ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಧಾನ್ಯಗಳನ್ನು ಬಿತ್ತನೆ ಮಾಡಿದ್ದರು. ಆದರೆ ಮಳೆ ಕಡಿಮೆಯಾದ್ದರಿಂದ ಇಳುವರಿ ಪ್ರಮಾಣದಲ್ಲಿ ಕುಂಠಿತವಾಗಬಹುದು.”
-ಅರುಣಾ, ರೈತ ಸಂಪರ್ಕ ಅಧಿಕಾರಿ, ಜಯಪುರ
” ಹಾರೋಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು ನೂರಾರು ಎಕರೆಯಷ್ಟು ಕುಂಬಳಕಾಯಿ ಬಿತ್ತನೆ ಮಾಡಿ ಹೂ ಮತ್ತು ಕಾಯಿ ಬಿಡುವ ಸಂದರ್ಭದಲ್ಲಿ ಮಳೆ ಕೈಕೊಟ್ಟ ಕಾರಣ ಬಿಟ್ಟ ಕಾಯಿ ದಪ್ಪ ಆಗದೆ ಒಣಗುತ್ತಿವೆ. ಸರ್ಕಾರ ರೈತರಿಗೆ ಪರಿಹಾರ ನೀಡಬೇಕು.”
-ಹೆಚ್.ಎನ್.ಚಂದ್ರ, ರೈತ, ಹಾರೋಹಳ್ಳಿ
ತೆರವಾಯಿತೆ ಫುಟ್ಪಾತ್ನಲ್ಲಿ ಕಟ್ಟಿಕೊಂಡಿದ್ದ ಅನ್ನದ ಬಟ್ಟಲು; ನಿರುದ್ಯೋಗ ನಿವಾರಣಾತೊಟ್ಟಿಲು ಶಕ್ತಿ ತುಂಬಲಿ ಮತ್ತೊಂದು ಕಟ್ಟಲು ಎಲ್ಲರ ಜೀವನ ಜಾಲವೇ ಮುಂದಕೂ…
ಕೆಪಿಎಸ್ಸಿ ಭ್ರಷ್ಟಾಚಾರದ ಕುರಿತು ಇತ್ತೀಚಿನ ಸುದ್ದಿ ಕಣ್ಣು ತೆರೆಸುವಂತಿದೆ. ದಕ್ಷ ಅಧಿಕಾರಿಗಳನ್ನು ಆರಿಸಬೇಕಾದ ಸಾಂವಿಧಾನಿಕ ಸಂಸ್ಥೆಯ ಅಧ್ಯಕ್ಷರೇ ಅಮಾನತ್ತುಗೊಂಡಿರುವುದು ಇಡೀ…
ಮಾಸ್ಕ್ ಧರಿಸಿ ಸಿಟಿ ಬಸ್ಸಿನಲ್ಲಿ ಸಂಚರಿಸಿ ರಿಯಾಲಿಟಿ ಚೆಕ್ ನಡೆಸಿದ ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಕರ್ತವ್ಯಲೋಪ ಎಸಗಿದ…
ಸುಪ್ರೀಂಕೋರ್ಟ್ ಆದೇಶದಂತೆ ಬೆಂಗಳೂರಿನ ನಂತರ ಈಗ ಮೈಸೂರಿನಲ್ಲೂ ಫುಟ್ಪಾತ್ ಒತ್ತುವರಿ ತೆರವು ಮಾಡುತ್ತಿರುವುದು ಸ್ವಾಗತಾರ್ಹ. ಇದರಿಂದ ಪಾದಚಾರಿಗಳಿಗೆ ಅನುಕೂಲವಾಗುತ್ತದೆ. ಇದೇ…
ರಾಜ್ಯ ಸರ್ಕಾರವು ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅಧಿಸೂಚನೆ ಹೊರಡಿಸಿದು, ಸ್ಪರ್ಧಾಕಾಂಕ್ಷಿಗಳು ಆನ್ಲೆ ನ್ ಮೂಲಕ ಅರ್ಜಿಸಲ್ಲಿಸಲು ಕರ್ನಾಟಕ ಪರೀಕ್ಷಾ…
ಡಿಜಿಟಲ್ ಗುರುತಿನ ವ್ಯವಸ್ಥೆಯಾಗಿ ಹುಟ್ಟಿಕೊಂಡ ಆಧಾರ್, ಡಿಜಿಟಲ್ ಆಡಳಿತಕ್ಕೆ ಚುಕ್ಕಾಣಿಯಾಗತೊಡಗಿದ್ದು, ಜನರಲ್ಲಿ ತಮ್ಮ ಖಾಸಗಿತನದ ಸುರಕ್ಷತೆಯ ಬಗ್ಗೆ ಆತಂಕಗಳನ್ನು ನಿಧಾನಕ್ಕೆ…