Andolana originals

ಬಡತನವಿದ್ದರೂ ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸುವ ಉಗಾದಿ ಸುಖ

ಜೇನುಕುರುಬರ ಡೋಬಿ, ಮಾವುತ ಮತ್ತು ಗಾಯಕ ದುಬಾರೆ ಆನೆ ಶಿಬಿರ

ಬಡತನವಿದ್ದರೂ ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸುವ ಉಗಾದಿ ಸುಖ ಕಾಡಿನೊಳಗಿರುವ ಜೇನು ಕುರುಬರಾದ ನಮಗೆ ಯುಗಾದಿ ಎಂದರೆ ನಮ್ಮ ಸುತ್ತಮುತ್ತಲಿನ ಪರಿಸರದ ಆರಾಧನೆ. ನಮ್ಮ ದೇವರೂ ಕಾಡಿನೊಳಗೆ ವಾಸಿಸುವನು. ದೇವರನ್ನು ನಾವು ಪ್ರಾಣಿಗಳೊಡನೆ ಹೋಲಿಸುತ್ತೇವೆ. ಯುಗಾದಿಯಂದು ಕಾಡಿನೊಳಗಿರುವ ನಮ್ಮ ದೇವರನ್ನು ಪೂಜಿಸಲು ಹೋಗುತ್ತೇವೆ. ದೇವರಿಗೂ ಕಾಡು ಪ್ರಾಣಿಗಳಿಗೂ ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ.

ಯುಗಾದಿಯೆಂದರೆ ನಮ್ಮಲ್ಲಿ ಬದುಕಿದ್ದವರ ಹಬ್ಬ ಮಾತ್ರವಲ್ಲ. ಸತ್ತವರು ದೇವರೊಡನೆ ಇದ್ದಾರೆ ಎಂಬ ನಂಬಿಕೆ ನಮ್ಮದು. ಸತ್ತವರನ್ನು ದಫನ ಮಾಡಿದ ಒಂಭತ್ತು ದಿನಗಳ ನಂತರ ತಿಥಿ ಮಾಡಿ ಮುಗಿಸಿದರೆ ಮತ್ತೆ ಸತ್ತವರಿಗೆ ಉಣಬಡಿಸುವುದು ಯುಗಾದಿ ಹಬ್ಬಕ್ಕೆ. ಇದನ್ನು ನಾವು ‘ಪ್ರಸಾದ’ ಎಂದು ಕರೆಯುತ್ತೇವೆ. ದೇವರ ಪ್ರಸಾದದ ಜೊತೆಗೆ ಈ ಪ್ರಸಾದವೂ ನಮಗೆ ಯುಗಾದಿ ಹಬ್ಬಕ್ಕೆ ವಿಶೇಷವಾಗಿದೆ. ಸತ್ತವರು ದೇವರೊಡನೆ ಸೇರಿರುವುದರಿಂದ ನಾವು ಅವರನ್ನೂ ದೇವರಂತೆಯೇ ಕಾಣುತ್ತೇವೆ.

ಒಂದೊಂದು ಮನೆಗೆ ಒಬ್ಬೊಬ್ಬ ದೇವರಿದ್ದು ಆ ಮೂಲಕ ಜೇನುಕುರುಬರು ಗುರುತಿಸಲ್ಪಡುತ್ತಾರೆ. ದೇವರು ಕಣ್ಣಿಗೆ ಕಾಣುವುದಿಲ್ಲ. ಪ್ರಾಣಿಗಳು ನಮ್ಮ ಜೀವನಕ್ಕೆ ಆಧಾರ. ಇದೇ ಕಾರಣಕ್ಕೆ ನಮ್ಮಲ್ಲಿ ಎಲ್ಲಾ ದೇವರ ನಂಬಿಕೆಯ ಹಿಂದೆಯೂ ಪ್ರಾಣಿಗಳ ಆರಾಧನೆ ಕಾಣುತ್ತದೆ. ‘ನಂಬಿಕೆ ಎನ್ನುವುದು ನಾವು ನಂಬಿದಂತೆ’ ಎನ್ನುವುದು ಜೇನುಕುರುಬರ ಸಂಸ್ಕೃತಿ, ಆದರೆ ಇತ್ತೀಚಿನ ದಿನಗಳಲ್ಲಿ ಕಾಡು ನಾಶ, ಪ್ರಾಣಿಗಳ ಬೇಟೆ ಇವೆಲ್ಲ ಹೆಚ್ಚಾಗುತ್ತಿರುವುದನ್ನು ಕಂಡು ಮನಸ್ಸಿನಲ್ಲಿ ಅಂಜಿಕೆ ಹುಟ್ಟುತ್ತಿದೆ.

ಯುಗಾದಿಯಂದು ದೇವರಿಗೆ ಸಿಹಿ ಹಾಗೂ ಕಹಿ ಪದಾರ್ಥಗಳನ್ನು ಇಡುತ್ತೇವೆ. ದೇವರಿಗೆ ಮಾಂಸಾಹಾರ ಇಲ್ಲ. ಆದರೆ, ಕಾಡಿನೊಳಗೆ ಹೋಗಿ ಮಾಡುವ ಹೊಸ ತೊಡಕಿನಲ್ಲಿ ಮಾಂಸಾಹಾರ ಇದ್ದೇ ಇದೆ. ಆ ಸಂದರ್ಭದಲ್ಲಿ ಸತ್ತವರಿಗೂ ಎಡೆ ಇಡುವ ಮೂಲಕ ಜೀವಂತವಾಗಿರಿಸಿಕೊಳ್ಳುತ್ತೇವೆ. ಆದರೂ ಹಿಂದಿದ್ದ ಹಬ್ಬದ ಸಂಭ್ರಮ ಈಗಿಲ್ಲ. ಅಂದು ಬಡತನವಿದ್ದರೂ ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸುವ ಸುಖ ಇತ್ತು. ಹಿರಿಯರು ಪುಣ್ಯವಂತರು. ಅವರ ದುಡಿಮೆ ಮುಂದೆ ನಮ್ಮದೆಲ್ಲವೂ ಸುಳ್ಳು. ಈಗಿನ ಕಾಲಕ್ಕೆ ಎಲ್ಲವೂ ಬದಲಾಗಿದೆ. ಊರ ಹೊರಗೆ ಕಾಡಿನಲ್ಲಿ ಹಬ್ಬ ಆಚರಿಸುವವರೂ ಬೆರಳೆಣಿಕೆ ಮಂದಿ ಸಂಪ್ರದಾಯಗಳು ಬೇರೆ ಬೇರೆ ಇರಬಹುದು, ಆದರೆ ಎಲ್ಲರೂ ಸೇರಿ ಒಟ್ಟಾಗಿ ಆಚರಿಸಿದರೆ ಮಾತ್ರ ಹಬ್ಬ.

ಆಂದೋಲನ ಡೆಸ್ಕ್

Recent Posts

ಯುಗಾದಿ ವಿಶೇಷ | ಧಾರವಾಡದ ಮಣ್ಣಿನಲ್ಲಿ ಹಸಿರು ಚಿಗುರಿದ ಕಂಪನ

ಭಾಗ್ಯಜ್ಯೋತಿ ಹಿರೇಮಠ, ಗುಡಗೇರಿ, ಕಥೆಗಾರ್ತಿ ಮತ್ತು ಕವಯಿತ್ರಿ ಉತ್ತರ ಕರ್ನಾಟಕದ ಬಯಲು ಸೀಮೆಯಲ್ಲಿ ಚೈತ್ರದ ಬಿಸಿಲು ಅಪ್ಪಳಿಸುತ್ತಿದ್ದಂತೆಯೇ ಗಾಳಿಯಲ್ಲಿ ಒಣಗಿದ…

17 mins ago

ಮಂಡ್ಯ | ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆ

ಮಂಡ್ಯ : ತಾಲೂಕಿನ ಸೂನಗಹಳ್ಳಿ-ಬೂತನಹೊಸೂರು ನಡುವಿನ ಹೆಬ್ಬಾಳ ಕಟ್ಟೆ ಬಳಿ ಕಬ್ಬಿನ ಗದ್ದೆಯಲ್ಲಿ ಬುಧವಾರ ಮೂರು ಚಿರತೆ ಮರಿಗಳು ಪತ್ತೆಯಾಗಿವೆ.…

14 hours ago

ಹಾರ್ಮುಜ್ ಜಲಸಂಧಿ ಬಳಿ ಅಮೆರಿಕ ದಾಳಿ : ಇರಾನಿನ ಕ್ಷಿಪಣಿ ತಾಣ ನಾಶ

ಟೆಹ್ರಾನ್ : ಇರಾನ್ ಹಿಡಿತದಲ್ಲಿದ್ದ ಜಗತ್ತಿನ ಪ್ರಮುಖ ಹಾರ್ಮುಜ್ ಜಲಸಂಧಿ ಬಳಿ ಅಮೆರಿಕ ತೀವ್ರ ದಾಳಿ ನಡೆಸಿದೆ. ಜಲಮಾರ್ಗದ ಬಳಿಕ…

15 hours ago

ಮರ್ಯಾದಾ ಹತ್ಯೆ ನಿಷೇಧ ಮಸೂದೆ ಮಂಡನೆ

ಬೆಂಗಳೂರು : ರಾಜ್ಯದಲ್ಲಿ ಮರ್ಯಾದೆಯ ಹೆಸರಿನಲ್ಲಿ ಹತ್ಯೆ, ಹಲ್ಲೆ ಮತ್ತು ಬೆದರಿಕೆ ಹಾಕುವವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ…

17 hours ago

ಮೈಸೂರು ನಗರದಲ್ಲಿ ಮಳೆ ; ತಂಪಾದ ಇಳೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿಲ್ಲಿ ಬುಧವಾರ ಸಂಜೆ ಏಕಾಏಕಿ ಮಳೆ ಸುರಿದು ಬಿರು ಬಿಸಿಲಿನಿಂದ ಬಳಲಿದ್ದ ನಗರವನ್ನು ಸ್ವಲ್ಪ…

17 hours ago

ಯುಗಾದಿ ಸಂಭ್ರಮ : ಮೈಸೂರಲ್ಲಿ ಖರೀದಿ ಜೋರು

ಮೈಸೂರು : ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಹಬ್ಬದ ಕಳೆಗಟ್ಟಿದೆ. ಅರಮನೆಯಲ್ಲಿ ವಿಶೇಷ ಸಾಂಸ್ಕೃತಿಕ…

19 hours ago