Andolana originals

ಟಿಎಪಿಸಿಎಂಎಸ್ ಸದಸ್ಯರಿಗೆ ಮತಹಕ್ಕು ಕಳೆದುಕೊಳ್ಳುವ ಭೀತಿ

ಎಸ್.ಎಸ್.ಭಟ್

ನಂಜನಗೂಡು: ವ್ಯವಹಾರ ನಡೆಸಿಲ್ಲ ಎಂದು ಮತದಾನದ ಅವಕಾಶಕ್ಕೆ ಕೊಕ್ಕೆ; ಸದಸ್ಯರ ಆಕ್ರೋಶ

ನಂಜನಗೂಡು: ವ್ಯವಹಾರ ಮಾಡಲು ಅವಕಾಶವೇ ಇಲ್ಲ. ವ್ಯವಹಾರ ಮಾಡದಿದ್ದರೆ ಮತದಾನ ಮಾಡುವ ಹಕ್ಕೇ ಇಲ್ಲ. ಹೇಗಿದೆ ನೋಡಿ, ನಮ್ಮ ಚುನಾವಣಾ ವ್ಯವಸ್ಥೆ. ಇಂಥ ಅವ್ಯವಸ್ಥೆಯಿಂದಾಗಿ ನ.೨ರಂದು ನಡೆಯಲಿರುವ ನಂಜನಗೂಡು ಟಿಎಪಿಸಿಎಂಎಸ್‌ನ ೯೮೯ ಜನ ಸದಸ್ಯರು ತಮ್ಮ ಮತದಾನದ ಹಕ್ಕನ್ನೇ ಕಳೆದುಕೊಳ್ಳಬಹುದಾದ ವಿಪರ‍್ಯಾಸ ಎದುರಾಗಿದೆ.

೧,೩೦೧ ಸದಸ್ಯರಿರುವ ನಂಜನಗೂಡು ಟಿಎಪಿಸಿಎಂಎಸ್ನಲ್ಲಿ ಈಗ ಕೇವಲ ೪೧೨ ಜನರಿಗೆ ಮಾತ್ರ ಮತದಾನದ ಅವಕಾಶವಿದ್ದು, ಉಳಿದ ೯೮೯ ಜನ ಸದಸ್ಯರು ಮತದಾನದಿಂದ ವಂಚಿತರಾಗುವಂತಾಗಿದೆ. ಟಿಎಪಿಸಿಎಂಎಸ್‌ನಲ್ಲಿ ಗೊಬ್ಬರ, ಬಿತ್ತನೆ ಬೀಜ, ಕೃಷಿ ಪರಿಕರಗಳನ್ನು ಖರೀದಿಸಿ ವ್ಯವಹಾರ ಮಾಡಿರಬೇಕು. ಇಲ್ಲವೇ ಸಂಸ್ಥೆಯಲ್ಲಿ ಹಣ ಕಟ್ಟಿ ಹಿಂಪಡೆಯಬೇಕು. ಅಂಥವರು ತಮ್ಮ ೮ ಜನಪ್ರತಿನಿಽಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಇಲ್ಲಿ ಕೃಷಿಕರು ಖರೀದಿಸಬಹುದಾದ ಯಾವುದೇ ವ್ಯವಸ್ಥೆಯೇ ಇಲ್ಲವಾದ್ದರಿಂದ ಕೃಷಿಕರೇನು ಮಾಡಬೇಕು ಎನ್ನುತ್ತಾರೆ ಬಹುತೇಕ ಸದಸ್ಯರು.

ಮಂಡ್ಯ ಜಿಲ್ಲೆಯಲ್ಲೂ ಇದೇ ರೀತಿ ಪರಿಸ್ಥಿತಿ ಕಂಡು ಬಂದಾಗ ಅಲ್ಲಿನ ಸಹಾಯಕ ಇಲಾಖೆಯ ಜಂಟಿ ನಿಬಂಧಕರು ವ್ಯವಹಾರ ಮಾಡದೆ ಮತದಾನದಿಂದ ವಂಚಿತರಾದ ಎಲ್ಲ ಸದಸ್ಯರುಗಳಿಗೂ ಮತದಾನದ ಅವಕಾಶ ನೀಡಿದ್ದಾರೆ. ಅದೇ ಪರಿಸ್ಥಿತಿ ನಂಜನಗೂಡಿನಲ್ಲೂ ಎದುರಾಗಿದ್ದು, ಮಂಡ್ಯದಂತೆ ಇಲ್ಲೂ ನಮಗೆ ಮತದಾನದ ಅವಕಾಶ ನೀಡಿ ಎನ್ನುತ್ತಿದ್ದಾರೆ ನಂಜನಗೂಡು ಟಿಎಪಿಸಿಎಂಎಸ್ ಸದಸ್ಯರು.

ಕಳೆದ ತಿಂಗಳು ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲೂ ಇದು ಚರ್ಚಿತವಾಗಿ ವ್ಯವಹಾರ ಮಾಡಲು ಅವಕಾಶವೇ ಇಲ್ಲದ ನಂಜನಗೂಡು ಟಿಎಪಿಸಿಎಂಎಸ್ ಸದಸ್ಯರುಗಳಿಗೆ ತಮ್ಮ ಪ್ರತಿನಿಽಯನ್ನು ಆಯ್ಕೆ ಮಾಡುವ ಮತದಾನದ ಹಕ್ಕನ್ನು ಕಲ್ಪಿಸಬೇಕು ಎಂದು ಸರ್ವಾನುಮತದ ನಿರ್ಣಯ ಮಾಡಲಾಗಿತ್ತು. ಈಗ ಚುನಾವಣೆ ದಿನಾಂಕ ಪ್ರಕಟವಾಗಿದೆ. ಇಲ್ಲಿನ ೯೮೯ ಜನರು ಮತದಾನದ ಹಕ್ಕಿಂದ ವಂಚಿತರಾಗಿದ್ದಾರೆ. ಹಾಗಾದರೆ ಮಂಡ್ಯಕ್ಕೊಂದು ಕಾನೂನು, ಮೈಸೂರಿಗೊಂದು ಕಾನೂನು ಇದೆಯೇ ಎನ್ನುತ್ತಾರೆ ಇಲ್ಲಿನ ಟಿಎಪಿಸಿಎಂಎಸ್‌ನ ಮತದಾನದ ಹಕ್ಕಿಂದ ವಂಚಿತರಾದವರು.

ತಾಲ್ಲೂಕಿನ ೩೦ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ೨೯ ಸಹಕಾರ ಸಂಘಗಳು ತಮ್ಮ ನಾಲ್ಕು ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದ್ದು, ಈ ವ್ಯವಹಾರದ ಗೊಂದಲದಿಂದಾಗಿ ಪ್ರತಿನಿಽಗಳನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿನಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಬಂದಿದೆ.

ಒಂದು ಸಂಸ್ಥೆಗೆ ಮಾತ್ರ ಹಕ್ಕಿದೆ. ಆದರೆ ನಾಮಪತ್ರಕ್ಕೆ ಸೂಚಕರಾಗಲೂ ಬೇರ‍್ಯಾರೂ ಇಲ್ಲವಾದ್ದರಿಂದ ಚುನಾವಣೆಯ ಕಣಕ್ಕಿಳಿಯಲು ಆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹಕ್ಕಿದ್ದು, ನಾಮಪತ್ರ ಸಲ್ಲಿಸಲೇ ಅವಕಾಶವಿಲ್ಲದ ವಿಪರ್ಯಾಸ ಸಹ ಈಗ ಎದುರಾಗಿದೆ.

” ನಂಜನಗೂಡು ಟಿಎಪಿಸಿಎಂಎಸ್‌ನಲ್ಲಿ ಷೇರುದಾರ ಸದಸ್ಯರುಗಳಿಗೆ ವ್ಯವಹಾರ ಮಾಡಲು ಯಾವುದೇ ಅವಕಾಶವಿಲ್ಲದ್ದರಿಂದ ಎಲ್ಲ ೧,೩೦೧ ಸದಸ್ಯರುಗಳಿಗೂ ಮತದಾನದ ಹಕ್ಕು ಕಲ್ಪಿಸಬೇಕು. ಇಂದು ಇಲಾಖೆಯ ಜೆಆರ್ ಅವರಿಗೆ ಲಿಖಿತವಾಗಿ ಮನವಿ ಮಾಡಲಾಗಿತ್ತು. ಮಂಡ್ಯದಲ್ಲಿ ಅದಕ್ಕೆ ಪುರಸ್ಕಾರ ಸಿಕ್ಕಿದೆ. ಮೈಸೂರಲ್ಲಿ ಸಿಕ್ಕಿಲ್ಲ. ಜೆಆರ್ ಅವರು ಮಂಡ್ಯದಂತೆ ಇಲ್ಲೂ ಎಲ್ಲರಿಗೂ ಮತದಾನದ ಅವಕಾಶ ನೀಡಬೇಕು.”

-ಕುರಹಟ್ಟಿ ಮಹೇಶ, ಅಧ್ಯಕ್ಷ, ನಂಜನಗೂಡು ಟಿಎಪಿಸಿಎಂಎಸ್

” ನಂಜನಗೂಡು ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಸೆ.೨೯ರಂದು ಹಣದ ವ್ಯವಹಾರ ಮಾಡಲು ಅಂತಿಮ ದಿನ ಎನ್ನಲಾಗಿತ್ತು. ಆದರೆ ಅಕ್ಟೋಬರ್ ೪ರವರೆಗೆ ಹಣದ ವ್ಯವಹಾರ ತೋರಿಸಲಾಗಿ ಅಕ್ರಮ ಪಟ್ಟಿ ಸಿದ್ಧಪಡಿಸಲಾಗಿದ್ದು ಮಂಡ್ಯದಲ್ಲಿ ಯಾವ ಆಧಾರದ ಮೇಲೆ ಮತದಾನಕ್ಕೆ ಅವಕಾಶ ನೀಡಲಾಗಿದೆಯೋ ಅದೇ ಆಧಾರದ ಮೇಲೆ ನಂಜನಗೂಡಿನಲ್ಲಿಯೂ ಸದಸ್ಯರುಗಳಿಗೆ ಮತದಾನದ ಅವಕಾಶ ನೀಡಬೇಕು.”

-ಸಿಂಧುವಳ್ಳಿ ಕೆಂಪಣ್ಣ, ಟಿಎಪಿಸಿಎಂಎಸ್ ನಿರ್ದೇಶಕ

” ವ್ಯವಹಾರ ಮಾಡಲು ಅವಕಾಶವೇ ಇಲ್ಲದಿದ್ದರೂ ವ್ಯವಹಾರದ ನಿಮಿತ್ತ ಮತದಾನದಿಂದ ವಂಚಿತರಾದವರು ನ್ಯಾಯಕ್ಕಾಗಿ ಉಚ್ಚನ್ಯಾಯಾಲಯದ ಮೊರೆ ಹೋಗಬೇಕಾಗಿದೆ.”

-ಡಿ.ಬಿ.ಜೋಷಿ, ಸಹಕಾರ ರಂಗದ ನಿವೃತ್ತ ಅಧಿಕಾರಿ

ಆಂದೋಲನ ಡೆಸ್ಕ್

Recent Posts

ಉಪಸಭಾಪತಿಗೆ ಚಿತ್ರಹಿಂಸೆ ಆರೋಪ : ಐಪಿಎಸ್‌ ಅಧಿಕಾರಿ ಬಂಧನ

ಅಮರಾವತಿ : ಹಿಂದಿನ ವೈಎಸ್‍ಆರ್‍ಸಿಪಿ ಆಡಳಿತದ ಅವಧಿಯಲ್ಲಿ ಆಂಧ್ರ ವಿಧಾನಸಭೆಯ ಪ್ರಸ್ತುತ ಉಪಸಭಾಪತಿ ಕೆ. ರಘುರಾಮ ಕೃಷ್ಣ ರಾಜು ಅವರ…

6 hours ago

ಮಾರ್ಚ್‌ 11ರಿಂದ ವೈದ್ಯಾಧಿಕಾರಿಗಳ ಮುಷ್ಕರ : ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11ರಿಂದ…

6 hours ago

ಟ್ರಂಪ್‌ ಜಾಗತಿಕ ಸುಂಕ ರದ್ದು : ವರದಿ

ವಾಷಿಂಗ್ಟನ್ : ಕಾನೂನುಬಾಹಿರವಾಗಿ ಟ್ರಂಪ್ ವಿಧಿಸಿದ್ದ ಆಮದು ಸುಂಕ ಸಂಗ್ರಹವನ್ನ ಅಮೆರಿಕ ನಿಲ್ಲಿಸಲಿದೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಗಡಿ…

6 hours ago

ಸಫಾರಿ ಆದಾಯದ ಶೇ.35 ಭಾಗ ಕಾಡಿನಂಚಿನ ಜನಕಲ್ಯಾಣಕ್ಕೆ ಬಳಕೆ : ಖಂಡ್ರೆ

ಬೆಂಗಳೂರು : ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದ ಜನರ ಕಲ್ಯಾಣಕ್ಕಾಗಿ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಗ್ರಾಮಗಳಲ್ಲಿ…

7 hours ago

ವನ್ಯಜೀವಿ ಸಂಚಾರ | ಕಾಡಂಚಿನ ಗ್ರಾಮದ ಮುಖಂಡರಿಗೆ ಮಾಹಿತಿ ರವಾನಿಸಲು ಖಂಡ್ರೆ ಸೂಚನೆ

ಬೆಂಗಳೂರು : ಅರಣ್ಯದಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ಬಂದ ಕೂಡಲೇ ತೋಟದ ಬೆಳೆಗಾರರ ಸಂಘಟನೆ…

7 hours ago

ಮನರೇಗಾ ನಾಶ | ಜನರ ಅನ್ನ ಕಿತ್ತುಕೊಳ್ಳುತ್ತಿರುವ ಕೇಂದ್ರ ; ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ : ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್…

7 hours ago