Andolana originals

ಮೊಬೈಲ್ ಮಿತ ಬಳಕೆ; ವಿದ್ಯಾರ್ಥಿಗಳ ಬಯಕೆ

ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಸರ್ಕಾರ ಚಿಂತನೆ ಹಿನ್ನೆಲೆ ವಿದ್ಯಾರ್ಥಿಗಳ ಮನದ ಮಾತು ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ೧೬ ವರ್ಷದೊಳಗಿನ ಮಕ್ಕಳು ಮೊಬೈಲ್ ಬಳಸುವುದಕ್ಕೂ ನಿರ್ಬಂಧ ವಿಧಿಸಲು ಕೂಡ ಚಿಂತನೆ ನಡೆದಿದೆ. ಸಾಮಾಜಿಕ ಮಾಧ್ಯಮಗಳು ಹಾಗೂ ಜಾಲತಾಣಗಳಿಂದ ವಿದ್ಯಾರ್ಥಿಗಳು ಹಾಳಾಗುತ್ತಿರುವ ಆರೋಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮೊಬೈಲ್ ಬಳಕೆ ನಿಷೇಧಕ್ಕೆ ಯೋಚಿಸಲಾಗುತ್ತಿದೆ ಎನ್ನಲಾಗಿದೆ. ಸರ್ಕಾರದ ಈ ಚಿಂತನೆಯ ಬಗ್ಗೆ ಶಾಲಾ ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಇಲ್ಲಿ ನೀಡಲಾಗಿದೆ.

ಸಂಪೂರ್ಣ ಬ್ಯಾನ್ ಬೇಡ: 

ಮೊಬೈಲ್ ಬಳಕೆಯಿಂದ ಅವಿದ್ಯಾವಂತ ವ್ಯಕ್ತಿಯೂ ಎಬಿಸಿಡಿ ಕಲಿಯಬಹುದು, ಜ್ಞಾನ ಪಡೆದುಕೊಳ್ಳಬಹುದು, ಮೊಬೈಲ್ ಅನ್ನು ವಿದ್ಯಾರ್ಥಿಗಳು ಹೇಗೆ ಬಳಸಿಕೊಳ್ಳುತ್ತಾರೋ, ಅದರ ಮೇಲೆ ಅದರ ಸಾಧಕ-ಬಾಧಕಗಳು ನಿರ್ಧಾರವಾಗುತ್ತವೆ. ವಿಡಿಯೋ ನೋಡುವಾಗ ಬರುವ ಜಾಹೀರಾತುಗಳಿಗೆ ಆಕರ್ಷಣೆಗೊಂಡು ಅಮಲು ರೋಗಿಗಳಂತೆ ವ್ಯಸನಕ್ಕೆ ಒಳಗಾಗುತ್ತಾರೆ. ಅಂತಹವರನ್ನು ಯಾವುದೇ ಚಿಕಿತ್ಸೆಯಿಂದಲೂ ಹೊರ ತರಲು ಸಾಧ್ಯವಿಲ್ಲ. ಸರ್ಕಾರ ಮೊಬೈಲ್ ಸಂಪೂರ್ಣ ಬ್ಯಾನ್ ಮಾಡುವ ಬದಲು ಕೆಲವು ಮಾಪಾರ್ಟುಗಳನ್ನು ತರಲಿ.

 -ವೈ.ಎಂ.ಭರತ್, ೮ನೇ ತರಗತಿ ವಿದ್ಯಾರ್ಥಿ, ಕುಕ್ಕರಹಳ್ಳಿ ಪ್ರೌಢಶಾಲೆ, ಮೈಸೂರು

ಅಪಾಯಕಾರಿ ಆಪ್ ನಿಷೇಧ ಮಾಡಿದರೆ ಸಾಕು: 

ಸರ್ಕಾರ ಮೊಬೈಲ್ ಬ್ಯಾನ್ ಮಾಡಬಾರದು ಬದಲಾಗಿ ವಿದ್ಯಾರ್ಥಿಗಳಿಗೆ ಅಪಾಯ ಉಂಟುಮಾಡುವ ಆಪ್ಗಳನ್ನು ನಿಷೇಧ ಮಾಡಲಿ, ಹಳ್ಳಿಗಳಿಂದ ಬಸ್ ಮೂಲಕ ಬರುವ ವಿದ್ಯಾರ್ಥಿಗಳಿಗೆ ಶಾಲೆಯಿಂದ ಮನೆಗೆ ಬರುವುದು ತಡವಾದರೆ ಪೋಷಕರು ಆತಂಕಪಟ್ಟುಕೊಳ್ಳುತ್ತಾರೆ. ಮೊಬೈಲ್ ಇದ್ದರೆ ಪೋಷಕರಿಗೆ ತಡವಾಗಿ ಬರುತ್ತಿದ್ದೇನೆ ಎಂದು ಇರುವ ಸಮಸ್ಯೆ ಹೇಳಿದರೆ ಅವರು ಸಮಾಧಾನವಾಗಿರಬಹುದು. ಇನ್‌ಸ್ಟಾಗ್ರಾಮ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಂದ ವಿದ್ಯಾರ್ಥಿಗಳು ಅನೇಕ ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ. ಗೂಗಲ್, ಚಾಟ್ ಜಿಪಿಟಿ, ವಾಟ್ಸಾಪ್ ಇದ್ದರೆ ಏನೂ ಸಮಸ್ಯೆಯಾಗುವುದಿಲ್ಲ.

-ಭಾಗ್ಯಲಕ್ಷ್ಮೀ, ೮ನೇ ತರಗತಿ ಕುಕ್ಕರಹಳ್ಳಿ ಸರ್ಕಾರಿ ಪ್ರೌಢ ಶಾಲೆ, ಮೈಸೂರು

ಮೊಬೈಲ್‌ನಿಂದ ಉಪಯುಕ್ತತೆ ಇದೆ: 

ಮೊಬೈಲ್ ಬ್ಯಾನ್ ಮಾಡದಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಬ್ಯಾನ್ ಮಾಡುವ ನಿರ್ಧಾರ ಒಳ್ಳೆಯದಲ್ಲ. ಗ್ರಾಮೀಣ ಭಾಗದಿಂದ ಬರುವ ನಮಗೆ ಮೊಬೈಲ್‌ನಿಂದ ಹೆಚ್ಚು ಉಪಯುಕ್ತತೆ ಇದೆ. ಹೋಂ ವರ್ಕ್ ಹಾಗೂ ಗೊತ್ತಿಲ್ಲದ ವಿಷಯಗಳ ಬಗ್ಗೆ ಮೊಬೈಲ್ ಮೂಲಕ ತಿಳಿದುಕೊಳ್ಳಬಹುದು. ವಿದ್ಯಾರ್ಥಿಗಳು ಸಹ ರೀಲ್ಸ್ ಹಾಗೂ ಫೇಸ್‌ಬುಕ್‌ಗಳನ್ನು ಬಳಕೆ ಮಾಡಬಾರದು, ಮನೆಯವರ ಜೊತೆಗೂಡಿ ನಿಗದಿತ ಸಮಯವಷ್ಟೇ ಮೊಬೈಲ್ ಬಳಕೆ ಮಾಡಬೇಕು.

-ಸಿ.ಮೋಹನ್ , ೮ನೇ ತರಗತಿ ಸರ್ಕಾರಿ ಪ್ರೌಢ ಶಾಲೆ , ಕುಕ್ಕರಹಳ್ಳಿ, ಮೈಸೂರು

ಪೋಷಕರ ಮೇಲ್ವಿಚಾರಣೆ ಇರಲಿ:  ನಾನು ಕೂಡ ಮೊಬೈಲ್ ಬಳಸುತ್ತೇನೆ, ನಿರ್ದಿಷ್ಟ ಸಮಯದಲ್ಲಿ ಮಾತ್ರ ಬಳಸಿದರೆ ಒಳ್ಳೆಯದು, ಜೆಮಿಬಿ ಆಪ್ ಮೂಲಕ ರಸ ಪ್ರಶ್ನೆಗಳಿಗೆ ತಯಾರಾಗುತ್ತೇನೆ. ಹಾಗೆಯೇ ಪರೀಕ್ಷೆಗೆ ತಯಾರಾಗಲು ಆಪ್‌ನಿಂದ ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಳ್ಳುತ್ತೇನೆ. ಸ್ಪರ್ಧಾತ್ಮಕ ವಿಷಯಗಳನ್ನು ತಿಳಿದುಕೊಳ್ಳಲು ಮೊಬೈಲ್ ಉಪಕಾರಿಯಾಗಿದೆ. ಸರ್ಕಾರ ಬ್ಯಾನ್ ಮಾಡುವ ಅವಶ್ಯಕತೆ ಇಲ್ಲ, ಪೋಷಕರ ಮೇಲ್ವಿಚಾರಣೆಯಲ್ಲಿ ಮಕ್ಕಳು ಮೊಬೈಲ್ ಬಳಸುವಂತಾಗಲಿ.

– ವೈ.ಎನ್.ಆದ್ಯಂತ್, ೮ನೇ ತರಗತಿ, ಸದ್ವಿದ್ಯಾ ಪ್ರೌಢಶಾಲೆ, ಮೈಸೂರು

ಕೆಲವು ಬದಲಾಣೆ ತರುವುದು ಸೂಕ್ತ: 

ಮೊಬೈಲ್ ಬಳಕೆಯಲ್ಲಿ ಕೆಟ್ಟದ್ದು ಒಳ್ಳೆಯದ್ದು ಎರಡೂ ಇದೆ. ಈಗಾಗಲೇ ಸರ್ಕಾರಗಳು ೧೮ ವರ್ಷ ಒಳಪಟ್ಟವರು ಕೆಲವು ವಿಡಿಯೋ ಅಥವಾ ವೆಬ್‌ಸೈಟ್ ಗಳನ್ನು ನೋಡಬಾರದು ಎಂದು ನಿರ್ಬಂಧ ಮಾಡಿದೆ. ಆದರೂ ಕೆಲವರು ಫೇಕ್ ಐಡಿ ಮೂಲಕ ಬಳಕೆ ಮಾಡುತ್ತಾರೆ. ವಿದ್ಯಾರ್ಥಿಗಳು ಯೂಟ್ಯೂಬ್ ಬಳಕೆಯಿಂದ ಸಮಯ ವ್ಯರ್ಥ ಮಾಡಿಕೊಳ್ಳುತ್ತಾರೆ. ನಮಗೆ ಇದು ಅಮೂಲ್ಯ ವಾದ ಸಮಯ. ಅದನ್ನು ಮೊಬೈಲ್ ಬಳಕೆಗೆ ಸೀಮಿತಗೊಳಿಸಿಕೊಳ್ಳ ಬಾರದು. ಸಂಪೂರ್ಣ ಬದಲಾವಣೆ ಮಾಡುವ ಬದಲು ಕೆಲವು ಬದಲಾಣೆ ತರುವುದು ಸೂಕ್ತ.

-ಅಭಿನವ್ , ೮ನೇ ತರಗತಿ, ಸದ್ವಿದ್ಯಾ ಪ್ರೌಢಶಾಲೆ, ಮೈಸೂರು

ಆಂದೋಲನ ಡೆಸ್ಕ್

Recent Posts

ವಿಧಾನಸಭೆಯಲ್ಲಿ ಹನೂರು ಎನ್‌ಕೌಂಟರ್‌ ಸದ್ದು: ಗದ್ದಲ ಕೋಲಾಹಲ

ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿಂದು ಹನೂರು ಎನ್‌ಕೌಂಟರ್‌ ಪ್ರಕರಣ ಭಾರೀ ಚರ್ಚೆಗೆ ಕಾರಣವಾಯಿತು. ಕಲಾಪ ಆರಂಭವಾದ ತಕ್ಷಣವೇ ವಿಷಯ ಪ್ರಸ್ತಾಪಿಸಿದ ಆರ್.ಅಶೋಕ್‌,…

53 mins ago

ಕಾರ್ಮಿಕರ ಮೇಲೆ ಕಾಡಾನೆ ದಾಳಿ: ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಕೊಡಗು: ಸಿದ್ದಾಪುರ ವ್ಯಾಪ್ತಿಯ ಶಿಲ್ಪ ಎಸ್ಟೇಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಬಂಗಾಳ ಮೂಲದ…

3 hours ago

ಕಾವೇರಿ ವನ್ಯಜೀವಿಧಾಮದಲ್ಲಿ ಎನ್‌ಕೌಂಟರ್: ಮೃತ 3 ಕುಟುಂಬಗಳಿಗೆ ಶಾಸಕ ಎಂ.ಆರ್. ಮಂಜುನಾಥ್ 15 ಲಕ್ಷ ಪರಿಹಾರ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದ…

3 hours ago

ಹನೂರಿನಲ್ಲಿ ಮೂವರ ಎನ್‌ಕೌಂಟರ್ ಪ್ರಕರಣ: ಘಟನಾ ಸ್ಥಳಕ್ಕೆ ತನಿಖಾ ತಂಡ ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್ ಘಟನೆಯ…

5 hours ago

ವಿಚಾರಣೆ ಇಲ್ಲದೆ ಶಿಕ್ಷೆ ಕೊಡಲು ಸಂವಿಧಾನ ಒಪ್ಪುವುದಿಲ್ಲ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…

8 hours ago

ಆ ಮೂರು ಜೀವಗಳಿಗೂ ಬೆಲೆಯೇ ಇರಲಿಲ್ಲವೇ?

ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…

8 hours ago