Andolana originals

ತಂತ್ರಜ್ಞಾನದ ಕಣ್ಣಲ್ಲಿ ಸಾಮಾಜಿಕ ಕಾಳಜಿ

ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ಸಾಮಾಜಿಕ ಆವಿಷ್ಕಾರ (ಸೋಷಿಯಲ್ ಇನೊವೇಶನ್) ಅಧ್ಯಯನದಡಿಯಲ್ಲಿ ಸಾಮಾಜಿಕ ಕಾಳಜಿಯುಳ್ಳ ‘ಸಂತೃಪ್ತಿ ಹಾಗೂ ಲೈಫ್’ ಎಂಬ ಎರಡು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕುರಿತು ಸಂಶೋಧನೆ ಮಾಡಿದ್ದಾರೆ.

ಈಗಾಗಲೇ ಎರಡೂ ಯೋಜನೆಗಳ ಪೇಟೆಂಟ್ ನೀಡಲಾಗಿದ್ದು, ಈ ಯೋಜನೆಗಳನ್ನು ಅಳವಡಿಸಿಕೊಂಡು ಸಾಮಾಜಿಕ ಕಾರ್ಯ ಕೈಗೊಳ್ಳುವ ಸಲುವಾಗಿ ಖಾಸಗಿ ಕಂಪೆನಿಗಳು ಹೂಡಿಕೆಗೆ ಮುಂದಾಗಿವೆ. ಸಂಶೋಧನೆಗೆ ಕಾರಣವಾದ ವಿಡಿಯೋ: ಈ ಹಿಂದೆ ಬೆಂಗಳೂರಿನ ಮೆಟ್ರೊ ನಿಲ್ದಾಣದಲ್ಲಿ ತಾಯಿಯೊಬ್ಬರು ಹಸುಗೂಸಿಗೆ ಹಾಲುಣಿಸಲು ಪರದಾಡಿ, ಒಂದು ಜನರೇಟರ್ ಬಾಕ್ಸ್ ಹಿಂಭಾಗಕ್ಕೆ ಹೋಗಿ ಮಗುವಿನ ಹಸಿವು ನೀಗಿಸಿದ್ದ ಯಾರೋ ಒಬ್ಬರು, ವಿಡಿಯೋ ಚಿತ್ರೀಕರಿಸಿದ್ದು, ಅದು ವಿದ್ಯಾವಿಕಾಸ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಗಮನಕ್ಕೆ ಬಂದಿತ್ತು. ಆ ಘಟನೆಯನ್ನು ಆಧರಿಸಿ ಕಾಲೇಜಿನ ಮಾಹಿತಿ ವಿಜ್ಞಾನ ಇಂಜಿನಿಯರಿಂಗ್(ಐಎಸ್‌ಇ) ವಿಭಾಗದ ವಿದ್ಯಾರ್ಥಿ ಪ್ರಣವ್ ಕುಮಾರ್ ಹಾಗೂ ಎಲೆಕ್ಟ್ರಾನಿಕ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಸಹಾಯಕ ಪ್ರಾಧ್ಯಾಪಕಿ ಡಿ.ಎಲ್.ಗಿರಿಜಾ ಅವರು ‘ಸಂತೃಪ್ತಿ’ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಿದ್ದಾರೆ.

ಇದನ್ನು ಓದಿ: ವಿಡಿಯೋ, ಪಿಡಿಎಫ್ ಭಾಷಾಂತರಿಸುವ ‘ಕ್ವಿಕ್ ಆಪ್’ 

ಹೇಗೆ ಕಾರ್ಯನಿರ್ವಹಿಸುತ್ತದೆ?: ಸಂತೃಪ್ತಿ ತಂತ್ರಜ್ಞಾನದಲ್ಲಿ ಒಂದು ಆಸನ ಅಥವಾ ಚಿಕ್ಕ ಕೊಠಡಿಯನ್ನು ನಿರ್ಮಿಸಿ, ಅದರಲ್ಲಿ ತಾಯಿಯು ಮಗುವಿಗೆ ಎದೆ ಹಾಲೂಡಲು ಬೇಕಾದ ಎಲ್ಲ ಸವಲತ್ತುಗಳನ್ನೂ ಅಳವಡಿಸಲಾಗಿರುತ್ತದೆ. ಇದಕ್ಕಾಗಿ ಸರ್ಕಾರ ನೀಡುವ ತಾಯಿ ಕಾರ್ಡ್‌ನಂತೆ, ಫೀಡಿಂಗ್ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್ ಎಟಿಎಂ ಕಾರ್ಡ್ ರೀತಿಯಲ್ಲಿ ಕಾರ್ಯನಿರ್ವಹಿಸ ಲಿದ್ದು, ಒಮ್ಮೆ ಸ್ಪರ್ಶಿಸಿದರೆ ಕ್ಷಣಾರ್ಧದಲ್ಲಿ ಆಸನವು ತೆರೆದುಕೊಳ್ಳುವ ಅಥವಾ ಮುಚ್ಚುವ ವ್ಯವಸ್ಥೆ ಹೊಂದಿದೆ. ಒಳಗಡೆ ತಾಯಿಗೆ ಬೇಕಾದ ವಾತಾವರಣವನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗಿರುತ್ತದೆ. ಫೀಡಿಂಗ್ ಕಾರ್ಡ್ ಮಗು ಹುಟ್ಟಿದ ದಿನದಿಂದ ೨ ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ. ಬಳಿಕ ಆ ಕಾರ್ಡ್‌ನ್ನು ನಿಷ್ಕ್ರಿಯಗೊಳಿಸ ಲಾಗುತ್ತದೆ. ಈ ‘ಸಂತೃಪ್ತಿ’ ತಂತ್ರಜ್ಞಾನವನ್ನು ಸಾರ್ವಜನಿಕ ಸ್ಥಳಗಳು, ಮೆಟ್ರೊ, ಬಸ್‌ಗಳು, ವಿಮಾನ, ನಿಲ್ದಾಣಗಳು ಇನ್ನಿತರ ಸ್ಥಳಗಳಲ್ಲಿ ಅಳವಡಿಸಲು ಸಾಧ್ಯವಿರುತ್ತದೆ.

‘ಸಂತೃಪ್ತಿ ಆವಿಷ್ಕಾರದ ಮಾಡೆಲ್‌ಗಾಗಿ ೪ ಸಾವಿರ ರೂ. ವೆಚ್ಚ ತಗುಲಿದ್ದು, ಸ್ಥಾಪಿಸಲು ೪೦ ಸಾವಿರ ರೂ.ಗಳಷ್ಟು ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪೆನಿ ಹೂಡಿಕೆ ಮಾಡಲು ಮುಂದಾಗಿದೆ.

ಲೈಫ್ ಆವಿಷ್ಕಾರ: (ಲಿವಿಂಗ್-ಬೀಯಿಂಗ್ ಐಡೆಂಟಿಫಿಕೇಷನ್ ಫರ್ ಹೆನಾಂಸುಡ್ ವೆಹಿಕಲ್ ಸೇಫ್ಟಿ) ಲೈಫ್ ತಂತ್ರಜ್ಞಾನವನ್ನು ವಾಹನಗಳ ಸುರಕ್ಷತೆಗಾಗಿ ಆವಿಷ್ಕರಿಸಲಾಗಿದೆ. ಲೈಫ್ ರೀತಿಯ ತಂತ್ರಜ್ಞಾನವನ್ನು ಯಾವುದೇ ಕಂಪೆನಿಯೂ ಬಿಡುಗಡೆ ಮಾಡಿಲ್ಲ. ಮನೆಗಳ ಮುಂಭಾಗ ಅಥವಾ ಬೇರೆ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದು ಸಹಜ. ಅಂತಹ ಸಂದರ್ಭಗಳಲ್ಲಿ ನಾಯಿ, ಬೆಕ್ಕು ಇತ್ಯಾದಿ ಸಣ್ಣಪುಟ್ಟ ಪ್ರಾಣಿಗಳು ವಾಹನಗಳ ಕೆಳಗೆ ನೆರಳಿಗಾಗಿಯೋ ಅಥವಾ ಬೆಚ್ಚನೆ ಜಾಗ ಅಂತಲೋ ಮಲಗಿಬಿಡುತ್ತವೆ. ಒಮ್ಮೊಮ್ಮೆ ಮಕ್ಕಳು ಆಟವಾಡುವ ಸಂದರ್ಭದಲ್ಲಿ ವಾಹನಗಳ ಕೆಳಗೆ ತೂರಿಕೊಳ್ಳುವುದೂ ಇದೆ. ಅದರ ಅರಿವಿಲ್ಲದೇ ಚಾಲಕರು ವಾಹನ ಚಲಾಯಿಸಿಬಿಟ್ಟರೆ ದೊಡ್ಡ ಅನಾಹುತವಾಗುತ್ತದೆ. ಅಂತಹ ಸಂಭಾವ್ಯ ಅಪಘಾತವನ್ನು ತಪ್ಪಿಸುವ ಸಲುವಾಗಿ ಕಾಲೇಜಿನ ಮಾಹಿತಿ ವಿಜ್ಞಾನ ಇಂಜಿನಿಯರಿಂಗ್(ಐಎಸ್‌ಇ) ವಿದ್ಯಾರ್ಥಿಗಳಾದ ಡಿ.ಎಸ್.ಪ್ರವಚನ್ ಮತ್ತು ಪ್ರಣವ್ ಎಸ್.ಹಂಡ್ರೋಲ್ ಅವರು ಈ ಲೈಫ್ ಉಪಕರಣವನ್ನು ಹೊರತಂದಿದ್ದಾರೆ.

ಕಾರ್ಯ ನಿರ್ವಹಣೆ ವಿಧಾನ: ಕಾರು, ಬಸ್ಸು, ಲಾರಿ, ಮತ್ತಿತರ ವಾಹನಗಳ ಕೆಳಗೆ ಮಧ್ಯಭಾಗದಲ್ಲಿ ಲೈಫ್ ಅಳವಡಿಸಬಹುದು. ಉಪಕರಣದಲ್ಲಿ ೩೬೦ ಡಿಗ್ರಿ ಕ್ಯಾಮೆರಾ, ಕ್ಯಾಮೆರಾ ಕಂಟ್ರೋಲರ್, ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ, ಹಗಲು ಮತ್ತು ರಾತ್ರಿ ಗುರುತಿಸುವಿಕೆ ತಂತ್ರಜ್ಞಾನವನ್ನೂ ಬಳಸಲಾಗಿದೆ. ವಾಹನಗಳಲ್ಲಿ ಡಿಸ್‌ಪ್ಲೇ ಅಳವಡಿಸಿ ಮಾನಿಟರ್ ಮಾಡಲಾಗುವುದು. ಉಪಕರಣಕ್ಕೆ ೩ ಲಕ್ಷಕ್ಕೂ ಹೆಚ್ಚಿನ ಜೀವಿಗಳ ಚಿತ್ರಗಳನ್ನು ಅಳವಡಿಸಿದ್ದು, ಅಷ್ಟನ್ನೂ ಸುಲಭವಾಗಿ ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ. ಲೈಫ್ ಆವಿಷ್ಕಾರಕ್ಕಾಗಿ ೧೦ ಸಾವಿರ ರೂ. ವೆಚ್ಚವಾಗಲಿದೆ. ಇದಕ್ಕಾಗಿ ಭಾರತದ ಪ್ರತಿಷ್ಠಿತ ವಾಹನ ತಯಾರಿಕಾ ಕಂಪೆನಿ ಹೂಡಿಕೆ ಮಾಡಲು ಮುಂದಾಗಿದೆ ಎನ್ನುತ್ತಾರೆ ಸಹಾಯಕ ಪ್ರಾಧ್ಯಾಪಕಿ ಎಂ.ಡಿ.ಗಿರಿಜಾ.

ಇದನ್ನು ಓದಿ; ಅಪಘಾತ : ಕೊಲ್ಕತ್ತಾ ಮೂಲದ ಪ್ರವಾಸಿ ಸಾವು

ವಿದ್ಯಾವರ್ಧಕ ಕಾಲೇಜಿನ

ಸಾಮಾಜಿಕ ಕಾಳಜಿಯುಳ್ಳ

ಆವಿಷ್ಕಾರಗಳಿಗೆ ಹೆಚ್ಚು

ಪ್ರೋತ್ಸಾಹ ನೀಡುತ್ತಿದೆ. ನಮ್ಮ

ಆವಿಷ್ಕಾರಕ್ಕೆ ಆರ್ಥಿಕ ಸಹಾಯ

ಮತ್ತು ಪ್ರಾಧ್ಯಾಪಕರ

ಉತ್ತೇಜನ ಹೆಚ್ಚು ದೊರೆತಿದೆ.

-ಪ್ರಣವ್ ಕುಮಾರ್,

ವಿದ್ಯಾರ್ಥಿ, ಮಾಹಿತಿ ವಿಜ್ಞಾನ

ಇಂಜಿನಿಯರಿಂಗ್(ಐಎಸ್‌ಇ)

ಇವತ್ತಿನ ತಂತ್ರಜ್ಞಾನದ ಯುಗದಲ್ಲಿ

ಹೊಸ ರೀತಿ ಆವಿಷ್ಕಾರಗಳನ್ನು

ಕೈಗೊಳ್ಳುವಂತೆ ವಿದ್ಯಾರ್ಥಿಗಳಿಗೆ

ಪ್ರೋತ್ಸಾಹ ನೀಡುವ ಕೆಲಸಗಳು

ನಿರಂತರವಾಗಿ ನಡೆಯುತ್ತಿರುತ್ತವೆ.

ಕಾಲೇಜಿನ ಕಾರ್ಯವೈಖರಿ ಕುರಿತು

ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

-ಡಾ.ಬಿ.ಸದಾಶಿವೇಗೌಡ,

ಪ್ರಾಂಶುಪಾಲರು, ವಿದ್ಯಾವರ್ಧಕ

ಇಂಜಿನಿಯರಿಂಗ್ ಕಾಲೇಜು

-ಕೆ.ಎಂ.ಅನುಚೇತನ್

ಆಂದೋಲನ ಡೆಸ್ಕ್

Recent Posts

ರಾಜ್ಯದ 50 ವರ್ಷಗಳ ಹಳೆಯ ಎಲ್ಲಾ ಡ್ಯಾಂ ಗೇಟ್‌ ಬದಲಾವಣೆಗೆ ನಿರ್ಧಾರ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ರಾಜ್ಯದಲ್ಲಿ ಇರುವ 50 ವರ್ಷ ಹಳೆಯ ಎಲ್ಲಾ ಜಲಾಶಯಗಳ ಗೇಟ್‌ಗಳನ್ನು ಬದಲಾವಣೆ ಮಾಡಲು ನಮ್ಮ ಸರ್ಕಾರ ನಿರ್ಧಾರ ಮಾಡಿದೆ…

9 hours ago

ಗೃಹ ಬಳಕೆ ಗ್ಯಾಸ್‌ ಸಿಲಿಂಡರ್‌ಗೆ ಸಮಸ್ಯೆ ಇಲ್ಲ: ಸಚಿವ ಮುನಿಯಪ್ಪ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಗ್ಯಾಸ್‌ ಸಿಲಿಂಡರ್‌ ಕೊರತೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಸಚಿವ ಮುನಿಯಪ್ಪ ಪ್ರತಿಕ್ರಿಯೆ…

9 hours ago

ಗುಂಡ್ಲುಪೇಟೆ: ಬರಗಿ ಗ್ರಾಮದಲ್ಲಿ ದೇವಸ್ಥಾನದ ಬಾಗಿಲು ಮುರಿದು ದೇವರನ್ನೇ ಹೊತ್ತೋಯ್ದ ಕಳ್ಳರು

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು  ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗದ ದೇವಸ್ಥಾನಗಳ ಕಳ್ಳತನ ಪ್ರಕರಣ ಸಂಖ್ಯೆ ದಿನದಿಂದ ದಿನಕ್ಕೆ…

9 hours ago

ನಮ್‌ ಜೀವನ ನಮ್ದಲ್ಲಾ.? ಕನ್ನಡದಲ್ಲೇ ಪೋಸ್ಟ್‌ ಹಾಕಿದ ರಶ್ಮಿಕಾ ಮಂದಣ್ಣ

ವಿವಾಹದ ಬಳಿಕ ಭಾರೀ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿಯೇ ಪೋಸ್ಟ್‌ ಒಂದನ್ನು ಹಾಕಿದ್ದಾರೆ. ಇಲ್ಲಿ ತನಕ ನನಗೆ…

9 hours ago

ಅನೈತಿಕ ಸಂಬಂಧ; ಜೋಡಿ ಕೊಲೆ: ಮಹಿಳೆ ಸೋದರನಿಂದಲೇ ಕೃತ್ಯ

ಮಡಿಕೇರಿ: ಅನೈತಿಕ ಸಂಬಂಧ ಹಿನ್ನೆಲೆ ಸಹೋದರಿ ಹಾಗೂ ಆಕೆಯ ಜೊತೆ ಸಹ ಜೀವನ ನಡೆಸುತ್ತಿದ್ದ ವ್ಯಕ್ತಿಯನ್ನು ೭೦ ವರ್ಷದ ವೃದ್ಧ…

10 hours ago

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜುಗೆ ಜಾಮೀನು ಮಂಜೂರು

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜುಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಜಾಮೀನು…

10 hours ago