Andolana originals

ಸಿದ್ದರಾಮಯ್ಯರಿಗೆ ಯಾರೂ ಸರಿಸಾಟಿಯಿಲ್ಲ

ಎನ್.ಎಸ್.ಶಂಕರ್

ಎಲ್ಲ ಜಾತಿ ವರ್ಗಗಳಲ್ಲೂ ಅವರನ್ನು ಮೆಚ್ಚುವ ಜನರಿದ್ದಾರೆ

ಆ ಎತ್ತರದ ನಾಯಕರು ಕರ್ನಾಟಕದಲ್ಲಂತೂ ಇಲ್ಲ

 ‘ನೀವೇನೇ ಹೇಳಿ ಸಾರ್, ಸಿದ್ದರಾಮಣ್ಣ ಜನ ಮಡಗವ್ನೆ. ಅದೇನು ಜನ ಸಾರ್ ಅಲ್ಲಿ? ಯಬ್ಬಾ, ಕಾಲಿಡಕ್ಕಾಗಲ್ಲ, ಅಷ್ಟು ಜನ!’ ಹೀಗೆಂದವನು ಒಬ್ಬ ಆಟೋ ಚಾಲಕ. ಹತ್ತು ವರ್ಷಗಳ ಹಿಂದೆ ಸಿದ್ದರಾಮಯ್ಯನವರ ಮೊದಲ ಮಗ ರಾಕೇಶ್ ಬೆಲ್ಜಿಯಂನಲ್ಲಿ ಅಕಾಲ ಮರಣಕ್ಕೆ ತುತ್ತಾಗಿ ಆತನ ದೇಹವನ್ನು ಇಲ್ಲಿ ತಂದು ಮಣ್ಣು ಮಾಡುವ ಸಂದರ್ಭದಲ್ಲಿ ಸೇರಿದ್ದ ಜನಜಂಗುಳಿಯನ್ನು ಟಿವಿಯಲ್ಲಿ ಕಂಡು ಆತನ ಬಾಯಲ್ಲಿ ಈ ಉದ್ಗಾರ ಹೊರಟಿತ್ತು.

ಅದು ನಿಜ. ಕರ್ನಾಟಕ ಕಾಂಗ್ರೆಸ್ ಎಂಬ ಸಮುದ್ರದಲ್ಲಿ ಜನಾನುರಾಗದ ದೃಷ್ಟಿಯಿಂದ ಸಿದ್ದರಾಮಯ್ಯನವರಿಗೆ ಸಾಟಿಯಾಗುವುದಿರಲಿ, ಅವರ ಹತ್ತಿರಕ್ಕೂ ಬರಬಲ್ಲ ಇನ್ನೊಬ್ಬ ನಾಯಕನಿಲ್ಲ. ‘ಸಿದ್ದು’ ಕೇವಲ ಕುರುಬರ ನಾಯಕರಲ್ಲ, ಹಿಂದುಳಿದ ವರ್ಗಗಳ ನಾಯಕರಷ್ಟೇ ಅಲ್ಲ, ಅವರನ್ನು ಮೆಚ್ಚುವ, ಹಿಂಬಾಲಿಸುವ ಜನ ಎಲ್ಲ ಜಾತಿ/ ವರ್ಗಗಳಲ್ಲೂ ಇದ್ದಾರೆ ಎಂಬುದೇ ಅವರ ಹೆಗ್ಗಳಿಕೆ.

ಈಗ ಅವರು ಅಧಿಕಾರದಿಂದ ಕೆಳಗಿಳಿಯುತ್ತಿರುವ ಈ ಹೊತ್ತಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಬಗ್ಗೆ ಪೋಸ್ಟ್ ಮಾಡುತ್ತಿರುವ ಬಹುತೇಕರ ಸೊಲ್ಲು ಒಂದೇ: ‘ಸಿದ್ದರಾಮಯ್ಯ ಮೊದಲ ಅವಧಿಯಲ್ಲಿದ್ದಷ್ಟು ಖಡಕ್ ಆಗಿ, ಖಚಿತವಾಗಿ ಎರಡನೇ ಅವಧಿಯಲ್ಲಿ ಇರಲಿಲ್ಲ. ಅವರ ಆಡಳಿತ ಈ ಬಾರಿ ತುಸು ಸಡಿಲವಾಯಿತು; ನಿರ್ಣಾಯಕ ವಿಷಯಗಳಲ್ಲಿ ಅವರು ತಲೆ ತಪ್ಪಿಸಿಕೊಂಡು ಹೋಗುವ ಧೋರಣೆ ತೋರಿಸುತ್ತಿದ್ದಾರೆ…’ ಇತ್ಯಾದಿ.

ಗೆಳೆಯರೊಬ್ಬರು- ಇವರು ಒಂದು ಸುದ್ದಿ ವಾಹಿನಿಯ ಮುಖ್ಯಸ್ಥರು- ಸಿದ್ದರಾಮಯ್ಯನವರನ್ನು ಈ ಹಿಂದೆ ಒಮ್ಮೆ ‘ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿಯನ್ನು ಅತ್ಯಾಚಾರ ಪ್ರಕರಣದಲ್ಲಿ ಏಕೆ ಬಂಧಿಸಲಿಲ್ಲ?’ ಎಂದು ಕೇಳಿದರು, ಖಾಸಗಿಯಾಗಿ. ಅದಕ್ಕೆ ಸಿದ್ದು ‘ಸುಮ್ನಿರಪ್ಪ, ನನ್ನನ್ನು ಆಮೇಲೆ anti Brahmin ಅಂತ ಬ್ರಾಂಡ್ ಮಾಡಿಬಿಡ್ತಾರೆ’ ಅಂದರು!

ಈ ಹಿಂಜರಿಕೆಯೇ ಅವರನ್ನು ಜಾತಿ ಜನಗಣತಿ, ಒಳ ಮೀಸಲಾತಿ, ಹಿಂದುತ್ವದ ಆಟಾಟೋಪಗಳ ಎದುರು ಗಡಸು ನಿರ್ಧಾರ ಕೈಗೊಳ್ಳದಿರುವುದು… ಮುಂತಾದ ‘ನಿಷ್ಕ್ರಿಯತೆ’ಗೆ ದೂಡಿತು ಅನ್ನುವಂತೆ ಕಾಣುತ್ತದೆ.

ಜೊತೆಗೆ ಬೆಂಗಳೂರಿಗೆ ಸುರಂಗ ಕೊರೆಯುವ ಸಾವಿರಾರು ಕೋಟಿ ರೂಪಾಯಿ ಯೋಜನೆಗಳ ಮಾತಾಡುತ್ತಿದ್ದಾಗ ಅದಕ್ಕೆ ಕಡಿವಾಣ ಹಾಕದಿರುವುದೂ ಸಿದ್ದರಾಮಯ್ಯನವರ ನಿರ್ಣಯ ಶಕ್ತಿ ಕುಂದಿದ್ದಕ್ಕೆ ಸಾಕ್ಷಿಯಾಗಿ ಕಾಣುತ್ತದೆ. ರಾಜಕಾರಣಿಗಳು ದೊಡ್ಡ, ಇನ್ನೂ ದೊಡ್ಡ ಯೋಜನೆಗಳನ್ನು ಯಾಕಾಗಿ ರೂಪಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಿರುವಾಗ ಸಿದ್ದು ಇನ್ನಷ್ಟು ಕ್ರಿಯಾಶೀಲರಾಗಿರಬೇಕಿತ್ತು ಎಂದು ಜನ ನಿರೀಕ್ಷಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ. ಸಿದ್ದರಾಮಯ್ಯನವರನ್ನು ಎರಡನೇ ದೇವರಾಜ ಅರಸು ಅನ್ನುವವರೂ ಇದ್ದಾರೆ. ಆದರೆ, ಅರಸು ಯಾವುದೇ ನಿರ್ಧಾರ ಕೈಗೊಳ್ಳುವಾಗ ‘ಯಾರೇನು ಹೇಳುತ್ತಾರೆ’ ಎಂದು ಕ್ಷಣ ಮಾತ್ರವೂ ತಲೆ ಕೆಡಿಸಿಕೊಳ್ಳದೆ ಕಾರ್ಯಪ್ರವೃತ್ತರಾಗುತ್ತಿದ್ದರು. ಇಡೀ ಸಮಾಜವನ್ನೇ ಎದುರು ಹಾಕಿಕೊಳ್ಳಲೂ ಅವರು ಹಿಂಜರಿಯುತ್ತಿರಲಿಲ್ಲ. ಸಿದ್ದು ಕೂಡ ಅಷ್ಟೇ ನಿಷ್ಠುರವಾಗಿರಬೇಕಿತ್ತು ಎಂದು ನನ್ನಂಥವರು ಆಸೆಪಟ್ಟಿದ್ದರು.

ಅಷ್ಟಾದರೂ, ಸಂವಿಧಾನ, ಸಾಮಾಜಿಕ ನ್ಯಾಯ, ಕೋಮುವಾದ ವಿರೋಽ ನಿಲುವು- ಇಂಥ ತಾತ್ವಿಕ ಪ್ರಶ್ನೆಗಳು ಬಂದಾಗ ಸಿದ್ದರಾಮಯ್ಯನವರಷ್ಟು ಖಡಾಖಂಡಿತವಾಗಿದ್ದ, ಆ ಎತ್ತರದ ನಾಯಕರು ಕರ್ನಾಟಕದಲ್ಲಂತೂ ಇಲ್ಲ. ಜೊತೆಗೆ ಅವರು ತಂದ ಗ್ಯಾರಂಟಿ ಯೋಜನೆಗಳಿಂದಾಗಿ ನಾಡಿನ ಜನಜೀವನಕ್ಕೇ ಹೊಸ ಲವಲವಿಕೆ, ಹೊಸ ಜೀವ ಬಂದಿದೆ. ಹೀಗಿರುವಾಗ ಇನ್ನೆರಡು ವರ್ಷಗಳಲ್ಲಿ ಮತ್ತೆ ಚುನಾವಣೆ ಎದುರಿಸಬೇಕಿರುವ ಈ ಹಂತದಲ್ಲಿ ‘ಹೈಕಮಾಂಡ್’ ಸಿದ್ದರಾಮಯ್ಯನವರನ್ನು ಬದಲಾಯಿಸುವ ‘ರಿಸ್ಕ್’ ತೆಗೆದುಕೊಳ್ಳಬಾರದಿತ್ತು. ಇನ್ನು ಮುಂದೆ ಯಾರು ಬರಲಿದ್ದಾರೆಯೋ ಗೊತ್ತಿಲ್ಲ. ಬರುವವರು ನಮ್ಮ ನಾಡನ್ನು ಹೇಗೆಲ್ಲ ಚೆಂಡಾಡುವರೋ ಗೊತ್ತಿಲ್ಲವಲ್ಲ?!…

” ಸಂವಿಧಾನ, ಸಾಮಾಜಿಕ ನ್ಯಾಯ, ಕೋಮುವಾದ ವಿರೋಧಿ ನಿಲುವು- ಇಂಥ ತಾತ್ವಿಕ ಪ್ರಶ್ನೆಗಳು ಬಂದಾಗ ಸಿದ್ದರಾಮಯ್ಯನವರಷ್ಟು ಖಡಾಖಂಡಿತವಾಗಿದ್ದ, ಆ ಎತ್ತರದ ನಾಯಕರು ಕರ್ನಾಟಕದಲ್ಲಂತೂ ಇಲ್ಲ. ಜೊತೆಗೆ ಅವರು ತಂದ ಗ್ಯಾರಂಟಿ ಯೋಜನೆಗಳಿಂದಾಗಿ ನಾಡಿನ ಜನಜೀವನಕ್ಕೇ ಹೊಸ ಲವಲವಿಕೆ, ಹೊಸ ಜೀವ ಬಂದಿದೆ.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಅಧ್ಯಾತ್ಮ ದುರಂತ!

ಅಧ್ಯಾತ್ಮ ದುರಂತ! ಲೌಕಿಕ ಬದುಕಿನ ಆಶೆ ಆಮಿಷಗಳ ಸೆರೆಮನೆಯಿಂದ ಬಿಡಿಸಿಕೊಳುವ ಸನ್ಮಾರ್ಗವನು ಅಧ್ಯಾತ್ಮವೆನ್ನುವರು ಪ್ರಾಜ್ಞರು! ಆದರೀಗ ಲೌಕಿಕದ ಆಶೆ ಆಮಿಷಗಳ…

2 hours ago

ಓದುಗರ ಪತ್ರ: ರಸ್ತೆ, ಉದ್ಯಾನಕ್ಕೆ ಎಸ್. ಜಾನಕಿ ಅವರ ಹೆಸರಿಡಿ

ಭಾರತೀಯ ಚಿತ್ರರಂಗದ ಗಾನಕೋಗಿಲೆ ಎಸ್.ಜಾನಕಿ ಅವರ ಸಾಧನೆ ಎಂದೆಂದಿಗೂ ಅಜರಾಮರ. ಅವರ ಹೆಸರನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಮೂಲಕ ಚಿರಸ್ಥಾಯಿಯಾಗಿಸಲು…

2 hours ago

ಓದುಗರ ಪತ್ರ: ಚಾಮರಾಜಪುರಂನಲ್ಲಿ ರೈಲುಗಳ ನಿಲುಗಡೆಯಾಗಲಿ

ಮೈಸೂರಿನ ಅಶೋಕಪುರಂನಿಂದ ಚೆನ್ನೆ ಗೆ ತೆರಳುವ ಚೆನ್ನೆ ನಿಂದ - ಅಶೋಕಪುರಂಗೆ ಆಗಮಿಸುವ ೧೬೫೫೧ ಎಂಜಿಆರ್ ಚೆನ್ನೈಎಕ್ಸ್ ಪ್ರೆಸ್, ೨೦೬೨೪…

2 hours ago

ಓದುಗರ ಪತ್ರ: ನಂಜನಗೂಡಿನಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಿಸಿ

ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ನಂಜನಗೂಡಿನಲ್ಲಿ ವಾಹನಗಳ ಸಂಚಾರದಟ್ಟಣೆ ವಿಪರೀತವಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆರ್.ಪಿ .ರಸ್ತೆಯಲ್ಲಿ ರೈಲು ಬರುವ ವೇಳೆ…

2 hours ago

114 ಪ್ರದೇಶಗಳಲ್ಲಿ ಪ್ರವಾಹ, ಭೂಕುಸಿತ ಅಪಾಯ

ನವೀನ್ ಡಿಸೋಜ ಮಳೆ ಕಡಿಮೆಯಿದ್ದರೂ ಜಿಲ್ಲಾಡಳಿತದಿಂದ ಅಗತ್ಯ ಮುನ್ನೆಚ್ಚರಿಕೆ; ಅಪಾಯಕಾರಿ ಪ್ರದೇಶಗಳ ಗುರುತು ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಜುಲೈ ಆರಂಭದಿಂದ…

2 hours ago

ಟಿಎಪಿಸಿಎಂಎಸ್ ಚುನಾವಣೆಗೆ ಪಕ್ಷಗಳಿಂದ ಭರ್ಜರಿ ಸಿದ್ಧತೆ

ಭೇರ್ಯ ಮಹೇಶ್ ಕೆ.ಆರ್.ನಗರ: ಜು.೨೬ರಂದು ಚುನಾವಣೆ; ನಾಮಪತ್ರ ಸಲ್ಲಿಕೆ ಆರಂಭ  ಕೆ.ಆರ್.ನಗರ: ತಾಲ್ಲೂಕು ಕೃಷಿ ಉತ್ಪನ್ನಗಳ ಸಹಕಾರ ಮಾರಾಟ ಸಂಘದ…

2 hours ago