ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ದಾಖಲೆಯ ೫೧.೧೯ ಲಕ್ಷ ಮೀನು ಮರಿಗಳನ್ನು ಬಿತ್ತನೆ ಮಾಡಲಾಗಿದ್ದು, ಈ ಹಂಗಾಮಿನ ಇಷ್ಟು ಅಲ್ಪ ಅವಧಿಯಲ್ಲಿ ಈ ಮಟ್ಟದ ಬಿತ್ತನೆ ಹಿಂದೆ ಯಾವಾಗಲೂ ಆಗಿರಲಿಲ್ಲ!
ಪ್ರಸಕ್ತ ವರ್ಷದ ಏಪ್ರಿಲ್ನಿಂದ ಆಗಸ್ಟ್ ೪ರ ತನಕ ೨೨ಲಕ್ಷ ಮೀನು ಮರಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಈ ಅವಽಯಲ್ಲಿ ೫೧.೧೯ ಲಕ್ಷ ಬಿತ್ತನೆ ಮಾಡಿರುವುದು ದಾಖಲೆಯ ಸಾಧನೆಯಾಗಿದೆ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಎಸ್.ಮಂಜೇಶ್ವರ ಮಾಹಿತಿ ನೀಡಿದರು.
ಪ್ರಸಕ್ತ ವರ್ಷದ ಪೂರ್ವ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು ಜೂನ್, ಜುಲೈನ ಮುಂಗಾರು ವೇಳೆ ವಾಡಿಕೆಗಿಂತ ಸ್ವಲ್ಪ ಮಳೆ ಕಡಿಮೆಯಾಗಿದ್ದರೂ ಕೆರೆಗಳಲ್ಲಿ ನೀರು ಸಂಗ್ರಹವಾಗಿರುವ ಕಾರಣ ಜಿಲ್ಲೆಯಲ್ಲಿ ಮೀನುಮರಿ ಬಿತ್ತನೆ ಕಳೆದ ಬಾರಿಗಿಂತ ಎರಡೂವರೆ ಪಟ್ಟು ಹೆಚ್ಚಾಗಿದೆ! ಹೋದ ವರ್ಷ ಈ ವೇಳೆ ೨೧.೦೭ ಲಕ್ಷ ಮೀನು ಮರಿಗಳ ಬಿತ್ತನೆಯಾಗಿತ್ತು.
ಮೀನುಗಾರಿಕೆ ಇಲಾಖೆಯು ತನ್ನ ವ್ಯಾಪ್ತಿಗೆ ಒಳಪಟ್ಟಿರುವ ಕೆರೆಗಳು, ಜಲಾಶಯಗಳಲ್ಲಿ ಪ್ರತಿ ವರ್ಷ ಟೆಂಡರ್ ಕರೆದು ಮೀನು ಮರಿ ಬಿತ್ತನೆಗೆ ಅವಕಾಶ ನೀಡುತ್ತದೆ. ಮೀನುಗಾರಿಕೆ ಇಲಾಖೆಗೆ ಒಳಪಟ್ಟಿರುವ ಜಿಲ್ಲೆಯ ೯೨ ಕೆರೆಗಳ ಪೈಕಿ ಇದುವರೆಗೆ ೫೧ ಕೆರೆಗಳಲ್ಲಿ ಮೀನುಮರಿಗಳ ಬಿತ್ತನೆಯಾಗಿದೆ.
ಚಾಮರಾಜನಗರ ತಾಲ್ಲೂಕಿನ ಅವಳಿ ಜಲಾಶಯಗಳಾದ ಚಿಕ್ಕಹೊಳೆ, ಸುವರ್ಣಾವತಿ ಯಲ್ಲಿಯೂ ಬಿತ್ತನೆ ಕಾರ್ಯ ಮುಗಿದಿದೆ. ಕಬಿನಿ ನದಿಮೂಲದಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವ ಗುಂಡ್ಲುಪೇಟೆ ಮತ್ತು ಚಾಮರಾಜನಗರ ತಾಲ್ಲೂಕಿನ ೩೨ ಕೆರೆಗಳಲ್ಲಿ ಮತ್ತು ಗುಂಡಾಲ್ ಜಲಾಶಯದಲ್ಲಿ ಮೀನು ಮರಿ ಬಿಡಲು ಟೆಂಡರ್ ಪ್ರಕ್ರಿಯೆ ಸಾಗಿದ್ದು ಇಷ್ಟರಲ್ಲಿಯೇ ಈ ಎಲ್ಲಾ ಕಡೆ ಬಿತ್ತನೆ ನಡೆಯಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ನದಿ ಮೂಲದ ಈ ಕೆರೆಗಳಲ್ಲಿ ಮೀನುಗಾರಿಕೆಗೆ ವಿಪುಲ ಅವಕಾಶವಿದೆ.
ಮೀನುಗಾರಿಕೆಗೆ ಅವಕಾಶ ನೀಡುವಾಗ ಸ್ಥಳೀಯ ಮೀನುಗಾರಿಕೆ ಸಹಕಾರ ಸಂಘಗ ಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನಂತರ ಇ-ಟೆಂಡರ್ ಕರೆದು ಗುತ್ತಿಗೆ ನೀಡ ಲಾಗುತ್ತದೆ. ಯಾರೂ ಮುಂದೆ ಬಾರದಿದ್ದರೆ ಮೀನು ಕೃಷಿ ಸ್ಥಳದಿಂದ ೫ಕಿಮೀ ಸರಹದ್ದಿನಲ್ಲಿ ವಾಸಿಸುವ ಯಾರಾದರೂ ಮುಂದೆ ಬಂದರೆ ಅಂತಹವರಿಗೆ ಮೀನು ಮರಿಗಳ ಬಿತ್ತನೆ ಮಾಡಲು ಇಲಾಖೆ ಅನುಮತಿ ನೀಡುತ್ತದೆ. ಮಳೆ ಸ್ಥಿತಿಗತಿ ನೋಡಿಕೊಂಡು ಮಾರ್ಚ್-೨೦೨೬ರ ವರೆಗೂ ಮೀನು ಮರಿ ಬಿತ್ತನೆ ಮಾಡಬಹುದಾಗಿದೆ.
ಜಿಲ್ಲೆಯಲ್ಲಿ ೨೦೨೫ರ ಏಪ್ರಿಲ್ ನಿಂದ ಬರುವ ಮಾರ್ಚ್ ತನಕ ೮೮ ಲಕ್ಷ ಮೀನು ಮರಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಅವಧಿಯಲ್ಲಿ ೧೩ ಸಾವಿರ ಟನ್ ಮೀನು ಉತ್ಪಾದನೆ ಗುರಿ ಹಾಕಿಕೊಳ್ಳಲಾಗಿದೆ ಎಂದು ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು.
ಏಪ್ರಿಲ್,ಮೇ ಮಾಹೆಯಲ್ಲಿ ಒಳ್ಳೆಯ ಮಳೆ ಬೀಳಲಾಗಿ ಇಲಾಖೆಗೆ ಸೇರಿರುವ ಅರ್ಧ ಕ್ಕಿಂತಲೂ ಹೆಚ್ಚಿನ ಕೆರೆಗಳಲ್ಲಿ ಮೀನುಗಳಿಗೆ ನಲಿದಾಡುವ ಭಾಗ್ಯ ಈಗಾಗಲೇ ದೊರಕಿದ್ದು ಬರುವ ದಿನಗಳಲ್ಲಿ ಉಳಿದ ಕೆರೆಗಳಲ್ಲಿ ಮೀನುಗಳು ಮಿನುಗುವ ಅವಕಾಶ ಒದಗಿ ಬರುವಂತಹ ವಾತಾವರಣ ಕಾಣುತ್ತಿದೆ ಎನ್ನುತ್ತಾರೆ ಮೀನು ಕೃಷಿಕರು.
” ಏಪ್ರಿಲ್ನಿಂದ ಇಲ್ಲಿಯ ತನಕ ಚಾ.ನಗರ ತಾಲ್ಲೂಕಿನಲ್ಲಿ ೧೯.೯ ಲಕ್ಷ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ೧೩.೯೫ ಲಕ್ಷ, ಯಳಂದೂರು ತಾಲ್ಲೂಕಿನಲ್ಲಿ ೧೦.೮೪ ಲಕ್ಷ, ಕೊಳ್ಳೇಗಾಲ ತಾಲ್ಲೂಕಿನಲ್ಲಿ (ಹನೂರು ಸೇರಿ) ೬.೫೦ ಲಕ್ಷ ಸೇರಿದಂತೆ ಒಟ್ಟು ೫೧.೧೯ ಲಕ್ಷ ಮೀನು ಮರಿಗಳನ್ನು ಬಿತ್ತನೆ ಮಾಡಲಾಗಿದೆ.”
-ಎಂ.ಎಸ್.ಮಂಜೇಶ್ವರ, ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ
ಯಾವ ತಳಿಯ ಮೀನು ಮರಿಗಳು?: ಕಾಟ್ಲಾ, ಸಾಮಾನ್ಯಗೆಂಡೆ, ರೋಹು, ಮೃಗಾಲ್, ಹುಲ್ಲುಗೆಂಡೆ ತಳಿಯ ಮೀನುಮರಿಗಳನ್ನು ಬಿತ್ತನೆ ಮಾಡಲಾಗಿದೆ. ಕೆರೆಗಳಲ್ಲಿ ಕನಿಷ್ಠ ೬ ತಿಂಗಳವರೆಗೆ ನೀರಿನ ಸಂಗ್ರಹವಿರಬೇಕು. ಆಗ ಉತ್ತಮ ಇಳುವರಿ ನಿರೀಕ್ಷಿಸಬಹುದು. ಒಂದು ವೇಳೆ ಕೆರೆಗಳಲ್ಲಿ ನೀರು ದಿಢೀರ್ ಕಡಿಮೆಯಾದರೆ ಮೀನುಗಳನ್ನು ಅವಽಗೂ ಮುಂಚೆಯೇ ಹಿಡಿದು ಅವುಗಳನ್ನು ಟೆಂಡರ್ ಪಡೆದವರು ಮಾರಾಟ ಮಾಡಿಕೊಳ್ಳುತ್ತಾರೆ. ಅವಽಗೆ ಮೊದಲೇ ಹಿಡಿಯುವುದರಿಂದ ಮೀನುಗಳ ತೂಕ ಕಡಿಮೆ ಇರಲಿದ್ದು ಅನಿವಾರ್ಯವಾಗಿ ಮಾರಾಟ ಮಾಡುತ್ತಾರೆ.
ಜಮೀನುಗಳಲ್ಲಿಯೇ ಒಂದು ಎಕರೆ, ಅರ್ಧ ಎಕರೆ ಹಾಗೂ ೧೦ ಗುಂಟೆ ಜಾಗದಲ್ಲಿ ನೀರಿನಕೊಳ ನಿರ್ಮಿಸಿಕೊಂಡು ಮೀನು ಸಾಕಾಣಿಕೆ ಮಾಡುವವರ ರೈತರಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದ್ದು ಈ ರೈತರು ವಾರ್ಷಿಕವಾಗಿ ಅಂದಾಜು ೪೦೦ ಟನ್ ಮೀನು ಉತ್ಪಾದನೆ ಮಾಡುತ್ತಾರೆ.ಚಾಮರಾಜ ನಗರ, ಕೊಳ್ಳೇಗಾಲ ಭಾಗದಲ್ಲಿ ಮೀನು ಕೃಷಿಕರ ಸಂಖ್ಯೆ ಜಾಸ್ತಿ ಇದ್ದು ಮತ್ಸ್ಯೋ ದ್ಯಮ ಲಾಭದಾಯಕವಾಗಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ತರುವ ತಳಿಯ ಮೀನುಗಳನ್ನು ರೈತರು ಉತ್ಪಾದನೆ ಮಾಡು ತ್ತಿದ್ದಾರೆ. ಮೀನು ಕೃಷಿಕರಿಗೆ ಇಲಾಖೆ ಯಿಂದ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದರು.
ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…
ಆರ್ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…
ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯ. ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ಹೆಸರಿನಲ್ಲಿ…
ವೈಡ್ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ಇಂದು ಬಿಡುಗಡೆಯಾಗುತ್ತಿರುವ ‘ ಬಾಸ್’ಎಂದೋ ತೆರೆಗೆ ಬರಬೇಕಾಗಿತ್ತು. ಆದರೆ ಚಿತ್ರದ ಹೆಸರು,…
ನವೀನ್ ಡಿಸೋಜ ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆ; ವಾಡಿಕೆ ಮಳೆ ಕೊರತೆ ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.೪೩…
ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್ಗೇಟ್ಗಳನ್ನು ಬಂದ್…