ಓದುಗರ ಪತ್ರ
ಜಲಮಂಡಳಿಯ ಬಿಲ್ ಬಾಕಿ ಇರಿಸಿಕೊಂಡವರಿಗೆ ‘ಏಕಬಾರಿ ತೀರುವಳಿ ವ್ಯವಸ್ಥೆ’ ಅಡಿಯಲ್ಲಿ ದಂಡ ಮತ್ತು ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆಯಂತೆ. ಟ್ರಾಫಿಕ್ ಅಪರಾಧಗಳಿಗೆ ವಿಧಿಸಿದ ದಂಡವನ್ನು ಬಾಕಿ ಇರಿಸಿ ಕೊಂಡವರಿಗೆ ಅರ್ಧ ದಂಡವನ್ನು ಮನ್ನಾಮಾಡುವ ಯೋಜನೆ ಭಾರೀ ಯಶಸ್ಸು ಪಡೆದಿರುವುದನ್ನು ನೋಡಿ, ಇದೇ ಮಾದರಿ ಯಲ್ಲಿ ಜಲಮಂಡಳಿ ಕೂಡ ಬಾಕಿ ವಸೂಲಿಗೆ ಮುಂದಾಗಿದೆ.
ನಗರ ಪಾಲಿಕೆಯ ಮನೆ ತೆರಿಗೆ ವಸೂಲಿಯಲ್ಲೂ ಇದೇ ಮಾದರಿ ಜಾರಿಯಲ್ಲಿದೆ. ಅಕಸ್ಮಾತ್ ಇದು ನಿರೀಕ್ಷೆಯಷ್ಟು ಯಶಸ್ಸು ಪಡೆಯದಿದ್ದರೆ, ಜಲಮಂಡಳಿ ಬಾಕಿ ಇರುವ ಬಿಲ್ನಲ್ಲಿ ಸ್ವಲ್ಪ ಮೊತ್ತವನ್ನು ಮುಂದಿನ ದಿನಗಳಲ್ಲಿ ಮನ್ನಾ ಮಾಡಬಹುದೇನೋ? ಬ್ಯಾಂಕ್ ಸಾಲ ವಸೂಲಾತಿಯಲ್ಲೂ ಏಕಬಾರಿ ತೀರುವಳಿ ಮತ್ತು ದಿವಾಳಿ ಕಾನೂನಿನಡಿಯಲ್ಲಿ ಇಂತಹ ವಿನಾಯಿತಿಯನ್ನು ನೀಡಲಾಗುತ್ತದೆ. ಅಂತಿಮವಾಗಿ ಈ ವಿನಾಯಿತಿಯಿಂದ ‘ಬಾಕಿ’ ವಸೂಲಾಗಬಹುದು. ಆದರೆ ಮುಂದಿನ ದಿನಗಳಲ್ಲಿ ನಿಯತ್ತಾಗಿ ಶುಲ್ಕ ಪಾವತಿಸುವವರು ಕೂಡ ಬಾಕಿ ಪಾವತಿಸುವಲ್ಲಿ ವಿಳಂಬಮಾಡಿ ವಿನಾಯಿತಿ ನಿರೀಕ್ಷಿಸುವುದನ್ನು ಅಲ್ಲಗಳೆಯಲಾಗದು. ಪ್ರಾಮಾಣಿಕವಾಗಿ ನಿಗದಿತ ಸಮಯಕ್ಕೆ ಶುಲ್ಕ ಪಾವತಿಸುವವರಿಗೆ ಯಾವುದೇ ರೀತಿಯ ವಿನಾಯಿತಿಯನ್ನು ನಿರಾಕರಿಸಿ ಬಾಕಿ ಇರಿಸಿಕೊಳ್ಳುವವರಿಗೆ ಮಾತ್ರ ಈ ರೀತಿ ವಿನಾಯಿತಿ ಕೊಡುವುದು ಯಾವ ಸೀಮೆ ನ್ಯಾಯ? ಎಂದು ಪ್ರಜ್ಞಾವಂತರು ಪ್ರಶ್ನಿಸುವಂತಾಗಿದೆ.
-ರಮಾನಂದ ಶರ್ಮಾ,ಜೆ.ಪಿ.ನಗರ, ಬೆಂಗಳೂರು
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…
ಮಂಡ್ಯ: ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…