ರಾಜ್ಯದ ಅಣೆಕಟ್ಟೆಗಳ ಪೈಕಿ ಬಹುತೇಕ ಅಣೆಕಟ್ಟೆಗಳು ನಿರ್ಮಾ ಣಗೊಂಡು 50 ವರ್ಷಗಳ ಮೇಲಾಗಿದ್ದು, ನೂರು ವರ್ಷಗಳನ್ನು ಪೂರೈಸಿರುವ ಅಣೆಕಟ್ಟೆಗಳೂ ಇರುವುದರಿಂದ ಅವು ಗಳನ್ನು ಕಾಲ ಕಾಲಕ್ಕೆ ದುರಸ್ತಿಗೊಳಿಸುವುದು ಅಗತ್ಯ. ತುಂಗಭದ್ರ ಜಲಾಶಯವನ್ನು 1953ರಲ್ಲಿ ನಿರ್ಮಿಸಲಾಗಿದೆ. ಈ ಜಲಾಶಯದ ಒಂದು ಕ್ರಸ್ಟ್ ಗೇಟ್ ಇತ್ತೀಚೆಗೆ ಮುರಿದುಬಿದ್ದು ಆತಂಕ ಸೃಷ್ಟಿಸಿತ್ತು. ಅದೇ ರೀತಿ ಕೆಆರ್ಎಸ್ ಜಲಾಶಯವು ನಿರ್ಮಾಣವಾಗಿ ಈಗಾಗಲೇ ನೂರು ವರ್ಷಗಳನ್ನು ಪೂರೈಸಿದೆ. ವೇದಾವತಿನದಿಗೆವಾಣಿವಿಲಾಸಸಾಗರಜಲಾಶಯನಿರ್ಮಾಣವಾಗಿಯೂ 125 ವರ್ಷಗಳಾಗಿವೆ. ಇನ್ನು ಕಬಿನಿ, ನುಗು, ಹಾರಂಗಿ ಜಲಾಶಯಗಳಿಗೂ ಏನಿಲ್ಲ ಎಂದರೂ 50 ವರ್ಷಗಳಾಗಿವೆ.
ರಾಜ್ಯ ಸರ್ಕಾರವು ಈ ಜಲಾಶಯಗಳನ್ನು ಕಾಲಕಾಲಕ್ಕೆ ದುರಸ್ತಿಗೊಳಿಸಿ ಸರಿಯಾಗಿ ನಿರ್ವಹಿಸಬೇಕಿತ್ತು. ಆದರೆ ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದೆ ಅನಿಸುತ್ತದೆ. ಸದ್ಯ ತುಂಗಭದ್ರ ಜಲಾಶಯದ ಗೇಟ್ ಮುರಿದುಬಿದ್ದಿರುವುದುಹಾಗೂಕಬಿನಿಜಲಾಶಯವುಸೋರುತ್ತಿರುವುದು ಎಚ್ಚರಿಕೆಯ ಘಂಟೆಯಾಗಿದ್ದು, ಅನಾಹುತಗಳು ಸಂಭವಿಸುವ ಮೊದಲು ಸರ್ಕಾರ ಎಚ್ಚೆತ್ತುಕೊಂಡು ಜಲಾಶಯಗಳನ್ನು ದುರಸ್ತಿಗೊಳಿಸಬೇಕಿದೆ.
-ಎನ್.ಆರ್.ಚೇತನ್, ನಗರ್ಲೆ, ನಂಜನಗೂಡು.
ಮೈಸೂರು: ಕಾಡಾನೆಗಳು ಊರಿಗೆ ಬರದಂತೆ ಅರಣ್ಯ ಇಲಾಖೆಯು ಎಐ ಆಧಾರಿರ ಕೂಗು ಕ್ಯಾಮರಾವನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅಳವಡಿಸಿದೆ.…
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ…
ಹಾಸನ: ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಹಾಸನದ ಚನ್ನರಾಯಪಟ್ಟಣ ಮೂಲದ ಇಬ್ಬರು ಯುವತಿಯರು ಕಣ್ಮರೆಯಾಗಿದ್ದಾರೆ.…
ಬೆಂಗಳೂರು: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಸಂಭವಿಸಿದ ಕಂಟೇನರ್ ಹಾಗೂ ಖಾಸಗಿ ಬಸ್ ಭೀಕರ ಅಪಘಾತದಲ್ಲಿ ಮೃತಪಟ್ಟವರಿಗೆ…
ಬೆಂಗಳೂರು: ಮಧ್ಯರಾತ್ರಿಯಿಂದಲೇ ಎಲ್ಲೆಡೆ ಕ್ರಿಸ್ಮಸ್ ಸಡಗರ ಮನೆ ಮಾಡಿದೆ. ಪ್ರತಿ ವರ್ಷದಂತೆ ಈ ವರ್ಷವು ಸಹ ಕ್ರಿಸ್ಮಸ್ ಹಬ್ಬವು ನಂಬಿಕೆಯೆಂಬ…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೋರ್ಲತ್ತು ಬಳಿ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 10ಕ್ಕೂ…