‘ಆಂದೋಲನ’ ದಿನ ಪತ್ರಿಕೆಯ ಏ.೧೯ರ ‘ಹಾಡು ಪಾಡು’ ಸಂಚಿಕೆಯಲ್ಲಿ ‘ಪಂಪ ಪ್ರಶಸ್ತಿ’ ಸಂದ ಹಿನ್ನೆಲೆಯಲ್ಲಿ ದೇವನೂರ ಮಹಾದೇವ ಅವರ ಬಗ್ಗೆ ಓ.ಎಲ್. ನಾಗಭೂಷಣ ಸ್ವಾಮಿ, ರಾಜೇಂದ್ರ ಚೆನ್ನಿ, ಸುರೇಶ್ ಕಂಜರ್ಪಣೆ ಅವರ ಲೇಖನಗಳ ನ್ನಾದರಿಸಿದ ‘ದೇವನೂರಿಗೆ ಆಗಮಿಸಿದ ಪಂಪ’ ಎಂಬ ಶೀರ್ಷಿಕೆ ದೇವನೂರರ ವ್ಯಕ್ತಿತ್ವಕ್ಕೆ ಪೂರಕ ಮತ್ತು ಅರ್ಥಪೂರ್ಣ ಎನಿಸಿತು. ಓ.ಎಲ್.ಎನ್ ಅವರ ‘ಅರ್ಧ ಶತಮಾನಕ್ಕೂ ಹಿಂದಿನ ಕಾಲದ ಚಿತ್ರಗಳು ’ ಇದುವರೆಗೂ ಅಜ್ಞಾತವಾಗಿದ್ದ ಅವರ ಒಡನಾಟದ ಕೆಲ ಆಪ್ತ ವಿವರಗಳು ಹೊಸ ತಲೆಮಾರಿನ ಲೇಖಕ, ಓದುಗ, ವಿಮರ್ಶಕರಿಗೆ ಪ್ರಸ್ತುತ ಹಾಗೂ ಆಗಾಗ ಮೆಲುಕು ಹಾಕಲು ದಕ್ಕಿರುವಂತಿವೆ. ಹಾಗಾಗಿ ಓ.ಎಲ್.ಎನ್. ಅವರ ಈ ಬರಹ ದೇವನೂರರ ಒಟ್ಟು ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. ಇನ್ನು ಸುರೇಶ್ ಕಂಜರ್ಪಣೆ ಅವರ ‘ದೇಮ ಎಂಬ ನೈತಿಕ ಕೈಮರ’ ರಾಜೇಂದ್ರ ಚೆನ್ನಿ ಅವರ ‘ಎಲ್ಲಾ ಮನೆಗಳ ಜೋತಮ್ಮದಿರು ಹರಸಲಿ’ ಬರಹಗಳು ದೇವನೂರರನ್ನು ಗ್ರಹಿಸಲು ಇನ್ನಷ್ಟು ಸಹಕಾರಿಯಾದವು.
– ಎಂ.ಜವರಾಜ್, ಮೈಸೂರು
ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…
ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…
ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್ಎನ್ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್ಎನ್ಎಲ್ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…
ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್ಗಳು ಈಗ ಇನ್ಸ್ಟಾಗ್ರಾಂ…