ಓದುಗರ ಪತ್ರ
ಹುಣಸೂರು ಮುಖ್ಯ ರಸ್ತೆಯಲ್ಲಿರುವ ಇಲವಾಲ, ಬೆಳವಾಡಿ, ಹೂಟ ಗಳ್ಳಿ, ಹಿನಕಲ್ ಸೇರಿದಂತೆ ಮೈಸೂರು ನಗರದೊಳಗೂ ಸಂಚರಿಸುವ ಟಾಟಾ ಕಂಪೆನಿಯ ಮ್ಯಾಜಿಕ್ ಆಟೋ ಚಾಲಕರು, ಸಾರ್ವಜನಿಕರು ಹೇಳಿದ ಜಾಗಕ್ಕೆ ಬಿಟ್ಟು, ಇಂತಿಷ್ಟು ಹಣ ಪಡೆದು ನಿತ್ಯ ಅಷ್ಟೋ ಇಷ್ಟೋ ಬಾಡಿಗೆ ದುಡಿಯುತಿದ್ದಾರೆ. ಇವರಲ್ಲಿ ಕೆಲವು ಚಾಲಕರು ಆಟೋ ಭರ್ತಿಯಾಗಿದ್ದರೂ, ದುರಾಸೆಯಿಂದ ಮತ್ತಷ್ಟು ಜನರನ್ನು ಹತ್ತಿಸಿ ಕೊಂಡು ಫುಟ್ ಬೋರ್ಡ್ ಮೇಲೆ ನಿಲ್ಲಿಸಿ ಕೊಂಡು ಹೋಗುತ್ತಾರೆ. ಈ ವೇಳೆ ಫುಟ್ ಬೋರ್ಡ್ ಮುರಿದೋ ಅಥವಾ ಹಳ್ಳಕೊಳ್ಳ ಬಂದಾಗ ಪ್ರಯಾಣಿಕರು ಕಾಲು ಜಾರಿ ಬಿದ್ದರೆ, ಪ್ರಾಣಹಾನಿಯಾಗುವ ಸಂಭವವೇ ಹೆಚ್ಚು! ಜೊತೆಗೆ, ಹಿಂದೆ ಬರುವ ವಾಹನ ಸವಾರರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಸಂಚಾರ ಪೊಲೀಸರು ಈ ಆಟೋ ಚಾಲಕರು ಜನರನ್ನು ಕರೆದೊಯ್ಯಲು ಸೂಕ್ತ ನಿಯಮ ರೂಪಿಸಿ, ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಹೇಳಬೇಕು, ನಿಯಮಗಳನ್ನು ಪಾಲಿಸದಿದ್ದರೆ ದಂಡ ವಿಧಿಸುವ ಕ್ರಮ ಕೈಗೊಂಡು ಅನಾಹುತಗಳನ್ನು ತಪ್ಪಿಸಬೇಕು.
-ಬಿ. ಗಣೇಶ, ಕೆ.ಜಿ.ಕೊಪ್ಪಲು, ಮೈಸೂರು
ತಿರುವನಂತಪುರ: ಸಿಎಂಆರ್ಎಲ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ ಇಂದು ಕೇರಳದ ಮಾಜಿ ಸಿಎಂ…
ಬೆಂಗಳೂರು: ನಾಳೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳು ದಟ್ಟವಾಗಿವೆ. ಮೇ.29ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ…
ಎಸ್.ಎಸ್.ಭಟ್ ನಂಜನಗೂಡು: ಅಧಿಕಾರಿಗಳ ನೋಟಿಸ್ಗೂ ಕ್ಯಾರೆ ಎನ್ನದ ಶ್ರೀಕಂಠೇಶ್ವರ ದೇವಾಲಯದ ಸಿಬ್ಬಂದಿ ನಂಜನಗೂಡು: ಇಲ್ಲಿನ ಪ್ರಸಿದ್ಧ ಶ್ರೀಕಂಠೇಶ್ವರ ದೇವಾಲಯದ ಕಪಿಲಾ…
ಬ್ಯೂಟಿ ಪಾರ್ಲರ್ಗಳನ್ನು ತೆರೆದು ಅದರಿಂದ ಬದುಕು ನಡೆಸಲು ತರಬೇತಿ ೨೦೧೪ರಲ್ಲಿ ದೆಹಲಿಯ ಅಂಶು ರಜಪೂತ್ ೧೫ ವರ್ಷದವಳಾಗಿದ್ದಾಗ ಎಂದಿನಂತೆ ತನ್ನ…
ಎಸ್.ಸಿ. ದಿನೇಶ್ ಕುಮಾರ್, ಹಿರಿಯ ಪತ್ರಕರ್ತರು ಕಾಕ್ರೋಚ್ ಜನತಾ ಪಾರ್ಟಿ ನಮ್ಮ ದೇಶದ ಯುವಜನರ ಹತಾಶೆ, ಸಿಟ್ಟು, ಆಕ್ರೋಶಕ್ಕೆ ಹಿಡಿದ…
ಚಿರಂಜೀವಿ ಸಿ. ಹುಲ್ಲಹಳ್ಳಿ ಬೆಳೆಗಾರ ಕಂಗಾಲು; ನಷ್ಟಕ್ಕೆ ಪರಿಹಾರ ಕಲ್ಪಿಸಲು ರೈತರ ಒತ್ತಾಯ ಮೈಸೂರು: ಮಳೆ ಕೊರತೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ…