ಓದುಗರ ಪತ್ರ
ಹುಣಸೂರು ಮುಖ್ಯ ರಸ್ತೆಯಲ್ಲಿರುವ ಇಲವಾಲ, ಬೆಳವಾಡಿ, ಹೂಟ ಗಳ್ಳಿ, ಹಿನಕಲ್ ಸೇರಿದಂತೆ ಮೈಸೂರು ನಗರದೊಳಗೂ ಸಂಚರಿಸುವ ಟಾಟಾ ಕಂಪೆನಿಯ ಮ್ಯಾಜಿಕ್ ಆಟೋ ಚಾಲಕರು, ಸಾರ್ವಜನಿಕರು ಹೇಳಿದ ಜಾಗಕ್ಕೆ ಬಿಟ್ಟು, ಇಂತಿಷ್ಟು ಹಣ ಪಡೆದು ನಿತ್ಯ ಅಷ್ಟೋ ಇಷ್ಟೋ ಬಾಡಿಗೆ ದುಡಿಯುತಿದ್ದಾರೆ. ಇವರಲ್ಲಿ ಕೆಲವು ಚಾಲಕರು ಆಟೋ ಭರ್ತಿಯಾಗಿದ್ದರೂ, ದುರಾಸೆಯಿಂದ ಮತ್ತಷ್ಟು ಜನರನ್ನು ಹತ್ತಿಸಿ ಕೊಂಡು ಫುಟ್ ಬೋರ್ಡ್ ಮೇಲೆ ನಿಲ್ಲಿಸಿ ಕೊಂಡು ಹೋಗುತ್ತಾರೆ. ಈ ವೇಳೆ ಫುಟ್ ಬೋರ್ಡ್ ಮುರಿದೋ ಅಥವಾ ಹಳ್ಳಕೊಳ್ಳ ಬಂದಾಗ ಪ್ರಯಾಣಿಕರು ಕಾಲು ಜಾರಿ ಬಿದ್ದರೆ, ಪ್ರಾಣಹಾನಿಯಾಗುವ ಸಂಭವವೇ ಹೆಚ್ಚು! ಜೊತೆಗೆ, ಹಿಂದೆ ಬರುವ ವಾಹನ ಸವಾರರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಸಂಚಾರ ಪೊಲೀಸರು ಈ ಆಟೋ ಚಾಲಕರು ಜನರನ್ನು ಕರೆದೊಯ್ಯಲು ಸೂಕ್ತ ನಿಯಮ ರೂಪಿಸಿ, ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಹೇಳಬೇಕು, ನಿಯಮಗಳನ್ನು ಪಾಲಿಸದಿದ್ದರೆ ದಂಡ ವಿಧಿಸುವ ಕ್ರಮ ಕೈಗೊಂಡು ಅನಾಹುತಗಳನ್ನು ತಪ್ಪಿಸಬೇಕು.
-ಬಿ. ಗಣೇಶ, ಕೆ.ಜಿ.ಕೊಪ್ಪಲು, ಮೈಸೂರು
ನವದೆಹಲಿ: ದೇಶದಾದ್ಯಂತ ಇಂದು 80ನೇ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ…
ಪ್ರಾಮಾಣಿಕತೆ, ದಕ್ಷತೆ ವಿಷಯ ಬಂದಾಗ ಹೆಂಗಸರಿಗೆ ಸಿಗುವ ‘ಅಂಕ’ ಸ್ವಲ್ಪ ಹೆಚ್ಚೆ ಎಂಬ ಭಾವನೆ ಈ ಹಿಂದಿನಿಂದಲೂ ಇದೆ. ಅದೇ…
ರಾಜ್ಯ ಸರ್ಕಾರವು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದ ಮೇಲೆ ಒಂದು…
ಪ್ರತಿ ವರ್ಷ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಬಹು ವಿಜೃಂಭಣೆಯಿಂದ ಮೈಸೂರಿನಲ್ಲಿ ಹತ್ತು ದಿನಗಳ ಕಾಲ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ…
ಟಿ.ಕೆ.ಹರೀಶ್ ಮನೆ ಮುಂದಿನ ರಸ್ತೆಯ ಕಸ ವಿಲೇವಾರಿಗೆ ನಾಗರಿಕರು ಜಾಗೃತರಾಗಬೇಕು ಮೈಸೂರು ಎಂದರೆ ಕೇವಲ ಒಂದು ನಗರವಲ್ಲ. ಅದು ಕರ್ನಾಟಕದ…
ಎಸ್.ಎಸ್.ಭಟ್ ನಂ.ಗೂಡು: ಕಳಚಿ ಬೀಳುತ್ತಿದೆ ಸೀಲಿಂಗ್ ಕಾಂಕ್ರೀಟ್; ವಾಹನ ಸವಾರರಲ್ಲಿ ಆತಂಕ ನಂಜನಗೂಡು: ನಗರದ ರೈಲು ನಿಲ್ದಾಣಕ್ಕೆ ತಾಗಿದಂತೆ ಮಹಾತ್ಮ…