ಓದುಗರ ಪತ್ರ
ಸಂತಸ – ಸಂಕಟ
ನಿನ್ನೆ ಗೆದ್ದ ಸಂತಸ…
ಇಂದು ಸತ್ತ ಸಂಕಟ…
ಪಂದ್ಯವಾಗಿತ್ತು ರಣ ರೋಚಕ…
ಮಂದಿಗೀಗ ಸಾವಿನ ಸೂತಕ!
ತಡರಾತ್ರಿಯೆಲ್ಲ ಬಾನಂಗಳದಲ್ಲಿ
ಚುಕ್ಕಿಗಳ ನಾಚಿಸುವ ಚಮಕು!
ತುಡಿತದ ತುಳಿತಕ್ಕೆ ಸಿಕ್ಕವರಿಗೆ
ಮಸಣದ ಹಾದಿಗೆ ಬೆಳಕು!
ಹಸುಗೂಸೋ ಹದಿವಯಸೋ
ಯಾವುದೊಂದನ್ನೂ ನೋಡಲಿಲ್ಲ
ಅಭಿಮಾನದ ಕಿ(ಹು)ಚ್ಚು….!
ಅಂಗಾಲಿನಡಿ ಸಿಲುಕಿದ್ದವರೆಲ್ಲ
ಕಂಗಳ ರೆಪ್ಪೆ ಮಿಟುಕಿಸುವಷ್ಟರಲ್ಲೇ
ಚೆಲ್ಲಿದರು ಉಸಿರು…..!
ಇದಕ್ಕೀಗ ಅಭಿಮಾನವೆನ್ನುವುದೋ
ರಾಜಕೀಯದ ಲೇ(ಲೋ)ಪ ಎನ್ನುವುದೋ…!
ಏನೂ ಹೇಳಲಾಗದ ಪರಿಸ್ಥಿತಿ…!
ಸಂತಸ – ಸಂಕಟ ಒಂದೇ ನಾಣ್ಯದ
ಎರಡು ಮುಖಗಳಿದ್ದಂತೆ….!
ಅಷ್ಟೇ….!
– ಎಸ್. ಶ್ರೀಕರ
ಕೇರಳ: ಸುಮಾರು ಎಂಟು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ, 2017ರಲ್ಲಿ ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಲಯಾಳಂ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಜೈಲಿನ ಕಠಿಣ ನಿಯಮಗಳಿಗೆ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ.…
ಬೆಳಗಾವಿ: ಬೆಳಗಾವಿ ಅಧಿವೇಶನ ವಿರೋಧಿಸಿ ಎಂಇಎಸ್ ಪುಂಡರು ಮಹಾಮೇಳಾವ್ ನಡೆಸಲು ಸಿದ್ಧತೆ ನಡೆಸಿದ್ದು, ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದಿನಿಂದ…
ಬೆಂಗಳೂರು: ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಅಧಿವೇಶನದ ಮೊದಲ ದಿನವೇ ಡಿಸಿಎಂ ಡಿ.ಕೆ.ಶಿವಕುಮಾರ್ ಗೈರಾಗಿದ್ದಾರೆ. ಇಂದಿನಿಂದ ಡಿಸೆಂಬರ್.19ರವರೆಗೆ ಅಧಿವೇಶನ…
ಬೆಂಗಳೂರು: ನಾಯಕತ್ವ ಬದಲಾವಣೆ ಗೊಂದಲ, ಸರ್ಕಾರದಲ್ಲಿ ಶೇಕಡಾ.63 ರ್ಷಟು ಕಮಿಷನ್ ಕುರಿತು ಉಪಲೋಕಾಯುಕ್ತರ ಹೇಳಿಕೆ, ವಿವಿಧ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರ…
ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಿದ ಬಳಿಕ ಅಲ್ಲಲ್ಲಿ ಕೆರೆ-ಕಟ್ಟೆ, ಸರ್ಕಾರಿ ಜಾಗಗಳ ಒತ್ತುವರಿ ಪ್ರಕರಣ ಮೇಲಿಂದ ಮೇಲೆ ಭಾರೀ…