ಓದುಗರ ಪತ್ರ
ಕಳೆದ ಆರ್ಥಿಕ ವರ್ಷದಲ್ಲಿ (೨೦೨೫-೨೬), ನಮ್ಮ ಭಾರತೀಯ ಬ್ಯಾಂಕ್ಗಳು, ಕೇವಲ ಪೆನ್ನು,ಪೇಪರ್, ಸ್ಟೇಷನರಿ ವಸ್ತುಗಳು ಮತ್ತು ಮುದ್ರಣಕ್ಕಾಗಿ ೩,೮೭೦ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿವೆ ಎಂದುಮಾಧ್ಯಮಗಳು ವರದಿ ಮಾಡಿವೆ. ಅಚ್ಚರಿಯ ಸಂಗತಿ ಎಂದರೆ, ಭಾರ ತೀಯ ಸ್ಟೇಟ್ ಬ್ಯಾಂಕ್ ಒಂದೇ ಸುಮಾರು ಒಂದು ಸಾವಿರ ಕೋಟಿ ರೂ.ಹಣವನ್ನು ಸ್ಟೇಷನರಿಗಾಗಿ ಖರ್ಚು ಮಾಡಿದೆ.
ಬ್ಯಾಂಕ್ನಲ್ಲಿ ಗ್ರಾಹಕರು ಚೆಕ್ ಬುಕ್ ಪಡೆದಾಗ ಇಂತಿಷ್ಟು ಹಣವನ್ನು ಗ್ರಾಹಕರಿಂದಲೇ ವಸೂಲಿ ಮಾಡುತ್ತಿವೆ. ಗ್ರಾಹಕರ ಎಸ್ಬಿ ಖಾತೆಯಿಂದ ಈ ಹಣ ಡೆಬಿಟ್ ಆಗುವುದರಿಂದ ಬಹಳಷ್ಟು ಗ್ರಾಹಕರು, ಚೆಕ್ ಬುಕ್ ಅನ್ನು, ಬ್ಯಾಂಕ್ಗಳು ಫ್ರೀ ನೀಡುತ್ತಿವೆ ಎಂದು ಕೊಂಡಿದ್ದಾರೆ. ದೇಶವು ಎಲ್ಲ ಕಚೇರಿಗಳಲ್ಲೂ, ಕಾಗದ ರಹಿತ ಆಡಳಿತ ನಡೆಸಲು ಮುಂದಾಗಿದೆ. ಆದರೆ ನಮ್ಮ ಭಾರತೀಯ ಬ್ಯಾಂಕ್ಗಳು ಇನ್ನೂ ಓಬಿರಾಯನ ಕಾಲದ ಇವೆ. ಬ್ಯಾಂಕ್ಗಳು ಇನ್ನು ಮುಂದಾದರೂ ಆಧುನಿಕ ತಂತ್ರeನ ಬಳಸಿಕೊಂಡು, ಖರ್ಚು ಕಡಿಮೆ ಮಾಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡುವಂತಾಗಬೇಕು.
– ಬೂಕನಕೆರೆ ವಿಜೇಂದ್ರ, ಮೈಸೂರು
ನೀಟ್ -ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಇದೇ ಜೂನ್ ೨೧ ರಂದು ಮರು ಪರೀಕ್ಷೆ ನಡೆಯಲಿದೆ. ವಂಚನೆ ಜಾಲ…
ಮೈಸೂರಿನ ಕುಕ್ಕರಹಳ್ಳಿ ಕೆರೆ ಬಳಿ ಮೈಸೂರು ವಿಶ್ವವಿದ್ಯಾನಿಲಯದ ಹಿಂಭಾಗ ಮೈಸೂರು - ಚಾಮರಾಜನಗರ ರೈಲ್ವೆ ಹಳಿಯ ಪಕ್ಕದಲ್ಲಿದ್ದ ೩೫ ಮರಗಳನ್ನು…
ಜೂನ್ ೧೪ರಂದು ಆರಂಭವಾದ ಎಥೆನಾಲ್ ಜಗೃತಿ ಕೇವಲ ಕಾರ್ಪೊರೇಟ್ ಪ್ರಚಾರದ ಗಿಮಿಕ್ನಂತೆ ಕಾಣುತ್ತಿದೆ. ಪೆಟ್ರೋಲ್ಗೆ ಶೇ.೨೦ ಮಿಶ್ರಣದ ಗುರಿ ಮತ್ತು…
ಮೈಸೂರು : ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಜಾ.ದಳದಿಂದ ಕ್ರಾಸ್ ವೋಟ್ ಮಾಡಿದ ನಾಲ್ಕು ಜನರು ಯಾರೆಂದು ಗೊತ್ತಿದೆ.…
ಮಂಡ್ಯ : ಜಿಲ್ಲೆಯ ವಿವಿಧೆಡೆ ನಡೆದ 21 ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ 553 ಗ್ರಾಂ…