ಮಂಡ್ಯದಿಂದ ಚೆನ್ನೈಗೆ ಪ್ರಯಾಣಿಸಬೇಕಿತ್ತು. ‘ವಂದೇ ಭಾರತ್’ ರೈಲೇರಿ ನನ್ನ ಮೇಜಿನ ಬಳಿ ಬಂದಾಗ ಬರೀ ಇಂಗ್ಲಿಷ್ ಮತ್ತು ತಮಿಳು ದಿನಪತ್ರಿಕೆಗಳು ಕಣ್ಣಿಗೆ ಬಿದ್ದವು.
ಕಾಫಿ, ಟೀ, ದಿನಪತ್ರಿಕೆ, ನೀರಿನ ಬಾಟಲಿ, ಬೆಳಗಿನ ತಿಂಡಿ, ಪ್ರಯಾಣ ದರ ಎಲ್ಲಾ ಸೇರಿ ೧,೧೫೯ ರೂ. ತೆಗೆದುಕೊಳ್ಳುತ್ತಾರೆ (ಪ್ಯಾಸೆಂಜರ್ ರೈಲಿನಲ್ಲಿ ೧೬೫ ರೂ. ಮಾತ್ರ, ೨ ಗಂಟೆ ಹೆಚ್ಚುವರಿ ಪಯಣಿಸಬೇಕಷ್ಟೆ) ಆದರೆ ಕನ್ನಡ ದಿನಪತ್ರಿಕೆ ಕೊಟ್ಟಿರಲಿಲ್ಲ. ನಾನು ಅಲ್ಲಿದ್ದ ರೈಲ್ವೆ ಸಿಬ್ಬಂದಿ ಯನ್ನು ಕೇಳಿದೆ. ಅದಕ್ಕೆ ಅವರು ಇಲ್ಲಿಯವ ರೆಗೆ ಯಾರೂ ಕನ್ನಡ ದಿನಪತ್ರಿಕೆ ಕೇಳಿಲ್ಲ. ನೀವೇ ಮೊದಲು ಕೇಳಿದ್ದು ಅಂದರು. ಆದ್ದರಿಂದ ಕನ್ನಡದ ದಿನಪತ್ರಿಕೆ ಅದರಲ್ಲೂ ಸಮಾಜದಲ್ಲಿ ಸಮಾನತೆ ಮತ್ತು ವೈಚಾರಿಕತೆ ಬೆಳೆಸಲು ಕೈ ಜೋಡಿಸಿರುವ ಮೈಸೂರು ಭಾಗದ ‘ಆಂದೋಲನ’ ದಿನಪತ್ರಿಕೆಯನ್ನು ಒದಗಿಸಬೇಕು ಎಂದು ಮಂಡ್ಯ ರೈಲು ನಿಲ್ದಾಣದಲ್ಲಿ ಮನವಿ ಮಾಡುವುದಕ್ಕೆ ಒಡನಾಡಿಗಳ ಜೊತೆ ವಾಟ್ಸಾಪ್ನಲ್ಲಿ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಂಡಿದ್ದೇವೆ.
-ಅಭಿ ಒಕ್ಕಲಿಗ, ನಾವು ದ್ರಾವಿಡ ಕನ್ನಡಿಗರು ಚಳವಳಿ, ಮಂಡ್ಯ.
ಸ್ವಾಗತಾರ್ಹ ಸಂಕಲ್ಪ! ಮತ್ತೆ ಗುಡಿಗಿದ್ದಾರೆ ಮುಖ್ಯಮಂತ್ರಿಗಳು ‘ಭ್ರಷ್ಟಾಚಾರಿಗಳ ಬಡಿದು ಹಾಕುವೆ’ಎಂದು ಅಭಿವೃದ್ಧಿಗೆ ಮಾರಕ ಪ್ರಜೆಗಳ ಶೋಷಕ ಈ ಭ್ರಷ್ಟಾಚಾರ ಎಂಬ…
ಆಗಸ್ಟ್ ಹದಿನೈದು ಬಂತೆಂದರೆ ಸಾಕು, ನಮ್ಮಲ್ಲಿ ದೇಶಪ್ರೇಮದ ರೋಮಾಂಚನ. ಶಾಲೆ-ಕಚೇರಿಗಳಲ್ಲಿ ರಾಷ್ಟ್ರಧ್ವಜರೋಹಣ, ಸಿಹಿತಿಂಡಿ ಹಂಚಿಕೆ, ದೇಶಭಕ್ತಿ ಗೀತೆಗಳು ಮತ್ತು ಭಾಷಣಗಳು…
ಮೈಸೂರು ತಾಲ್ಲೂಕಿನ ಬ್ಯಾತಹಳ್ಳಿ ಮತ್ತು ದಡದಹಳ್ಳಿ ನಡುವೆ ಹರಿಯುತ್ತಿರುವ ಎಣ್ಣೆಹೊಳೆ ದಾಟಲು ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ದುಸ್ಥಿತಿಯಲ್ಲಿದೆ. ಈ…
ಗೋವಿಂದರಾಜು ಲಕ್ಷ್ಮೀಪುರ, ಇಂಗ್ಲಿಷ್ ಸಹಪ್ರಾಧ್ಯಾಪಕ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು ಐಪಿಎಸ್ ಅಧಿಕಾರಿ ಚೆನ್ನಬಸವಣ್ಣ ಅವರ ಅಲ್ಕೆಬುಲಾನದ ಹೃದಯದಿಂದ…
ವೈಡ್ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ‘ಫಸ್ಟ್ , ಯು ಹ್ಯಾವ್ ಟು ಬಿಲೀವ್ ಇನ್ ಇಟ್, ದೆನ್…
ದಾ.ರಾ.ಮಹೇಶ್ ಹನಗೋಡು ಹೋಬಳಿ ರೈತರು ಬೆಳೆದ ಸಿಹಿಗುಂಬಳಕ್ಕೆ ದೊರೆಯದ ಮಾರುಕಟ್ಟೆ ವೀರನಹೊಸಹಳ್ಳಿ: ಜೋಳ, ಶುಂಠಿ, ಮತ್ತಿತರ ಸಾಂಪ್ರದಾಯಿಕ ಕೃಷಿ ಬಿಟ್ಟು…