ಲಕ್ಷ್ಮೀಕಾಂತ್ ಕೊಮಾರಪ್ಪ
ಶೀತಗಾಳಿಯಿಂದ ಪಾರಾಗಲು ಬೆಚ್ಚನೆಯ ಬಟ್ಟೆ, ಹೊದಿಕೆ, ಬೆಂಕಿಯ ಮೊರೆ
ಸೋಮವಾರಪೇಟೆ: ಶೀತಗಾಳಿಯಿಂದ ಚಳಿಯ ಪ್ರಮಾಣ ಹೆಚ್ಚಾಗಿದ್ದು, ಕಳೆದೆರಡು ದಿನಗಳಲ್ಲಿ ಅತ್ಯಂತಕಡಿಮೆ ೧೨ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರಿಂದ ಗ್ರಾಮೀಣ ಭಾಗಗಳಲ್ಲಿ ಚಳಿಗೆ ಜನರು ತತ್ತರಿಸುತ್ತಿದ್ದು, ಚಳಿಯಿಂದ ರಕ್ಷಣೆಗೆ ಪರದಾ ಡುವಂತಾಗಿದೆ.
ಮಲೆನಾಡು ಬಯಲು ಸೀಮೆ ವ್ಯಾಪ್ತಿ ಹೊಂದಿರುವ ಜಿಲ್ಲೆಯಲ್ಲಿ ಹಲವು ದಿನಗಳಿಂದ ಚಳಿಯಿದೆ. ಆದರೆ, ಹೆಚ್ಚು ಚಳಿಯ ಅನುಭವವಾಗಿರಲಿಲ್ಲ. ಆದರೆ, ಕೆಲವು ದಿನಗಳಿಂದ ಅತ್ಯಂತ ಕಡಿಮೆ ತಾಪಮಾನ ದಾಖಲಾಗುತ್ತಿರುವುದರಿಂದ ಜನರಿಗೆ ಥಂಡಿಯ ಭೀತಿ ಕಾಡುತ್ತಿದೆ.
ನವೆಂಬರ್ ತಿಂಗಳ ಕೊನೆಯವಾರ ಸ್ವಲ್ಪ ತಾಪಮಾನ ಇಳಿಕೆಯಾಗಿತ್ತು. ಆದರೆ, ನಂತರ ಯಾವುದೇ ತೊಂದರೆಯಾಗಿರಲಿಲ್ಲ. ಈಗ ಇದ್ದಕ್ಕಿದ್ದಂತೆಯೇ ೪ ಡಿಗ್ರಿ ಸೆಲ್ಸಿಯಸ್ ನಿಂದ ೬ ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನ ಕಡಿಮೆ ದಾಖಲಾಗಿರುವುದು ಕಂಡುಬಂದಿದೆ. ವೃದ್ಧರು, ಮಕ್ಕಳಂತೂ ತೀರಾ ತೊಂದರೆ ಎದುರಿಸುತ್ತಿದ್ದಾರೆ. ಇಡೀ ದಿನ ಥಂಡಿಯ ವಾತಾವರಣ ಕಂಡುಬರುತ್ತಿದೆ. ಶೀತಗಾಳಿಯ ಪರಿಣಾಮದಿಂದ ದಿನದಲ್ಲಿಯೂ ಸಂಜೆಯಾಗುತ್ತಿದ್ದಂತೆಯೇ ಚಳಿಯ ಪ್ರಮಾಣ ಏರಿಕೆಯಾಗುತ್ತಿದ್ದು, ಬೆಳಿಗ್ಗೆ ೧೦ ಗಂಟೆಯಾದರೂ ಚಳಿ ಕಮ್ಮಿಯಾಗುತ್ತಿಲ್ಲ.
ಇಡೀ ದಿನ ಚಳಿ ಇರುತ್ತಿರುವುದರಿಂದ ಜನರು ಚಳಿಯಿಂದ ರಕ್ಷಣೆಗೆ ಸ್ವೆಟರ್, ದಪ್ಪನೆಯ ಬಟ್ಟೆ, ಮಫ್ಲರ್, ಹ್ಯಾಂಡ್ ಗೌಸ್ ಗಳನ್ನು ಧರಿಸಿ ಮೈ ಬೆಚ್ಚಗೆ ಇಟ್ಟು ಕೊಳ್ಳುತ್ತಿದ್ದಾರೆ. ಬಿಸಿ ನೀರು ಕುಡಿದು ದೇಹದ ಉಷ್ಣಾಂಶ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಮುಂಜಾನೆ ಜಾಗಿಂಗ್, ವಾಕಿಂಗ್ ಹೋಗುವವರ ಸಂಖ್ಯೆ ಕಡಿಮೆಯಾಗಿದೆ.
ಬೆಚ್ಚನೆಯ ಬಟ್ಟೆ ಇತರೆ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೆಚ್ಚು ಚಳಿ ಇರುವುದರಿಂದ ದೇಹವನ್ನು ರಕ್ಷಿಸಿಕೊಳ್ಳಲು ಮಕ್ಕಳು, ವೃದ್ಧರು ಹ್ಯಾಂಡ್ ಗೌಸ್, ಕಿವಿ ಮುಚ್ಚಿಕೊಳ್ಳುವ ಮಫ್ಲರ್, ಕ್ಯಾಪ್ಗಳನ್ನು ಖರೀದಿಸುವಲ್ಲಿ ನಿರತರಾಗಿದ್ದಾರೆ. ಅದೇ ರೀತಿ ಅಂಗಡಿ, ಮಾಲ್ಗಳಿಗೆ ತೆರಳಿ ಬೆಚ್ಚನೆಯ ಹೊದಿಕೆಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ಬೆಚ್ಚನೆಯ ಬಟ್ಟೆ, ಹೊದಿಕೆಗಳಿಗೂ ಬೇಡಿಕೆ ಹೆಚ್ಚಾಗಿದೆ. ಇನ್ನು ಸ್ವಲ್ಪ ದಿನ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಸಾರ್ವಜನಿಕರು ಎಚ್ಚರವಹಿಸಲು ಸೂಚಿಸಲಾಗಿದೆ. ಇದು ಇನ್ನೂ ಹಲವು ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ವಾಕಿಂಗ್ ಪ್ರಿಯರಿಗೆ ಚಳಿ ಕಾಟ:
ಸಾಮಾನ್ಯವಾಗಿ ಹಲವರು ಮುಂಜಾನೆ ವಾಕಿಂಗ್ ಹೋಗುತ್ತಾರೆ. ಬಿಪಿ, ಮಧುಮೇಹದಂತಹ ಸಮಸ್ಯೆ ಇರುವವರು ಮುಂಜಾನೆ ನಡಿಗೆಯನ್ನು ತಪ್ಪಿಸುವುದೇ ಇಲ್ಲ.ಇನ್ನೂ ಕೆಲವರು ಆದಷ್ಟು ಫಿಟ್ ಆಗಿ ಇರುವ ಉದ್ದೇಶದಿಂದವಾಕಿಂಗ್ ಮಾಡುತ್ತಾರೆ. ಇಂಥವರಿಗೆ ಸದ್ಯದ ಪರಿಸ್ಥಿತಿಯಲ್ಲಿ ಚಳಿ ಕಾಟ ಕೊಡುತ್ತಿದೆ.
ಮಲೆನಾಡಿನಲ್ಲಿ ಪ್ರವಾಸಿಗರ ಸಂಭ್ರಮ…:
ಸ್ಥಳೀಯರಿಗೆ ಚಳಿ ಕಾಟ ಕೊಡುತ್ತಿದ್ದರೆ ವೀಕೆಂಡ್ ನಲ್ಲಿ ಸೋಮವಾರಪೇಟೆ ಭಾಗಕ್ಕೆ ಆಗಮಿಸುವ ಪ್ರವಾಸಿಗರು ಮಂಜು ಮುಸುಕಿದ ವಾತಾವರಣದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಕೆಲವು ಪ್ರವಾಸಿಗರು ಬೆಳಿಗ್ಗೆ ೧೧ ಗಂಟೆವರೆಗೂ ಹೋಂ ಸ್ಟೇನಲ್ಲಿ ಫೈರ್ ಕ್ಯಾಂಪ್ಗೆ ಬೇಡಿಕೆ ಇಡುತ್ತಿದ್ದಾರೆ.
ಹನೂರು: ತಾಲ್ಲೂಕಿನ ಮಾರ್ಟಳ್ಳಿ ಸಮೀಪದ ವಡ್ಡರದೊಡ್ಡಿ ಗ್ರಾಮದಲ್ಲಿ ಮನೆಯೊಂದರಲ್ಲಿ ಕಳ್ಳತನ ನಡೆದಿರುವ ಕುರಿತು ವರದಿಯಾಗಿದೆ. ಗ್ರಾಮದ ನಿವಾಸಿ ಸೆಲ್ವಂ ಅವರು…
ಹೊಸದಿಲ್ಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ…
ಗುಂಡ್ಲುಪೇಟೆ: ಪಟ್ಟಣದ ಹೊರವಲಯದ ಕಲ್ಯಾಣಿ ಕೊಳದ ಬಳಿ ಸೇತುವೆಯಿಂದ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವ ಘಟನೆ ನಡೆದಿದೆ. ಮಂಡ್ಯ ಮೂಲದ…
ಸೋಮವಾರಪೇಟೆ: ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮತ್ತೆ ಮುಂದುವರೆದಿದ್ದು, ಬೆಳೆ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ಎರಡು…
ಬೆಂಗಳೂರು: ರಾಜ್ಯದಲ್ಲಿ ಒಂದು ವಾರ ಮುಂಗಾರು ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್.28ರವರೆಗೂ ಕರ್ನಾಟಕದಲ್ಲಿ ಮಳೆ…
ನವದೆಹಲಿ: ನೀಟ್ ಮರು ಪರೀಕ್ಷೆ ಅಂಗವಾಗಿ ಭಾರತದಲ್ಲಿ ಟೆಲಿಗ್ರಾಂ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ. ಸದ್ಯ ಪ್ಲೇ ಸ್ಟೋರ್ ಹಾಗೂ…