Andolana originals

ಭೂ ಪರಿಹಾರಕ್ಕಾಗಿ ಮುಗಿಬಿದ್ದ ಜನ

ಶ್ರೀಧರ್ ಆರ್. ಭಟ್

ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಪ್ರತಿನಿಧಿಸುತ್ತಿರುವ ವರುಣ ಕ್ಷೇತ್ರಕ್ಕೆ ಸೇರುವ ಇಮ್ಮಾವು, ಹುಳಿಮಾವು ಗ್ರಾಮಗಳಲ್ಲಿ 2012ರಲ್ಲಿ ಸರ್ಕಾರ ರೈತರಿಂದ ಭೂಮಿ ವಶಪಡಿಸಿಕೊಂಡು ಕೆಐಎಡಿಬಿಗೆ ನೀಡಿದ ಸಂಬಂಧ ಭೂಮಿ ಕಳೆದು ಕೊಂಡ ಜನರು ಇದೀಗ ಪರಿಹಾರಕ್ಕಾಗಿ ಮುಗಿಬಿದ್ದಿದ್ದಾರೆ.

ಜಮೀನಿನ ಪರಿಹಾರ ಪಡೆದುಕೊಳ್ಳಲು ಈ ಭಾಗದ ಸಹಸ್ರಾರು ಜನರು ಬುಧವಾರ ನಂಜನಗೂಡು ತಾಲ್ಲೂಕು ಕಚೇರಿಗೆ ಆಗಮಿಸಿದ್ದ ಪರಿಣಾಮ ಅರ್ಜಿ ಸ್ವೀಕರಿಸುತ್ತಿದ್ದ ಕಚೇರಿಯ ಸಿಬ್ಬಂದಿ ಹೈರಾಣಾದರು.

2012ರಲ್ಲಿ ಹಿಮ್ಮಾವು ಹಾಗೂ ಹುಳಿಮಾವು ಕೈಗಾರಿಕಾ ಕೇಂದ್ರವನ್ನು ನಿರ್ಮಿಸಲು ರಾಜ್ಯ ಸರ್ಕಾರ ಈ ಪ್ರದೇಶದ ಭೂಮಿಯನ್ನು ವಶಪಡಿಸಿಕೊಂಡು ಆಗಲೇ ಕೆಐಎಡಿಬಿಗೆ ಹಸ್ತಾಂತರಿಸಿತ್ತು. ಅಂದಿನಿಂದ ಇಂದಿನವರೆಗೆ ಸುಮಾರು 13 ವರ್ಷಗಳಿಂದ ಪರಿಹಾರಕ್ಕಾಗಿ ಅಲೆದಾಡಿ ಹೋರಾಟ ಮಾಡಿ ಹೈರಾಣಾದ ಜನ ಈಗ ಪರಿಹಾರಕ್ಕಾಗಿ ಅರ್ಜಿ ಕರೆಯಲಾಗಿರುವ ಮಾಹಿತಿ ತಿಳಿದು ಮಂಗಳವಾರ ನಂಜನಗೂಡು ತಾಲ್ಲೂಕು ಕಚೇರಿಗೆ ದೌಡಾಯಿಸಿದ್ದರು.

300 ಎಕರೆಯಲ್ಲಿ ತಮ್ಮ ತಂದೆ, ತಾತ, ಮುತ್ತಾತ ಉಳುಮೆ ಮಾಡುತ್ತಿದ್ದರು. ಆದ್ದರಿಂದ ಈಗ ಆ ಭೂಮಿಯ ಪರಿಹಾರ ಅವರ ವಂಶಸ್ಥರಾದ ನಮಗೆ ಬರಬೇಕು ಎಂಬ ಅರ್ಜಿಗಳು ಸಲ್ಲಿಕೆಯಾಗಿದ್ದು, ಅರ್ಜಿಗಳ ವಿಲೇವಾರಿ ಕಂದಾಯ ಇಲಾಖೆಯ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.

ಪರಿಹಾರಕ್ಕಾಗಿ ನೀಡಬೇಕಾದ ಅರ್ಜಿಯೊಂದಿಗೆ ಸಾಗುವಳಿ ಚೀಟಿ, ಆರ್‌ಟಿಸಿ, ಆಧಾರ್, ವಂಶವೃಕ್ಷ , ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ವಿವಿಧ ದಾಖಲಾತಿಗಳನ್ನು ಲಗತ್ತಿಸಬೇಕು ಎಂಬ ಷರತ್ತುಗಳನ್ನು ವಿಧಿಸಿದ್ದು, ಒಂದೇ ಜಾಗಕ್ಕಾಗಿ ಅನೇಕರು ಆ ಜಾಗ ತಮ್ಮದು ಎಂದು ಅರ್ಜಿ ನೀಡಿದ್ದೂ ಸೇರಿದಂತೆ ನೀಡಿದ ಅರ್ಜಿಗಳಲ್ಲಿ ಆ ದಾಖಲಾತಿಗಳ ಸಿಂಧುತ್ವವನ್ನು ಪತ್ತೆ ಮಾಡುವುದೇ ಕಂದಾಯ ಅಧಿಕಾರಿಗಳ ಪಾಲಿಗೆ ಶ್ರಮದಾಯಕವಾಗಲಿದೆ.

ಅರ್ಜಿ ಸಲ್ಲಿಸಲು ಬಂದಿದ್ದ ಅನೇಕರಿಗೆ ಕೈಗಾರಿಕೆಗಾಗಿ ಜಮೀನು ವಶಪಡಿಸಿಕೊಂಡಿರುವುದೇ ತಿಳಿದಿಲ್ಲ. ಅರ್ಜಿ ನೀಡಲು ಸರತಿಯಲ್ಲಿ ನಿಂತವರನ್ನು ಪತ್ರಿಕೆ ಮಾತನಾಡಿಸಿದಾಗ ಅವರು ಚಿತ್ರನಗರಿಗೆ ನಮ್ಮ ಜಮೀನು ನೀಡಿದ್ದು ಅದಕ್ಕಾಗಿ ಪರಿಹಾರ ಎಂದರು.

ಅಧಿಕಾರಿಗಳ ಪ್ರಕಾರ ಈ ಪರಿಹಾರ 2012ರಲ್ಲಿ ಕೈಗಾರಿಕೆಗಾಗಿ ವಶಪಡಿಸಿಕೊಂಡಿದ್ದ 300 ಎಕರೆ ಪ್ರದೇಶದ ಸರ್ವೆ ನಂ. 424ರ ಸುತ್ತಮುತ್ತಲಿನ ಪರಿಹಾರ ನೀಡಿಕೆಯಲ್ಲಿ ಆಗ ಕೈತಪ್ಪಿಹೋಗಿದ್ದ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ.

ಆಂದೋಲನ ಡೆಸ್ಕ್

Recent Posts

ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ಮುರ್ಮು

ಹೊಸದಿಲ್ಲಿ : ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಧ್ವಜವನ್ನು ಧ್ವಜಾರೋಹಣ ಮಾಡಿ ಸಂಪ್ರದಾಯ…

15 mins ago

ಗಣರಾಜ್ಯೋತ್ಸವ | ಸಂಪೂರ್ಣ ಭಾಷಣ ಓದಿದ ರಾಜ್ಯಪಾಲರು

ಬೆಂಗಳೂರು : ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ನಗರದ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ…

26 mins ago

ಮೈಸೂರು | ಧ್ವಜಾರೋಹಣ ನೆರವೇರಿಸಿದ ಸಚಿವ ಮಹದೇವಪ್ಪ : ಸಂವಿಧಾನ ರಕ್ಷಿಸಲು ಕರೆ

ಮೈಸೂರು : ಭಾರತದ ಸಂವಿಧಾನವು ನಮ್ಮ ದೇಶದ ಆತ್ಮವಾಗಿದ್ದು, ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಬಾಂಧವ್ಯದ ಮೂಲಭೂತ ತತ್ವಗಳನ್ನು ನೀಡಿದೆ.…

36 mins ago

ಗಣರಾಜ್ಯೋತ್ಸವ ಸಂಭ್ರಮ : ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಧ್ವಜಾರೋಹಣ, ಪರೇಡ್‌ ಆರಂಭ

ಬೆಂಗಳೂರು : ರಾಜ್ಯದಲ್ಲಿ 76ನೇ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ…

2 hours ago

ಫ್ಲೀಸ್. . ಬಸ್ ನಿಲ್ಲಿಸಿ ಸಾರ್. . !

ಶಿವಪುರ, ನಾಚನಹಳ್ಳಿಪಾಳ್ಯ, ರೈಲ್ವೆ ವರ್ಕ್‌ಶಾಪ್‌ ನಿಲುಗಡೆ ತಾಣದಲ್ಲಿ ನಿಲ್ಲದ ಬಸ್‌ಗಳು ಕೈ ಸಂಜ್ಞೆಗೂ ಕ್ಯಾರೇ ಎನ್ನದ ಡ್ರೈವರ್‌ಗಳು; ಮಹಿಳೆಯರು, ವಯೋವೃದ್ಧರು,…

2 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ಬೆಂಗಳೂರು ಡೈರಿ : ಗಾಂಧಿ, ಬುದ್ಧ, ಬಸವ ಅರ್ಜೆಂಟಾಗಿ ಬೇಕು

ಕಷ್ಟ-ಸುಖಗಳಿಗೆ ಸ್ಪಂದಿಸುವ ಮನಃಸ್ಥಿತಿ ಕಳೆದುಕೊಂಡ ಜನತೆ ಕೈಯಲ್ಲಿ ಹಿಡಿದಿದ್ದ ದಿನ ಪತ್ರಿಕೆಯ ಮೇಲೆ ಕಣ್ಣು ನೆಟ್ಟಿದ್ದ ಚಿದಾನಂದ ಇದ್ದಕ್ಕಿದ್ದಂತೆ 'ಥೋ'…

2 hours ago