Andolana originals

ಪಿಡಿಒನಿಂದ ಸರ್ಕಾರಿ ಆಸ್ತಿ ಗುಳುಂ ಆರೋಪ

ಮಹಾದೇಶ್ ಎಂ. ಗೌಡ

ಹನೂರು : ಸರ್ಕಾರದ ಆಸ್ತಿ ರಕ್ಷಣೆ ಮಾಡಬೇಕಾದ ಅಧಿಕಾರಿಯೇ ಸರ್ಕಾರಿ ಆಸ್ತಿಯನ್ನು ಗುಳುಂ ಮಾಡಿರುವ ಗಂಭೀರ ಆರೋಪ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಪಂ ಪಿಡಿಒ ವಿರುದ್ಧ ಕೇಳಿಬಂದಿದೆ.

ಹಾಲಿ ಶೆಟ್ಟಹಳ್ಳಿ ಗ್ರಾಪಂ ಪಿಡಿಒ ಆಗಿರುವ ವೈರ ಮಾಣಿಕ್ಯಂ ಎಂಬವರು ಮಂಗಲ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ಆಗಿದ್ದ ವೇಳೆ ಅಧಿಕಾರ ದುರುಪಯೋಗಪಡಿಸಿಕೊಂಡು ಲಕ್ಷಾಂತರ ರೂ. ಬೆಲೆ ಬಾಳುವ ಸರ್ಕಾರಿ ಆಸ್ತಿಯನ್ನು ತಮ್ಮ ತಾಯಿ ಹೆಸರಿನಲ್ಲಿ ಖಾತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ವಾಟರ್ ಮನ್ ಮೂಲಕ ಆಸ್ತಿ ಕಬಳಿಕೆ ಗುಮಾನಿ: ೨೦೧೮ರಲ್ಲಿ ಮಂಗಲ ಗ್ರಾಪಂ ಪ್ರಭಾರ ಪಿಡಿಒ ಆಗಿದ್ದ ವೈರ ಮಾಣಿಕ್ಯಂ ತಮ್ಮ ಅಧಿಕಾರ ಬಳಸಿಕೊಂಡು ಗ್ರಾಪಂನ ನೀರು ಗಂಟಿಯ ತಂದೆಯ ಹೆಸರಿಗೆ ಸರ್ಕಾರಿ ಜಾಗವನ್ನೇ ಅಕ್ರಮವಾಗಿ ಖಾತೆ ಮಾಡಿ ನಂತರ ಅದೇ ವರ್ಷ ತಮ್ಮ ತಾಯಿ ಹೆಸರಿಗೆ ಕ್ರಯ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಂಗಲ ಗ್ರಾಮದ ಸ.ನಂ ೩೮೩ರಲ್ಲಿ ೨.೩೫ ಎಕರೆ ಖಾಲಿ ನಿವೇಶನವಿದ್ದು, ಪ್ರಸ್ತುತ ಪಹಣಿಯಲ್ಲಿ ರಸ್ತೆ ಐಜಿ ಎಂದು ನಮೂದಾಗಿದೆ. ಆದರೂ ಸರ್ಕಾರಿ ನಿವೇಶನಕ್ಕೆ ಭೂ ಪರಿ ವರ್ತನೆಯಾಗಿದೆ ಎಂದು ಬೇರೆ ಜಮೀನಿಗೆ ಅನ್ಯಕ್ರಾಂತವಾಗಿರುವ ನಿವೇಶನದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಪುಟ್ಟಯ್ಯ ಎಂಬವರಿಗೆ ಇ-ಸ್ವತ್ತು ಮಾಡಿ ಕೊಟ್ಟಿದ್ದಾರೆ.

ಇವರ ಪ್ರಕಾರ ಸರ್ಕಾರಿ ಆಸ್ತಿ ಯನ್ನು ಭೂ ಪರಿವರ್ತನೆ ಮಾಡಿಕೊಟ್ಟಿದ್ದರೆ ಅದನ್ನು ಮಾಡಿಕೊಟ್ಟವರು ಯಾರು ಎಂಬುದು ಕೂಡ ತನಿಖೆಯಿಂದ ತಿಳಿದುಬರಬೇಕಿದೆ.

ಒಂದು ವರ್ಷದ ಅವಧಿಗೆ ಪ್ರಭಾರ ಪಿಡಿಒ ಆಗಿದ್ದ ವೈರ ಮಾಣಿಕ್ಯಂ ಪಿಐಡಿ ಸಂಖ್ಯೆ೧೫೦೮೦೦೩೦೧೬೦೦೧೨೦೭೯೩ ಸ್ವತ್ತಿನ ಸಂಖ್ಯೆ ೧೪೧೫/೪ ಪೂರ್ವ-ಪಶ್ಚಿಮ ೧೦.೫೮ ಚದರ ಮೀಟರ್, ಉತ್ತರ-ದಕ್ಷಿಣ ೩೫.೩೫೬ ಚದರ ಮೀಟರ್ ಆಸ್ತಿ ಹಾಗೂ ಪಿಐಡಿ ಸಂಖ್ಯೆ ೧೫೦೮೦೦೩೦೧೬೦೦೧೨೦೭೯೪ ಸ್ವತ್ತಿನ ಸಂಖ್ಯೆ ೧೪೧೫/೫ ಪೂರ್ವ-ಪಶ್ಚಿಮ ೯.೭೫೩ ಚದರ ಮೀಟರ್, ಉತ್ತರ-ದಕ್ಷಿಣ ೩೫.೩೫೬ ಚದರ ಮೀಟರ್ ಆಸ್ತಿಯನ್ನು ತಮ್ಮ ತಾಯಿಯ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ಮಂಗಲ ಗ್ರಾಮದ ಮಲೆ ಮಹದೇಶ್ವರ ಬೆಟ್ಟ ಹಾಗೂ ಕೊಳ್ಳೇಗಾಲ ಮುಖ್ಯ ರಸ್ತೆಯ ಬಲಬದಿಯಲ್ಲಿ ಈ ನಿವೇಶನವಿದ್ದು ಲಕ್ಷಾಂತರ ರೂ. ಬೆಲೆ ಬಾಳಲಿದೆ.

ಸರ್ಕಾರಿ ಆಸ್ತಿ ಭೂ ಪರಿವರ್ತನೆ, ಇ-ಸ್ವತ್ತಾದ ೮ ದಿನಕ್ಕೆ ಕ್ರಯ: ಒಂದೆಡೆ ಸರ್ಕಾರಿ ಆಸ್ತಿ ಭೂ ಪರಿವರ್ತನೆ ಹೇಗಾಯ್ತು ಎಂಬುದು ಯಕ್ಷ ಪ್ರಶ್ನೆಯಾದರೆ ಮತ್ತೊಂದೆಡೆ ಇ-ಸ್ವತ್ತಾದ ಒಂದೇ ವಾರದಲ್ಲಿ ಕ್ರಯ ಆಗಿದೆ. ಪ್ರಸ್ತುತ ಎರಡೂ ನಿವೇಶನಗಳಿಗೆ ೨೦೧೬ರ ಏ.೧ರಿಂದ ೨೦೨೬ವರೆಗೆ ಇಸಿ ಪಡೆದುಕೊಂಡಿದ್ದು, ಈ ನಿವೇಶನಗಳಿಗೆ ಸಂಬಂಧಪಟ್ಟಂತೆ ಯಾವುದೇ ವಹಿವಾಟು ನಡೆದಿಲ್ಲ. ಒಟ್ಟಾರೆ ಇವರೇ ಅಕ್ರಮ ಖಾತೆ ಮಾಡಿ ಇವರ ತಾಯಿ ಮಾದಮ್ಮ ಎಂಬವರ ಹೆಸರಿಗೆ ನೋಂಣಿ ಮಾಡಿಸಿಕೊಂಡಿರುವ ಗುಮಾನಿ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

೨೦೧೮ರ ಸೆಪ್ಟೆಂಬರ್ ೧೦ರಂದು ಪುಟ್ಟಯ್ಯ ಎಂಬವರಿಗೆ ಇ-ಸ್ವತ್ತು ಮಾಡಿ ೨೦೧೮ರ ಸೆಪ್ಟೆಂಬರ್ ೧೭ರಂದು ಪಿಡಿಒ ತಮ್ಮ ತಾಯಿ ಮಾದಮ್ಮರವರ ಹೆಸರಿಗೆ ಶುದ್ಧ ಕ್ರಯ ಪತ್ರ ಪಡೆದುಕೊಂಡಿದ್ದಾರೆ. ಸರ್ಕಾರಿ ರಸ್ತೆಗೆ ಅಕ್ರಮ ಖಾತೆ ಮಾಡಿರುವುದಲ್ಲದೆ ಇವರ ತಾಯಿ ಹೆಸರಿನಲ್ಲಿ ಬೇನಾಮಿ ಪಡೆದುಕೊಂಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸಿದ್ದಾರೆ.

ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ: 

ಒಬ್ಬ ಸರ್ಕಾರಿ ಅಧಿಕಾರಿ ತಮ್ಮ ತಾಯಿಯವರಿಗೆ ನಿವೇಶನ ಕ್ರಯ ಪಡೆದುಕೊಳ್ಳುವಾಗ ಸಂಬಂಧಪಟ್ಟ ದಾಖಲಾತಿಗಳನ್ನು ಪರಿಶೀಲನೆ ಮಾಡದೆ ಯಾವ ರೀತಿ ಕ್ರಯ ಮಾಡಿಕೊಂಡರು, ಇವರ ಪಾತ್ರ ಏನು ಎಂಬುದನ್ನು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ಇವರ ವಿರುದ್ಧ ಸೂಕ್ತ ಕ್ರಮ ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರ

” ಸರ್ಕಾರಿ ನಿವೇಶನವನ್ನು ಅಕ್ರಮ ಖಾತೆ ಮಾಡಿ ಕ್ರಯಕ್ಕೆ ಪಡೆದಿರುವುದು ಗಮನಕ್ಕೆ ಬಂದಿಲ್ಲ. ಈ ಹಿಂದೆ ವಿಚಾರಣೆ ನಡೆದಿರಬಹುದು, ಒಂದೊಮ್ಮೆ ಯಾವುದೇ ವಿಚಾರಣೆ ನಡೆಯದಿದ್ದರೆ ದಾಖಲಾತಿಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಲಾಗುವುದು.”

 -ಮೊನಾ ರೋತ್, ಚಾ.ನಗರ ಜಿಪಂ ಸಿಇಒ

” ಪುಟ್ಟಯ್ಯ ಎಂಬವರಿಗೆ ನಾನು ಯಾವುದೇ ಖಾತೆ ಮಾಡಿ ಕೊಟ್ಟಿಲ್ಲ. ಆದರೆ ನಮ್ಮ ತಂದೆ ತಾಯಿಯ ವರು ಆಸ್ತಿಯನ್ನು ಖರೀದಿ ಮಾಡಿರುವುದು ನಿಜ.”

-ವೈರ ಮಾಣಿಕ್ಯಂ, ಪಿಡಿಒ, ಶೆಟ್ಟಳ್ಳಿ ಗ್ರಾಮ ಪಂಚಾಯಿತಿ

” ಸರ್ಕಾರಿ ನಿವೇಶನಕ್ಕೆ ಅಕ್ರಮ ಖಾತೆ ಮಾಡಿ ಕ್ರಯಕ್ಕೆ ಪಡೆದಿರುವುದು ಗಮನಕ್ಕೆ ಬಂದಿಲ್ಲ. ಈ ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸಲಾಗುವುದು. ಸರ್ಕಾರಿ ನಿವೇಶನಗಳನ್ನು ಸರ್ಕಾರಿ ಸೌಲಭ್ಯಕ್ಕಾಗಿ ಮಾತ್ರ ಬಳಸಿಕೊಳ್ಳಬಹುದು. ಸರ್ಕಾರಿ ನಿವೇಶನಗಳಿಗೆ ಭೂ ಪರಿವರ್ತನೆ ಮಾಡಲು ಬರುವುದಿಲ್ಲ.”

 -ಚೈತ್ರ, ತಹಸಿಲ್ದಾರ್, ಹನೂರು ತಾಲ್ಲೂಕು

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮುತ್ತತ್ತಿ ನದಿ ಬಳಿ ಪೊಲೀಸರನ್ನು ನಿಯೋಜಿಸಿ

ಮಂಡ್ಯ ಜಿಲ್ಲೆಯ ಮುತ್ತತ್ತಿಯಲ್ಲಿ ಕಾವೇರಿ ನದಿ ನೀರಿಗೆ ಇಳಿದು ಸೆಲ್ಛಿ ತೆಗೆದುಕೊಳ್ಳಲು ಹೋದ ಒಂದೇ ಕುಟುಂಬದ ನಾಲ್ವರು ಹಾಗೂ ಕಾರು…

2 hours ago

ಓದುಗರ ಪತ್ರ: ಚಪ್ಪಲಿ ಎಸೆತ ಪ್ರಕರಣ ಎಳೆದಾಡುವುದು ಬೇಡ

ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರ ಮೇಲೆ ಜಾ.ದಳ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಎಸೆದಿದ್ದು, ಈಗಾಗಲೇ ಆ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.…

2 hours ago

ಓದುಗರ ಪತ್ರ: ತರಬೇತಿಗೆ ಅರ್ಜಿ ಏಕೆ ಕರೆದಿಲ್ಲ?

ಸರ್ಕಾರದ ಯಾವುದೇ ಯೋಜನೆ, ಕಾರ್ಯಕ್ರಮ, ಸವಲತ್ತು ಮೊದಲು ದಲಿತ, ದಮನಿತ, ಶೋಷಿತ ವರ್ಗಕ್ಕೆ ತಲುಪಬೇಕು. ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆ…

2 hours ago

ಓದುಗರ ಪತ್ರ: ಬಿಡದಿ ಟೌನ್ ಶಿಪ್: ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ನಿರ್ಮಾಣ ಮಾಡುವ ಮೊದಲು ಮತ್ತೊಮ್ಮೆ ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸಿ…

2 hours ago

‘ರಾಮ ರಾಜಕಾರಣಕ್ಕೆ ಅಗ್ನಿ ಪರೀಕ್ಷೆ..!

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ನೀಡಿದ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಹಣ, ಆಭರಣಗಳ ಕಳ್ಳತನ ಪ್ರಕರಣ ರಾಮಭಕ್ತರ ವಿಶ್ವಾಸವನ್ನು…

2 hours ago

ಇದು ಶೌಚಾಲಯ… ಈಗ ಅನುಪಯುಕ್ತ ವಸ್ತುಗಳ ಗೋದಾಮು!

ಎಚ್.ಎಸ್.ದಿನೇಶ್ ಕುಮಾರ್ ಮೈಸೂರಿನ ಶ್ರೀರಾಂಪುರದ ಉದ್ಯಾನದಲ್ಲಿರುವ ಶೌಚಾಲಯದ ದುಸ್ಥಿತಿ ಮೈಸೂರು: ಜನರ ಲಕ್ಷಾಂತರ ರೂ. ತೆರಿಗೆ ಹಣವನ್ನು ವ್ಯಯಿಸಿ ಕಟ್ಟಿಸಿರುವ…

2 hours ago