Andolana originals

ಅವಳಿ ತಾಲ್ಲೂಕುಗಳಲ್ಲಿ ಭತ್ತ ನಾಟಿ ಕಾರ್ಯ ಪೂರ್ಣ

ಭೇರ್ಯ ಮಹೇಶ್

ಉತ್ತಮ ಬೆಳೆ ಎದುರು ನೋಡುತ್ತಿರುವ ರೈತರಿಗೆ ಕೀಟಬಾಧೆಯ ಆತಂಕ 

ಕೆ.ಆರ್.ನಗರ: ಭತ್ತದ ನಾಡು ಎಂದೇ ಪ್ರಸಿದ್ಧಿಯಾಗಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಈಗಾಗಲೇ ಭತ್ತ ನಾಟಿ ಕಾರ್ಯ ಮುಕ್ತಾಯಗೊಂಡಿದ್ದು, ಅಂದಾಜು ೧೯ ರಿಂದ ೨೨ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ.

ಶೇ.೮೦ರಷ್ಟು ಪ್ರದೇಶದಲ್ಲಿ ಈಗಾಗಲೇ ರೈತರು ಕಳೆ ತೆಗೆದು ಮೇಲು ಗೊಬ್ಬರವನ್ನು ನೀಡಿ ಒಳ್ಳೆಯ ಬೆಳೆಯನ್ನು ಎದುರು ನೋಡುತ್ತಿದ್ದಾರೆ. ಕೆ.ಆರ್.ನಗರ ತಾಲ್ಲೂಕಿನ ಕಸಬಾ, ಹೆಬ್ಬಾಳು, ಹೊಸಅಗ್ರಹಾರ ಹೋಬಳಿಗಳ ಬಹುತೇಕ ಗ್ರಾಮಗಳಲ್ಲಿ ನಾಟಿ ಮಾಡಲಾಗಿರುವ ಭತ್ತದ ಬೆಳೆಯಲ್ಲಿ ಎಲೆ ಸುರುಳಿ ಕೀಟವು ವ್ಯಾಪಕವಾಗಿ ಕಂಡು ಬಂದಿದ್ದು ರೈತರಲ್ಲಿ ಆತಂಕ ಮನೆ ಮಾಡಿದೆ.

ರೋಗಬಾಧೆ: ನೆಫಲೋಕ್ರೋಸಿಸ್ ಮೆಡಿನಾಲಿಸ್ ಎಂಬ ವೈಜ್ಞಾನಿಕ ಹೆಸರಿನ ಈ ಎಲೆ ಸುರುಳಿ ಕೀಟವು ಸಾಮಾನ್ಯವಾಗಿ ಆಗಸ್ಟ್ ಹಾಗೂ ಅಕ್ಟೋಬರ್ ತಿಂಗಳುಗಳಲ್ಲಿ ಭತ್ತವು ಬೆಳವಣಿಗೆಯ ಹಂತದಲ್ಲಿದ್ದಾಗ ಕಂಡು ಬರುತ್ತದೆ. ಕಡಿಮೆ ಉಷ್ಣಾಂಶ ಹಾಗೂ ಗಾಳಿಯಲ್ಲಿ ಹೆಚ್ಚಿನ ಆದ್ರತೆ ಇರುವ ಹವಾಗುಣವು ಈ ಕೀಟದ ಬೆಳವಣಿಗೆ ಹಾಗೂ ಸಂತಾನೋತ್ಪತ್ತಿಗೆ ಪೂರಕವಾಗಿರುತ್ತದೆ.

ಕಂದು ಹಳದಿ ಬಣ್ಣದ ರೆಕ್ಕೆಯಲ್ಲಿ ಅಲೆಯ ರೀತಿ ಗೆರೆಗಳನ್ನು ಹೊಂದಿದ್ದು ಪ್ರೌಢ ಕೀಟವು ಎಲೆಯ ತುದಿಯಲ್ಲಿ ದುಂಡನೆಯ ಮೊಟ್ಟೆಗಳನ್ನು ಇಡುತ್ತದೆ. ೬-೮ ದಿನಗಳಲ್ಲಿ ಮರಿಹುಳು ಹೊರಬಂದು ಮರಿಹುಳುಗಳು ಚಿಕ್ಕದಾಗಿ ಇರುವಾಗ ಎಲೆಯ ಹಸಿರು ಭಾಗವನ್ನು ಕೊರೆದು ತಿನ್ನುವುದರಿಂದ ಬಿಳಿ ಬಣ್ಣದ ಮಚ್ಚೆಗಳು ಕಾಣಿಸುತ್ತವೆ. ಇದನ್ನೇ ರೈತರುಗಳು ಬಿಳಿ ಕಟಗಲು ಎಂದು ಕರೆಯುತ್ತಾರೆ. ಜೊತೆಗೆ ಇದು ಒಂದು ರೋಗ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ.

೨೦ ರಿಂದ ೩೦ ದಿನಗಳ ಕಾಲ ಮರಿ ಹುಳುವು ಎಲೆಯನ್ನು ಕೆರೆದು ಹಾಗೂ ಕತ್ತರಿಸಿ ತಿಂದು ನಂತರ ಸುರುಳಿ ಮಾಡಿ ಬಾಧಿಸುತ್ತದೆ. ದೊಡ್ಡದಾಗಿ ಬೆಳೆದ ಕೀಟವು ತಿಳಿ ಹಸಿರು ಬಣ್ಣದ್ದಾಗಿದ್ದು ಎಲೆಯನ್ನು ಲಂಬವಾಗಿ ಮಡಚಿ ಸುರುಳಿ ಮಾಡಿಕೊಂಡು ಒಳಗಡೆ ಇದ್ದುಕೊಂಡು ಕೋಶಾವಸ್ಥೆಗೆ ತಲುಪುತ್ತದೆ. ಈ ಕೀಟದ ಬಾಧೆಯು ತೀವ್ರವಾದ ತಾಕು ಗಳಲ್ಲಿ ಎಲೆಯ ಮೇಲೆ ಬಿಳಿ ಬಣ್ಣದ ಮಚ್ಚೆ ಗಳು ಕಾಣಿಸುತ್ತವೆ ಹಾಗೂ ಸುಟ್ಟಂತೆ ಕಾಣಿಸುತ್ತದೆ. ಕೆಲವು ತಾಕುಗಳಲ್ಲಿ ಕೊಳವೆ ಹುಳುವಿನ ಭಾದೆ (ನಿಂಫುಲಾ ಡಿಪಂಕ್ಟಾಲಿಸ್) ಕಾಣಿಸಿಕೊಂಡಿದ್ದು, ಕೀಟವು ಎಲೆಯನ್ನು ಕೊರೆದು ತಿಂದು ನಂತರ ಗಾತ್ರ ದೊಡ್ಡದಾದಾಗ ಎಲೆಯ ತುದಿಯನ್ನು ಕತ್ತರಿಸಿ ಕೊಳವೆ ರೂಪದಲ್ಲಿ ಮಡಚಿ ಕೊಳವೆಯಲ್ಲಿ ಕೋಶಾವಸ್ಥೆಗೆ ತಲುಪುತ್ತದೆ.

ನಿವಾರಣಾ ಕ್ರಮಗಳು: ಬದುವಿನ ಮೇಲೆ ಹುಲ್ಲಿನ ಜಾತಿಯ ಕಳೆಯನ್ನು ಕೊಚ್ಚಿ ಬದುಗಳನ್ನು ಕಳೆ ರಹಿತವಾಗಿ ಇಡುವುದು. ಹೆಚ್ಚು ಯೂರಿಯಾ ರಸಗೊಬ್ಬರವನ್ನು ಬಳಸುವುದನ್ನು ತಡೆಯುವುದು. ಶೇ.೧೦ರಷ್ಟು ಎಲೆಯಲ್ಲಿ ಹಾನಿ ಕಾಣಿಸಿಕೊಂಡಲ್ಲಿ ರಾಸಾಯನಿಕ ಹತೋಟಿ ಯನ್ನು ಕೈಗೊಳ್ಳಬೇಕು.

ಕೀಟ ಬಾಧೆಯು ತೀವ್ರವಾದಲ್ಲಿ ಈ ಕೆಳಕಂಡ ಕೀಟನಾಶಕಗಳನ್ನು ಸಿಂಪಡಣೆ ಮಾಡಬಹುದಾ ಗಿದೆ. ಇದರಲ್ಲಿ ಫೆನಿಟ್ರೋಥಿಯಾನ್ ೫೦ ಇಸಿ ೪೦೦ ಮಿಲಿ/ ಎಕರೆಗೆ (ಅಥವಾ) ಪೋಸಲೋನ್ ೩೫ ಇಸಿ ೫೦೦ ಮಿಲಿ/ ಎಕರೆ (ಅಥವಾ) ಕ್ವಿನಾಲ್ಛೋಸ್ ೨೫ ಇಸಿ ೪೦೦ ಮಿಸಿ/ ಎಕರೆ (ಅಥವಾ) ಫಾಸ್ಟಮಿಡಾನ್ ೪೦ ಎಸ್.ಎಲ್. ೨೫೦ ಮಿಲಿ/ ಎಕರೆ (ಅಥವಾ) ಕ್ಲೋರ್ ಪಿರಿಪೋಸ್ ೨೦ ಇಸಿ ೫೦೦ ಮಿಲಿ/ ಎಕರೆ (ಅಥವಾ) ಕರ‍್ಬರಿಲ್ ೫೦ ಡಬ್ಲ್ಯೂಪಿ ೦.೫ ಕೆಜಿ/ ಎಕರೆ (ಅಥವಾ) ಫೆಂಥಿಯಾನ್ ೧೦೦ ಇಸಿ ೨೦೦ ಮಿಲೆ/ ಎಕರೆ (ಅಥವಾ) ಪ್ರೊಫೆನೋಪ್ರೋಸ್ ೫೦ ಇಸಿ ೪೦೦ ಮಿಲೆ/ ಎಕರೆ. ಫಿಪ್ರೋನಿಲ್ ಶೇ.೫ ಎಸ್.ಸಿ. ೨೫೦ ಮಿಲಿ/ಎಕರೆಗೆ ಅಥವಾ ಪ್ಲೋಬೆಂಡಿಯಾಮೈಡ್ ಶೇ.೪೮ ಎಸ್.ಸಿ. ೩೦ ಮಿಲಿ/ ಎಕರೆಗೆ ಸಿಂಪಡಣೆ ಮಾಡಿ ಎಂದು ಕೃಷಿ ಸಹಾಯಕ ನಿರ್ದೇಶಕ ಕೆ.ಜೆ.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

” ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ ರೈತರು ಆತಂಕ ಪಡದೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ತಾಂತ್ರಿಕ ಸಿಬ್ಬಂದಿಯನ್ನು ಭೇಟಿ ಮಾಡಿ ಮಾಹಿತಿ/ ಮಾರ್ಗದರ್ಶನ ಪಡೆಯಲು ಕೋರಲಾಗಿದೆ.”

ಆಂದೋಲನ ಡೆಸ್ಕ್

Recent Posts

ಮೈಸೂರಿನ 2 ಹೋಟೆಲ್‌, ಚಾ.ನಗರ ಕೋರ್ಟ್‌ಗೆ ಬಾಂಬ್‌ ಬೆದರಿಕೆ ; ಒಬ್ಬ ವ್ಯಕ್ತಿಯಿಂದಲೇ ಇ-ಮೇಲ್

ಮೈಸೂರು‌ : ಭಾನುವಾರವಷ್ಟೇ ಎರಡು ನಗರದ ಎರಡು ಹೋಟೆಲ್‌ಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇ-ಮೇಲ್ ಬಂದಿತ್ತು. ಇದೀಗ ಚಾಮರಾಜನಗರ ನ್ಯಾಯಾಲಯಕ್ಕೆ…

5 hours ago

ಸರಗೂರು | ಮತ್ತೆ ಹುಲಿ ದಾಳಿ ; ಬೋನು ಅಳವಡಿಸಲು ತೆರಳಿದ್ದ ಅರಣ್ಯ ಗಾರ್ಡ್‌ ಮೇಲೆ ಎರಗಿದ ಹುಲಿ

ಸರಗೂರು : ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಹುಲಿ ದಾಳಿ ಆತಂಕ ಮುಂದುವರಿದಿದ್ದು, ಹುಲಿ ಸೆರೆಹಿಡಿಯಲು ತೆರಳಿದ್ದ ಎಸ್‌ಟಿಎಫ್ ಸಿಬ್ಬಂದಿಯ ಮೇಲೆಯೇ…

6 hours ago

ಎಸ್‌ಐಆರ್‌ | ರಾಜ್ಯಾದ್ಯಂತ ಏಕಕಾಲಕ್ಕೆ ಆರಂಭ ; ನಾಳೆಯಿಂದ ಮನೆ ಮನೆಗೆ ಭೇಟಿ

ಬೆಂಗಳೂರು : ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ, ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಕ್ರಮವು ಮಂಗಳವಾರ (ಜೂ.30)…

6 hours ago

ಮಾದಪ್ಪನ ದರ್ಶನ ಮುಗಿಸಿ ಬರುವಾಗ ಬಸ್‌ ಪಲ್ಟಿ : ಇಬ್ಬರು ಸಾವು ; ಹಲವರು ಗಂಭೀರ

ಕೊಳ್ಳೇಗಾಲ : ಮಹದೇಶ್ವರ ಬೆಟ್ಟಕ್ಕೆ ತೆರಳಿ ದರ್ಶನ ಪಡೆದು ವಾಪಸ್ ಬರುವಾಗ ಕೆ.ಎಸ್.ಆರ್.ಟಿ.ಸಿ ಬಸ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿ, 10…

7 hours ago

ಮೈಸೂರು | ವ್ಯಕ್ತಿ ಅನುಮಾನಾಸ್ಪದ ಸಾವು ; ಹೆಂಡತಿಯಿಂದಲೇ ಕೊಲೆಯ ಶಂಕೆ

ಮೈಸೂರು : ಇಲ್ಲಿನ ಕುವೆಂಪುನಗರದಲ್ಲಿ ನಡೆದಿದ್ದ ನಿತ್ಯಾನಂದ ಅವರ ಅನುಮಾನಾಸ್ಪದ ಸಾವಿನ ಪ್ರಕರಣ ಕೊಲೆ ಪ್ರಕರಣವಾಗಿ ತಿರುಗಿದ್ದು, ಪತ್ನಿ ಸುಶೀಲ…

10 hours ago

ಬಿಜೆಪಿ ವಕ್ತಾರ ಎಂ.ಜಿ.ಮಹೇಶ್‌ 6 ವರ್ಷ ಪಕ್ಷದಿಂದ ಉಚ್ಛಾಟನೆ

ಬೆಂಗಳೂರು : ಬಿಜೆಪಿ ಪಕ್ಷದ ರಾಷ್ಟೀಯ ಮತ್ತು ರಾಜ್ಯ ಮಟ್ಟದ ನಾಯಕರ ವಿರುದ್ಧ ಅವಹೇಳನಕಾರಿ ಹಾಗೂ ಆಧಾರರಹಿತ ಆರೋಪಗಳನ್ನು ಮಾಡಿ…

11 hours ago