ಓದುಗರ ಪತ್ರ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ! ಜನಪ್ರಿಯ ಕವಿ ಗೋಪಾಲಕೃಷ್ಣ ಅಡಿಗರ ಕವನದ ಈ ಸಾಲು ಇಂದಿನ ಕಾಲಮಾನದ ಜನಮಾನಸಕ್ಕೆ ಒಪ್ಪುತ್ತದೆ. ಮಾನವ ಸಂಘಜೀವಿ. ಸಮಾಜದೊಳಗೆ ಸಮುದಾಯದ ಕಟ್ಟುಪಾಡುಗಳನ್ನು ಪಾಲಿಸಿ ಸಂಸ್ಕಾರ, ಸಂಪ್ರದಾಯವನ್ನು ಪಾಲಿಸಿ ಆರಾದಿಸಿ ಜೀವನ ನಡೆಸಿದಾಗ ಮಾತ್ರ ಸಮುದಾಯದಲ್ಲಿ ಆತ ಉತ್ತಮ ನಾಗರಿಕನಾಗಿ ಹೊರಹೊಮ್ಮುತ್ತಾನೆ.
ಇತ್ತೀಚಿನ ದಿನಮಾನಗಳಲ್ಲಿ ನಮ್ಮ ಸಮಾಜದಲ್ಲಿ ಬೇರೆಯವರ ಏಳಿಗೆಯನ್ನು ಸಹಿಸದಿರುವುದು, ಸ್ನೇಹದಲ್ಲಿ ನೈಜತೆ ಇಲ್ಲದಿರುವುದು, ಅಪನಂಬಿಕೆ ಮುಂತಾದ ಕೆಟ್ಟಗುಣಗಳು ಸಮಾಜದ ಪಿಡುಗುಗಳಾಗಿ ಜನರ ದಿಕ್ಕು ಬದಲಿಸುತ್ತಿವೆಯೇನೋ ಎಂಬ ಆತಂಕ ಪ್ರಜ್ಞಾವಂತರಲ್ಲಿ ಮೂಡುವಂತಾಗಿದೆ. ಹಿಂದೆ ಇದ್ದಂತಹ ಸಂಸ್ಕಾರವಿಲ್ಲ, ಆಚಾರವಿಲ್ಲ, ಬಲವಾದ ಸ್ನೇಹವಿಲ್ಲ, ನಂಬಿಕೆಯಿಲ್ಲ, ಪ್ರಾಮಾಣಿಕತೆಯಂತೂ ಮಾಯವಾಗುತ್ತಿದೆಯೆನೋ ಎಂಬ ಭಾವನೆ ಮೂಡುತ್ತಿದೆ. ಹೀಗೆ ನಮ್ಮನಮ್ಮ ಈ ಗುಣಗಳು ನಮ್ಮ ದಿಕ್ಕನ್ನು ಬೇರೆಡೆಗೆ ಬದಲಾಯಿಸಿ ಮಾನಸಿಕವಾಗಿ ಬಲಹೀನರಾಗಿ ಮಾಡುತ್ತಿದೆ.
ಹಾಗಾಗಿ ಮಾನವನಿಗೆ ಯಾವುದರಲ್ಲೂ ತೃಪ್ತಿ ಕಾಣದಾಗಿದೆ. ಯಾರಲ್ಲೂ ನಂಬಿಕೆಯಿಡಬೇಕೆಂಬ ಮನೋಭಾವವು ಬದಲಾಗುತ್ತಿದೆ. ಮೊದಲು ನಮ್ಮನ್ನು ನಾವು ತಿಳಿದು ನಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ನಾವೇ ಪ್ರಶಂಸಿಸಿಕೊಂಡು ಕೆಟ್ಟಗುಣಗಳನ್ನು ಬುಡಸಮೇತ ಕಿತ್ತುಹಾಕೋಣವಲ್ಲವೇ? ನಮಗಾಗಿ ಇಷ್ಟೇ ಎಂದು ನಿಶ್ಚಯಿಸಿರುವಾಗ ಅದರಲ್ಲಿಯೇ ಸಂತಸವನ್ನು ಕಾಣೋಣ. ನಮ್ಮಲ್ಲಿಲ್ಲದ ವಸ್ತುವಿನ ಬಗ್ಗೆ ಚಿಂತಿಸುವುದನ್ನು ಬಿಡೋಣ. ಹಾಸಿಗೆ ಇದ್ದಷ್ಟು ಕಾಲು ಚಾಚಿ, ಜೀವನ ನಡೆಸಿದರೆ ಉತ್ತಮ ಅಲ್ಲವೇ?!
-ಅನಿಲ್ ರಾಜ, ಮೈಸೂರು
ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…
ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…
ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…
ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…
ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…
ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…