Andolana originals

ಮೈಸೂರು ನಗರ ಸಾರಿಗೆ: ಹಳೆ ಬಸ್‌ಗಳಿಗೆ ಹೊಸ ರೂಪ?

ಚಿರಂಜೀವಿ ಸಿ.ಹುಲ್ಲಹಳ್ಳಿ

ಮೈಸೂರು: ನಗರದಲ್ಲಿ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವ ಸಾರ್ವಜನಿಕರ ಸಂಖ್ಯೆ ಹೆಚ್ಚಾಗಿದೆ. ನಗರ ಸಾರಿಗೆಗೆ ಪ್ರಸಕ್ತ ವರ್ಷ ೯೬ ಹೊಸ ಬಸ್‌ಗಳು ಸೇರ್ಪಡೆಯಾಗಿವೆ. ಏತನ್ಮಧ್ಯೆ ಹಳೆಯ ಬಸ್‌ಗಳು ಕೂಡ ಹೊಸ ರೂಪ ಪಡೆದು ಈ ಪಟ್ಟಿಯಲ್ಲಿ ಸೇರಿಕೊಳ್ಳುತ್ತಿವೆ. ಇವುಗಳಿಂದ ಹೊರಹೊಮ್ಮುವ ದಟ್ಟ ಹೊಗೆಯು ಮಾಲಿನ್ಯಕಾರಕವಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಹಳೆಯ ವಾಹನಗಳನ್ನು ಮೈಸೂರಿಗೆ ರವಾನೆ ಮಾಡಿಕೊಳ್ಳಲಾಗುತ್ತಿದ್ದು, ಇವು ಹರಡುವ ಕಪ್ಪು ಹೊಗೆಯು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ ಎಂಬ ದೂರು ಕೇಳಿಬಂದಿದೆ.

ನಗರದಲ್ಲಿ ೫೧೭ ರೂಟ್‌ಗಳಿದ್ದು, ೫೩೬ ಬಸ್‌ಗಳು ಸಂಚರಿಸುತ್ತಿವೆ. ಇಷ್ಟಾದರೂ ಸಾರ್ವಜನಿಕರು ನಿತ್ಯ ಬಸ್ಸಿಗಾಗಿ ಪರದಾಡುತ್ತಿದ್ದಾರೆ. ನಗರದ ಅನೇಕ ಬಡಾವಣೆಯ ಬಸ್‌ಗಳು ಸದಾ ಕಿಕ್ಕಿರಿದು ಬರುತ್ತಿದ್ದು, ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಜನರು ಪ್ರಯಾಣಿಸುತ್ತಿದ್ದಾರೆ.

ಇಷ್ಟೆಲ್ಲದರ ನಡುವೆ ನಗರದಲ್ಲಿ ಬಸ್‌ಗಳ ಕೊರತೆ ನೀಗಿಸಲು ಬಿಎಂಟಿಸಿಯ ಹಳೆಯ ಬಸ್‌ಗಳನ್ನು ಕೆಎಸ್ ಆರ್‌ಟಿಸಿಗೆ ಪರಿವರ್ತಿಸಿ ನಗರದಲ್ಲಿ ಬಳಸಲಾಗುತ್ತಿದೆ ಎಂದು ರವಿಕೀರ್ತಿ ಎಂಬವರು ಎಕ್ಸ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಕೆಎ-೫೭, ಕೆಎ-೪೨, ಕೆಎ-೪೦, ಕೆಎ-೫೩, ಕೆಎ-೪೦, ಕೆಎ-೦೧ ನಗರದಲ್ಲಿ ಸಂಚರಿಸುತ್ತಿರುವ ಬಿಎಂಟಿಸಿಯ ಬಸ್‌ಗಳಾಗಿದ್ದು, ಇವು ನಗರದ ನಾಲ್ಕೂ ದಿಕ್ಕಿನಲ್ಲಿರುವ ವಿವಿಧ ಬಡಾವಣೆಗಳಲ್ಲಿ ಸಂಚರಿಸುತ್ತಿವೆ. ಆದರೆ, ಇವುಗಳಲ್ಲಿ ಬಹುಪಾಲು ಬಸ್‌ಗಳು ಸಂಚರಿಸುವಾಗ ದಟ್ಟವಾದ ಕಪ್ಪು ಹೊಗೆ ಹೊರಹೊಮ್ಮಿಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿವೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಹೊಗೆಯಾಡಿದೆ.

ಸದ್ಯ ರಾಜ್ಯ ಸರ್ಕಾರವು ಎಲ್ಲ ಜಿಲ್ಲೆಗಳಿಗೂ ಬಿಎಸ್-೬ ಇಂಜಿನ್ ಹೊಂದಿರುವ ಹೊಸ ಬಸ್‌ಗಳನ್ನು ಒದಗಿಸಿದೆ. ಬೆಳಗಾವಿ, ಹುಬ್ಬಳ್ಳಿ – ಧಾರವಾಡ, ವಿಜಯಪುರ, ಹೊಸಪೇಟೆ ಜಿಲ್ಲೆಗಳಿಗೆ ಬಿಎಸ್-೬ ವಾಹನಗಳನ್ನುಕೊಡಲಾಗಿದೆ. ಮೈಸೂರಿನಲ್ಲಿ ಬಿಎಸ್-೬ ವಾಹನಗಳು ಕಡಿಮೆ ಸಂಖ್ಯೆಯಲ್ಲಿ ಓಡಾಟ ನಡೆಸುತ್ತಿವೆ. ಆದರೆ, ಕಪ್ಪು ಹೊಗೆ ಹರಡುವ ಬಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು  ರವಿಕೀರ್ತಿ ಹೇಳಿದ್ದಾರೆ.

೧೧೫ ಬಸ್‌ಗಳು ಗುಜರಿಗೆ: ೨೦೨೪-೨೦೨೫ರಲ್ಲಿ ಮೈಸೂರು ನಗರದಲ್ಲಿದ್ದ ೧೧೫ ಬಸ್‌ಗಳನ್ನು ಗುಜರಿಗೆ ಹಾಕಲಾಗಿದ್ದು, ಬಸ್‌ಗಳ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಬಿಎಂಟಿಸಿ ಸೇರಿದಂತೆ ಇತರೆ ಸಾರಿಗೆ ಘಟಕಗಳ ಬಸ್‌ನ್ನು ಎರವಲು ಪಡೆದು ಅದನ್ನು ಕೆಎಸ್ ಆರ್‌ಟಿಸಿ ಬಸ್ ಆಗಿ ನವೀಕರಿಸಿ, ಮೈಸೂರು ನಗರದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಬಳಸಸುತ್ತಿದ್ದಾರೆ..

೯೬ ಹೊಸ ಬಸ್‌ಗಳು: ಈ ವರ್ಷ ಮೈಸೂರಿಗೆ ೯೬ ಬಸ್‌ಗಳನ್ನು ಹೊಸದಾಗಿ ತರಿಸಿಕೊಳ್ಳಲಾಗಿದೆ. ಇದರಲ್ಲಿ ಟಾಟಾ ಬಿಎಸ್-೭೫, ಅಶ್ವಮೇಧ-೧೫, ಲೈಲ್ಯಾಂಡ್ ಬಿಎಸ್-೬ ಸೇರಿದಂತೆ ಒಟ್ಟು ೯೬ ಹೊಸ ಬಸ್‌ಗಳು ಬಂದಿವೆ. ಇವುಗಳ ಜೊತೆಗೆ ಬಿಎಸ್-೪ ಇಂಜಿನ್ ಹೊಂದಿರುವ ಬಸ್‌ಗಳನ್ನು ಹೊಂದಲಾಗಿದೆ.

೧೦೦ ಎಲೆಕ್ಟ್ರಿಕ್ ಬಸ್‌ಗಳು: ೨೦೨೪-೨೫ನೇ ಸಾಲಿನಲ್ಲಿ ೧೦೦ ಎಲೆಕ್ಟ್ರಿಕ್ ಬಸ್‌ಗಳನ್ನು ಮೈಸೂರಿಗೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಕಚೇರಿಗೆ ನೀಡಲಾಗಿದೆ. ಇದಕ್ಕಾಗಿ ಎಲೆಕ್ಟ್ರಿಕ್ ಬಸ್ ಡಿಪೋ ನಿರ್ಮಿಸಬೇಕು. ಹೀಗಾಗಿ ರಾಜ್ಯ ಸರ್ಕಾರ ಅನುಮತಿಗಾಗಿ ಕಾಯುತ್ತಿದ್ದು, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ನಗರಕ್ಕೆ ನೂರು ಹೊಸ ಬಸ್‌ಗಳು ಬರುವ ನಿರೀಕ್ಷೆ ಇದೆ ಎಂದು ಎಚ್.ಟಿ.ವೀರೇಶ್ ಮಾಹಿತಿ ನೀಡಿದರು.

” ಬಿಎಸ್-೬ ಮತ್ತು ಬಿಎಸ್-೪ ಇಂಜಿನ್ ಹೊಂದಿರುವ ಬಸ್‌ಗಳ ಜೊತೆಗೆ ಬಿಎಸ್-೩ ಇಂಜಿನ್ ಹೊಂದಿರುವ ಬಸ್‌ಗಳನ್ನು ನಮ್ಮಲ್ಲಿವೆ. ಆದರೆ, ಇವುಗಳು ಸುವ್ಯವಸ್ಥೆಯಲ್ಲಿವೆ. ಈ ಬಸ್ಗಳನ್ನು ಪ್ರತಿ ತಿಂಗಳು ಪರಿಶೀಲಿಸಲಾಗುತ್ತದೆ. ಪ್ರತಿನಿತ್ಯ ಬಸ್‌ಗಳ ಹೊಗೆ ಪರಿಶೀಲಿಸಿ ಇಂಜಿನ್ ರಿಪೇರಿ ಮಾಡುವ ಪ್ರಕ್ರಿಯೆಗಳು ನಡೆಯುವುದರಿಂದ ಹೆಚ್ಚು ಹೊಗೆ ಬರುವ ಬಸ್‌ಗಳು ನಮ್ಮಲ್ಲಿ ಇಲ್ಲ ಎಂದು ಮೈಸೂರು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ.ವೀರೇಶ್ ತಿಳಿಸಿದ್ದಾರೆ.”

” ಎಲ್ಲ ನಗರಗಳಿಗೂ ಹೊಸ ಬಸ್‌ಗಳನ್ನು ಅದರಲ್ಲಿಯೂ ಬಿಎಸ್- ೬ ಇಂಜಿನ್ ಹೊಂದಿರುವ ಬಸ್‌ಗಳನ್ನು ಕೊಡುತ್ತಿದ್ದಾರೆ. ಆದರೆ, ಮೈಸೂರಿಗೆ ಮಾತ್ರ ಹೊಸ ಬಸ್‌ಗಳನ್ನು ಬಿಟ್ಟು ಬಿಎಂಟಿಸಿ ಬಸ್ ಗಳನ್ನು ಯಾಕೆ ಕೊಡುತ್ತಿದ್ದಾರೆ? ಇದರಿಂದ ಮೈಸೂರು ನಗರ ಮಾಲಿನ್ಯವಾಗುವುದಿಲ್ಲವೇ? ಗ್ರಾಮಾಂತರ ಬಸ್‌ಗಳು ಕೂಡ ಹೊಗೆ ಹರಡುತ್ತಿವೆ.”

ರವಿಕೀರ್ತಿ, ಮೈಸೂರು

” ಕೆಎಸ್‌ಆರ್‌ಟಿಸಿ ಎಲ್ಲ ಕಡೆಯೂ ಬೆಂಗಳೂರು ನೋಂದಣಿ ಹೊಂದಿರುವ ಬಸ್‌ಗಳಿವೆ. ಕಳೆದ ೫-೬ ವರ್ಷಗಳ ಹಿಂದೆ ಬೆಂಗಳೂರಿನಿಂದ ಬಸ್ಗಳನ್ನು ಕೊಡುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿಯೇ ರಿಜಿಸ್ಟರ್ ಆಗುತ್ತಿದ್ದವು. ಹೀಗಾಗಿ ೨೦೦-೩೦೦ ಬೆಂಗಳೂರು ರಿಜಿಸ್ಟರ್ ಬಸ್‌ಗಳು ಕೆಎಸ್‌ಆರ್‌ಟಿಸಿಯ ಎಲ್ಲ ವಿಭಾಗಗಳಲ್ಲಿ ಓಡಾಡುತ್ತಿವೆ. ಇದರಿಂದ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿದೆ. ನಮ್ಮಲ್ಲಿರುವ ವಾಹನಗಳು ಸುವ್ಯವಸ್ಥೆಯಲ್ಲಿವೆ.”

ಎಚ್.ಟಿ.ವೀರೇಶ್, ವಿಭಾಗೀಯ ನಿಯಂತ್ರಣಾಧಿಕಾರಿ, ಮೈಸೂರು ನಗರ ಸಾರಿಗೆ 

ಆಂದೋಲನ ಡೆಸ್ಕ್

Recent Posts

ಮಹದೇಶ್ವರ ಬೆಟ್ಟದಲ್ಲಿ ಶೀಘ್ರದಲ್ಲಿ ಕಾಮಗಾರಿ ಪೂರ್ಣ: ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ: ಸಚಿವ ಕೆ ವೆಂಕಟೇಶ್

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ…

19 mins ago

ಬೆಂಗಳೂರು ಏರ್‌ಪೋರ್ಟ್‌ ಹಾಗೂ ರಾಮನಗರದಲ್ಲಿ 3 ಕೋಟಿಗೂ ಅಧಿಕ ಡ್ರಗ್ಸ್‌ ಜಪ್ತಿ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ರಾಮನಗರದಲ್ಲಿ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಕೋಟ್ಯಾಂತರ ಮೌಲ್ಯದ ಡ್ರಗ್ಸ್‌ ಅನ್ನು ಅಧಿಕಾರಿಗಳು…

30 mins ago

ಐದು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ಮಾಹಿತಿ

ಬೆಂಗಳೂರು: ರಾಜ್ಯಾದ್ಯಂತ ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಐದು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ…

32 mins ago

ಬೆಟ್ಟಳ್ಳಿ ಮಾರಮ್ಮ ಜಾತ್ರೆಯನ್ನು ಯಶಸ್ವಿಗೊಳಿಸಿ: ತಹಶೀಲ್ದಾರ್‌ ಚೈತ್ರಾ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಹನೂರು ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವವನ್ನು…

1 hour ago

ಓದುಗರ ಪತ್ರ: ವಿದ್ಯುತ್ ದರ ಏರಿಕೆ ಜನಸಾಮಾನ್ಯರಿಗೆ ಶಾಕ್

ರಾಜ್ಯದ ಐದು ಎಸ್ಕಾಂಗಳು ಸುಮಾರು ರೂ.೪,೫೦೦ ಕೋಟಿ ನಷ್ಟದ ನೆಪವೊಡ್ಡಿ ಪ್ರತಿ ಯೂನಿಟ್‌ಗೆ ೯೯ ಪೈಸೆಯವರೆಗೆ ದರ ಏರಿಕೆಗೆ ಪ್ರಸ್ತಾವನೆ…

2 hours ago

ಓದುಗರ ಪತ್ರ: ಬೃಂದಾವನ: ಟಿಕೆಟ್ ಹಣ ವಾಪಸ್ ನೀಡಿ

ವಿಶ್ವವಿಖ್ಯಾತ ಕೆ ಆರ್‌ಎಸ್‌ನ ಬೃಂದಾವನ ಗಾರ್ಡನ್‌ನಲ್ಲಿ ಫೆ.೨೨ರ ಸಂಜೆ ಸಂಗೀತ ನೃತ್ಯ ಕಾರಂಜಿ ತಾಂತ್ರಿಕ ಕಾರಣದಿಂದ ಚಾಲನೆಗೊಳ್ಳದ ಕಾರಣ ಅಲ್ಲಿ…

2 hours ago