Andolana originals

ಆಶ್ರಯ ಫಲಾನುಭವಿ ಮಹಿಳೆಗೆ ತಪ್ಪಿದ ‘ಆಸರೆ’

ಎಚ್.ಎಸ್.ದಿನೇಶ್‌ಕುಮಾರ್

ಫಲಾನುಭವಿಯ ಹೆಸರಿನ ಬೇರೆ ಮಹಿಳೆಗೆ ಮನೆ ಹಕ್ಕು ಪತ್ರ ವಿತರಣೆ

ನಗರಪಾಲಿಕೆಯ ಆಶ್ರಯ ವಿಭಾಗದ ಕೈಚಳಕ: ದೂರು ದಾಖಲು

ಕಾರ್ಯಕ್ರಮದಲ್ಲಿವಿತರಿಸುವ ನೆಪದಲ್ಲಿ ಮೂಲ ಫಲಾನುಭವಿಯಿಂದ ಹಕ್ಕುಪತ್ರ ವಾಪಸ್ ಪಡೆದಿದ್ದ ಪಾಲಿಕೆ

ಮೈಸೂರು: ಆಶ್ರಯ ಯೋಜನೆಯಡಿ ಅರ್ಹ ಮಹಿಳಾ ಫಲಾನುಭವಿಯೊಬ್ಬರಿಗೆ ದೊರೆತಿದ್ದ ಮನೆಯನ್ನು ಅದೇ ಹೆಸರಿನ ಮತ್ತೊಬ್ಬರಿಗೆ ಹಕ್ಕು ಪತ್ರ ನೀಡಿದ್ದು, ಹಾಗೆ ಮನೆ ಪಡೆದವರು ಅದನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ. ಆ ಮೂಲಕ ಮೂಲ ಫಲಾನುಭವಿಯನ್ನು ವಂಚಿ ಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ನಗರಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶ್ರಯ ವಿಭಾಗದಲ್ಲಿ ಈ ಪ್ರಕರಣ ನಡೆದಿದೆ. ಅಲ್ಲಿನ ಸಿಬ್ಬಂದಿ ಮೇಲೆ ಯಾರ ಹತೋಟಿಯೂ ಇಲ್ಲದಂತಾಗಿದೆ.

ಪ್ರತಿದಿನ ಅಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ಅದಕ್ಕೆ ಉದಾಹರಣೆ ಎಂಬಂತೆ ಆಶ್ರಯ ಯೋಜನೆಯ ಅಡಿಯಲ್ಲಿ ಮಹಿಳೆಯೊಬ್ಬರಿಗೆ ಮಂಜೂರಾಗಿದ್ದ ಮನೆಯ ದಾಖಲೆಗಳನ್ನು ಫಲಾನುಭವಿ ಅಲ್ಲದವರಿಗೆ ನೀಡುವ ಮೂಲಕ ಮೂಲ ಮಾಲೀಕರಿಗೆ ವಂಚಿಸಲಾಗಿದೆ.

ಆಶ್ರಯ ವಿಭಾಗ ಎಂದರೆ ಸಾಕು ಕೆಲವರಿಗೆ ಕಿವಿ ನೆಟ್ಟಗಾಗುತ್ತದೆ. ಕಾರಣ ಅಲ್ಲಿನ ಸಿಬ್ಬಂದಿ ಗಳೊಂದಿಗೆ ಶಾಮೀಲಾದಲ್ಲಿ ಸುಲಭವಾಗಿ ಹಣ ಮಾಡ ಬಹುದು ಎಂಬುದು ಮಧ್ಯವರ್ತಿಗಳ ಲೆಕ್ಕಾಚಾರ.

ಆಶ್ರಯ ಯೋಜನೆಯಡಿ ಕಳೆದ ೨೫ ವರ್ಷಗಳಿಂದಲೂ ಸಾವಿರಾರು ಮಂದಿ ಬಡವರಿಗೆ ಮನೆಗಳು ಮಂಜೂರಾಗಿವೆ. ಕೆಲ ಉಳ್ಳವರಿಗೂ ‘ಆಶ್ರಯ’ ದೊರೆತಿದೆ. ಅಂತಹ ಮನೆಗಳಿಗೆ ಈಗ ಹಕ್ಕುಪತ್ರ ನೀಡಲಾಗುತ್ತಿದೆ. ಹಕ್ಕುಪತ್ರ ಪಡೆಯಬೇಕಾದರೆ ಫಲಾನುಭವಿಗಳು ಸಾಕಷ್ಟು ಬೆವರು ಹರಿಸಬೇಕು. ಅಲ್ಲಿನ ಸಿಬ್ಬಂದಿ ಹೇಳುವ ಅಲಿಖಿತ ಹಾಗೂ ನಿಯಮಬಾಹಿರ ಷರತ್ತುಗಳಿಗೆ ಒಪ್ಪಿಕೊಳ್ಳಬೇಕು.

ಹಾಗಾದರೆ ಮಾತ್ರ ಹಕ್ಕುಪತ್ರ ದೊರಕುತ್ತದೆ. ಇಲ್ಲವಾದಲ್ಲಿ ಕಚೇರಿ ಸಿಬ್ಬಂದಿಗಳು ಹಾಗೂ ಮಧ್ಯವರ್ತಿಗಳ ಮೂಲಕ ಯಾರ ಮನೆಗೆ ಯಾರು ಬೇಕಾದರೂ ಹಕ್ಕುಪತ್ರ ಪಡೆದುಕೊಳ್ಳಬಹುದು ಹಾಗೂ ಅಂತಹ ಮನೆಗಳನ್ನು ಲಕ್ಷಾಂತರ ರೂ.ಗಳಿಗೆ ಮಾರಾಟವನ್ನೂ ಮಾಡಬಹುದು. ಈ ಪ್ರಕರಣದಲ್ಲಿ ವಂಚಿತರಾಗಿರುವ ಮಂಜುಳಾ ಎಂಬವರು ನಗರಪಾಲಿಕೆ ಸಿಬ್ಬಂದಿ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಿಸಿದ್ದಾರೆ.

ನಡೆದದ್ದಾದರೂ ಏನು?: ಮೈಸೂರಿನ ಕೆಸರೆ ಬಡಾವಣೆಯ ನಿವಾಸಿ ಮಂಜುಳಾ ಅವರಿಗೆ ೨೦೦೧ರಲ್ಲಿ ಆಶ್ರಯ ಯೋಜನೆಯಡಿ ಎನ್. ಆರ್.ಕ್ಷೇತ್ರ ವ್ಯಾಪ್ತಿಯ ರಮ್ಮನಹಳ್ಳಿ ಬಳಿ ಮನೆ ಮಂಜೂರಾಗಿತ್ತು. ಅವರು ಅಲ್ಲಿಯೇ ವಾಸವಿದ್ದರು. ಕೊರೊನಾ ಸಂದರ್ಭದಲ್ಲಿ ಅವರು ಕೆಸರೆ ಬಳಿಗೆ ಸ್ಥಳಾಂತರಗೊಂಡಿದ್ದರು. ಈ ನಡುವೆ ಅವರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಹಕ್ಕುಪತ್ರವನ್ನು ಪಡೆದು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಕೂಡ ಮಾಡಿಸಿದ್ದರು. ನಂತರ ಅವರಿಂದ ಹಕ್ಕುಪತ್ರ ಪಡೆದ ಪಾಲಿಕೆ ಸಿಬ್ಬಂದಿ ಕಾರ್ಯಕ್ರಮವೊಂದನ್ನು ಏರ್ಪಡಿಸಿ ಹಕ್ಕುಪತ್ರ ನೀಡಲಾಗುವುದು ಎಂದು ತಿಳಿಸಿದ್ದರು.

ಇದಾದ ಕೆಲ ದಿನಗಳ ನಂತರ ಅವರು ರಮ್ಮನಹಳ್ಳಿಯ ಮನೆಗೆ ತೆರಳಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಮನೆಯಲ್ಲಿ ಬೇರೊಬ್ಬರು ವಾಸವಿದ್ದರು. ವಾಸವಿ ದ್ದವರು ನಾನು ಮಂಜುಳಾ ಎಂಬವರಿಂದ ಮನೆಯನ್ನು ಖರೀದಿಸಿದ್ದೇನೆ ಎಂದು ಹೇಳಿದ್ದಾರೆ. ಕೂಡಲೇ ಅವರು ಆಶ್ರಯ ವಿಭಾಗದ ಕಚೇರಿಗೆ ತೆರಳಿ ವಿಚಾರಿಸಿದ್ದಾರೆ.

ಮಂಜುಳಾ ಎಂಬವರು ಬಂದರು,ಕೊಟ್ಟೆವು!: ಇದು ನಗರಪಾಲಿಕೆ ಕಚೇರಿ ಆಶ್ರಯ ವಿಭಾಗದ ಸಿಬ್ಬಂದಿಗಳ ಅಣಿಮುತ್ತುಗಳು. ಅಸಲಿ ಮಾಲೀಕರೇ ದಾಖಲೆಗಳನ್ನು ಪಡೆಯಬೇಕಾದರೆ ಸಾಕಷ್ಟು ಬೆವರು ಹರಿಸಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಿರುವಾಗ ಯಾರೋ ಬಂದರು, ಅವರಿಗೆ ದಾಖಲೆಗಳನ್ನು ಕೊಟ್ಟೆವು ಎಂದರೆ ನಂಬಲು ಸಾಧ್ಯವಾಗದ ಮಾತು. ನಂತರ ತಮ್ಮ ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ ಎಂಬುದನ್ನು ತಿಳಿದ ಮಂಜುಳಾ ಅವರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಕಲಿ ಮಂಜುಳಾ! ಮಧ್ಯವರ್ತಿಗಳು ಹಾಗೂ ಆಶ್ರಯ ವಿಭಾಗದ ಸಿಬ್ಬಂದಿಗಳು ಸೇರಿ ಅಗ್ರಹಾರದ ನಿವಾಸಿ ಮಂಜುಳಾ ಎಂಬವರಿಗೆ ಮೂಲ ಮಾಲೀಕರಾದ ಮಂಜುಳಾರಿಗೆ ನೀಡಬೇಕಾದ ಹಕ್ಕುಪತ್ರವನ್ನು ನಕಲಿ ಮಂಜುಳಾಗೆ ನೀಡಿದ್ದಾರೆ. ನಂತರ ನೋಂದಣಿಗೆ ಬೇಕಾದ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ ಅಗ್ರಹಾರದ ಮಂಜುಳಾ ಅವರೇ ಮೂಲ ಮಾಲೀಕರು ಎಂದು ಬಿಂಬಿಸಿ ಮಸೂದ್ ಎಂಬವರಿಗೆ ಮನೆಯನ್ನು ಮಾರಾಟ ಮಾಡಲಾಗಿದೆ. ಈ ಪ್ರಕರಣದಲ್ಲಿ ಎಷ್ಟು ಹಣಕಾಸು ವ್ಯವಹಾರ ನಡೆದಿದೆ, ವಂಚನೆಯ ಪ್ರಕರಣದಲ್ಲಿ ಭಾಗಿಯಾದವರೆಷ್ಟು ಮಂದಿ ಎಂಬುದು ಪೊಲೀಸರ ತನಿಖೆಯಿಂದಷ್ಟೇ ಹೊರಬರಬೇಕಿದೆ.

 

ಆಂದೋಲನ ಡೆಸ್ಕ್

Recent Posts

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ: ಮಕ್ಕಳ ಮನಸ್ಸು ಗೆದ್ದ “ಸೂರ್ಯ–ಚಂದ್ರ” ಮಕ್ಕಳ ನಾಟಕ

ಮೈಸೂರು: ಬಹುರೂಪಿ ಬಾಬಾಸಾಹೇಬ್ ರಾಷ್ಟ್ರೀಯ ನಾಟಕೋತ್ಸವ–2026ರ ಅಂಗವಾಗಿ ಮೈಸೂರಿನ ಕಲಾಮಂದಿರದಲ್ಲಿ ನಡೆಯುತ್ತಿರುವ ಮಕ್ಕಳ ನಾಟಕ ಪ್ರದರ್ಶನದಲ್ಲಿ ಇಂದು ಪ್ರದರ್ಶಿತವಾದ “ಸೂರ್ಯ–ಚಂದ್ರ”…

6 mins ago

ಜನವರಿ.16ರಂದು ದೆಹಲಿಗೆ ಹೋಗುತ್ತೇನೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಜನವರಿ.16ರಂದು ನಾನು ದೆಹಲಿಗೆ ಹೋಗುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಇಂದು ಬೆಳಿಗ್ಗೆ ಪ್ರಯತ್ನ ವಿಫಲವಾದರೂ ಪ್ರಾರ್ಥನೆ…

58 mins ago

ಥೈಲ್ಯಾಂಡ್‌ನಲ್ಲಿ ರೈಲಿನ ಮೇಲೆ ಬೃಹತ್‌ ಕ್ರೇನ್‌ ಬಿದ್ದು 22 ಪ್ರಯಾಣಿಕರು ಸಾವು

ಥೈಲ್ಯಾಂಡ್‌ನ ಈಶಾನ್ಯದಲ್ಲಿ ಕ್ರೇನ್‌ ರೈಲಿನ ಮೇಲೆ ಬಿದ್ದು ಹಳಿತಪ್ಪಿದ ಪರಿಣಾಮ ಕನಿಷ್ಠ 22 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು…

2 hours ago

ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು

ಹಾಸನ: ಅಂಗಡಿಯಲ್ಲಿ ವ್ಯಾಪಾರ ಮಾಡುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದಲ್ಲಿ ನಡೆದಿದೆ. ಪ್ರವೀಣ್(‌45)…

3 hours ago

ಮಂಡ್ಯ: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಯೋಧ ಸಾವು

ಮಂಡ್ಯ: ಮಹಾರಾಷ್ಟ್ರ ರಾಜ್ಯದ ಚಾಕೋರು ಜಿಲ್ಲೆಯ ಲಾತೂರ್‌ನ ಬಿಎಸ್ಎಫ್ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯದ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.…

3 hours ago

ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಟ್ವೀಟ್‌ ಮಾಡಿದ್ದಾರೆ. ನಿನ್ನೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ…

3 hours ago