Andolana originals

ಉಮ್ಮತ್ತೂರು, ಸುತ್ತಲಿನ ಗ್ರಾಮಗಳ ಬಳಿ ಚಿರತೆಗಳ ಹಾವಳಿ

ಪ್ರಸಾದ್ ಲಕ್ಕೂರು

ಮೇಯುವ ಜಾನುವಾರು, ಮೇಕೆಗಳ ಮೇಲೆ ದಾಳಿ; ಜಮೀನುಗಳಿಗೆ ಹೋಗಲು ಗ್ರಾಮಸ್ಥರ ಆತಂಕ

ಚಾಮರಾಜನಗರ: ತಾಲ್ಲೂಕಿನ ಉಮ್ಮತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಒಂದು ತಿಂಗಳಿನಿಂದ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಉಮ್ಮತ್ತೂರು, ಲಿಂಗಣಾಪುರ, ತೊರವಳ್ಳಿ, ದೇಮಹಳ್ಳಿ, ಕುದೇರು, ದಾಸನೂರು, ಬಾಗಳಿ, ಜನ್ನೂರು, ಹಳ್ಳಿಕೆರೆಹುಂಡಿ ಗ್ರಾಮಗಳ ಜಮೀನುಗಳ ವ್ಯಾಪ್ತಿಯಲ್ಲಿ ಚಿರತೆಗಳ ಉಪಟಳ ಮಿತಿಮೀರಿದೆ. ಇದರಿಂದಾಗಿ ಈ ಗ್ರಾಮಗಳ ಜನರು ತಮ್ಮ ಜಮೀನುಗಳಿಗೆ ಹೋಗಿ ಬರಲು ಹಾಗೂ ಜಾನುವಾರುಗಳನ್ನು ಮೇಯಿಸಲು ಬರಡು ಭೂಮಿಗಳತ್ತ ತೆರಳಲು ಭಯಭೀತರಾಗಿದ್ದಾರೆ. ಉಮ್ಮತ್ತೂರು ಕೃಷ್ಣಮೃಗ ವನ್ಯಧಾಮಕ್ಕೆ ಹೊಂದಿಕೊಂಡಂತೆ ಇರುವ ಬಸವನ ಬೆಟ್ಟ ಹಾಗೂ ಬೆಟ್ಟದ ತಪ್ಪಲಿನಲ್ಲಿರುವ ಆನೆ ಕೆಂಬರೆ (ಹಳ್ಳ)ಯಲ್ಲಿ ೩-೪ ಚಿರತೆಗಳು ವಾಸವಾಗಿವೆ. ಅವುಗಳು ಆಗಾಗ್ಗೆ ಜಮೀನುಗಳು, ಬಂಜರು ಬಿದ್ದಿರುವ ಭೂಮಿಯಲ್ಲಿ ಜಾನುವಾರುಗಳು ಮೇಯುವಾಗ ದಾಳಿ ಮಾಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ರಾತ್ರಿ ವೇಳೆ ಮತ್ತು ಬೆಳಗಿನ ಜಾವ ಈ ಗ್ರಾಮಗಳ ಜನರು ತಮ್ಮ ಪಂಪ್‌ಸೆಟ್ ನೀರಾವರಿ ಜಮೀನು ಹಾಗೂ ಮಳೆಯಾಶ್ರಿತ ಜಮೀನುಗಳಿಗೆ ಹೋಗಿ ಬರಲು ಭಯಪಡುತ್ತಿದ್ದಾರೆ. ಸಮೀಪವೇ ಇರುವ ಅರಣ್ಯವನ್ನು ಬಿಟ್ಟು ಆಹಾರ ಅರಸಿ ಅಡ್ಡಾಡುವ ಚಿರತೆಗಳು ದಾಳಿ ನಡೆಸಬಹುದೆಂಬ ಆತಂಕದಿಂದಲೇ ಓಡಾಡಬೇಕಿದೆ ಎಂದು ರೈತರಾದ ನಟೇಶ್ ಅಳಲು ತೋಡಿಕೊಂಡಿದ್ದಾರೆ.

ಕೊಟ್ಟಿಗೆಯಲ್ಲಿದ್ದ ಕರು ಹೊತ್ತೊಯ್ದ ಚಿರತೆ…” 

ಚಾ.ನಗರ: ಬುಧವಾರ ತಡರಾತ್ರಿ ಚಿರತೆಯೊಂದು ಲಿಂಗಣಾಪುರದ ಹೊರವಲಯದಲ್ಲಿರುವ ನಟೇಶ್ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಜಾನುವಾರುಗಳ ಪೈಕಿ ಒಂದು ಕರುವನ್ನು ಹೊತ್ತೊಯ್ದು ಪಕ್ಕದ ಪೊದೆಯಲ್ಲಿ ತಿಂದು ಹಾಕಿದೆ. ಮಂಗಳವಾರ ಸಂಜೆ ಇದೇ ಗ್ರಾಮದ ಪುಟ್ಟೇಗೌಡ ಎಂಬವರು ತಮ್ಮ ಜಮೀನಿನ ಬಳಿ ಜಾನುವಾರುಗಳು ಹಾಗೂ ಮೇಕೆಗಳನ್ನು ಮೇಯಿಸುತ್ತಿದ್ದಾಗ ಚಿರತೆಯು ೨ ಮೇಕೆಗಳನ್ನು ಎಳೆದೊಯ್ದು ತಿಂದು ಹಾಕಿದೆ. ಚಿರತೆಯ ಹಾವಳಿಯಿಂದ ನಟೇಶ್ ಮತ್ತು ಪುಟ್ಟೇಗೌಡ ಅವರು ಸಹಸ್ರಾರು ರೂ. ನಷ್ಟ ಅನುಭವಿಸಿದ್ದಾರೆ.

೨೦ ದಿನಗಳಲ್ಲಿ ೩ ಚಿರತೆಗಳು ಸೆರೆ” 

ಚಾ.ನಗರ: ಗ್ರಾಮಗಳ ವ್ಯಾಪ್ತಿಯಲ್ಲಿ ಚಿರತೆಗಳ ಹಾವಳಿ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆಯ ಸಿಬ್ಬಂದಿ ಕುದೇರು ಮತ್ತು ಉಮ್ಮತ್ತೂರು ಬಳಿಯ ಜಮೀನುಗಳಲ್ಲಿ ಬೋನುಗಳನ್ನು ಇರಿಸಿ ಮೇಕೆಗಳನ್ನು ಕಟ್ಟಿಹಾಕಿದ್ದರು. ೨೦ ದಿನಗಳ ಅಂತರದಲ್ಲಿ ಉಮ್ಮತ್ತೂರು-ದಾಸನೂರು ಮಾರ್ಗದ ಕ್ವಾರಿ ಸಮೀಪದ ಜಮೀನಿನ ಬಳಿ ಇಡಲಾಗಿದ್ದ ಬೋನಿಗೆ ೨ ಚಿರತೆಗಳು ಹಾಗೂ ಕಳೆದ ಶನಿವಾರ ಕುದೇರು-ತೊರವಳ್ಳಿ ರಸ್ತೆ ಬದಿಯ ಕರಿಕಲ್ಲು ಕ್ವಾರಿ ಬಳಿ ಇಟ್ಟಿದ್ದ ಬೋನಿಗೆ ಒಂದು ಚಿರತೆ ಸೆರೆಯಾಗಿದೆ.  ಇನ್ನೇನು ಚಿರತೆಗಳ ಕಾಟ ತಪ್ಪಿತು ಎಂದು ಗ್ರಾಮಸ್ಥರು ನಿಟ್ಟುಸಿರು ಬಿಡುತ್ತಿದ್ದಂತೆ ಬುಧವಾರ ರಾತ್ರಿ ಚಿರತೆಯೊಂದು ಕರುವೊಂದನ್ನು ಎಳೆದೊಯ್ದು ತಿಂದಿದೆ.

” ಲಿಂಗಣಾಪುರದ ಹೊರವಲಯದಲ್ಲಿ ರಾತ್ರಿ ಚಿರತೆ ದಾಳಿಗೆ ಕರು ಬಲಿಯಾಗಿರುವುದು ಗಮನಕ್ಕೆ ಬಂದಿದೆ. ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ಕರುವಿನ ಕಳೇಬರದ ಮರಣೋತ್ತರ ಪರೀಕ್ಷೆ ವರದಿ ಬಳಿಕ ಇಲಾಖೆಯಿಂದ ಪರಿಹಾರ ನೀಡಲಾಗುವುದು. ಲಿಂಗಣಾಪುರ ಬಳಿ ಬೋನು ಇಟ್ಟು ಚಿರತೆ ಸೆರೆ ಹಿಡಿಯಲಾಗುವುದು.”

-ಸಂದೀಪ್ ಕಮ್ಮಾರ್, ಪ್ರೊಬೆಷನರಿ ಎಸಿಎಫ್, ಚಾಮರಾಜನಗರ ವಲಯ

ಆಂದೋಲನ ಡೆಸ್ಕ್

Recent Posts

ಮೈಸೂರು ಕರಗ ಮಹೋತ್ಸವ: ನಗರದಲ್ಲಿ ಅದ್ಧೂರಿ ಮೆರವಣಿಗೆ

ಮೈಸೂರು: ನಗರದ ಸಾಂಸ್ಕೃತಿಕ ಹಬ್ಬಗಳಲ್ಲಿ ಒಂದಾದ 102 ನೇ ವರ್ಷದ ಮೈಸೂರು ಕರಗ ಮಹೋತ್ಸವದ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಲಾಗಿದೆ.…

2 hours ago

ಮದ್ಯಪ್ರಿಯರಿಗೆ ಶಾಕ್‌ ಕೊಟ್ಟ ಸರ್ಕಾರ: ಮೇ.1ರಿಂದ ಮದ್ಯದ ಬೆಲೆ ಏರಿಕೆ

ಬೆಂಗಳೂರು: ಒಂದೆಡೆ ಗ್ಯಾರಂಟಿ ಯೋಜನೆಗಳನ್ನು ನೀಡುವ ರಾಜ್ಯ ಸರ್ಕಾರ ಇನ್ನೊಂದೆಡೆ ಬೆಲೆ ಏರಿಕೆಯನ್ನು ಮಾಡುತ್ತಲೇ ಬಂದಿದೆ ಎಂಬ ಸಾರ್ವಜನಿಕರ ಆರೋಪ…

5 hours ago

ಹೆಚ್ಚಿದ ಬಿಸಿಲಿನ ತಾಪಮಾನ: ಹೀಟ್ ವೇವ್, ಹೀಟ್ ಸ್ಟ್ರೋಕ್ ಅಪಾಯ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಏಪ್ರಿಲ್ 2026ರ ಅಂತ್ಯದ ವೇಳೆಗೆ ಬಿಸಿಲಿನ ತಾಪಮಾನ ತೀವ್ರವಾಗಿ ಹೆಚ್ಚಾಗಿದೆ. ಇದು ಜನಜೀವನದ ಮೇಲೆ…

5 hours ago

ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ನಟ ಚೇತನ್‌ ಅಹಿಂಸಾ

ಬೆಂಗಳೂರು: ನಟ ರಾಜ್‌ ಕುಮಾರ್‌ ಸಮಾಧಿ ವಿಚಾರವಾಗಿ ಹೇಳಿಕೆ ನೀಡಿದ್ದ ನಟ ಚೇತನ್‌ ಅಹಿಂಸಾ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಡಾ.ರಾಜ್‌ಕುಮಾರ್‌…

5 hours ago

ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ: ಸಚಿವ ವೆಂಕಟೇಶ್‌

ಬೆಳಗಾವಿ: ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲಲ್.‌ ಅಧಿಕಾರ ಹಂಚಿಕೆ ವಿಚಾರವಾಗಿ ಏನೆಲ್ಲಾ ಮಾತುಕತೆ ಆಗಿದೆ ಎಂಬುದೂ ಗೊತ್ತಿಲ್ಲ ಎಂದು…

6 hours ago

ಬೆಂಗಳೂರಿನಲ್ಲಿ ಕಿಲ್ಲರ್‌ ಬಿಎಂಟಿಸಿಗೆ ಮತ್ತೊಂದು ಬಲಿ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕಿಲ್ಲರ್‌ ಬಿಎಂಟಿಸಿಗೆ ಮತ್ತೊಂದು ಬಲಿಯಾಗಿದ್ದು, ಕೆಂಗೇರಿ ಸಂಚಾರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಭೀಕರ…

6 hours ago