Andolana originals

ಉಮ್ಮತ್ತೂರು, ಸುತ್ತಲಿನ ಗ್ರಾಮಗಳ ಬಳಿ ಚಿರತೆಗಳ ಹಾವಳಿ

ಪ್ರಸಾದ್ ಲಕ್ಕೂರು

ಮೇಯುವ ಜಾನುವಾರು, ಮೇಕೆಗಳ ಮೇಲೆ ದಾಳಿ; ಜಮೀನುಗಳಿಗೆ ಹೋಗಲು ಗ್ರಾಮಸ್ಥರ ಆತಂಕ

ಚಾಮರಾಜನಗರ: ತಾಲ್ಲೂಕಿನ ಉಮ್ಮತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಒಂದು ತಿಂಗಳಿನಿಂದ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಉಮ್ಮತ್ತೂರು, ಲಿಂಗಣಾಪುರ, ತೊರವಳ್ಳಿ, ದೇಮಹಳ್ಳಿ, ಕುದೇರು, ದಾಸನೂರು, ಬಾಗಳಿ, ಜನ್ನೂರು, ಹಳ್ಳಿಕೆರೆಹುಂಡಿ ಗ್ರಾಮಗಳ ಜಮೀನುಗಳ ವ್ಯಾಪ್ತಿಯಲ್ಲಿ ಚಿರತೆಗಳ ಉಪಟಳ ಮಿತಿಮೀರಿದೆ. ಇದರಿಂದಾಗಿ ಈ ಗ್ರಾಮಗಳ ಜನರು ತಮ್ಮ ಜಮೀನುಗಳಿಗೆ ಹೋಗಿ ಬರಲು ಹಾಗೂ ಜಾನುವಾರುಗಳನ್ನು ಮೇಯಿಸಲು ಬರಡು ಭೂಮಿಗಳತ್ತ ತೆರಳಲು ಭಯಭೀತರಾಗಿದ್ದಾರೆ. ಉಮ್ಮತ್ತೂರು ಕೃಷ್ಣಮೃಗ ವನ್ಯಧಾಮಕ್ಕೆ ಹೊಂದಿಕೊಂಡಂತೆ ಇರುವ ಬಸವನ ಬೆಟ್ಟ ಹಾಗೂ ಬೆಟ್ಟದ ತಪ್ಪಲಿನಲ್ಲಿರುವ ಆನೆ ಕೆಂಬರೆ (ಹಳ್ಳ)ಯಲ್ಲಿ ೩-೪ ಚಿರತೆಗಳು ವಾಸವಾಗಿವೆ. ಅವುಗಳು ಆಗಾಗ್ಗೆ ಜಮೀನುಗಳು, ಬಂಜರು ಬಿದ್ದಿರುವ ಭೂಮಿಯಲ್ಲಿ ಜಾನುವಾರುಗಳು ಮೇಯುವಾಗ ದಾಳಿ ಮಾಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ರಾತ್ರಿ ವೇಳೆ ಮತ್ತು ಬೆಳಗಿನ ಜಾವ ಈ ಗ್ರಾಮಗಳ ಜನರು ತಮ್ಮ ಪಂಪ್‌ಸೆಟ್ ನೀರಾವರಿ ಜಮೀನು ಹಾಗೂ ಮಳೆಯಾಶ್ರಿತ ಜಮೀನುಗಳಿಗೆ ಹೋಗಿ ಬರಲು ಭಯಪಡುತ್ತಿದ್ದಾರೆ. ಸಮೀಪವೇ ಇರುವ ಅರಣ್ಯವನ್ನು ಬಿಟ್ಟು ಆಹಾರ ಅರಸಿ ಅಡ್ಡಾಡುವ ಚಿರತೆಗಳು ದಾಳಿ ನಡೆಸಬಹುದೆಂಬ ಆತಂಕದಿಂದಲೇ ಓಡಾಡಬೇಕಿದೆ ಎಂದು ರೈತರಾದ ನಟೇಶ್ ಅಳಲು ತೋಡಿಕೊಂಡಿದ್ದಾರೆ.

ಕೊಟ್ಟಿಗೆಯಲ್ಲಿದ್ದ ಕರು ಹೊತ್ತೊಯ್ದ ಚಿರತೆ…” 

ಚಾ.ನಗರ: ಬುಧವಾರ ತಡರಾತ್ರಿ ಚಿರತೆಯೊಂದು ಲಿಂಗಣಾಪುರದ ಹೊರವಲಯದಲ್ಲಿರುವ ನಟೇಶ್ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಜಾನುವಾರುಗಳ ಪೈಕಿ ಒಂದು ಕರುವನ್ನು ಹೊತ್ತೊಯ್ದು ಪಕ್ಕದ ಪೊದೆಯಲ್ಲಿ ತಿಂದು ಹಾಕಿದೆ. ಮಂಗಳವಾರ ಸಂಜೆ ಇದೇ ಗ್ರಾಮದ ಪುಟ್ಟೇಗೌಡ ಎಂಬವರು ತಮ್ಮ ಜಮೀನಿನ ಬಳಿ ಜಾನುವಾರುಗಳು ಹಾಗೂ ಮೇಕೆಗಳನ್ನು ಮೇಯಿಸುತ್ತಿದ್ದಾಗ ಚಿರತೆಯು ೨ ಮೇಕೆಗಳನ್ನು ಎಳೆದೊಯ್ದು ತಿಂದು ಹಾಕಿದೆ. ಚಿರತೆಯ ಹಾವಳಿಯಿಂದ ನಟೇಶ್ ಮತ್ತು ಪುಟ್ಟೇಗೌಡ ಅವರು ಸಹಸ್ರಾರು ರೂ. ನಷ್ಟ ಅನುಭವಿಸಿದ್ದಾರೆ.

೨೦ ದಿನಗಳಲ್ಲಿ ೩ ಚಿರತೆಗಳು ಸೆರೆ” 

ಚಾ.ನಗರ: ಗ್ರಾಮಗಳ ವ್ಯಾಪ್ತಿಯಲ್ಲಿ ಚಿರತೆಗಳ ಹಾವಳಿ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆಯ ಸಿಬ್ಬಂದಿ ಕುದೇರು ಮತ್ತು ಉಮ್ಮತ್ತೂರು ಬಳಿಯ ಜಮೀನುಗಳಲ್ಲಿ ಬೋನುಗಳನ್ನು ಇರಿಸಿ ಮೇಕೆಗಳನ್ನು ಕಟ್ಟಿಹಾಕಿದ್ದರು. ೨೦ ದಿನಗಳ ಅಂತರದಲ್ಲಿ ಉಮ್ಮತ್ತೂರು-ದಾಸನೂರು ಮಾರ್ಗದ ಕ್ವಾರಿ ಸಮೀಪದ ಜಮೀನಿನ ಬಳಿ ಇಡಲಾಗಿದ್ದ ಬೋನಿಗೆ ೨ ಚಿರತೆಗಳು ಹಾಗೂ ಕಳೆದ ಶನಿವಾರ ಕುದೇರು-ತೊರವಳ್ಳಿ ರಸ್ತೆ ಬದಿಯ ಕರಿಕಲ್ಲು ಕ್ವಾರಿ ಬಳಿ ಇಟ್ಟಿದ್ದ ಬೋನಿಗೆ ಒಂದು ಚಿರತೆ ಸೆರೆಯಾಗಿದೆ.  ಇನ್ನೇನು ಚಿರತೆಗಳ ಕಾಟ ತಪ್ಪಿತು ಎಂದು ಗ್ರಾಮಸ್ಥರು ನಿಟ್ಟುಸಿರು ಬಿಡುತ್ತಿದ್ದಂತೆ ಬುಧವಾರ ರಾತ್ರಿ ಚಿರತೆಯೊಂದು ಕರುವೊಂದನ್ನು ಎಳೆದೊಯ್ದು ತಿಂದಿದೆ.

” ಲಿಂಗಣಾಪುರದ ಹೊರವಲಯದಲ್ಲಿ ರಾತ್ರಿ ಚಿರತೆ ದಾಳಿಗೆ ಕರು ಬಲಿಯಾಗಿರುವುದು ಗಮನಕ್ಕೆ ಬಂದಿದೆ. ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ಕರುವಿನ ಕಳೇಬರದ ಮರಣೋತ್ತರ ಪರೀಕ್ಷೆ ವರದಿ ಬಳಿಕ ಇಲಾಖೆಯಿಂದ ಪರಿಹಾರ ನೀಡಲಾಗುವುದು. ಲಿಂಗಣಾಪುರ ಬಳಿ ಬೋನು ಇಟ್ಟು ಚಿರತೆ ಸೆರೆ ಹಿಡಿಯಲಾಗುವುದು.”

-ಸಂದೀಪ್ ಕಮ್ಮಾರ್, ಪ್ರೊಬೆಷನರಿ ಎಸಿಎಫ್, ಚಾಮರಾಜನಗರ ವಲಯ

ಆಂದೋಲನ ಡೆಸ್ಕ್

Recent Posts

ಧರ್ಮಸ್ಥಳ ಪ್ರಕರಣದಲ್ಲಿ ಪ್ರಕಾಶ್‌ ರಾಜ್‌ ಹೆಸರು: ನಟ ಏನಂದ್ರು ಗೊತ್ತಾ?

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕರಣದಲ್ಲಿ ತಮ್ಮ ಹೆಸರನ್ನು ಕೆಲವರು ಅನಗತ್ಯವಾಗಿ ಉಲ್ಲೇಖಿಸುತ್ತಿದ್ದಾರೆ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ.…

3 hours ago

ನೀಟ್‌ ವಿದ್ಯಾರ್ಥಿಗಳಿಗೆ ಪ್ರಯಾಣದಲ್ಲಿ 50% ರಿಯಾಯಿತಿ: ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಆದೇಶ

ಲಕ್ನೋ: ಜೂನ್.‌21ರಂದು ನಡೆಯಲಿರುವ ನೀಟ್-ಯುಜಿ ಮರುಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳ ಬಸ್‌ ಪ್ರಯಾಣದ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವುದಾಗಿ ಉತ್ತರ…

6 hours ago

ಮುಂಬೈನಲ್ಲಿ ನೀರಿಗೆ ಭಾರೀ ಬಿಕ್ಕಟ್ಟು: ಕಟ್ಟಡ ಕಾಮಗಾರಿಗಳಿಗೆ ನೀರು ಬಂದ್‌

ಮುಂಬೈ: ದೇಶದಲ್ಲಿ ಮುಂಗಾರು ಪ್ರವೇಶಿದರೂ ಮುಂಬೈನಲ್ಲಿ ಮಳೆಯ ಕೊರತೆ ಎದುರಾಗಿದೆ. ಮಳೆ ಕೊರತೆ ಎದುರಾದ ಪರಿಣಾಮ ಜಲಾಶಯಗಳಲ್ಲಿ ನೀರಿನ ಮಟ್ಟ…

6 hours ago

ಕೆಫೆ ‘ರೂಫ್ ಟಾಪ್’ಗೆ ಅನುಮತಿಯೇ ಇರಲಿಲ್ಲ!

ಎಚ್.ಎಸ್.ದಿನೇಶ್‌ಕುಮಾರ್ ಲಿಕ್ಕರ್ ಗ್ಯಾರೇಜ್, ಫಾಕ್ಸ್ ಡೆನ್‌ಗೆ ಮಾತ್ರ ಅನುಮತಿ; ನೋಟಿಸ್ ಜಾರಿ ಮಾಡಿ ಸುಮ್ಮನಾಗಿದ್ದ ಅಧಿಕಾರಿಗಳು?; ಅಬಕಾರಿ ಡಿಸಿ ಅಮಾನತ್ತಿಗೆ…

7 hours ago

ಓದುಗರ ಪತ್ರ: ದುಷ್ಕೃತ್ಯ ನಿಯಂತ್ರಿಸಲು ಕಾನೂನು ರೂಪಿಸಬೇಕು

ಚಾಮರಾಜನಗರ ತಾಲ್ಲೂಕಿನ ಮಸಾಣಪುರ ಗ್ರಾಮದಲ್ಲಿ ಬಾಬಾ ಸಾಹೇಬ ಡಾ.ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಘಟನೆ ನಿಜಕ್ಕೂ ತಲೆತಗ್ಗಿಸುವಂಥ ಹೇಯ ಕೃತ್ಯವಾಗಿದೆ.ಈ…

11 hours ago

ಓದುಗರ ಪತ್ರ: ಯಶಸ್ಸಿಗೆ ಮೂಲ ಅಡಿಪಾಯವೇ ಸಮಯ ಪಾಲನೆ!

‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ’ ಎಂಬ ಗಾದೆಯ ಮಾತು ನಿಜಕ್ಕೂ ಇಂದಿನ ಕಾಲಘಟ್ಟಕ್ಕೆ ಹೆಚ್ಚಾಗಿ ಅನ್ವಯಿಸುತ್ತದೆ. ಏಕೆಂದರೆ ಸಮಯ ಪಾಲನೆ…

11 hours ago