Andolana originals

ಕುಕ್ಕರಹಳ್ಳಿ ಕೆರೆ ವಿವಾದ : ʻಶ್ವಾನ ಶಾಲಾʼ ಗಳನ್ನು ನಿರ್ಮಿಸಿ

ವಸಂತಕುಮಾರ್ ಮೈಸೂರು ಮಠ,

ಸಾಮಾಜಿಕ ಹೋರಾಟಗಾರ ಮತ್ತು ಪರಿಸರವಾದಿ.

ಮೈ ಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಬೀದಿ ನಾಯಿಗಳಿಗೆ ಶ್ವಾನ ಪ್ರಿಯರು ಆಹಾರ ನೀಡುವುದರ ಬಗ್ಗೆ ಸಾಕಷ್ಟು ವಾದ ವಿವಾದಗಳು ಹರಿದಾಡುತ್ತಿವೆ. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಇದೊಂದು ನುಂಗಲಾರದ ಬಿಸಿ ತುಪ್ಪವಾಗಿದೆ. ಬೀದಿ ನಾಯಿಗಳಿಂದ ಕಚ್ಚಿಸಿಕೊಂಡಿರುವ ಹಲವರು, ಅದರಲ್ಲೂ ಮಕ್ಕಳು, ಹೆಂಗಸರು ಪಡಬಾರದ ಪಾಡುಪಟ್ಟಿರುವುದನ್ನು ನಾವು ಕಂಡಿದ್ದೇವೆ. ಒಂದು ಕಡೆ ಇದು ಸತ್ಯವಾದರೆ, ನಾಯಿಗಳಿಗೆ ಆಹಾರ ನೀಡುವುದು ಜನರ ಹಕ್ಕು ಎಂದು ಹಲವರು ಶ್ವಾನ ಪ್ರಿಯರು ಪ್ರತಿಪಾದಿಸುತ್ತಿದ್ದಾರೆ. ಮೈಸೂರು ನಗರಪಾಲಿಕೆಯ ನಾಯಿ ಸ್ಕ್ವಾಡ್ ಆಗಾಗ ಬೀದಿ ನಾಯಿಗಳನ್ನು ಹಿಡಿದೊಯ್ದು ಅದಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿ, ಮತ್ತೆ ಬೀದಿಗೆ ಬಿಡುತ್ತಿರುವುದು ಗೊತ್ತಿರುವ ವಿಷಯ. ಅಷ್ಟರೊಳಗೆ ಆ ನಾಯಿಗಳು ಸಾಕಷ್ಟು ಸಂತಾನ ಉತ್ಪಾದನೆ ಮಾಡಿರುತ್ತವೆ; ಒಂದು ಹೆಣ್ಣು ನಾಯಿ ಸರಿಸುಮಾರು ೪-೬ ಮರಿಗಳಿಗೆ ಜನ್ಮ ಕೊಡುತ್ತದೆ.

ಈ ಸಮಸ್ಯೆಯನ್ನು ಬಗೆಹರಿಸಲು ಇದೊಂದು ಸಲಹೆ. ಭಾರತದಲ್ಲಿ ಗೋವುಗಳನ್ನು ಕಂಡರೆ ಪೂಜ್ಯತಾ ಭಾವನೆ ಇದೆ. ಆದರೆ ಬಿಡಾಡಿ ಹೋರಿಗಳನ್ನು ಸಾಕಲಾರದೆ, ಅವುಗಳನ್ನು ನಡುಬೀದಿಗಳಲ್ಲಿ ಬಿಟ್ಟಿರುವುದನ್ನು ಮತ್ತು ಅವುಗಳಿಂದ ವಾಹನ ಸವಾರರಿಗೆ ಎಷ್ಟು ಅನನುಕೂಲವಾಗುತ್ತದೆ ಎನ್ನುವುದನ್ನು ಇಂದಿಗೂ ನಾವು ಕಾಣುತ್ತಿದ್ದೇವೆ. ಒಂದು ಕಾಲದಲ್ಲಿ ದನದ ಮಾಂಸ ತಿನ್ನುವವರು ಅವುಗಳನ್ನು ಸಾಗಿಸುತ್ತಿದ್ದುದು ಒಂದು ನೋವಿನ ಸಂಗತಿಯಾಗಿತ್ತು. ಈ ದಾರುಣ ಪರಿಸ್ಥಿತಿಯನ್ನು ನೀಗಿಸಲು ಸರ್ಕಾರ ಮತ್ತು ಗೋವು ಪ್ರಿಯರು ಹಲವಾರು ಗೋವು ಶಾಲೆಗಳನ್ನು ನಿರ್ಮಿಸಿ, ಅವುಗಳಿಗೆ ಆಹಾರ, ನೀರು ಮತ್ತು ಅವು ಸ್ವಾಭಾವಿಕ ಮರಣ ಹೊಂದುವವರೆಗೆ ಅವುಗಳ ಆರೋಗ್ಯ ಮತ್ತು ಔಷಧಗಳನ್ನು ನೀಡುವ ವ್ಯವಸ್ಥೆ ಮಾಡಿದ್ದಾರೆ.

ಅಂತೆಯೇ ‘ಶ್ವಾನ ಶಾಲಾ’ಗಳನ್ನು ಏಕೆ ನಿರ್ಮಿಸಬಾರದು? ಶ್ವಾನಪ್ರಿಯರಾಗಲೀ, ಸರ್ಕಾರವಾಗಲಿ ಅಥವಾ ಸ್ವಯಂ ಸೇವಾ ಸಂಸ್ಥೆಗಳಾಗಲಿ ಮುಂದೆ ಬಂದು ಶ್ವಾನಗಳ ಮೇಲಿರುವ ತಮ್ಮ ಪ್ರೀತಿ, ಪ್ರೇಮವನ್ನು ‘ಶ್ವಾನ ಶಾಲಾ’ಗಳನ್ನು ನಿರ್ಮಿಸಿ ಗೋವು ಶಾಲಾಗಳಲ್ಲಿ ನೀಡುತ್ತಿರುವ ಸಕಲ ಸೌಕರ್ಯಗಳನ್ನು ಬೀದಿನಾಯಿಗಳಿಗೆ ಸಿಗುವಂತೆ ಮಾಡಿದರೆ ಎಲ್ಲರೂ ನಿರಾಳವಾಗಿರಬಹುದು ಅನಿಸುತ್ತಿದೆ. ಜೊತೆಗೆ ಶ್ವಾನ ಪ್ರಿಯರಿಗೆ ಒಂದು ಅವಕಾಶ ಕೊಡೋಣ, ‘ಶ್ವಾನ ಶಾಲಾ’ಗಳಲ್ಲಿ ಹಿಡಿದಿಟ್ಟುರುವ ಬೀದಿ ನಾಯಿಗಳ ಮೇಲೆ ಪ್ರೀತಿ ಇದ್ದರೆ, ಅವುಗಳನ್ನು ಕೊಂಡೊಯ್ದು ಮನೆಗಳಲ್ಲಿ ಇಟ್ಟುಕೊಂಡು ಸಾಕಲಿ, ಆದರೆ, ಅವುಗಳನ್ನು ಎಂದಿಗೂ ಬೀದಿಯಲ್ಲಿ ಬಿಡಕೂಡದು; ಬಿಟ್ಟರೆ ದಂಡ! ಬೀದಿನಾಯಿಗಳನ್ನು ಹಿಡಿದ ನಂತರ ಅವುಗಳನ್ನು ‘ಶ್ವಾನ ಶಾಲಾ’ದಲ್ಲಿ ನೋಂದಣಿ ಮಾಡಿ ಪ್ರತಿಯೊಂದು ನಾಯಿಗೂ ಕ್ರಮ ಸಂಖ್ಯೆ ನೀಡಿ, ಕಿವಿಗೆ ಆ ಸಂಖ್ಯೆಯಿರುವ ಬಿಲ್ಲೆಯನ್ನು ಸಿಕ್ಕಿಸಿದರೆ ಒಳಿತು. ಜೊತೆಗೆ ಆ ನಾಯಿಯನ್ನು ಕೊಂಡೊಯ್ಯುವ ಶ್ವಾನ ಪ್ರಿಯರ ಮಾಹಿತಿಯೂ ನೋಂದಣಿಯಾಗುವಂತೆ ಮಾಡುವ ವ್ಯವಸ್ಥೆ ಮಾಡಿದರೆ ಉತ್ತಮ ಅನಿಸಿದೆ.

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ವಿಶ್ವ ಶಾಂತಿಗೆ ಪೋಪ್ ಕರೆ ಸ್ವಾಗತಾರ್ಹ

ಮಧ್ಯ ಪ್ರಾಚ್ಯ ದೇಶಗಳಲ್ಲಿ ಕಳೆದ ೪೦ ದಿನಗಳಿಂದಲೂ ಯುದ್ಧ ನಡೆಯುತ್ತಿರುವುದರಿಂದ ವಿವಿಧ ದೇಶಗಳು ಸಂಕಷ್ಟಕ್ಕೆ ಸಿಲುಕಿವೆ. ಪೋಪ್ ೧೪ನೇ ಲಿಯೋರವರು…

23 mins ago

ಓದುಗರ ಪತ್ರ: ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಮೊತ್ತ ಹೆಚ್ಚಿಸಿ

ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸರ್ಕಾರ ನೀಡುವ ಸ್ಕಾಲರ್‌ಶಿಪ್ ದೊಡ್ಡ ಸಹಾಯವಾಗಿದೆ. ಆದರೆ ವಸತಿ ವೆಚ್ಚ,ಪುಸ್ತಕಗಳು ಹಾಗೂ…

25 mins ago

ಓದುಗರ ಪತ್ರ: ದಿಕ್ಕು ತಪ್ಪುತ್ತಿರುವ ಕೊಲ್ಲಿ ಸಮರ

ಕೊಲ್ಲಿಯಲ್ಲಿ ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿದ್ದ ಯುದ್ಧದ ನಿಲುಗಡೆಗಾಗಿ ಕರೆಯಲಾಗಿದ್ದ ಪಾಕಿಸ್ತಾನ ನೇತೃತ್ವದ ಸಂಧಾನ ಸಭೆ ವಿಫಲವಾಗುವುದರೊಂದಿಗೆ ಕೊಲ್ಲಿಯಲ್ಲಿ…

28 mins ago

ಓದುಗರ ಪತ್ರ: ರಸ್ತೆ ದುರಸ್ತಿಗೊಳಿಸಿ

ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ ರಸ್ತೆ ಹಾಳಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹರ ಸಾಹಸ ಮಾಡಬೇಕಾಗಿದೆ. ರಸ್ತೆಯ…

3 hours ago

ಓದುಗರ ಪತ್ರ: ಮಾನಸ ಗಂಗೋತ್ರಿಯಲ್ಲಿ ಕಸ ತೆರವುಗೊಳಿಸಿ

ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿ ಜ್ಯೂಸ್ ಸೆಂಟರ್, ಕಾಫಿ, ಟೀ ಅಂಗಡಿಗಳು ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿ, ಪ್ಲಾಸ್ಟಿಕ್ ಕಪ್‌ಗಳನ್ನು…

3 hours ago

ಹಾರ್ಮುಜ್ ಹಾದಿಯಲ್ಲಿ ಬಟ್ಟಬಯಲಾದ ನೀತಿ ವೈಫಲ್ಯ

ಭಾರತದ ಹೆಚ್ಚಿನ ಕುಟುಂಬಗಳಿಗೆ ಅಡುಗೆ ಅನಿಲ ಅಥವಾ ಎಲ್‌ಪಿಜಿ ಎಂಬುದು ದಿನಚರಿಯ ಅವಿಭಾಜ್ಯ ಅಂಗವಾಗಿದೆ. ಸಿಲಿಂಡರ್ ಯಾವಾಗ ಖಾಲಿಯಾಗುತ್ತದೆ ಎನ್ನುವುದರತ್ತ…

3 hours ago