Andolana originals

ಜ.೧೩ರಿಂದ ಮೂಗೂರು ತ್ರಿಪುರ ಸುಂದರಿ ಅಮ್ಮನವರ ಜಾತ್ರೆ ಸಂಭ್ರಮ

ಎಂ.ಬಿ.ರಂಗಸ್ವಾಮಿ

ಮೂಗೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಜ.೧೩ರಿಂದ ೧೭ರವರೆಗೆ ನಡೆಯಲಿದ್ದು, ಜ.೧೫ ರಂದು ಮಹಾ ರಥೋತ್ಸವ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ತ್ರಿಪುರ ಸುಂದರಿ ಅಮ್ಮನವರಜಾತ್ರೆಯ ಅದ್ಧೂರಿ ಆಚರಣೆಗೆ ಈಗಾಗಲೇ ಜಾತ್ರಾ ಪೂರ್ವಸಿದ್ಧತಾ ಸಭೆ ನಡೆಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದಿಶಕ್ತಿ ಶ್ರೀ ತ್ರಿಪುರ ಸುಂದರಿ ಅಮ್ಮ ತಿಬ್ಬಾದೇವಿಗೆ ರಥೋತ್ಸವಕ್ಕೂ ಮುನ್ನ ಒಂದು ವಾರ ಮೊದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿವೆ.

ಜ.೩ರಂದು ಹಸ್ತಾನ ಅಂಕುರಾರ್ಪಣೆ ಮೂಲಕ ಜಾತ್ರಾ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ. ಜ.೧೦ ರಂದು ವಧೆ ಉತ್ಸವ ನಡೆದಿದೆ. ಜ.೧೧ರಂದು ಶೇಷ, ಪಕ್ಷಿ ವಾಹನೋತ್ಸವ, ಜ.೧೨ರಂದು ಸಿಂಹ ವಾಹನೋತ್ಸವ ಹಾಗೂ ಚಂದ್ರ ಮಂಡಲ ಉತ್ಸವ, ಜ.೧೩ರಂದು (ಮೂಗೂರು ಬಂಡಿ) ರುದ್ರಾಕ್ಷಿ ಮಂಟಪದ ಉತ್ಸವ, ೧೪ರಂದು ಹೂವಿನ ಪಲ್ಲಕ್ಕಿಯಲ್ಲಿ ತೆಪ್ಪೋತ್ಸವ, ೧೫ ರಂದು ಶ್ರೀ ಅಮ್ಮನವರ ಮಹಾ ರಥೋತ್ಸವ ನಂತರ ರಾತ್ರಿ ಆನೆ ವಾಹನೋತ್ಸವ, ೧೬ರಂದು ಅಮ್ಮನ ವರು ಹೊಸಹಳ್ಳಿಗೆ ದಯಮಾಡಿ ಚಿಗುರು ಕಡಿಯುವುದು ನಂತರ ಮೂಗೂರಿಲ್ಲಿ ಕುದುರೆ ಹಾಗೂ ಮಂಟಪದಲ್ಲಿ ಉಯ್ಯಾಲೆ ಉತ್ಸವ, ೧೭ರಂದು ಪಲ್ಲಕ್ಕಿಯಲ್ಲಿ ವೈಮಾಳಿಗೆ ಉತ್ಸವ, ರಾತ್ರಿ ವೇಳೆ ದೇಗುಲದಲ್ಲಿ ಪೂರ್ಣಾಭಿಷೇಕ, ವಿಶೇಷ ಪೂಜೆ, ಮಹಾ ಮಂಗಳಾರತಿಯೊಂದಿಗೆ ಜಾತ್ರಾ ಧಾರ್ಮಿಕ ಆಚರಣೆಗೆ ತೆರೆ ಬೀಳಲಿದೆ.

” ಈ ಬಾರಿಯ ಜಾತ್ರೆಯು ಸಂಕ್ರಾಂತಿ ಹಬ್ಬ ದಂದು ಜರುಗ ಲಿದ್ದು, ಅಮ್ಮನವರ ಉತ್ಸವ ಮತ್ತಷ್ಟು ಮೆರುಗು ಪಡೆಯಲಿದೆ. ಅಮ್ಮನವರ ಜಾತ್ರೆಗೆ ಆಗಮಿಸುವ ಸಾವಿರಾರು ಜನರಿಗೆ ಮೂಲಸೌಕರ್ಯ ಒದಗಿಸಬೇಕಿದೆ.”

-ಎಂ.ಪಿ.ಛಾಯಕುಮಾರ್, ಉದ್ಯಮಿ, ಮೂಗೂರು

ಆಂದೋಲನ ಡೆಸ್ಕ್

Recent Posts

ಕಳಪೆ ಪ್ರಗತಿ ಸಾಧಿಸಿದ 5 ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ ಸಿಇಒ ನಂದಿನಿ

ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…

1 hour ago

ಅಕ್ರಮ ನಾಟ ಸಾಗಾಟ : ಲಾರಿ ಸಮೇತ ಮೂವರ ಬಂಧನ

ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…

1 hour ago

ಡೆವಿಲ್‌ ಅಬ್ಬರ | ಮೊದಲ ದಿನದ ಗಳಿಗೆ ಎಷ್ಟು?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…

2 hours ago

ಮಳವಳ್ಳಿ | ವಿದ್ಯುತ್‌ ಸ್ಪರ್ಶ ; ಕಾರ್ಮಿಕ ಸಾವು

ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…

2 hours ago

2027ರ ಜನಗಣತಿ | 11,718 ಕೋಟಿ ನೀಡಲು ಕೇಂದ್ರ ಸಂಪುಟ ಅನುಮೋದನೆ

ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…

2 hours ago

ಇಂಡಿಗೋ ಬಿಕ್ಕಟ್ಟು | ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳ ಅಮಾನತ್ತು

ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…

2 hours ago