Andolana originals

ಕಾನೂನು ಬೋಧಿಸುವ ಸ್ತ್ರೀಶಕ್ತಿ ಇಂದುಮತಿ

• ಕೀರ್ತಿ ಬೈಂದೂರು

ಪಾಠ ಮಾಡುವುದೆಂದರೆ ಎಂ. ಜೆ.ಇಂದುಮತಿ ಅವರಿಗೆ ತಪಸ್ಸಿನಂತೆ ಅವರಿಗೆ ತಾನೊಬ್ಬಳು ಕಾನೂನು ವಿಷಯದ ಅಧ್ಯಾಪಕಿ ಆಗ ಬಹುದೆಂಬ ಕನಸಿರಲಿಲ್ಲ. ಆದರಿಂದು ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕಿಯಾಗಿ ವಿದ್ಯಾವರ್ಧಕ ಕಾನೂನು ಕಾಲೇಜಿ ನಲ್ಲಿ ವೃತ್ತಿ ಬದುಕನ್ನು ಸಾರ್ಥಕವಾಗಿ ನಿಭಾಯಿಸುತ್ತಿದ್ದಾರೆ. ಪರಿಚಯಕ್ಕೆ ಸಿಕ್ಕ ವಿದ್ಯಾರ್ಥಿಗಳೆಲ್ಲ ಇವರ ಪಾಠದ ವೈಖರಿಯನ್ನು ನೆನೆದು, ಹೆಮ್ಮೆಪಟ್ಟುಕೊಳ್ಳುತ್ತಾರೆ.

ಇವರ ಪದವಿ ಓದು ಇನ್ನೂ ಮುಗಿದಿರಲಿಲ್ಲ. ತಾತ ಆಗಲೇ, ಇವಳು ಲಾಯರ್ ಆಗ್ತಾಳೆ ಬಿಡಮ್ಮಾ’ ಎಂದು ತಾಯಿಯವರಲ್ಲಿ ಹೇಳಿದ್ದನ್ನು ಇಂದಿಗೂ ನೆನಪಿಸಿಕೊಳ್ಳು ತ್ತಾರೆ. ಬಹುಶಃ ಇವರ ಮಟ್ಟಿಗೆ ಕಾನೂನು ಪದವಿಯನ್ನು ಆಯ್ದುಕೊಳ್ಳುವುದಕ್ಕೆ ತಾತನ ಮಾತೇ ಪ್ರೇರಣೆ, ವಿದ್ಯಾ ವರ್ಧಕ ಕಾನೂನು ಕಾಲೇಜಿನಲ್ಲಿ ಓದುತ್ತಿರುವಾಗ ನಾಗ ರತ್ನಮ್ಮ ಎಂಬ ಅಧ್ಯಾಪಕರು ದೊರೆತದ್ದು, ಇಂದುಮತಿ ಅವರ ಬದುಕಿಗೊದಗಿದ ಭಾಗ್ಯ, ಬಹುಗಂಭೀರ ವ್ಯಕ್ತಿತ್ವದ ನಾಗರತ್ನಮ್ಮ ಅವರು ನ್ಯಾಯಶಾಸ್ತ್ರ ವಿಷಯ ವನ್ನು ಪಾಠ ಮಾಡುತ್ತಿದ್ದರೆ ತಾದಾತ್ಮ ಚಿತ್ತರಾಗಿ ಕೇಳುತ್ತಿದ್ದರು. ಕೇವಲ ವಕೀಲಿ ವೃತ್ತಿಗೆ ಸೀಮಿತಗೊಳ್ಳ ಬಾರದೆಂದು ಅಧ್ಯಯನದ ಅನಂತ ಅವಕಾಶಗಳನ್ನು ಇಂದುಮತಿ ಅವರಿಗೆ ಪರಿಚಯಿಸಿದ್ದೇ ಅವರು.

ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯ ಮೇಲೆ ಎಷ್ಟು ಪ್ರಭಾವ ಬೀರಬಹುದೆಂಬುದಕ್ಕೆ ಇವರೇ ನಿದರ್ಶನ ಡ್ಯೂಟೀಸ್ ಮತ್ತು ಆಭಿಗೇಷನ್ಸ್ ನಡುವಿನ ವ್ಯತ್ಯಾಸ ತಿಳಿಯುವುದಕ್ಕೆ ನೂರಾರು ಪುಸ್ತಕಗಳನ್ನು ಹುಡುಕಾಡಿಸಿದರು. ಮಾತ್ರ ವಲ್ಲ, ಕನ್ನಡ ಮಾಧ್ಯಮದಲ್ಲಿ ಓದಿದ್ದ ಇವರು ಮುಕ್ಕಾಲು ಗಂಟೆಯವರೆಗೆ ಇಂಗ್ಲಿಷ್‌ನಲ್ಲಿ ಸೆಮಿನಾರ್ ಮಾಡ ಬೇಕಿತ್ತು. ಅಂದು ಅನಿವಾರ್ಯವಾಗಿ ಕಲಿತ ಇಂಗ್ಲಿಷ್ ಇಂದು ಅವರ ಪಾಠ ಬೋಧನೆಗೆ ನೆರವಾಗಿದೆ. ಕಾಕತಾಳಿಯ ವೆಂದರೆ, ತಾವು ಇಷ್ಟಪಟ್ಟು ಓದಿದ್ದನ್ಯಾಯಶಾಸ್ತ್ರ ವಿಷಯವನ್ನು ಇಂದು ತಮ್ಮ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ.

ಸ್ನಾತಕೋತ್ತರ ಪದವಿಯನ್ನು ಗಳಿಸಿದ ನಂತರ ಅಧ್ಯಾ ಪನ ವೃತ್ತಿಯ ಹಾದಿ ಹಿಡಿದರು. ದಾರಿ ಸುಗಮವಾಗಿ ಯಂತೂ ಇರಲಿಲ್ಲ. ಅರೆಕಾಲಿಕ ಉಪನ್ಯಾಸಕರಾಗಿದ್ದ ಇಂದು ಮತಿ ಅವರು ದಿನವೊಂದಕ್ಕೆ ಮೂರು ಕಾಲೇಜಿನಲ್ಲಿ ಪಾಠ ಮಾಡಬೇಕಿತ್ತು. ಒಂದು ಕಾಲೇಜಿನಲ್ಲಿ ಪಾಠ ಮುಗಿ ಯುತ್ತಿದ್ದಂತೆಯೇ ಮತ್ತೊಂದು ಕಾಲೇಜಿಗೆ ಓಡ ಬೇಕಿತ್ತು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ನಾಲ್ಕು ವರ್ಷ ಗಳ ಅಲೆ ದಾಟದ ನಂತರ ತಾನು ಓದಿದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲೇ ಸಹಾಯಕ ಪ್ರಾಧ್ಯಾಪಕರಾದರು.

ಸಾಂವಿಧಾನಿಕ ಕಾನೂನು ಇವರ ಮುಖ್ಯ ಬೋಧನಾ ವಿಷಯ. ವಿಸ್ತ್ರತ ವಿಷಯ ಪರಿಧಿಯಿರುವ ಕಾನೂನಿನ ಮೂಲ ಬಿಂದುವೇ ಸಂವಿಧಾನ ವಿಶ್ವಸಂಸ್ಥೆಯ ಚಾರ್ಟರ್ ನಲ್ಲಿ ತಿಳಿಸಿದ ಪುರುಷ ಮತ್ತು ಮಹಿಳೆಯ ಸಮಾನ ಹಕ್ಕುಗಳು ಭಾರತ ಸಂವಿಧಾನವನ್ನೂ ಪ್ರಭಾವಿಸಿದೆ. ಸಂವಿ ಧಾನದಲ್ಲಿ ಮಹಿಳೆಗೆಂದೇ ಅನೇಕ ಅನುಚ್ಛೇದಗಳಿದ್ದರೂ ಅರಿವಿನ ಕೊರತೆ ಎದ್ದು ಕಾಣುತ್ತಿದೆ ಎನ್ನುತ್ತಾರೆ. ಸರ್ವೋಚ್ಚ ನ್ಯಾಯಾಲಯ ತನ್ನ ಅನೇಕ ತೀರ್ಪುಗಳಲ್ಲಿ ಮಹಿಳಾ ಹಕ್ಕುಗಳನ್ನು ಮತ್ತೆ ಮತ್ತೆ ತಿಳಿಸುವ ಮೂಲಕ ಹೆಚ್ಚು ಜನರಿಗೆ ಈ ಬಗೆಯ ಅರಿವನ್ನು ಮೂಡಿಸುತ್ತಿದೆ.

ಹೆಣ್ಣು ಕಾನೂನನ್ನು ಓದಿಕೊಂಡಿದ್ದಾಳೆಂದರೆ ಆಕೆಯನ್ನು ನೋಡುವ ಕ್ರಮವೇ ಬೇರೆ, ಮದು ವೆಯ ವಿಷಯಕಂತೂ ಹೆಣ್ಣು ಬೇಡವೆನ್ನು ವುದಕ್ಕೆ ಇದೇ ಮುಖ್ಯ ಕಾರಣ ವಾಗುತ್ತದೆ ಎನ್ನುತ್ತಾ ತಮ್ಮ ಕಾ ಲ ದಲ್ಲಿ ದ ನಿಜಸ್ಥಿತಿಯನ್ನು ತೆರೆದಿಡು ತ್ತಾರೆ. ಈಗಿನ ಯುವಜನತೆಯ ಮನಸ್ಥಿತಿ ಹೇಗಿದೆ ಎಂದರೆ, ಗುರುತಿಸಬಹುದಾದ ಬದಲಾವಣೆಗಳಾಗಿವೆ. ಇವರ ವೃತ್ತಿ ಬದುಕಿನಲ್ಲಿ ಕಂಡಂತೆ ಅನೇಕ ಹೆಣ್ಣು ಮಕ್ಕಳು ಮದುವೆಯಾಗಿ, ಮಗುವಾದ ಮೇಲೆ ಕಾನೂನು ಓದಬೇಕೆಂದು ಕನಸಿಟ್ಟು ಬರುತ್ತಾರೆ. ಕೋವಿಡ್ ಸಮಯದಲ್ಲೊಮ್ಮೆ ಇಂದುಮತಿ ಅವರು ಆನ್ ಲೈನ್‌ನಲ್ಲಿ ಪಾಠ ಮಾಡಿದ ಮೇಲೆ ಮುಖ ದರ್ಶನ ಮಾಡಿಸಪ್ಪಾ ಎಂದರೆ ವಿದ್ಯಾರ್ಥಿನಿಯೊಬ್ಬಳು ನೋಟ್ಸ್ ಬರೆದುಕೊಳ್ಳುತ್ತಾ, ಪಕ್ಕದಲ್ಲಿ ತನ್ನ ಮಗು ಮಲಗಿದ್ದ ತೊಟ್ಟಿಲನ್ನೂ ಆಡಿಸುತ್ತಿದ್ದಳು! ಕಾನೂನು ಪದವಿ ಪಡೆದ ನಂತರ ಏನಾಗುತ್ತೀರೆಂದರೆ ಬಹುತೇಕ ವಿದ್ಯಾರ್ಥಿ ನಿಯರು ನ್ಯಾಯಮೂರ್ತಿಗಳಾಗಬೇಕೆನ್ನುತ್ತಾರೆ. ಓದಿದ ಮೇಲೆ ಸಿಗುವ ಅನೇಕ ಆಯ್ಕೆಗಳ ಬಗ್ಗೆ ಅವರೆಲ್ಲ ತಿಳಿದುಕೊಂಡಿದ್ದಾರೆ.

ಇಂತಹ ವಿದ್ಯಾರ್ಥಿಗಳನ್ನು ಅಧ್ಯಾಪಕರಾದ ನಾವು ಪ್ರೋತ್ಸಾಹಿಸಬೇಕು ಎನ್ನುವಲ್ಲಿ ಇವರ ಅಪ್ಪಟ ಮನುಷ್ಯ ಪ್ರೀತಿಯಿದೆ. ಬದುಕಿಗೆ ಪ್ರತಿಕ್ಷಣದಲ್ಲಿ ಆಸರೆಯಾಗಿ ನಿಂತ ತನ್ನ ತಾಯಿ, ಕೆಎಎಸ್ ಅಧಿಕಾರಿಯಾದ ಅಕ್ಕ ರೂಪ, ಗಂಡ ವಿನಯ್ ಅದೆಲ್ಲಕ್ಕಿಂತ ಹೆಚ್ಚು ಜೀವದುಸಿರು ಮಗಳು ವಾಗ್ವಿಲಾಸಿನಿಯಿಂದ ಜೀವನ ತೃಪ್ತವೆನಿಸುತ್ತಿದೆ ಎನ್ನುತ್ತಾರೆ. ಸದ್ಯ ಅಧ್ಯಾಪನದ ಜೊತೆಗೆ ಪಿಎಚ್.ಡಿ ಪದವಿ ಪಡೆಯುವತ್ತ ನಿರತರಾಗಿದ್ದಾರೆ.
keerthisba2018@gmail.com

ಆಂದೋಲನ ಡೆಸ್ಕ್

Recent Posts

ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದ ಡಿಕೆಶಿ

ಬೆಂಗಳೂರು: 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆದ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದರು. ಸದಾಶಿವನಗರದಲ್ಲಿರುವ ತಮ್ಮ…

2 hours ago

80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ: ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ನವದೆಹಲಿ: ದೇಶದಾದ್ಯಂತ ಇಂದು 80ನೇ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ…

3 hours ago

ಓದುಗರ ಪತ್ರ: ಮಹಿಳಾ ಸಿಬ್ಬಂದಿ ಲಂಚದ ಮಸಿ ಅಂಟಿಸಿಕೊಳ್ಳದಂತೆ ಎಚ್ಚರ ವಹಿಸಬೇಕು

ಪ್ರಾಮಾಣಿಕತೆ, ದಕ್ಷತೆ ವಿಷಯ ಬಂದಾಗ ಹೆಂಗಸರಿಗೆ ಸಿಗುವ ‘ಅಂಕ’ ಸ್ವಲ್ಪ ಹೆಚ್ಚೆ ಎಂಬ ಭಾವನೆ ಈ ಹಿಂದಿನಿಂದಲೂ ಇದೆ. ಅದೇ…

4 hours ago

ಓದುಗರ ಪತ್ರ: ಅಡಕೆ ಬೆಳೆಗಾರರ ಹಿತವೂ ಮುಖ್ಯವಲ್ಲವೇ?

ರಾಜ್ಯ ಸರ್ಕಾರವು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದ ಮೇಲೆ ಒಂದು…

4 hours ago

ಓದುಗರ ಪತ್ರ: ಈ ಬಾರಿಯ ದಸರಾ ಉದ್ಘಾಟನೆಗೆ ಹೆಚ್.ಡಿ.ದೇವೇಗೌಡರನ್ನು ಆಯ್ಕೆಮಾಡಲಿ

ಪ್ರತಿ ವರ್ಷ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಬಹು ವಿಜೃಂಭಣೆಯಿಂದ ಮೈಸೂರಿನಲ್ಲಿ ಹತ್ತು ದಿನಗಳ ಕಾಲ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ…

4 hours ago

ಮೈಸೂರು ಸ್ವಚ್ಛವಾಗಿಡಲು ಜನರಿಗೆ ಕೆಲ ಅಭ್ಯಾಸ ಅಗತ್ಯ

ಟಿ.ಕೆ.ಹರೀಶ್ ಮನೆ ಮುಂದಿನ ರಸ್ತೆಯ ಕಸ ವಿಲೇವಾರಿಗೆ ನಾಗರಿಕರು ಜಾಗೃತರಾಗಬೇಕು ಮೈಸೂರು ಎಂದರೆ ಕೇವಲ ಒಂದು ನಗರವಲ್ಲ. ಅದು ಕರ್ನಾಟಕದ…

4 hours ago