Andolana originals

ನಂಜನಗೂಡಿಗೆ ಬಸ್ ಹತ್ತಿದರೆ ತಿ.ನರಸೀಪುರದ ಟಿಕೆಟ್!

ಎಸ್.ಎಸ್.ಭಟ್

ನಂಜನಗೂಡು: ಮೈಸೂರು ನಗರದಿಂದ ನಂಜನಗೂಡಿಗೆ ತೆರಳುವ ಬಸ್ ಹತ್ತುವ ಪ್ರಯಾಣಿಕ ಆಘಾತಕ್ಕೆ ಒಳಗಾಗುವುದು ಗ್ಯಾರಂಟಿ. ಮೈಸೂರು ಬಸ್ ನಿಲ್ದಾಣದಿಂದ ನಂಜನಗೂಡು ತಲುಪಲು ಅಶ್ವಮೇಧ ಬಸ್ ಹತ್ತಿದವರೆಲ್ಲರಿಗೂ ಈ ಆಘಾತ ಎದುರಾಗಿದೆ.

ಆ ಬಸ್‌ನಲ್ಲಿ ಮೈಸೂರಿನಿಂದ ನಂಜಗೂಡಿಗೆ ಅಥವಾ ನಂಜನಗೂಡಿನಿಂದ ಮೈಸೂರಿಗೆ ಟಿಕೆಟ್ ಕೇಳಿದರೆ ಬಸ್ ನಿರ್ವಾಹಕ ಮೈಸೂರು-ತಿ.ನರಸೀಪುರ ಅಥವಾ ತಿ.ನರಸೀಪುರ-ಮೈಸೂರು ಎಂದು ಮುದ್ರಿತವಾಗಿರುವ ಟಿಕೆಟ್ ನೀಡುತ್ತಾರೆ. ಹಾಗಂತ ಪ್ರಯಾಣಿಕರೇನು ಗಾಬರಿಪಡಬೇಕಿಲ್ಲ. ಏಕೆಂದರೆ ಆ ಬಸ್ ತಿ.ನರಸೀಪುರಕ್ಕೆ ಹೋಗುವುದಿಲ್ಲ. ಅದು ನೇರವಾಗಿ ನಂಜನಗೂಡಿಗೆ ತಲುಪುತ್ತದೆ. ನಂಜನಗೂಡಿಂದಾದರೆ ಮೈಸೂರು ನಗರಕ್ಕೆ ಬರುತ್ತದೆ.

ಆದರೆ ಪ್ರಯಾಣಿಕರು ಆ ಬಸ್ ಹತ್ತಿ ಪ್ರಯಾಣ ಮಾಡಿದ ತಪ್ಪಿಗೆ ೪೬ ರೂ. ಬದಲಿಗೆ ೪೮ ರೂ. ಅಂದರೆ ೨ ರೂ. ಹೆಚ್ಚು ದರ ನೀಡಬೇಕಾಗುತ್ತದೆ. ಈ ೨ ರೂ. ಹೆಚ್ಚಳವಾಗಿರುವುದು ೧೨-೨-೨೦೨೬ ಗುರುವಾರದಿಂದ. ಈ ಹೆಚ್ಚಳದ ಕುರಿತಂತೆ ಸಾರಿಗೆ ನಿಗಮದ ನಂಜನಗೂಡು ಡಿಪೋದ ಅDiಕಾರಿ ಸುಮಾ ಅವರನ್ನು ಪ್ರಶ್ನಿಸಿದರೆ, ಈ ವಿಚಾರ ನನ್ನ ಗಮನಕ್ಕೇನೂ ಬಂದಿಲ್ಲ. ಹಾಗಾಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ.

” ಮಲೆ ಮಹದೇಶ್ವರ ಬೆಟ್ಟಕ್ಕೆ ೧೩-೨-೨೦೨೬ರಿಂದ ೩೦ ಅಶ್ವಮೇಧ ಬಸ್‌ಗಳನ್ನು ಬಿಡಲಾಗಿದ್ದು ಅವರು ನಂಜನಗೂಡಿಗೆ ಟ್ರಿಪ್ ಹೋಗುವ ಹಾಗೇ ಇಲ್ಲ. ಟಿಕೆಟ್ ನೀಡುವಂತೆಯೂ ಇಲ್ಲ. ನಂಜನಗೂಡು-ಮೈಸೂರು ನಡುವಿನ ಪ್ರಯಾಣ ದರ ಹೆಚ್ಚಳವಾಗಿಯೇ ಇಲ್ಲ. ಅದನ್ನು ಈಗ ನಾವು ಪರಿಶೀಲಿಸಬೇಕಿದೆ.”

ವೀರೇಶ, ಡಿಸಿ, ಸಾರಿಗೆ ನಿಗಮ

” ಮೈಸೂರು-ತಿ.ನರಸೀಪುರ ಮಾರ್ಗದ ಮುದ್ರಿತ ಟಿಕೆಟ್ ಪಡೆದು ನಂಜನ ಗೂಡಿಗೆ ಪ್ರಯಾಣ ಬೆಳೆಸಿದರೆ ಆಗುವ ಅನಾಹುತದ ಅರಿವು ಯಾರಿಗೂ ಇಲ್ಲ. ಅಕಸ್ಮಿಕ ವಾಗಿ ಮೈಸೂರು-ನಂಜನಗೂಡು ರಸ್ತೆಯಲ್ಲಿ ಆ ಬಸ್ ಅಪಘಾತವಾದರೆ ವಿಮೆಯ ಜಾರಿಯಲ್ಲಿ ಭಾರೀ ತೊಡಕಾಗುವುದು ಖಚಿತ. ಹಾಗಾದಾಗ ಯಾರು ಜವಾಬ್ದಾರರು?”

ಎಂ.ಎನ್.ಚಂದ್ರಶೇಖರ್, ಜೆ.ಪಿ.ನಗರ, ಮೈಸೂರು

 

 

ಆಂದೋಲನ ಡೆಸ್ಕ್

Recent Posts

ಸೋನ್ ಹಿಲ್ ಬಳಿಯ ಕಸದ ರಾಶಿ ತೆರವು ಕಾರ್ಯ ಶುರು

ನವೀನ್ ಡಿಸೋಜ ಗುಡ್ಡದ ಮೇಲೆ ಅವೈಜ್ಞಾನಿಕವಾಗಿ ಸುರಿದಿದ್ದ ಕಸ ವಿಂಗಡಣೆ ಕೆಲಸ ಚುರುಕು ಮಡಿಕೇರಿ: ವಾಯು ಗುಣಮಟ್ಟದಲ್ಲಿ ದೇಶದಲ್ಲೇ ಹೆಸರಾಗಿರುವ…

2 hours ago

ಗ್ಯಾಂಗ್ರಿನ್‌ಗೆ ಬೇಡ ಭಯ; ಮಾನಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಭಯ

ಇತ್ತೀಚಿನ ದಿನಮಾನಗಳಲ್ಲಿ ಸಕ್ಕರೆ ಕಾಯಿಲೆ ಎಂಬುದು ಸಾಮಾನ್ಯವಾಗಿ ಬಿಟ್ಟಿದೆ. ಈ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಂಡಾಗ ಗ್ಯಾಂಗ್ರಿನ್ ರೂಪ ಪಡೆದುಕೊಳ್ಳುತ್ತದೆ.…

2 hours ago

ಕೋರ್ಟ್ ಮೆಟ್ಟಿಲೇರಿದ್ದ ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ತೆರೆ

ಮಂಜು ಕೋಟೆ ಕೋಟೆ ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷರಾಗಿ ಮೊಳಿಯೂರು ಆನಂದ್ ಮುಂದುವರಿಕೆಗೆ ನ್ಯಾಯಾಲಯದ ತೀರ್ಪು ಎಚ್.ಡಿ.ಕೋಟೆ: ತಾಲ್ಲೂಕು ಕುರುಬ…

3 hours ago

ಸಿಎಂ ತವರಲ್ಲಿ ಮಾರ್ಚ್‌ನಲ್ಲಿ ಅಕ್ಕ ಕೆಫೆ ಶುರು

ಕೆ.ಬಿ.ರಮೇಶನಾಯಕ ಬಡವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶ ಮೈಸೂರು: ಬಡವರ ಕೈಗೆಟುಕುವ ದರದಲ್ಲಿ ಗುಣಮಟ್ಟದ ತಿಂಡಿ, ಊಟವನ್ನು…

3 hours ago

ಸಾರಿಗೆ ನೌಕರರ ಒತ್ತಡಕ್ಕೆ ಮಣಿದ ಸರ್ಕಾರ : ವೇತನ ಪರಿಷ್ಕರಣೆಗೆ ಒಪ್ಪಿದೆ ; ರದ್ದಾಗುತ್ತಾ ಮುಷ್ಕರ?

ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯ ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ಸಿಬ್ಬಂದಿಗೆ 26 ತಿಂಗಳ ಬಾಕಿ…

12 hours ago