Andolana originals

ನನ್ನ ಓದು ಆರಂಭವಾಗಿದ್ದೇ ʼಆಂದೋಲನʼದಿಂದ: ದರ್ಶನ್‌

ನಂಜನಗೂಡು: ನನ್ನ ಓದು ಆರಂಭವಾಗಿದ್ದೇ ‘ಆಂದೋಲನ’ ಪತ್ರಿಕೆಯಿಂದ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು. ತಾಲ್ಲೂಕು ಆಡಳಿತ ಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ‘ಆಂದೋಲನ’ದ ೫೨ನೇ ವರ್ಷದ ವಿಶೇಷ ಸಂಚಿಕೆಯನ್ನು ಲೋಕಾರ್ಪ ಣೆಗೊಳಿಸಿ ಅವರು ಮಾತನಾಡಿದರು. ನಾನು ಚಿಕ್ಕವನಾಗಿದ್ದಾಗ ಮನೆಗೆ ಬರುತ್ತಿದ್ದ ‘ಆಂದೋಲನ’ದ ಅಕ್ಷರ ಗಳನ್ನು ಓದಿಯೇ ಕನ್ನಡ ಕಲಿತಿದ್ದು. ಕೋಟಿಯವರು ಕಟ್ಟಿ ಬೆಳೆಸಿದ ಈ ಸಮಾಜಮುಖಿ ಸಂಸ್ಥೆಯನ್ನು ಇಂದು ಅವರ ಮಕ್ಕಳು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಪತ್ರಿಕೆ ಶತನೋತ್ಸವ ಕಾಣುವಂತಾಗಲಿ ಎಂದರು. ಹೋರಾಟಗಾರ ಚುಂಚನಹಳ್ಳಿ ಮಲ್ಲೇಶ ಮಾತನಾಡಿ, ೭೦ – ೮೦ರ ದಶಕದಲ್ಲಿ ‘ಆಂದೋಲನ’ ರೈತ, ದಲಿತ ಚಳವಳಿಗಳ ಹೋರಾಟಗಾರರ ಬೆನ್ನೆಲು ಬಾಗಿ ಕೆಲಸ ಮಾಡಿತ್ತು ಎಂದು ಸ್ಮರಿಸಿ ದರು. ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ತಹಸಿಲ್ದಾರ್ ಶಿವಕುಮಾರ್ ಕ್ಯಾಸನೂರು, ತಾಪಂ ಇಒ ಜೆರಾಲ್ಡ್ ರಾಜೇಶ್, ಮಲ್ಲಳ್ಳಿ ನಾರಾಯಣ, ಚುಂಚನ ಹಳ್ಳಿ ಮಲ್ಲೇಶ, ಕಾರ್ಯ ಬಸವಣ್ಣ, ವಿಜಯಕುಮಾರ್, ಸ್ವಾಮಿ, ಬೊಕ್ಕಹಳ್ಳಿ ಲಿಂಗಯ್ಯ, ದೇವರಾಜು, ಮಹದೇವಯ್ಯ, ರಾಜೇಶ, ಸಿ. ಎಂ. ಶಂಕರ್, ದೇವನೂರು ಶಿವಪ್ಪದೇವರು, ವಿಜಯ ಕುಮಾರ್, ದೊರೆಸ್ವಾಮಿ ನಾಯಕ, ಹಗಿನವಾಳು ಬಸವಣ್ಣ ಹಾಜರಿದ್ದರು.

andolana

Recent Posts

ಹನೂರು| ಆಟೋ ಹಾಗೂ ಕಾರಿನ ನಡುವೆ ಡಿಕ್ಕಿ: ಮೂವರಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ‌ ಮಹದೇಶ್ವರಬೆಟ್ಟ ರಸ್ತೆಯ ತಾಳುಬೆಟ್ಟ–ಕೋಣನಕೆರೆ ಮಾರ್ಗದಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ಆಟೋ…

7 hours ago

ನೀಟ್‌ ಪರೀಕ್ಷೆಯ ರದ್ದು, ಕೇಂದ್ರ ಸರ್ಕಾರದ ಬಹು ದೊಡ್ಡ ಹಗರಣ: ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್

ಬೆಂಗಳೂರು: ನೀಟ್‌ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸದ ಕೇಂದ್ರ ಸರ್ಕಾರ, ಪರೀಕ್ಷೆ ರದ್ದು ಮಾಡುವ ಮೂಲಕ ವೈದ್ಯರಾಗಬೇಕು ಎಂಬ ಕನಸು ಹೊತ್ತಿದ್ದ…

7 hours ago

ಪಾಕಿಸ್ತಾನದಲ್ಲಿ ಭೀಕರ ಬಾಂಬ್‌ ಸ್ಫೋಟ: 9 ಮಂದಿ ಸಾವು

ಪಾಕಿಸ್ತಾನ: ಇಲ್ಲಿನ ವಾಯುವ್ಯ ಭಾಗದ ಮಾರುಕಟ್ಟೆಯೊಂದರಲ್ಲಿ ರಿಕ್ಷಾಗೆ ಅಳವಡಿಸಿದ್ದ ಬಾಂಬ್‌ ಸ್ಫೋಟಗೊಂಡ ಪರಿಣಾಮ 9 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ…

7 hours ago

ನಾಳೆಯಿಂದ ಎರಡು ದಿನ ಸಿದ್ದರಾಮಯ್ಯ ಮೈಸೂರು ಪ್ರವಾಸ

ಮೈಸೂರು: ನಾಳೆಯಿಂದ ಎರಡು ದಿನಗಳ ಕಾಲ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನಾಳೆ ಸಂಜೆ 5.30ಕ್ಕೆ ವಿಶೇಷ…

7 hours ago

ವನ್ಯಜೀವಿ ಸಂಚಾರವಿರುವ ಚಾರಣಪಥ, ಸಂಚಾರಪಥ ಸ್ಥಗಿತಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಚಾಮರಾಜನಗರದ ನಾಗಮಲೆ ಅರಣ್ಯದಲ್ಲಿ ಚಿರತೆ ದಾಳಿಯಿಂದ 10 ವರ್ಷದ ಬಾಲಕ ಮೃತಪಟ್ಟಿರುವ ಹಿನ್ನೆಲೆಯಲ್ಲಿ ವನ್ಯಜೀವಿ ಸಂಚಾರ ಇರುವ ಎಲ್ಲ…

7 hours ago

ನಾಗಮಲೆ ಗ್ರಾಮದಲ್ಲಿ ಎರಡು ಮೇಕೆ ಹೊತ್ತೊಯ್ದ ಚಿರತೆ: ಮತ್ತಷ್ಟು ಆತಂಕ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ…

7 hours ago