Andolana originals

ಪ್ಲಾಸ್ಟಿಕ್ ಘನತ್ಯಾಜ್ಯದ ತೊಟ್ಟಿಯಾದ ಹನಿಯಂಬಾಡಿ ರಸ್ತೆ

ಹೇಮಂತ್‌ಕುಮಾರ್

ರಸ್ತೆ ಬದಿಯ ರೈತರ ಜಮೀನಿನಲ್ಲಿಯೇ ಕಸ ವಿಲೇವಾರಿ; ಕ್ರಮಕ್ಕೆ ಸಾರ್ವಜನಿಕರ ಆಗ್ರಹ 

ಮಂಡ್ಯ: ನಗರದ ಹೊರವಲಯದ ಸುಮಾರು ೨೨ ಬಡಾವಣೆಗಳ ಪ್ಲಾಸ್ಟಿಕ್ ಘನ ತ್ಯಾಜ್ಯದ ರಾಶಿಯೇ ಹನಿಯಂಬಾಡಿ ರಸ್ತೆಯ ಇಕ್ಕೆಲಗಳಲ್ಲಿ, ಹೆಬ್ಬಳ್ಳ ನಾಲೆಯ ಒಡಲಿಗೆ ಬಂದು ಬೀಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ಈ ಘನತ್ಯಾಜ್ಯವು ಮಣ್ಣಲ್ಲಿ ಕರಗಬೇಕೆಂದರೆ ನೂರು ವರ್ಷಗಳೂ ಸಾಲದು ಎನ್ನಲಾಗಿದೆ. ಮನೆಯ ಉಪಯೋಗಕ್ಕೆ ಬಳಸಲಾಗುವ ಮರುಬಳಕೆಯ ಪ್ಲಾಸ್ಟಿಕ್ ಬಾಟಲಿಗಳು, ಅಡುಗೆಗೆ ಬಳಸುವ ವಸ್ತುಗಳ ತ್ಯಾಜ್ಯಗಳು, ಅನುಪಯುಕ್ತ ಕವರ್‌ಗಳು ಸೇರಿದಂತೆ ಅನೇಕ ರೀತಿಯ ಪ್ಲಾಸ್ಟಿಕ್ ಘನತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ.

ರಾತ್ರೋರಾತ್ರಿ ದ್ವಿಚಕ್ರ ವಾಹನ, ಕಾರುಗಳಲ್ಲಿ ಬರುವ ಸುಶಿಕ್ಷಿತ ಜನರು ರಾಮನಹಳ್ಳಿಯ ಗದ್ದೆಗಳ ಬದಿಯಲ್ಲಿ ಎಸೆದು ಹೋಗುತ್ತಿದ್ದಾರೆ. ಪರಿಸರದ ಬಗ್ಗೆ ಅತ್ಯಂತ ಕಾಳಜಿ ವಹಿಸಿ ತಮ್ಮ ತಮ್ಮ ಮನೆಯ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಈ ಸುಶಿಕ್ಷಿತರು, ಹನಿಯಂಬಾಡಿ ರಸ್ತೆಯನ್ನು ಕಸದ ತೊಟ್ಟಿ ಎಂಬಂತೆ ಪರಿಗಣಿಸಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ.

ಈ ವ್ಯಾಪ್ತಿಯ ಹೊಸ ಬಡಾವಣೆಗಳು ನಗರಸಭೆಯ ವ್ಯಾಪ್ತಿಗೆ ಬಾರದಿದ್ದರೂ ವಾರಕ್ಕೆ ಎರಡು-ಮೂರು ಬಾರಿ ನಗರಸಭೆಯ ತ್ಯಾಜ್ಯ ಸಂಗ್ರಹ ವಾಹನಗಳು ಬರುತ್ತವೆ. ನಿವಾಸಿಗಳು ಒಣಕಸ ಮತ್ತು ಹಸಿ ಕಸವನ್ನು ಬೇರ್ಪಡಿಸಿದರೆ ಕಸ ಸಂಗ್ರಹದ ಸಿಬ್ಬಂದಿ ಅದನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಿ ತೆಗೆದುಕೊಂಡು ಹೋಗುತ್ತಾರೆ. ಹೀಗಿದ್ದರೂ ಇಲ್ಲಿನ ನಿವಾಸಿಗಳು ಕಸವನ್ನು ವಾಹನಕ್ಕೂ ಕೊಡಲಾಗದಷ್ಟು ಸೋಮಾರಿಗಳಾಗಿದ್ದಾರೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರ ಮನೆಯಂಗಳ ಸ್ವಚ್ಛವಾಗಿದ್ದರೆ ಸಾಕು. ಊರಿನ ರೈತರ ಜಮೀನು, ಗದ್ದೆ, ಹೊಲ, ನಾಲಾ ಬದಿ ಹೇಗಾದರೂ ಹಾಳಾಗಿ ಹೋಗಲಿ ಎಂಬ ಮನೋಭಾವನೆ ತಾಳಿರುವುದು ಅತ್ಯಂತ ನೋವಿನ ಸಂಗತಿ ಎಂದು ಹನಿಯಂಬಾಡಿ ಜಮೀನಿನ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಮರಿಗೌಡ ಬಡಾವಣೆಯಿಂದ ಬೇಲೂರು ತನಕ ಸಾಗುವ ವಿತರಣಾ ನಾಲೆಯನ್ನು ಈ ಬಡಾವಣೆಯ ಕೆಲವರು ಪ್ಲಾಸ್ಟಿಕ್ ತ್ಯಾಜ್ಯಗಳಿಂದಲೇ ಮುಚ್ಚಿದ್ದರು. ‘ಆಂದೋಲನ’ ಪತ್ರಿಕೆಯ ವರದಿಯಿಂದ ಎಚ್ಚೆತ್ತುಕೊಂಡ ನೀರಾವರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇಡೀ ನಾಲೆಯನ್ನು ಸ್ವಚ್ಛಗೊಳಿಸಿ ಮಾನವೀಯತೆ ಮೆರೆದಿದ್ದರು. ಕೆಲ ದಿನಗಳನ್ನು ಮರೆಸಿದ ಬಳಿಕ ಮತ್ತೆ ಇದೇ ಚಾಳಿ ಮುಂದುವರಿಸಿದ್ದಾರೆಂದು ಪ್ರಜ್ಞಾವಂತ ನಾಗರಿಕರು ಸಿಟ್ಟಾಗಿದ್ದಾರೆ.

ರಾಮೇನಹಳ್ಳಿ ಜಮೀನುಗಳಲ್ಲಿನ ರೈತರು ತಮ್ಮ ಸ್ವಂತ ಗಳಿಕೆಯಲ್ಲಿ ಸಾವಿರಾರು ರೂ. ಖರ್ಚು ಮಾಡಿ ಟ್ರಾಕ್ಟರ್‌ಗಳಲ್ಲಿ ಪ್ಲಾಸ್ಟಿಕ್ ಘನ ತ್ಯಾಜ್ಯವನ್ನು ಸಾಗಿಸಿ, ಸ್ವಚ್ಛಗೊಳಿಸಿದ್ದಾರೆ.ಮ ಆ ಮೂಲಕ ತಮ್ಮ ಜಮೀನುಗಳತ್ತ ಮತ್ತೆ ಯಾರೂ ಕಸ ಹಾಕದಂತೆ ಎಚ್ಚರಿಕೆ ಫಲಕಗಳನ್ನು ಹಾಕಿದ್ದಾರೆ. ಈ ಜಾಗದಲ್ಲಿ ಕಸ ಹಾಕುವವರು ಮೂರ್ಖರು ಎಂದು ಬೋರ್ಡ್ ಹಾಕಿಸಿದ್ದರೂ ರಾತ್ರೋರಾತ್ರಿ ಕಸ ಎಸೆಯುವವರು ಹೌದು ನಾವು ಮೂರ್ಖರು ಎಂಬುದನ್ನು ಒಪ್ಪಿಕೊಂಡಂತಾಗಿದೆ. ರಾತ್ರಿಯ ವೇಳೆ ಇದೇ ಕೆಲಸ ಮುಂದುವರಿಸಿದ್ದಾರೆ ಎಂದು ಗ್ರಾಮಸ್ಥರು, ರೈತರು ಕಿಡಿಕಾರಿದರು.

ಎಲ್ಲೆಲ್ಲಿ ಕಸ ಹಾಕುತ್ತಿದ್ದರೋ ಅಲೆಲ್ಲ ಬೇಲೂರು ಗ್ರಾಮ ಪಂಚಾಯಿತಿಯು ಎಚ್ಚರಿಕೆಯ ಫಲಕಗಳನ್ನು ಹಾಕಿ ದಂಡ ವಿಧಿಸುವ ಮತ್ತು ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನು ನೀಡಿದೆ. ಆದರೂ ಇದ್ಯಾವುದನ್ನು ಪರಿಗಣಿಸದ ಕೆಲವರು, ಕತ್ತಲಾಗುತ್ತಿದ್ದಂತೆ ವಾಹನಗಳಲ್ಲಿ ಬಂದು ಕಸ ಎಸೆದು ಹೋಗುತ್ತಿರುವುದು ಮಾಮೂಲಾಗಿದೆ. ಈ ಬಗ್ಗೆ ಕೆಲವೊಮ್ಮೆ ಕಸ ಹಾಕುವವರನ್ನು ತಡೆದು ನಿಲ್ಲಿಸಿ ಕೇಳಿದಾಗ ದರ್ಪ, ಉಡಾಫೆಯಿಂದ ಮಾತನಾಡುತ್ತಾರೆ. ನಾನು ಸರ್ಕಾರದ ಜಾಗದಲ್ಲಿ ಕಸ ಹಾಕಿದ್ದೇನೆ ಏನು ಮಾಡುತ್ತಿಯೋ ಮಾಡಿಕೊ ಎನ್ನುತ್ತಾರೆ.  ಇಂಥವರಿಗೆ ತಿಳಿ ಹೇಳಲು ಪ್ರಯತ್ನಿಸಿದ ನಮ್ಮ ಪ್ರಯತ್ನವೆಲ್ಲ ವ್ಯರ್ಥವಾಗಿದೆ ಎಂದು ರೈತ ಅನ್ನದಾನಿ ಬೇಸರ ವ್ಯಕ್ತಪಡಿಸಿದರು.

” ಈ ವ್ಯಾಪ್ತಿ ನಗರಸಭೆಗೆ ಸೇರಿಲ್ಲ. ಬೇಲೂರು ಗ್ರಾಮ ಪಂಚಾಯಿತಿಗೆ ಸೇರಿದೆ. ಆದರೂ ನಗರಸಭೆಯವರು ಕಸ ವಿಲೇವಾರಿಗೆ ವಾಹನ ಮತ್ತು ಸಿಬ್ಬಂದಿಯನ್ನು ಕಳಿಸುತ್ತಾರೆ. ನಗರದ ಹೊರವಲಯದಲ್ಲಿರುವ ಹೊಸ ಬಡಾವಣೆಗಳ ನಿವಾಸಿಗಳು ಕಸದ ವಾಹನಕ್ಕೆ ಕಸ ಹಾಕದಷ್ಟು ನಿರ್ಲಕ್ಷ ತಾಳಿದ್ದಾರೆಂದರೆ ಅಂತಹವರನ್ನು ನಾಗರಿಕರೆನ್ನಲು ಸಾಧ್ಯವೇ?.”

-ಅನ್ನದಾನಿ, ರಾಮನಹಳ್ಳಿ ಜಮೀನಿನ ರೈತ

” ಬೇಲೂರು ಗ್ರಾಮ ಪಂಚಾಯಿತಿ ಆಡಳಿತ ಈ ಬಗ್ಗೆ ಆದ್ಯ ಗಮನ ನೀಡಬೇಕಿದೆ. ಕೇವಲ ಬೋರ್ಡ್ ಹಾಕಿ ಕುಳಿತರೆ ಪ್ರಯೋಜನವಿಲ್ಲ. ಕಸ ಎಸೆಯುವವರನ್ನು ಕಂಡು ಹಿಡಿದು ದಂಡ ವಿಧಿಸುವ ಕೆಲಸವಾಗಬೇಕು. ಆಗ ಬೇರೆಯವರೂ ಎಚ್ಚೆತ್ತುಕೊಳ್ಳುತ್ತಾರೆ. ನಾಗರಿಕರು ಕೂಡ ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುವ ಅಪಾಯಗಳನ್ನು ಅರಿತು ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ವೈಜ್ಞಾನಿಕ ವಿಲೇವಾರಿಗೆ ಮುಂದಾಗಬೇಕು.”

-ಎಚ್.ಆರ್.ಅಶೋಕ್‌ಕುಮಾರ್, ಅಧ್ಯಕ್ಷರು, ನಗರದ ಹೊರವಲಯದ ಬಡಾವಣೆಗಳ ಅಭಿವೃದ್ಧಿ ಸಂಘ

ಆಂದೋಲನ ಡೆಸ್ಕ್

Recent Posts

INS vs NZ | ಮಿಚೆಲ್‌ ಅಬ್ಬರಕ್ಕೆ ರಾಹುಲ್‌ ಶತಕ ವ್ಯರ್ಥ : ಭಾರತಕ್ಕೆ ಸೋಲು

ರಾಜ್‌ಕೋಟ್ : ಡೆರಿಲ್ ಮಿಚೆಲ್ ಅಮೋಘ ಶತಕ (131) ಹಾಗೂ ವಿಲ್ ಯಂಗ್ (87) ಅರ್ಧಶತಕದ ನೆರವಿನಿಂದ ಆತಿಥೇಯ ಭಾರತ…

5 hours ago

ವಾಹನ ಸವಾರರು ಹೆಲ್ಮೆಟ್‌ ಬಳಸುತ್ತಿದ್ದಾರೆಯೇ? : ಜಾಗೃತಿ ಮೂಡಿಸಲು ಬಂದ ಯಮಧರ್ಮ

ಮೈಸೂರು : ನಗರದ ಹೃದಯ ಭಾಗವಾದ ಕೆ.ಆರ್.ವೃತ್ತದಲ್ಲಿ ಗಂಧದಗುಡಿ ಫೌಂಡೇಶನ್ ಮತ್ತು ನಗರ ಸಂಚಾರ ಪೊಲೀಸ್ ಸಂಯುಕ್ತಾಶ್ರಯದಲ್ಲಿ ಸಂಕ್ರಾಂತಿ ಹಬ್ಬದ…

6 hours ago

ಬಳ್ಳಾರಿ ಗಲಭೆ | ಪಾದಯಾತ್ರೆಗೆ ಬಿಜೆಪಿಯಲ್ಲಿ ಭಿನ್ನಮತ

ಬೆಂಗಳೂರು : ಬ್ಯಾನರ್ ಅಳವಡಿಕೆ ಸಂಬಂಧಪಟ್ಟ ಬಳ್ಳಾರಿಯಲ್ಲಿ ನಡೆದ ಗಲಭೆ ಖಂಡಿಸಿ ಪಾದಯಾತ್ರೆ ನಡೆಸುವ ವಿಷಯದಲ್ಲಿ ಬಿಜೆಪಿಯೊಳಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.…

7 hours ago

ವರ್ಕ್ ಫ್ರಮ್ ಹೋಮ್ ಕೆಲಸ | ಮಹಿಳೆಗೆ 9.7 ಲಕ್ಷ ರೂ. ವಂಚನೆ

ಮೈಸೂರು: ವರ್ಕ್ ಫ್ರಂ ಹೋಂ ಕೆಲಸಕ್ಕೆ ಸೇರಿದ ಮಹಿಳೆ ನಂತರ ನಕಲಿ ಕಂಪೆನಿಯವರ ಮಾತನ್ನು ಕೇಳಿ ಷೇರು ಮಾರುಕಟ್ಟೆಯಲ್ಲಿ ಹಣ…

7 hours ago

ಎರಡು ಪ್ರತ್ಯೇಕ ಅಪಘಾತ : ಇಬ್ಬರು ಸಾವು

ಮೈಸೂರು : ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೆಳವಾಡಿ ಹಾಗೂ ಕಡಕೊಳ ಬಳಿ ನಡೆದಿದೆ. ಮೊದಲನೇ…

7 hours ago

ಸಂಕ್ರಾಂತಿಗೆ ಸಾಂಸ್ಕೃತಿಕ ನಗರಿ ಸಜ್ಜು : ಎಲ್ಲೆಲ್ಲೂ ಶಾಪಿಂಗ್ ಸಡಗರ

ಮೈಸೂರು : ವರ್ಷದ ಮೊದಲ ಹಬ್ಬ ಸುಗ್ಗಿ ಸಂಕ್ರಾತಿ ಹಿನ್ನೆಲೆ ನಗರದಲ್ಲಿ ಸಂಭ್ರಮ ಮನೆ ಮಾಡಿದ್ದು, ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ…

8 hours ago