Andolana originals

ನೆಲದಾಳದ ನೀರು ಕೃತಿ ಲೋಕಾರ್ಪಣೆ

ನೀರಿನ ಬಾಂಧವ್ಯ, ಅನುಭವನ್ನು ಬಟ್ಟಿ ಇಳಿಸಿರುವ ಶ್ರೀಧರ್‌ ಹೆಗಡೆ

ಶ್ರೀಧರ್‌ ಭಟ್
ನಂಜನಗೂಡು: ತಮ್ಮ ೩೫ ವರ್ಷಗಳ ಜಲದಾಳದ ನೀರಿನ ಅನುಭವವದ ಅರಿವನ್ನು ಪುಸ್ತಕ ರೂಪದಲ್ಲಿ ಬಟ್ಟಿ ಇಳಿಸಿ ಹೊರತಂದಿರುವವರು ಮೈಸೂರು ನಗರದ ನಿವಾಸಿ ಶ್ರೀಧರ್ ಹಗಡೆಯವರು. ‌

ಸ್ವತಃ ಭೂಗರ್ಭ ಶಾಸದಲ್ಲಿ ಶ್ರೀಧರ್ ಎಂ. ಎಸ್ಸಿ. ಮುಗಿಸಿ, ಓದುತ್ತಿದ್ದಾಗಲೇ ತಮ್ಮ ಅಧ್ಯಯನಕ್ಕಾಗಿ ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದ ಶ್ರೀಧರ ಹೆಗಡೆಯವರು, ಈಗ ತಮ್ಮ ಸುದೀರ್ಘ ಜೀವನದ ನೀರಿನ ಸೆಲೆಗಳ ಮಹತ್ವವನ್ನು ತಮ್ಮ ‘ನೆಲದಾಳದ ನೀರು’ ಕೃತಿಯಲ್ಲಿ ತೆರದಿಟ್ಟಿದ್ದಾರೆ.

ಧಾರವಾಡ ವಿವಿಯಲ್ಲಿ ಭೂಗರ್ಭ ಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿ ಗಳಿಸಿದ ಇವರು, ತಮ್ಮ ವೈಯಕ್ತಿಕ ಸಾಮರ್ಥ್ಯದಿಂದ ಕೇಂದ್ರೀಯ ಅಂತರ್ಜಲ ಮಂಡಳಿಯ ಅಧಿಕಾರಿಯಾಗಿ ೩೫ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ, ಈಗ ನಿವೃತ್ತರಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನೆಲೆಸಿದ್ದಾರೆ.

ತಮ್ಮ ವೃತ್ತಿ ಜೀವನದಲ್ಲಿ ತಾವು ಕಂಡ ತಮ್ಮ ನೀರಿನ ಬಾಂಧವ್ಯ, ಅನುಭವವನ್ನು ‘ನೆಲದಾಳದ ನೀರು’ ಕೃತಿಯ ಮೂಲಕ ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯ ಮಾಡಿದ್ದಾರೆ. ಅಂತರ್ಜಲ ಕ್ಷೀಣಿಸುತ್ತಿರುವ ಈ ಕಾಲದಲ್ಲಿ ಕೃಷಿ ನೀರಿಗಾಗಿ ೮೦೦ ಅಡಿಯಿಂದ ಸಾವಿರಾರು ಅಡಿಗಳವರೆಗೆ ಭೂಮಿಯನ್ನು ಕೊರೆದರೂ ನೀರು ಸಿಗುತ್ತದೆ ಎಂಬ ಭರವಸೆ ಇಲ್ಲದ ಈ ಪರಿಸ್ಥಿತಿಯಲ್ಲಿ ಈ ನೆಲದಾಳದ ನೀರು ಕೃತಿ ಕೃಷಿಕರಿಗೆ ಅತ್ಯಂತ
ವರದಾನವಾಗಿದೆ ಎಂದೇ ಹೇಳಬಹುದಾಗಿದೆ.

ಅಧುನಿಕ ವಿಜ್ಞಾನದ ಅನುಭವಕ್ಕೆ ಸಮನಾಗಿ ಭಾರತೀಯ ಪುರಾತನವಾದ ಜಲಸಂಸ್ಕೃತಿಯ ಬೇರುಗಳ ಅನುಭವವನ್ನು ದಾಖಲೆ ರೂಪದಲ್ಲಿ ಈ ಪುಸ್ತಕದಲ್ಲಿ ಹಿಡಿದಿಟ್ಟಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಬಿದ್ರಕಾನು ಎಂಬ ಪುಟ್ಟಹಳ್ಳಿಯ ಕೃಷಿ ಮನೆತನದ ಶ್ರೀಧರ ಹೆಗಡೆಯವರ ಶ್ರಮ ಸಾರ್ತಕವಾಗಿದೆ.

ನಗರಗಳಲ್ಲಿ ಜನದಟ್ಟಣೆ ಹೆಚ್ಚಾದಂತೆ ಅಂತರ್ಜಲದ ಸಮತೋಲನಾ ವ್ಯತ್ಯಾಸವಾಗಿ ಅದರಿಂದ ಆಗಬಹುದಾದ ಅನಾಹುತಗಳು ನಾಯಿ ಕೊಡೆಗಳಂತೆ ನಿರ್ಮಾಣವಾಗುತ್ತಿರುವ ಕೊಳವೆ ಬಾವಿಗಳು, ಇದನ್ನು ತಪ್ಪಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅತ್ಯಂತ ನಿಖರವಾಗಿ ಭೂಗರ್ಭದಲ್ಲಿ ನೀರಿಗಾಗಿ ಲಭ್ಯವಿರುವ ಮಾರ್ಗಸೂಚಿಯನ್ನು ತಮ್ಮ ಕೃತಿಯಲ್ಲಿ ಅಡಕಗೊಳಿಸಿರುವುದು ಈ ಕೃತಿಯ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.

ನೀರಿನ ಅನಿವಾರ್ಯತೆ ಹಾಗೂ ಅದರ ಮಿತಬಳಕೆ, ಉಪಯೋಗವಾದ ನೀರಿನ ಪುನರ್ ಬಳಕೆಗಳ ಕುರಿತಂತೆ ಸ್ಪಷ್ಟ ಸಂದೇಶವೂ ಈ ಕೃತಿಯಲ್ಲಿ ಅಡಕವಾಗಿದೆ. ಭಾರತದ ಅತ್ಯಂತ ಪ್ರಾಚೀನ ಗ್ರಂಥಗಳಾದ ವರಹಾ ಮಿಹಿರಾಚಾರ್ಯರ ಅಂತರ್ಜಲ ಶೋಧನಾ ಮಾಹಿತಿಗಳನ್ನು ಸ್ಪಷ್ಟವಾಗಿ ಕನ್ನಡದಲ್ಲಿ ಉಲ್ಲೇಖಿಸಿದ್ದರಿಂದ ಅಂತರ್ಜಲದ ಹುಡುಕಾಟಲ್ಲಿರುವವರಿಗೆ, ಕೊಳವೆ ಬಾವಿ ತೊಡಿಸುವವರಿಗೆ ಈ ಪುಸ್ತಕ ಆ ಬಗೆಗಿನ ಮಾಹಿತಿಯ ಕಣಜವಾಗಿದೆ.

ಆಂದೋಲನ ಡೆಸ್ಕ್

Recent Posts

ಮಕ್ಕಳನ್ನು ಪ್ರಚೋದಿಸಬೇಡಿ, ಸರಿಯಾದ ದಾರಿ ತೋರಿಸಿ: ಪ್ರಧಾನಿ ಮೋದಿ ಮಹತ್ವದ ಸಂದೇಶ

ನವದೆಹಲಿ: ನೀಟ್‌-ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ…

2 hours ago

ಪ್ರಧಾನಿ ನಿವಾಸದ ಎದುರು ರಾಹುಲ್‌, ಪ್ರಿಯಾಂಕಾ ಪ್ರತಿಭಟನೆ

ನವದೆಹಲಿ: ದೆಹಲಿಯಲ್ಲಿ ಸಿಜೆಪಿ ಬೆಂಬಲಿಗರ ಮೇಲಿನ ಪೊಲೀಸರ ಕ್ರಮ ಖಂಡಿಸಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಂದು ಪ್ರಧಾನಿ…

2 hours ago

ಖಾಸಗಿ ಆಸ್ಪತ್ರೆಗೆ ಸೋನಮ್‌ ವಾಂಗ್ಚುಕ್‌ ಸ್ಥಳಾಂತರಕ್ಕೆ ದೆಹಲಿ ಹೈಕೋರ್ಟ್‌ ಸೂಚನೆ

ನವದೆಹಲಿ: ಪರೀಕ್ಷಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಜೂನ್.‌28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್‌ ವಾಂಗ್ಚುಕ್‌ ಅವರನ್ನು ಇಲ್ಲಿನ ಸಫ್ದರ್‌ಜಂಗ್‌…

3 hours ago

ಹಾರಂಗಿ ಜಲಾಶಯ ಭರ್ತಿಗೆ 8 ಅಡಿ ಬಾಕಿ: ಅನ್ನದಾತರ ಮೊಗದಲ್ಲಿ ಮಂದಹಾಸ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಹಾರಂಗಿ ಜಲಾಶಯಕ್ಕೆ 3 ಸಾವಿರಕ್ಕೂ…

4 hours ago

ಹುಣಸೂರು: ಇಬ್ಬರು ಮಕ್ಕಳು, ಹೆಂಡತಿಯನ್ನು ಕೊಂದು ಪತಿ ಆತ್ಮಹತ್ಯೆ

ಮೈಸೂರು: ಇಬ್ಬರು ಮಕ್ಕಳು ಹಾಗೂ ಹೆಂಡತಿಯನ್ನು ಕೊಂದು ಬಳಿಕ ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.…

4 hours ago

ಇಂದು ಚಲೋ ಸಂಸದ್ ಮುಂದುವರಿಯಲಿದೆ: ಅಭಿಜಿತ್‌ ದೀಪ್ಕೆ ಘೋಷಣೆ

ನವದೆಹಲಿ: ಇಂದು ತಮ್ಮ ಪ್ರತಿಭಟನೆ ಹಾಗು ಚಲೋ ಸಂಸದ್‌ ಮುಂದುವರಿಯಲಿದೆ ಎಂದು ಕಾಕ್ರೋಚ್‌ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ…

7 hours ago