Andolana originals

ನೆಲದಾಳದ ನೀರು ಕೃತಿ ಲೋಕಾರ್ಪಣೆ

ನೀರಿನ ಬಾಂಧವ್ಯ, ಅನುಭವನ್ನು ಬಟ್ಟಿ ಇಳಿಸಿರುವ ಶ್ರೀಧರ್‌ ಹೆಗಡೆ

ಶ್ರೀಧರ್‌ ಭಟ್
ನಂಜನಗೂಡು: ತಮ್ಮ ೩೫ ವರ್ಷಗಳ ಜಲದಾಳದ ನೀರಿನ ಅನುಭವವದ ಅರಿವನ್ನು ಪುಸ್ತಕ ರೂಪದಲ್ಲಿ ಬಟ್ಟಿ ಇಳಿಸಿ ಹೊರತಂದಿರುವವರು ಮೈಸೂರು ನಗರದ ನಿವಾಸಿ ಶ್ರೀಧರ್ ಹಗಡೆಯವರು. ‌

ಸ್ವತಃ ಭೂಗರ್ಭ ಶಾಸದಲ್ಲಿ ಶ್ರೀಧರ್ ಎಂ. ಎಸ್ಸಿ. ಮುಗಿಸಿ, ಓದುತ್ತಿದ್ದಾಗಲೇ ತಮ್ಮ ಅಧ್ಯಯನಕ್ಕಾಗಿ ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದ ಶ್ರೀಧರ ಹೆಗಡೆಯವರು, ಈಗ ತಮ್ಮ ಸುದೀರ್ಘ ಜೀವನದ ನೀರಿನ ಸೆಲೆಗಳ ಮಹತ್ವವನ್ನು ತಮ್ಮ ‘ನೆಲದಾಳದ ನೀರು’ ಕೃತಿಯಲ್ಲಿ ತೆರದಿಟ್ಟಿದ್ದಾರೆ.

ಧಾರವಾಡ ವಿವಿಯಲ್ಲಿ ಭೂಗರ್ಭ ಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿ ಗಳಿಸಿದ ಇವರು, ತಮ್ಮ ವೈಯಕ್ತಿಕ ಸಾಮರ್ಥ್ಯದಿಂದ ಕೇಂದ್ರೀಯ ಅಂತರ್ಜಲ ಮಂಡಳಿಯ ಅಧಿಕಾರಿಯಾಗಿ ೩೫ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ, ಈಗ ನಿವೃತ್ತರಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನೆಲೆಸಿದ್ದಾರೆ.

ತಮ್ಮ ವೃತ್ತಿ ಜೀವನದಲ್ಲಿ ತಾವು ಕಂಡ ತಮ್ಮ ನೀರಿನ ಬಾಂಧವ್ಯ, ಅನುಭವವನ್ನು ‘ನೆಲದಾಳದ ನೀರು’ ಕೃತಿಯ ಮೂಲಕ ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯ ಮಾಡಿದ್ದಾರೆ. ಅಂತರ್ಜಲ ಕ್ಷೀಣಿಸುತ್ತಿರುವ ಈ ಕಾಲದಲ್ಲಿ ಕೃಷಿ ನೀರಿಗಾಗಿ ೮೦೦ ಅಡಿಯಿಂದ ಸಾವಿರಾರು ಅಡಿಗಳವರೆಗೆ ಭೂಮಿಯನ್ನು ಕೊರೆದರೂ ನೀರು ಸಿಗುತ್ತದೆ ಎಂಬ ಭರವಸೆ ಇಲ್ಲದ ಈ ಪರಿಸ್ಥಿತಿಯಲ್ಲಿ ಈ ನೆಲದಾಳದ ನೀರು ಕೃತಿ ಕೃಷಿಕರಿಗೆ ಅತ್ಯಂತ
ವರದಾನವಾಗಿದೆ ಎಂದೇ ಹೇಳಬಹುದಾಗಿದೆ.

ಅಧುನಿಕ ವಿಜ್ಞಾನದ ಅನುಭವಕ್ಕೆ ಸಮನಾಗಿ ಭಾರತೀಯ ಪುರಾತನವಾದ ಜಲಸಂಸ್ಕೃತಿಯ ಬೇರುಗಳ ಅನುಭವವನ್ನು ದಾಖಲೆ ರೂಪದಲ್ಲಿ ಈ ಪುಸ್ತಕದಲ್ಲಿ ಹಿಡಿದಿಟ್ಟಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಬಿದ್ರಕಾನು ಎಂಬ ಪುಟ್ಟಹಳ್ಳಿಯ ಕೃಷಿ ಮನೆತನದ ಶ್ರೀಧರ ಹೆಗಡೆಯವರ ಶ್ರಮ ಸಾರ್ತಕವಾಗಿದೆ.

ನಗರಗಳಲ್ಲಿ ಜನದಟ್ಟಣೆ ಹೆಚ್ಚಾದಂತೆ ಅಂತರ್ಜಲದ ಸಮತೋಲನಾ ವ್ಯತ್ಯಾಸವಾಗಿ ಅದರಿಂದ ಆಗಬಹುದಾದ ಅನಾಹುತಗಳು ನಾಯಿ ಕೊಡೆಗಳಂತೆ ನಿರ್ಮಾಣವಾಗುತ್ತಿರುವ ಕೊಳವೆ ಬಾವಿಗಳು, ಇದನ್ನು ತಪ್ಪಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅತ್ಯಂತ ನಿಖರವಾಗಿ ಭೂಗರ್ಭದಲ್ಲಿ ನೀರಿಗಾಗಿ ಲಭ್ಯವಿರುವ ಮಾರ್ಗಸೂಚಿಯನ್ನು ತಮ್ಮ ಕೃತಿಯಲ್ಲಿ ಅಡಕಗೊಳಿಸಿರುವುದು ಈ ಕೃತಿಯ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.

ನೀರಿನ ಅನಿವಾರ್ಯತೆ ಹಾಗೂ ಅದರ ಮಿತಬಳಕೆ, ಉಪಯೋಗವಾದ ನೀರಿನ ಪುನರ್ ಬಳಕೆಗಳ ಕುರಿತಂತೆ ಸ್ಪಷ್ಟ ಸಂದೇಶವೂ ಈ ಕೃತಿಯಲ್ಲಿ ಅಡಕವಾಗಿದೆ. ಭಾರತದ ಅತ್ಯಂತ ಪ್ರಾಚೀನ ಗ್ರಂಥಗಳಾದ ವರಹಾ ಮಿಹಿರಾಚಾರ್ಯರ ಅಂತರ್ಜಲ ಶೋಧನಾ ಮಾಹಿತಿಗಳನ್ನು ಸ್ಪಷ್ಟವಾಗಿ ಕನ್ನಡದಲ್ಲಿ ಉಲ್ಲೇಖಿಸಿದ್ದರಿಂದ ಅಂತರ್ಜಲದ ಹುಡುಕಾಟಲ್ಲಿರುವವರಿಗೆ, ಕೊಳವೆ ಬಾವಿ ತೊಡಿಸುವವರಿಗೆ ಈ ಪುಸ್ತಕ ಆ ಬಗೆಗಿನ ಮಾಹಿತಿಯ ಕಣಜವಾಗಿದೆ.

ಆಂದೋಲನ ಡೆಸ್ಕ್

Recent Posts

ಪಕ್ಷದ ಅಧ್ಯಕ್ಷನಾಗಿ ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ನಾನು ಪಕ್ಷದ ಅಧ್ಯಕ್ಷನಾಗಿ ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ. ಪಕ್ಷಕ್ಕಾಗಿ ಎಲ್ಲವನ್ನೂ ಮಾಡಿದ್ದೇನೆ. ನಾನು ಸ್ಟೇಜ್ ಮೇಲೆ ಕೂತು…

25 mins ago

ನಾಳೆ ದೆಹಲಿಗೆ ತೆರಳಲಿದ್ದಾರೆ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಅವರು ನಾಳೆ ದೆಹಲಿಗೆ ತೆರಳಲಿದ್ದಾರೆ. ಡಿಸೆಂಬರ್‌.27ರಂದು ದೆಹಲಿಯ ಇಂದಿರಾ…

55 mins ago

ಚಾಮರಾಜನಗರದಲ್ಲಿ ಬೋನಿಗೆ ಬಿದ್ದ ಹುಲಿ

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದ್ದು, ದೇಪಾಪುರ ಗ್ರಾಮದ ಹೊರವಲಯದಲ್ಲಿ ಹುಲಿಯೊಂದು ಬೋನಿಗೆ ಬಿದ್ದಿದೆ. ಹುಲಿಯನ್ನು ನೋಡಲು…

2 hours ago

ರಾಜ್ಯದಲ್ಲಿ ಬೆಳಗಿನ ವೇಳೆ ದಟ್ಟ ಮಂಜು: ಹವಾಮಾನ ತಜ್ಞರು ಹೇಳಿದ್ದಿಷ್ಟು.!

ಬೆಂಗಳೂರು: ರಾಜ್ಯದಲ್ಲಿ ತೀವ್ರ ಚಳಿ, ಶೀತಗಾಳಿಯ ಜೊತೆಗೆ ಬೆಳಗಿನ ವೇಳೆ ಕೆಲವೆಡೆ ದಟ್ಟವಾದ ಮಂಜು ಆವರಿಸುತ್ತಿದೆ. ಬೆಳಗಿನ ವೇಳೆಯಲ್ಲಿ ದಟ್ಟವಾದ…

2 hours ago

ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣ: ಸಿಎಂ ಪಿಣರಾಯಿ ವಿಜಯನ್‌ ಹೇಳಿದ್ದಿಷ್ಟು.!

ತಿರುವನಂತಪುರಂ: ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದ ಆರೋಪಿಗಳ ಜೊತೆಗೆ ಸೋನಿಯಾ ಗಾಂಧಿ ನಂಟಿದೆ ಎಂದು ಸಿಎಂ ಪಿಣರಾಯಿ ವಿಜಯನ್‌…

3 hours ago

ಬಹುನಿರೀಕ್ಷಿತ ಮಾರ್ಕ್‌ ಹಾಗೂ 45 ಸಿನಿಮಾ ಬಿಡುಗಡೆ

ಸ್ಯಾಂಡಲ್‌ವುಡ್‌ನಲ್ಲಿ ಇಂದು ಕ್ರಿಸ್‌ಮಸ್‌ ಹಬ್ಬದ ಸಡಗರದ ನಡುವೆ ಎರಡು ಬಹುನಿರೀಕ್ಷಿತ ಸಿನಿಮಾಗಳು ಅಬ್ಬರದಿಂದ ತೆರೆಗೆ ಬಂದಿವೆ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌,…

3 hours ago