ಕಿಕ್ಕೇರಿ ಸ್ವಾಮಿಗೆ ವಂಶದ ಬಳುವಳಿಯಾಗಿ ಬಂದಿರುವ ಕಲೆ ‘
ಮೈಸೂರು: ಈ ಕಲೆಯಿಂದ ಬಿಡಿಸಿಕೊಳ್ಳಲಾಗದ ನಂಟು… ಬದುಕು ಕಟ್ಟಿಕೊಡದಿದ್ದರೂ ಕಲೆಯ ಮೇಲಿನ ಪ್ರೀತಿ, ಅಭಿಮಾನ ಗಣಪತಿ ವಿಗ್ರಹಗಳನ್ನು ತಯಾರಿಸಲು ಉತ್ತೇಜಿಸುತ್ತದೆ… ಅದೂ ಪರಿಸರ ಸ್ನೇಹಿಯಾಗಿರುವ ಮಣ್ಣಿನ ಮೂರ್ತಿಗಳು ಅವು… ಹಾಗಾಗಿಯೇ ಸುಮಾರು 30 ವರ್ಷಗಳಿಂದಲೂ ಹಬ್ಬದ ವೇಳೆಗೆ ಇಡೀ ಕುಟುಂಬದವರು ಈ ಕಾಯಕದಲ್ಲಿ ತನ್ಮಯರಾಗಿ ತೊಡಗುತ್ತಾರೆ. ಗಳಿಸಿದಷ್ಟೇ ಆದಾಯಕ್ಕೆ ತೃಪ್ತಿಪಟ್ಟುಕೊಳ್ಳುತ್ತಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ವಾಸಿಸುತ್ತಿರುವ ಸ್ವಾಮಿ ಅವರೇ ಈ ಶ್ರಮಜೀವಿ. ಅವರಿಗೆ ಗಣೇಶ ತಯಾರಿಕೆ ವಂಶ ಪಾರಂಪರವಾಗಿ ಬಂದಿರುವ ಕಲೆ. ಆದರೆ, ಇದರಿಂದ ನಿತ್ಯದ ಬದುಕು ಸಾಗಿಸುವುದು ಕಠಿಣವಾಗಿಬಿಟ್ಟಿತು. ಹಾಗಾಗಿ ಜೀವನಕ್ಕೆ ಬೇರೆ ದುಡಿಮೆಯ ದಾರಿ ಕಂಡುಕೊಂಡಿದ್ದಾರೆ. ಆದರೆ, ಗೌರಿ- ಗಣೇಶ ಹಬ್ಬದ ಸಮಯದಲ್ಲಿ ಮಾತ್ರ ಮಣ್ಣಿನ ಗಣಪನ ತಯಾರಿಕೆಗೆ ಟೊಂಕ ಕಟ್ಟಿ ನಿಲ್ಲುತ್ತಾರೆ. ಅವರಿಗೆ ಇಡೀ ಕುಟುಂಬ ಸಹಕಾರ ನೀಡುತ್ತದೆ.
ವಿಗ್ರಹಕ್ಕೆ ನೈಸರ್ಗಿಕ ಸುಗಂಧ ದ್ರವ್ಯ ಬಳಕೆ
ಸ್ವಾಮಿ ಅವರು ಮಣ್ಣಿನ ಗಣಪತಿ ಮೂರ್ತಿ ತಯಾರಿಕೆಯಲ್ಲಿ ನೈಸರ್ಗಿಕ ಸುಗಂಧವನ್ನು ಸೇರಿಸುತ್ತಾರೆ. ಇದು ಗಣಪತಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ಉತ್ತಮಗೊಳಿಸುತ್ತದೆ. ಪ್ರತಿಮೆಗೆ ವಾಟರ್ ಪೇಯಿಂಟ್ ಬಳಸದೆ, ಆಯಿಲ್ ಪೇಯಿಂಟ್ ಉಪಯೋಗಿಸುತ್ತಾರೆ. ನಂತರ ಗಣಪತಿಯ ಮುಖದಲ್ಲಿ ಕಣ್ಣುಗಳು, ದಂತಗಳು ಮತ್ತಿತರ ಚಿತ್ತಾರಗಳನ್ನು ಮೂಡಿಸುತ್ತಾರೆ.
ಸ್ವಾಮಿ ತಯಾರಿಸುವ ವಿಗ್ರಹ ಪ್ರಸಿದ್ಧಿ:
ಸ್ವಾಮಿ ಅವರ ಮೂರ್ತಿ ತಯಾರಿಕೆ ಮತ್ತು ಬಣ್ಣ ಹಾಕುವ ಕಾರ್ಯವು ಕಿಕ್ಕೇರಿ ಪಟ್ಟಣದಲ್ಲಿ ಬಹಳ ಪ್ರಸಿದ್ಧವಾಗಿದೆ.
ಹಿಂದೆ ಕೂಡು ಕುಟುಂಬದಲ್ಲಿದ್ದಾಗಲೇ ಸ್ವಾಮಿ ಅವರಿಗೆ ಗಣಪನ ತಯಾರಿಕೆ ಕಲೆ ಕರಗತವಾಗಿತ್ತು. ಮದುವೆಯಾದ ನಂತರ ದಂಪತಿ ಪ್ರತ್ಯೇಕವಾಗಿ ವಾಸಿಸಲು ಆರಂಭಿ ಸಿದರು. ಕಲೆಯನ್ನು ಬಿಡದೆ ಗಣಪನನ್ನು ತಯಾರಿಸಿ ಮಾರಾಟ ಮುಂದುವರಿಸಿದ್ದರು. ಅವರಿಗೆ ಪತ್ತಿ ಕಲಾವತಿ ಸಹಕಾರ ನೀಡಿ ದರು. ಈ ಕೆಲಸ ಹೊಟ್ಟೆತುಂಬಿಸು ವುದು ಕಷ್ಟವಾದಾಗ ಸ್ವಾಮಿ ಅವರು, ಮನೆಗಳಿಗೆ ಬಣ್ಣ ತುಂಬುವ ಕೆಲಸ ಶುರು ಮಾಡಿದರು.
ಅಲ್ಲದೆ, ಕಲಾವತಿ ಅವರು ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಗಣಪತಿ ತಯಾರಿಕೆ ಯನ್ನು ಮುಂದುವರಿಸಿ ದ್ದಾರೆ. ಸ್ವಾಮಿ ದಂಪತಿ ಜೊತೆ ಅವರ ಪುತ್ರ ಮೋಕ್ಷಿತ್ ಕೂಡ ಗಣಪ ವಿಗ್ರಹ ತಯಾರಿ ಸುವುದನ್ನು ಆಸಕ್ತಿಯಿಂದ ಕಲಿಯುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ, ಮಣ್ಣಿನ ಗಣಪತಿಯ ತಯಾರಿಕೆಯಲ್ಲಿ ಪರಿಸರ ಸ್ನೇಹಿ ತತ್ವಗಳು ಗಾಳಿಗೆ ತೂರುತ್ತಿರುವುದರಿಂದ, ಪರಿಸರದ ಪಾಲನೆಯ ದೃಷ್ಟಿಯಿಂದ ಮಣ್ಣಿನ ಗಣಪತಿ ಮೂರ್ತಿಯನ್ನೇ ಹೆಚ್ಚಾಗಿ ಪೂಜಿಸಿ ಪರಿಸರಕ್ಕೆ ಹಾನಿ ಮಾಡದಂತೆ ಹಬ್ಬ ಆಚರಿಸಲು ಜನತೆಮುಂದಾಗಬೇಕು.
-ಸ್ವಾಮಿ, ಕಿಕ್ಕೇರಿ, ಮಂಡ್ಯ ಜಿಲ್ಲೆ.
ಮಂಡ್ಯ ಜಿಲ್ಲೆಯ ಮುತ್ತತ್ತಿಯಲ್ಲಿ ಕಾವೇರಿ ನದಿ ನೀರಿಗೆ ಇಳಿದು ಸೆಲ್ಛಿ ತೆಗೆದುಕೊಳ್ಳಲು ಹೋದ ಒಂದೇ ಕುಟುಂಬದ ನಾಲ್ವರು ಹಾಗೂ ಕಾರು…
ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರ ಮೇಲೆ ಜಾ.ದಳ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಎಸೆದಿದ್ದು, ಈಗಾಗಲೇ ಆ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.…
ಸರ್ಕಾರದ ಯಾವುದೇ ಯೋಜನೆ, ಕಾರ್ಯಕ್ರಮ, ಸವಲತ್ತು ಮೊದಲು ದಲಿತ, ದಮನಿತ, ಶೋಷಿತ ವರ್ಗಕ್ಕೆ ತಲುಪಬೇಕು. ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆ…
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ನಿರ್ಮಾಣ ಮಾಡುವ ಮೊದಲು ಮತ್ತೊಮ್ಮೆ ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸಿ…
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ನೀಡಿದ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಹಣ, ಆಭರಣಗಳ ಕಳ್ಳತನ ಪ್ರಕರಣ ರಾಮಭಕ್ತರ ವಿಶ್ವಾಸವನ್ನು…
ಎಚ್.ಎಸ್.ದಿನೇಶ್ ಕುಮಾರ್ ಮೈಸೂರಿನ ಶ್ರೀರಾಂಪುರದ ಉದ್ಯಾನದಲ್ಲಿರುವ ಶೌಚಾಲಯದ ದುಸ್ಥಿತಿ ಮೈಸೂರು: ಜನರ ಲಕ್ಷಾಂತರ ರೂ. ತೆರಿಗೆ ಹಣವನ್ನು ವ್ಯಯಿಸಿ ಕಟ್ಟಿಸಿರುವ…