Andolana originals

ಗಣಪತಿ ವಿಗ್ರಹ ತಯಾರಿಕೆ ಬಿಡಿಸಲಾಗದ ಬಂಧ

ಕಿಕ್ಕೇರಿ ಸ್ವಾಮಿಗೆ ವಂಶದ ಬಳುವಳಿಯಾಗಿ ಬಂದಿರುವ ಕಲೆ ‘

ಮೈಸೂರು: ಈ ಕಲೆಯಿಂದ ಬಿಡಿಸಿಕೊಳ್ಳಲಾಗದ ನಂಟು… ಬದುಕು ಕಟ್ಟಿಕೊಡದಿದ್ದರೂ ಕಲೆಯ ಮೇಲಿನ ಪ್ರೀತಿ, ಅಭಿಮಾನ ಗಣಪತಿ ವಿಗ್ರಹಗಳನ್ನು ತಯಾರಿಸಲು ಉತ್ತೇಜಿಸುತ್ತದೆ… ಅದೂ ಪರಿಸರ ಸ್ನೇಹಿಯಾಗಿರುವ ಮಣ್ಣಿನ ಮೂರ್ತಿಗಳು ಅವು… ಹಾಗಾಗಿಯೇ ಸುಮಾರು 30 ವರ್ಷಗಳಿಂದಲೂ ಹಬ್ಬದ ವೇಳೆಗೆ ಇಡೀ ಕುಟುಂಬದವರು ಈ ಕಾಯಕದಲ್ಲಿ ತನ್ಮಯರಾಗಿ ತೊಡಗುತ್ತಾರೆ. ಗಳಿಸಿದಷ್ಟೇ ಆದಾಯಕ್ಕೆ ತೃಪ್ತಿಪಟ್ಟುಕೊಳ್ಳುತ್ತಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ವಾಸಿಸುತ್ತಿರುವ ಸ್ವಾಮಿ ಅವರೇ ಈ ಶ್ರಮಜೀವಿ. ಅವರಿಗೆ ಗಣೇಶ ತಯಾರಿಕೆ ವಂಶ ಪಾರಂಪರವಾಗಿ ಬಂದಿರುವ ಕಲೆ. ಆದರೆ, ಇದರಿಂದ ನಿತ್ಯದ ಬದುಕು ಸಾಗಿಸುವುದು ಕಠಿಣವಾಗಿಬಿಟ್ಟಿತು. ಹಾಗಾಗಿ ಜೀವನಕ್ಕೆ ಬೇರೆ ದುಡಿಮೆಯ ದಾರಿ ಕಂಡುಕೊಂಡಿದ್ದಾರೆ. ಆದರೆ, ಗೌರಿ- ಗಣೇಶ ಹಬ್ಬದ ಸಮಯದಲ್ಲಿ ಮಾತ್ರ ಮಣ್ಣಿನ ಗಣಪನ ತಯಾರಿಕೆಗೆ ಟೊಂಕ ಕಟ್ಟಿ ನಿಲ್ಲುತ್ತಾರೆ. ಅವರಿಗೆ ಇಡೀ ಕುಟುಂಬ ಸಹಕಾರ ನೀಡುತ್ತದೆ.

ವಿಗ್ರಹಕ್ಕೆ ನೈಸರ್ಗಿಕ ಸುಗಂಧ ದ್ರವ್ಯ ಬಳಕೆ
ಸ್ವಾಮಿ ಅವರು ಮಣ್ಣಿನ ಗಣಪತಿ ಮೂರ್ತಿ ತಯಾರಿಕೆಯಲ್ಲಿ ನೈಸರ್ಗಿಕ ಸುಗಂಧವನ್ನು ಸೇರಿಸುತ್ತಾರೆ. ಇದು ಗಣಪತಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ಉತ್ತಮಗೊಳಿಸುತ್ತದೆ. ಪ್ರತಿಮೆಗೆ ವಾಟರ್ ಪೇಯಿಂಟ್ ಬಳಸದೆ, ಆಯಿಲ್ ಪೇಯಿಂಟ್ ಉಪಯೋಗಿಸುತ್ತಾರೆ. ನಂತರ ಗಣಪತಿಯ ಮುಖದಲ್ಲಿ ಕಣ್ಣುಗಳು, ದಂತಗಳು ಮತ್ತಿತರ ಚಿತ್ತಾರಗಳನ್ನು ಮೂಡಿಸುತ್ತಾರೆ.

ಸ್ವಾಮಿ ತಯಾರಿಸುವ ವಿಗ್ರಹ ಪ್ರಸಿದ್ಧಿ:
ಸ್ವಾಮಿ ಅವರ ಮೂರ್ತಿ ತಯಾರಿಕೆ ಮತ್ತು ಬಣ್ಣ ಹಾಕುವ ಕಾರ್ಯವು ಕಿಕ್ಕೇರಿ ಪಟ್ಟಣದಲ್ಲಿ ಬಹಳ ಪ್ರಸಿದ್ಧವಾಗಿದೆ.

ಹಿಂದೆ ಕೂಡು ಕುಟುಂಬದಲ್ಲಿದ್ದಾಗಲೇ ಸ್ವಾಮಿ ಅವರಿಗೆ ಗಣಪನ ತಯಾರಿಕೆ ಕಲೆ ಕರಗತವಾಗಿತ್ತು. ಮದುವೆಯಾದ ನಂತರ ದಂಪತಿ ಪ್ರತ್ಯೇಕವಾಗಿ ವಾಸಿಸಲು ಆರಂಭಿ ಸಿದರು. ಕಲೆಯನ್ನು ಬಿಡದೆ ಗಣಪನನ್ನು ತಯಾರಿಸಿ ಮಾರಾಟ ಮುಂದುವರಿಸಿದ್ದರು. ಅವರಿಗೆ ಪತ್ತಿ ಕಲಾವತಿ ಸಹಕಾರ ನೀಡಿ ದರು. ಈ ಕೆಲಸ ಹೊಟ್ಟೆತುಂಬಿಸು ವುದು ಕಷ್ಟವಾದಾಗ ಸ್ವಾಮಿ ಅವರು, ಮನೆಗಳಿಗೆ ಬಣ್ಣ ತುಂಬುವ ಕೆಲಸ ಶುರು ಮಾಡಿದರು.

ಅಲ್ಲದೆ, ಕಲಾವತಿ ಅವರು ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಗಣಪತಿ ತಯಾರಿಕೆ ಯನ್ನು ಮುಂದುವರಿಸಿ ದ್ದಾರೆ. ಸ್ವಾಮಿ ದಂಪತಿ ಜೊತೆ ಅವರ ಪುತ್ರ ಮೋಕ್ಷಿತ್ ಕೂಡ ಗಣಪ ವಿಗ್ರಹ ತಯಾರಿ ಸುವುದನ್ನು ಆಸಕ್ತಿಯಿಂದ ಕಲಿಯುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ, ಮಣ್ಣಿನ ಗಣಪತಿಯ ತಯಾರಿಕೆಯಲ್ಲಿ ಪರಿಸರ ಸ್ನೇಹಿ ತತ್ವಗಳು ಗಾಳಿಗೆ ತೂರುತ್ತಿರುವುದರಿಂದ, ಪರಿಸರದ ಪಾಲನೆಯ ದೃಷ್ಟಿಯಿಂದ ಮಣ್ಣಿನ ಗಣಪತಿ ಮೂರ್ತಿಯನ್ನೇ ಹೆಚ್ಚಾಗಿ ಪೂಜಿಸಿ ಪರಿಸರಕ್ಕೆ ಹಾನಿ ಮಾಡದಂತೆ ಹಬ್ಬ ಆಚರಿಸಲು ಜನತೆಮುಂದಾಗಬೇಕು.
-ಸ್ವಾಮಿ, ಕಿಕ್ಕೇರಿ, ಮಂಡ್ಯ ಜಿಲ್ಲೆ.

ಆಂದೋಲನ ಡೆಸ್ಕ್

Recent Posts

‘ಎಬೋಲಾ ಆತಂಕ ಬೇಡ’ ; ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದೇವೆ : ಆರೋಗ್ಯ ಸಚಿವ

ಬೆಂಗಳೂರು : ಎಬೋಲಾ ಕುರಿತು ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಡಿ, ಜಾಗೃತಿ ಇರಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ…

8 hours ago

ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣಕ್ಕೆ ಸಿಎಂ ಶಂಕುಸ್ಥಾಪನೆ

ಆನೇಕಲ್‌ ಇಂಡ್ಲವಾಡಿಯ ಸೂರ್ಯನಗರದಲ್ಲಿ ನಿರ್ಮಾಣ ಬೆಂಗಳೂರು : ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ, ಪ್ರವಾಸೋದ್ಯಮ,…

10 hours ago

ಬೆಳಗಾವಿಯಲ್ಲಿ ಮಳೆಗಾಲದ ಅಧಿವೇಶನ

ಜುಲೈ ಮಧ್ಯಭಾಗದಲ್ಲಿ ಕಲಾಪ ಆರಂಬವಾಗುವ ನಿರೀಕ್ಷೆ ಬೆಂಗಳೂರು : ಇದೇ ಮೊದಲ ಬಾರಿಗೆ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಈ ಬಾರಿಯ ಮಳೆಗಾಲದ…

11 hours ago

ಕಾಕ್ರೋಚ್‌ ಪಾರ್ಟಿಯ ಎಕ್ಸ್‌, ಇನ್‌ಸ್ಟಾ, ವೆಬ್‌ಸೈಟ್‌ಗೆ ತಡೆ ; ಅಭಿಜಿತ್‌ ದಿಪ್ಕೆ

ನವದೆಹಲಿ :  ಬದಲಾವಣೆ ಬಯಸುತ್ತಿರುವ ಯುವ ಮನಸ್ಸುಗಳು  ಕಾಕ್ರೋಚ್​ ಜನತಾ ಪಾರ್ಟಿಯ ಮೂಲಕ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನೆ ಮಾಡುತ್ತಿವೆ.  ಈ…

12 hours ago

ಲಾರಿ ಹಾಗೂ ಕ್ರೂಸರ್‌ ವಾಹನದ ನಡುವೆ ಡಿಕ್ಕಿ: ಒಂದೇ ಕುಟುಂಬದ ಐವರು ಸಾವು

ಕಲಬುರ್ಗಿ: ಲಾರಿ ಹಾಗೂ ಕ್ರೂಸರ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐದು ಮಂದಿ ದಾರುಣವಾಗಿ ಮೃತಪಟ್ಟಿರುವ…

14 hours ago

ಎಬೋಲಾ ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ: ಸಚಿವ ದಿನೇಶ್‌ ಗುಂಡೂರಾವ್‌

ಬೆಂಗಳೂರು: ಎಬೋಲಾ ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌…

14 hours ago