ಮೈಸೂರಿನ ದಾಸಪ್ಪ ವೃತ್ತದಿಂದ ಧನ್ವಂತರಿ ರಸ್ತೆಯ ಬಲಗಡೆಯಲ್ಲಿ ಹೂ ಮಾರುತ್ತಾ, ರಂಗಣ್ಣ ನಾಯಕ ಅವರು ಪ್ರತಿ ದಿನ ಕುಳಿತಿರುತ್ತಾರೆ. ಬೆಳಿಗ್ಗೆ ಏಳು ಎಂಟು ಗಂಟೆಗೆ ಶುರುವಾಗುವ ಕೆಲಸ ಮುಗಿಯುವಾಗ ರಾತ್ರಿಯ ಹೊತ್ತಾಗಿರುತ್ತದೆ.
ರಂಗಣ್ಣ ನಾಯಕ ಮೈಸೂರಿಗೆ ಬಂದು ಹದಿನೈದು ವರ್ಷಗಳಾಗಿವೆ. ಈ ಮೊದಲು ಕೊಳ್ಳೇಗಾಲದಲ್ಲಿ ಹೂವಿನ ವ್ಯಾಪಾರವನ್ನೇ ಮಾಡುತ್ತಿದ್ದ ರಂಗಣ್ಣ ಅವರಿಗೆ ಮೈಸೂರಿಗೆ ಬರಬೇಕೆನಿಸಿದ್ದೇ ಅಚ್ಚರಿ. ತನ್ನೂರನ್ನು ಬಿಟ್ಟು, ಮೈಸೂರಿಗೆ ಬಂದಾಗ ಹೊಂದಿಕೊಳ್ಳುವುದಕ್ಕೆ ಕಷ್ಟ ವೆನಿಸಿದರೂ ವ್ಯಾಪಾರದ ಗುಟ್ಟು ತಿಳಿದ ಕಾರಣ ಬದುಕು ಸರಾಗವಾಯಿತು. ರಂಗಣ್ಣ ಅವರ ಬಳಿ ಸಿಗುವುದು ಚೆಂಡು ಹೂ ಮಾತ್ರ. ಮಲ್ಲಿಗೆ, ಸೇವಂತಿಗೆ ಹೂಗಳನ್ನು ಏಕೆ ಮಾರುತ್ತಿಲ್ಲವೆಂದರೆ ಇವರು ಹೇಳುವುದು ಲಾಭವಿಲ್ಲ ಎಂಬ ಒಂದೇ ಉತ್ತರ. ಮೈಸೂರಿನಲ್ಲಿ ನಿರಂತರವಾಗಿ ಸುರಿವ ಮಳೆಯ ನಡುವೆಯೂ ಟಾರ್ಪಲ್ ಕಟ್ಟಿಕೊಂಡು, ಹೂ ಮಾರುತ್ತಾರೆ. ದುಡ್ಡಿಗೆ ಚರ್ಚಿಸುವ ಗ್ರಾಹಕರ ಬಗೆಗಾಗಲಿ, ವ್ಯಾಪಾರವನ್ನು ಸಂಕಷ್ಟಕ್ಕೀಡುಮಾಡಿದ ಮಳೆಯ ಬಗೆಗಾಗಲಿ ಇವರಿಗೆ ಯಾವ ಬೇಸರವೂ ಇಲ್ಲ. ಮನುಷ್ಯ, ಪ್ರಕೃತಿ ಇರಬೇಕಾದದ್ದೇ ಹಾಗೆ ಎನ್ನುತ್ತಾರೆ.
ಕೊಳ್ಳೇಗಾಲ: ರಾತ್ರಿ ಕಂಠಪೂರ್ತಿ ಕುಡಿದ ಇಬ್ಬರ ನಡುವೆ ಹಳೇ ವೈಷಮ್ಯದಿಂದ ಕಲಹ ನಡೆದು ಓರ್ವನನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ…
ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಆರ್ಭಟ ಜೋರಾಗಿರುವ ಬೆನ್ನಲ್ಲೇ ಮುಂದಿನ ಒಂದು ವಾರದವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…
ಬೆಂಗಳೂರು: ಕಳೆದ ಹಲವು ದಿನಗಳಿಂದ ರಾಜ್ಯಾದ್ಯಂತ ತಾಪಮಾನ ಹೆಚ್ಚಾಗಿದ್ದು, ಜನರು ಹೈರಾಣಾಗಿದ್ದಾರೆ. ಸುಡು ಬಿಸಿಲು ಹಾಗೂ ಸೆಖೆಯಿಂದಾಗಿ ಕರುನಾಡ ಜನರು…
ಮುತ್ತತ್ತಿಯಲ್ಲಿ ನೀರಿಗಿಳಿದ ಯುವಕ ಸಾವು ಹಲಗೂರು: ಇಲ್ಲಿಗೆ ಸಮೀಪದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ತೀವ್ರ ಸೆಳೆತಕ್ಕೆ…
ರಾಯ್ಪುರ: ಛತ್ತೀಸ್ಗಢದಲ್ಲಿ ಖಾಸಗಿ ವಿಮಾನವೊಂದು ಪತನವಾಗಿದ್ದು, ಪೈಲಟ್ ಹಾಗೂ ಸಹ ಪೈಲಟರ್ ಇಬ್ಬರೂ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಛತ್ತೀಸ್ಗಢದ…
ಚೆನ್ನೈ: ಇರಾನ್-ಇಸ್ರೇಲ್ ಯುದ್ಧ ಶುರುವಾಗುವ ಮೊದಲು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದನ್ನು ಪಾಲಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ…