Andolana originals

ಚಂದದ ಬದುಕು ನೀಡಿದ ಚೆಂಡು ಹೂ ಬೇಸಾಯ

ಅನಿಲ್ ಅಂತರಸಂತೆ

ಬೇಸಾಯ ಎಂಬುದು ಈಗ ಯುವಕರಿಂದ ದೂರಾಗಿದೆ. ಅಲ್ಪಸ್ವಲ್ಪ ಜಮೀನು ಇದ್ದರಂತೂ ಅವರು ಜಮೀನಿನತ್ತ ಮುಖ ಮಾಡಿಯೂ ನೋಡುವುದಿಲ್ಲ. ಜಮೀನನ್ನು ಮಾರಾಟ ಮಾಡಿ ನಗರ ಭಾಗಗಳಲ್ಲಿ ಹೋಗಿ ನೆಲೆಸಿ ಬಿಡುತ್ತಾರೆ.

ಹೌದು, ಗ್ರಾಮೀಣ ಭಾಗಗಳಲ್ಲಿ ಈಗ ಕೃಷಿ ಬಿಟ್ಟು ನಗರಗಳತ್ತ ಹೋಗುವವರೇ ಹೆಚ್ಚು. ಅಲ್ಪಸ್ವಲ್ಪ ಭೂಮಿಯಲ್ಲಿ ಕೃಷಿ ಮಾಡಿ ಅದರಿಂದ ಲಾಭ ಪಡೆದು ಜೀವನ ಸಾಗಿಸು ವುದಾದರೂ ಹೇಗೆ? ಎಂಬ ಉದ್ದೇಶದಿಂದಲೇ ಕೃಷಿ ಬಿಡುವವರೇ ಹೆಚ್ಚಾಗಿದ್ದಾರೆ. ಅರ್ಧ ಎಕರೆ, ಮುಕ್ಕಾಲು ಎಕರೆ ಭೂಮಿಯಲ್ಲಿ ಕೃಷಿ ಬೆಳೆಯನ್ನು ಮಾರಾಟ ಮಾಡುವುದರಲ್ಲೇ ಬಂದ ಲಾಭವೆಲ್ಲಾ ಅಲ್ಲಿಯೇ ಖರ್ಚಾಗಿ ಹೋಗುತ್ತದೆ. ಹೀಗಿರುವ ಕೃಷಿಯಿಂದ ಆದಾಯ ಪಡೆದು ಜೀವನ ಸಾಗಿಸುವುದು ಕಷ್ಟದ ಕೆಲಸ. ಹೀಗಾಗಿಯೇ ಜಮೀನು ಮಾರಿ ನಗರಗಳತ್ತ ಮುಖ ಮಾಡಿಬಿಡುತ್ತಾರೆ. ಹೀಗೆ ಕೃಷಿ ತೊರೆದು ನಗರಗಳತ್ತ ಹೋಗುವವರ ಮಧ್ಯೆ ಎಚ್.ಡಿ. ಕೋಟೆ ತಾಲ್ಲೂಕಿನ ಮಾಚನಾಯಕನಹಳ್ಳಿ ಗ್ರಾಮದ ರೈತ ಗೋಪಾಲಶೆಟ್ಟಿ ಮಾದರಿಯಾಗಿದ್ದಾರೆ. ಇವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದು, ಮುಕ್ಕಾಲು ಎಕರೆ ಜಮೀನನ್ನು ಚೆಂಡು ಹೂ ಬೇಸಾಯಕ್ಕಾಗಿ ಮೀಸಲಿಟ್ಟು, ಹೂ ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸುವ ಮೂಲಕ ಮಾದರಿ ರೈತರ ಅನಿಸಿಕೊಂಡಿದ್ದಾರೆ.

ಗೋಪಾಲ ಶೆಟ್ಟಿಯವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಟೊಮೆಟೋ, ಚೊಟ್ಟು, ಮೆಂತ್ಯ, ಜೋಳ ಜತೆ ಚೆಂಡು ಹೂ ಬೆಳೆಯುವ ಮೂಲಕ ಲಾಭದಾಯಕ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಸಾಧಾರಣ ಆದಾಯ ವಿದ್ದ ಕೃಷಿಯಲ್ಲಿ ಕುಟುಂಬದವರೆಲ್ಲ ಸೇರಿ ದುಡಿಯುತ್ತಿದ್ದರು. ಈ ವೇಳೆ ಓಮ್ಮಿ ಆಕ್ಟಿವ್ ಹೆಲ್ತ್ ಟೆಕ್ನಾಲಜಿಸ್ ಕಂಪೆನಿಯ ಸಹಕಾರದಿಂದ ಕಂಪೆನಿಯಲ್ಲಿಯೇ ಚೆಂಡು ಹೂ ಬಿತ್ತನೆ ಬೀಜ, ಗೊಬ್ಬರ ಪಡೆದು ಚೆಂಡು ಹೂ ಬೇಸಾಯ ಆರಂಭಿಸಿದರು. ಸದ್ಯ ಗುಣಮಟ್ಟದ ಬೇಸಾಯ ಮಾಡುತ್ತಿರುವ ಗೋಪಾಲಶೆಟ್ಟಿ, ಪ್ರತಿ ಭಾರಿ 8-10 ಟನ್‌ಗಳಷ್ಟು ಹೂ ಬೆಳೆಯುತ್ತಾರೆ. ಕೆಲ ಬಾರಿ ಉತ್ತಮ ಮಳೆಯಾಗಿ ಸಕಾಲಕ್ಕೆ ಗೊಬ್ಬರ ನೀಡಿದರೆ 10-12 ಟನ್‌ನಷ್ಟು ಹೂ ಸಿಗಲಿದೆ.

ಓಮ್ಮಿ ಆಕ್ಟಿವ್ ಹೆಲ್ತ್‌ ಟೆಕ್ನಾಲಜಿಸ್ ಕಂಪೆನಿಯು ರೈತರಿಗೆ ಚೆಂಡು ಹೂ ಬಿತ್ತನೆ ಬೀಜ, ಗೊಬ್ಬರವನ್ನು ವಿತರಣೆ ಮಾಡುತ್ತಿದ್ದು, ಬೆಳೆಯನ್ನು ಜಮೀನಿಗೆ ನೇರವಾಗಿ ರೈತರಿಂದಲೇ ಖರೀದಿಸುತ್ತದೆ. ಅಲ್ಲದೆ ಕಂಪೆನಿಯ ತಜ್ಞರು, ಅಧಿಕಾರಿಗಳು ಆಗಾಗ್ಗೆ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಗುಣಮಟ್ಟವನ್ನು ಪರಿಶೀಲಿಸುತ್ತಾರೆ.

ಬೆಳೆಯನ್ನೂ ನೇರವಾಗಿ ರೈತರ ಭೂಮಿಯಿಂದಲೇ ಖರೀದಿಸುತ್ತಾರೆ. ಬೆಳೆ ಕೈಗೆ ಬಂದ ಬಳಿಕ ತಗುಲಿದ ಖರ್ಚು ಹಿಡಿದು ಬಂದ ಆದಾಯವನ್ನು ರೈತರಿಗೆ ನೇರವಾಗಿ ನೀಡುವುದರಿಂದ ರೈತರಿಗೆ ಮಾರುಕಟ್ಟೆಯ ಸಮಸ್ಯೆಯೂ ತಪ್ಪುತ್ತಿದೆ.
ania64936@gmail.com

ನಾನು ನಾಲೈದು ವರ್ಷಗಳಿಂದ ಚೆಂಡು ಹೂ ಬೇಸಾಯ ಮಾಡುತ್ತಿದ್ದೇನೆ. ಉತ್ತಮ ಲಾಭ ಇದೆ. ಕಂಪೆನಿಯ ಕಡೆಯಿಂದ ಪ್ರೋತ್ಸಾಹ ಚೆನ್ನಾಗಿದೆ. ಆರಂಭದಲ್ಲಿ ನಾನು ಬೆಳೆಯು ತ್ತಿದ್ದ ಬೆಳೆಗಳಿಗೆ ಹೋಲಿಸಿದರೆ ಚೆಂಡು ಹೂನಲ್ಲಿ ಹೆಚ್ಚಿನ ಲಾಭವಿದೆ. ಕಂಪೆನಿಯವರೇ ಸ್ಥಳಕ್ಕೆ ಬಂದು ಖರೀದಿ ಮಾಡುವುದರಿಂದ ಮಾರುಕಟ್ಟೆ ಸಮಸ್ಯೆಯೂ ಇಲ್ಲ.
-ಗೋಪಾಲ ಶೆಟ್ಟಿ, ರೈತ.

ಇತರೆ ಬೆಳೆಗಳಿಂತ ಚೆಂಡು ಹೂನಲ್ಲಿ ಲಾಭ ಇದೆ. ಮಳೆ ಚೆನ್ನಾಗಿ ಬಂದಷ್ಟು ಫಸಲು ಚೆನ್ನಾಗಿರಲಿದೆ. ಚೆಂಡು ಹೂನಿಂದ ನಮಗೆ ನಷ್ಟವಾಗಿಲ್ಲ. ನಾನು ನಮ್ಮ ತಂದೆ, ತಾಯಿ ಎಲ್ಲರೂ ಒಟ್ಟಾಗಿ ಜಮೀನಿನಲ್ಲಿ ಶ್ರಮಿಸುತ್ತೇವೆ. ಅಗತ್ಯವಿದ್ದಾಗ ಕೆಲಸಗಾರರನ್ನು ಕರೆದುಕೊಳ್ಳುತ್ತೇವೆ.
-ಚಿನ್ನ ಗೋಪಾಲ, ಗೋಪಾಲ ಶೆಟ್ಟಿಯವರ ಮಗ.

ತಾಲ್ಲೂಕಿನಲ್ಲಿ ಚೆಂಡು ಹೂ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಕಂಪೆನಿಯೇ ಸ್ಥಳಕ್ಕೆ ಬಂದು ಖರೀದಿ ಮಾಡುವುದರಿಂದ ಮಾರಕಟ್ಟೆಯ ಸಮಸ್ಯೆಯೂ ಇಲ್ಲ. ಅಗತ್ಯ ಬಿದ್ದಾಗ ತಜ್ಞರು, ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ರೈತರಿಗೆ ಅಗತ್ಯ ಸಲಹೆ ನೀಡುತ್ತಾರೆ.
-ಗಣೇಶ್, ಓಮ್ಮಿ ಆಕ್ಟಿವ್‌ ಹೆಲ್ತ್ ಟೆಕ್ನಾಲಜಿಸ್.

ಅನಿಲ್‌ ಅಂತರಸಂತೆ

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದಲ್ಲಿ ವಾಸಿಸುತ್ತಿರುವ ನಾನು 2019ರಲ್ಲಿ ಮೈಸೂರಿನ ಮಾನಸಗಂಗೋತ್ರಿ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ನನ್ನ ವಿದ್ಯಾಭ್ಯಾಸದ ಬಳಿಕ ಮೈಸೂರಿನ 'ಆಂದೋಲನ' ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಇದರೊಂದಿಗೆ ನಾನು ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕನಾಗಿದ್ದು, ದೇಶದ ವಿವಿಧ ಕಾಡುಗಳಲ್ಲಿ ಸಫಾರಿ ಮಾಡಿ ವನ್ಯಜೀವಿಗಳ ಛಾಯಾಚಿತ್ರ ಸೆರೆಹಿಡಿದು ಅವುಗಳ ಮೇಲೆ ಲೇಖನಗಳನ್ನು ಬರೆಯುವುದು, ಪ್ರವಾಸಿ ಲೇಖನಗಳನ್ನು ಬರೆಯುವುದು, ವನ್ಯಜೀವಿ ಸಂಬಂಧಿತ ಪುಸ್ತಕಗಳನ್ನು ಓದುವುದು ನನ್ನ ಹವ್ಯಾಸ.

Recent Posts

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…

6 hours ago

ಓದುಗರ ಪತ್ರ: ರಾಜಕೀಯ ಗದ್ದಲದ ಮುಂದೆ ಜನರ ಸಮಸ್ಯೆ ಗೌಣವಾಗಬಾರದು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…

6 hours ago

ಓದುಗರ ಪತ್ರ: ಸಾಹಿತ್ಯ ಸಮಾರಂಭದಲ್ಲಿ ವಿಷಯಾಂತರ ಏಕೆ?

ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…

6 hours ago

ಹಾಳಾಗಿರುವ ಜನರೇಟರ್; ಡಯಾಲಿಸಿಸ್ ರೋಗಿಗಳ ಪರದಾಟ

ವೈದ್ಯರು ಮೊಬೈಲ್ ಟಾರ್ಚ್ ‌ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…

6 hours ago

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ

ಮಂಜು ಕೋಟೆ ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ…

6 hours ago