ಪ್ರತಿದಿನ ರಾತ್ರಿ ಅರಮನೆಗೆ ದೀಪಾಲಂಕಾರ ಹೂವಿನಿಂದ ಶೃಂಗೇರಿ ದೇವಸ್ಥಾನದ
ಮಾದರಿ ನಿರ್ಮಾಣ ಪುಷ್ಪ ಪ್ರಿಯರ ಕಣ್ಮನ ಸೆಳೆಯಲಿರುವ ವಿವಿಧ ಮಾದರಿಗಳು
ಮೈಸೂರು:ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ ರವರೆಗೆ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಡಿ.೨೧ರಂದು ಸಂಜೆ ೪ ಗಂಟೆಗೆ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ಮೈಸೂರು ಅರಮನೆ ಮಂಡಳಿ ವತಿಯಿಂದ ಬೆಳಿಗ್ಗೆ ೧೦ ಗಂಟೆಯಿಂದ ರಾತ್ರಿ ೯ರವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಈ ಬಾರಿ ಸುಮಾರು ೨೫,೦೦೦ ವಿಭಿನ್ನ ಅಲಂಕಾರಿಕ ಹೂ ಕುಂಡಗಳು, ಮಾರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯ, ವರ್ಬಿನ, ಡೈಂಥಸ್, ಫ್ರೆಂಚ್ ಮಾರಿಗೋಲ್ಡ್, ಜಿನಿಯಾ ಪೆಲಂಬೂಡಿಯ, ಸನ್-ವರ್, ಜಪಾನ್ ಸನ್ಪ್ಲವರ್, ಆಲೇಕ್, ಸಿನೇರಿಯಾ, ಕಾಸ್ಮಸ್, ಪ್ಲಾಕ್ಸ್, ಕ್ಯಾಲೂಂಡಲ, ಗೋಪೆರಿಯನ್, ಮ್ಯಾಂಡೂವಿಲ, ಪಾಂಚಿಟಿಯ, ತುರೂನಿಯಂ, ಬಾಲ್ಸಂ, ಕಾಕ್ಸ ಕೊಂಬ್, ನಸ್ಟರ್ಸಿಯಂ, ಆಂಟಿರೈನಂ, ಬೋನ್ಸಾಯ್ ಗಿಡಗಳು, ಸೇರಿದಂತೆ ೩೫ ಜಾತಿಯ ಹೂವಿನ ಗಿಡಗಳು ಹಾಗೂ ಅಂದಾಜು ೪ ಲಕ್ಷ ವಿಧದ ಅಲಂಕಾರಿಕ ಹೂವುಗಳಿಂದ ಹಾಗೂ ಊಟಿ ಕಟ್ ಫ್ಲವರ್ಗಳಿಂದ ಅಲಂಕರಿಸಲಾಗಿರುತ್ತದೆ.
ಶೃಂಗೇರಿ ದೇವಸ್ಥಾನದ ಮಾದರಿಯನ್ನು ಹೂವಿನಿಂದ ರೂಪಿಸುವುದು ವಿಶೇಷ ಫಲ ಪುಷ್ಪ ಪ್ರದರ್ಶನದ ಪ್ರವೇಶ ದ್ವಾರ ಮತ್ತು ಹೊರ ಹೋಗುವ ದ್ವಾರಗಳಲ್ಲಿ ಗರಿಗಳಿಂದ ಚಪ್ಪರ ನಿರ್ಮಿಸಿ ಹೂವುಗಳಿಂದ ಅಲಂಕರಿಸಲಾಗುತ್ತದೆ. ಹೂಗಳಿಂದ ದಿ. ಸಾಲುಮರದ ತಿಮ್ಮಕ್ಕ ಅವರ ಚಿತ್ರ, ಸಿರಿಧಾನ್ಯ ದಿಂದ ಅಲಂಕರಿಸಿ ವೃಕ್ಷ ಮಾದರಿ ನಿರ್ಮಾಣ, ಅರಮನೆ ಮಂಡಳಿ ಕಚೇರಿಯಲ್ಲಿರುವ ಮೈಸೂರು ಸಂಸ್ಥಾನದ ಮುಮ್ಮಡಿ ಕೃಷ್ಣರಾಜ ಒಡೆಯರ್ ಮಾದರಿ ಚಿತ್ರವನ್ನು ಬೇಸಿಗೆ ಹೂವುಗಳಿಂದ ಅಲಂಕರಿಸಲಾಗುವುದು.
ಭಾರತ ಸಂವಿಧಾನ ಘೋಷ ವಾಕ್ಯಕ್ಕೆ ಹೂವಿನ ಅಲಂಕಾರ,ಹಣ್ಣು ಮತ್ತು ತರಕಾರಿಗಳಿಂದ ಗಣ್ಯ ವ್ಯಕ್ತಿಗಳು,ಪ್ರಾಣಿ ಪಕ್ಷಿಗಳು, ಶ್ರೀ ಕೃಷ್ಣ ಮತ್ತು ರಾಧೆ ಉಯ್ಯಾಲೆಯಲ್ಲಿ ಕುಳಿತು ವಿಹರಿಸುತ್ತಿರುವ ಮಾದರಿ, ಭಾರತದ ಮಹಿಳಾ ಕ್ರಿಕೆಟಿಗರು ಗೆದ್ದ ವಿಶ್ವಕಪ್ ಟ್ರೋಫಿ ಮಾದರಿ, ಕ್ರಿಕೆಟ್, ಖೋ ಖೋ, ಕಬಡ್ಡಿ, ವಿಶ್ವಕಪ್ ಕ್ರಿಕೆಟ್ ಗೆದ್ದ ಅಂಧ ಕ್ರಿಕೆಟ್ ಆಟಗಾರರ ಭಾವ ಚಿತ್ರಗಳನ್ನು ಡಿಜಿಟಲ್ ಬೋರ್ಡ್ನಿಂದ ಅಲಂಕರಿಸುವುದು, ೨೦೨೫ರ ಆಪರೇಷನ್ ಸಿಂಧೂರ್ ಮಾದರಿ ನಿರ್ಮಾಣ, ಛೋಟಾ ಭೀಮ್ ಮಾದರಿಯ ಚಿತ್ರವನ್ನು ಥರ್ಮಾ ಕೋಲ್ ಮತ್ತು ಹೂವುಗಳಿಂದ ಅಲಂಕರಿಸುವುದು, ಕಾಳಿಂಗ ಮರ್ಧನ ಮಾದರಿ, ಅಳಿಲು ಸೈಕಲ್ ಓಡಿಸುವ ಮಾದರಿ, ೨ ಹಂಸ ಮಾದರಿಯ ಸೆಲ್ಫಿ ಪಾಯಿಂಟ್ಗಳ ನಿರ್ಮಾಣ, ಮಕ್ಕಳ ಆಕ ರ್ಷಣೆಗೆ ವಿವಿಧ ಮಾದರಿಯ ಕೊಕ್ಕರೆ ಗಳು, ಪಕ್ಷಿಗಳು, ಲೇಡಿ ಬಗ್, ಮೊಲ, ಸ್ಕೈಲ್ ಹುಳುವಿನ ಆಕಾರದ ಚಿತ್ರ, ಮಾವಿನ ಹಣ್ಣಿನ ಮಾದರಿ ವೀಕ್ಷಣೆಗೆ ಲಭ್ಯವಿರುತ್ತದೆ. ಫಲ ಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಬರುವ ೫೦೦ ಮಂದಿ ಗಣ್ಯರು, ಸಾರ್ವಜನಿಕರಿಗೆ ಸಾಂಕೇತಿಕವಾಗಿ ಔಷಧಿ ಗಿಡಗಳನ್ನು ವಿತರಿಸಲಾಗುವುದು. ಶ್ರೀ ಜಯಚಾಮರಾಜ ಒಡೆಯರ್ ರಚಿಸಿರುವ ಕೀರ್ತನೆಗಳು ಮತ್ತು ಸಂಗೀತವನ್ನು ಆಲಿಸಬಹುದಾಗಿದೆ.
ಬೊಂಬೆಗಳ ಪ್ರದರ್ಶನ: ನವರಾತ್ರಿ ಸಂದರ್ಭ ಹಾಗೂ ವಿಶೇಷ ಸಂದರ್ಭಗಳಲ್ಲಿ ಮನೆಗಳಲ್ಲಿ ಬೊಂಬೆಗಳನ್ನು ಪ್ರದರ್ಶಿಸುವ ಆಯ್ದ ಐದು ಜನರನ್ನು ಆಹ್ವಾನಿಸಿ, ೫ ಬ್ಲಾಕ್ಗಳಲ್ಲಿ ಭವ್ಯ ಬೊಂಬೆ ಪ್ರದರ್ಶನ ಏರ್ಪಡಿಸಲಾಗಿದೆ.
” ಮೈಸೂರು ಅರಮನೆ ವಿದ್ಯುತ್ ದೀಪಾಲಂಕಾರ ರಾತ್ರಿ ೯ ರವರೆಗೂ ಇರುತ್ತದೆ. ಫಲಪುಷ್ಪ ಪ್ರದರ್ಶನದ ದಿನಗಳಲ್ಲಿ ಪ್ರತಿದಿನ ಸಂಜೆ ೫ ರಿಂದ ೯.೩೦ ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ. ಡಿ.೩೧ರಂದು ಪೊಲೀಸ್ ಬ್ಯಾಂಡ್ ಕಾರ್ಯಕ್ರಮವನ್ನು ರಾತ್ರಿ ೧೧ರಿಂದ ೧೨ ಗಂಟೆವರೆಗೆ ಏರ್ಪಡಿಸಲಾಗುತ್ತದೆ. ಹೊಸ ವರ್ಷಾಚರಣೆಯ ಪ್ರಯುಕ್ತ ರಾತ್ರಿ ೧೨ ರಿಂದ ೧೨.೧೫ ರವರೆಗೆ ಬಣ್ಣಗಳ ಚಿತ್ತಾರ ಮೂಡಿಸುವ ಶಬ್ದ ರಹಿತ ಹಸಿರು ಪಟಾಕಿ ಸಿಡಿಸುವ ಕಾರ್ಯಕ್ರಮವೂ ಇರಲಿದೆ.
“ಛಾಯಾಚಿತ್ರ, ವಿಡಿಯೋ ಪ್ರದರ್ಶನ ದಸರಾ ಅಂದು-ಇಂದು, ಒಡೆಯರ್ ಆಡಳಿತ ಹಾಗೂ ವಿಶ್ವ-ವಿಖ್ಯಾತ ನಾಡಹಬ್ಬವಾದ ಹಿಂದಿನ ಮೈಸೂರು ದಸರಾ, ಹಳೆಯ ದಸರಾವನ್ನು ಪ್ರಾರಂಭಿಸಿ ತಹಸಿಲ್ವರೆಗಿನ ಸಾಕ್ಷ ಚಿತ್ರ,ಛಾಯಾಚಿತ್ರ, ವಿಡಿಯೋ ಪ್ರದರ್ಶನ ಇರಲಿದೆ.”
ಬೆಳಗಾವಿ: ಮೈಸೂರು ನಗರದಲ್ಲಿರುವ ಚಾಮರಾಜೇಂದ್ರ ಮೃಗಾಲಯದಲ್ಲಿ 356 ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಕೇವಲ 9 ಮಂದಿ ಮಾತ್ರ ಖಾಯಂ ನೌಕರರಾಗಿದ್ದಾರೆ…
ಬೆಂಗಳೂರು: ವಿಧಾನಸಭೆಯಲ್ಲಿ ವಿಪಕ್ಷಗಳ ತೀವ್ರ ವಿರೋಧ ಹಾಗೂ ಗದ್ದಲದ ಮಧ್ಯೆ ಕರ್ನಾಟಕ ದ್ವೇಷಭಾಷಣ ಹಾಗೂ ದ್ವೇಷಾಪರಾಧಗಳ ಪ್ರತಿಬಂಧನ ಮಸೂದೆ 2025ನ್ನು…
ಬೆಳಗಾವಿ: ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವ್ಯಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ…
ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆ ಬಗ್ಗೆ ಪ್ರಸ್ತಾಪವಾಗಿದೆ. ಈ ಬಗ್ಗೆ ಸಾರಿಗೆ ಸಚಿವ…
ನವದೆಹಲಿ: ಲೋಕಸಭೆಯಲ್ಲಿ ವಿ-ಬಿಜಿ ರಾಮ್ ಜಿ ಮಸೂದೆ ಅಂಗೀಕಾರಗೊಂಡಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಇಂದು ಲೋಕಸಭೆಯು ರೋಜ್ಗಾರ್ ಮತ್ತು ಅಜೀವಿಕಾ…
ಬೆಳಗಾವಿ: ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗಳೇ ದರೋಡೆ, ಕಳ್ಳತನ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಬೇಲಿಯೇ ಎದ್ದು…