Andolana originals

ಮತ್ಸ್ಯಕ್ರಾಂತಿ: ಮೈಸೂರು ಜಿಲ್ಲೆಗೆ 11ನೇ ಸ್ಥಾನ

ಕೆ.ಬಿ.ರಮೇಶನಾಯಕ

ಜಿಲ್ಲೆಯಲ್ಲಿ ಸದ್ದಿಲ್ಲದೇ ಅಭಿವೃದ್ಧಿ ಕಾಣುತ್ತಿರುವ ಮೀನು ಕೃಷಿ 

ಕಾವೇರಿ, ಕಬಿನಿ, ನುಗು, ತಾರಕ ಜಲಾಶಯ ಹೊಂದಿರುವ ಮೈಸೂರು ಜಿಲ್ಲೆ

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಮೀನು ಸಾಕಾಣಿಕೆದಾರರ ಸಂಖ್ಯೆ

ಸುಮಾರು ೧೧,೩೧೪ ಕುಟುಂಬಗಳು ಮೀನು ಕೃಷಿಯಲ್ಲಿ ನಿರತ

೨೫,೯೮೮ ಮಂದಿ ಪೂರ್ಣಾವಧಿ ಮೀನುಗಾರರು

೧೯,೨೬೮ ಮಂದಿ ಅರೆಕಾಲಿಕ ಮೀನುಗಾರರು

ಮೈಸೂರು: ಹೃದಯ ಸಂಬಂಧಿ ಸಮಸ್ಯೆಯುಳ್ಳವರು, ಬುದ್ಧಿವಂತಿಕೆಗೆ ಸಹಕಾರಿಯಾಗುವ ಹಾಗೂ ಆರೋಗ್ಯಕ್ಕೆ ಹಿತಕರವಾದ ಪೌಷ್ಟಿಕಾಂಶವುಳ್ಳ ಮೀನು ಸವಿಯುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮೈಸೂರು ಜಿಲ್ಲೆಯಲ್ಲಿ ಸದ್ದಿಲ್ಲದೇ ನೀಲಿ ಕ್ರಾಂತಿ ನಡೆಯುತ್ತಿದ್ದು, ಮೀನುಗಾರಿಕೆಯಲ್ಲಿ ಮೈಸೂರು ರಾಜ್ಯದಲ್ಲೇ ೧೧ನೇ ಸ್ಥಾನದಲ್ಲಿದೆ.

ಕರಾವಳಿ ಭಾಗದಿಂದ ಬರುವ ಸಮುದ್ರದ ಮೀನು ಮಾರಾಟದ ಜತೆಗೆ ಸ್ಥಳೀಯವಾಗಿ ದೊರೆಯುವ ಮೀನುಗಳ ಮಾರಾಟ ಜಾಸ್ತಿ ಇರುವುದರಿಂದ ಮೀನು ಸಾಕಾಣಿಕೆದಾರರ ಪ್ರಮಾಣವೂ ಹೆಚ್ಚಾಗಿದೆ. ಇದ ರಿಂದಾಗಿ ಮೀನು ಮಾರುಕಟ್ಟೆ  ಮಳಿಗೆಗಳನ್ನು  ತೆರೆಯಲು ಅನೇಕರು ಪ್ರಸ್ತಾವನೆ ಸಲ್ಲಿಸಿ ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಸಬೇಕಾದ ಅನಿವಾರ್ಯ ನಿರ್ಮಾಣವಾಗಿದೆ.

ಮೈಸೂರು ಮಿಶ್ರ ಕೃಷಿಯ ಜಿಲ್ಲೆ. ಇಲ್ಲಿನ ನೀರಾವರಿ, ಮಳೆಯಾಶ್ರಿತ ಪ್ರದೇಶ ಸೇರಿದಂತೆ ಎಲ್ಲ ಮಾದರಿಯ ಕೃಷಿ ಚಟುವಟಿಕೆಗಳೂ ಇವೆ. ಇದರ ಜತೆಯಲ್ಲೇ ಇತ್ತೀಚಿನ ವರ್ಷಗಳಲ್ಲಿ ಮೀನು ಸಾಕಣೆಯತ್ತ ಗ್ರಾಮೀಣ ಭಾಗದ ಜನರು ವಿಶೇಷ ಆಸಕ್ತಿ ವಹಿಸುತ್ತಿದ್ದು, ಜಿಲ್ಲೆಯಲ್ಲಿ ಮೀನುಗಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.

ಸುಮಾರು ೧೧,೩೧೪ ಕುಟುಂಬಗಳು ಮೀನುಗಾರಿಕೆಯಲ್ಲಿ ತೊಡಗಿವೆ. ಈ ಪೈಕಿ ೨೫,೯೮೮ ಮಂದಿ ಪೂರ್ಣಾವಧಿ ಮೀನುಗಾರರಾದರೆ, ೧೯,೨೬೮ ಮಂದಿ ಅರೆಕಾಲಿಕವಾಗಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಟ್ಟಾರೆ ೪೫,೨೫೬ ಜನರು ಮೀನು ಕೃಷಿಯಮೂಲಕ ಜೀವನ ರೂಪಿಸಿಕೊಂಡಿದ್ದಾರೆ. ಸಹಕಾರ ಸಂಘಗಳಿಗೆ ನೆರವು: ಜಿಲ್ಲೆಯಲ್ಲಿ ಮೀನುಗಾರರ ಸಹಕಾರ ಸಂಘಗಳೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿವೆ. ಜಿಲ್ಲಾದ್ಯಂತ ೪೫ ಸಹಕಾರ ಸಂಘಗಳ ಅಡಿಯಲ್ಲಿ ೩,೮೮೮ ಸದಸ್ಯರು ಇದ್ದಾರೆ. ವೃತ್ತಿಪರ ಮೀನುಗಾರರ ಸಹಕಾರ ಸಂಘಗಳು ಖರೀದಿಸುವ ಮೀನು ಮರಿಗಳಿಗೆ ಶೇ.೫೦ರಷ್ಟು ಸಹಾಯಧನವೂ ಸಿಗುತ್ತಿದೆ. ರಾಜ್ಯ ಸರ್ಕಾರ ೨೫ ಸಹಕಾರ ಸಂಘಗಳಿಗೆ ಸೌಲಭ್ಯ ತಲುಪಿಸುವ ಗುರಿ ನಿಗದಿ ಮಾಡಿತ್ತು. ಮೈಸೂರಿನಲ್ಲಿ ೩೧ ಸಹಕಾರ ಸಂಘಗಳಿಗೆ ಸಹಾಯಧನ ನೀಡುವ ಮೂಲಕ ಶೇ.೧೨೪ರಷ್ಟು ಗುರಿ ಸಾಧನೆ ಮಾಡಲಾಗಿದೆ.

ಒಳನಾಡು ಮೀನುಗಾರಿಕೆ ಅಭಿವೃದ್ಧಿಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀನುಗಾರರಿಗೆ ಮೀನುಗಾರಿಕೆ ಸಲಕರಣೆಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಸರ್ಕಾರದಿಂದ ಅಕ್ಟೋಬರ್ ಅಂತ್ಯಕ್ಕೆ ೩೬.೨೪ ಲಕ್ಷ ರೂ. ಬಿಡುಗಡೆಯಾಗಿದ್ದು, ೩೩.೧೪ ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ. ಕೆರೆಗಳಲ್ಲಿ ಹೆಚ್ಚಿನ ಮೀನು ಕೃಷಿ: ಮೈಸೂರು ಜಿಲ್ಲೆಯ ಕಾವೇರಿ ಮತ್ತು ಕಪಿಲಾ ನದಿಗಳು ಹರಿಯುವ ಮತ್ತು ಸಂಗಮವಾಗುವ ಸಮೃದ್ಧ ಜಿಲ್ಲೆ. ೨೧೫ ಕಿಲೋ ಮೀಟರ್ ಜಲ ವಿಸ್ತೀರ್ಣವಿದೆ. ಇಲ್ಲಿನ ೧೨ ನದಿ ಭಾಗಗಳ ವಿಸ್ತೀರ್ಣದಲ್ಲಿ ಮೀನುಗಾರಿಕೆಗಾಗಿ ೧೦೫ ಲೈಸೆನ್ಸ್‌ಗಳನ್ನು ನೀಡಲಾಗಿದೆ. ವಿಶೇಷವೆಂದರೆ ಕೆರೆಗಳಲ್ಲಿ ಮೀನು ಸಾಕಣೆ ಮಾಡಲು ಜನರು ಆಸಕ್ತಿ ತೋರುತ್ತಿದ್ದು, ಭಾರಿ ಪೈಪೋಟಿಯೇ ಇದೆ. ಜಿಲ್ಲಾದ್ಯಂತ ೯೯ ಕೆರೆಗಳನ್ನು ಮೀನುಗಾರಿಕೆಗೆ ಪ್ರಾಶಸ್ತ್ಯ ಎಂದು ಗುರುತಿಸಲಾಗಿದ್ದು, ಈಗಾಗಲೇ ೮೮ ಕೆರೆಗಳನ್ನು ವಿಲೇವಾರಿ ಮಾಡಲಾಗಿದೆ. ಈ ಮೂಲಕ ಮೀನುಗಾರಿಕೆ ಇಲಾಖೆಗೆ ೭೩ ಲಕ್ಷ ರೂ.ಗಳಷ್ಟು ಆದಾಯವೂ ಹರಿದುಬಂದಿದೆ.

275 ಮಂದಿಗೆ ಮತ್ಸ್ಯಾಶ್ರಯ ಯೋಜನೆ ಮಂಜೂರು:  ರಾಜ್ಯ ಸರ್ಕಾರದ ‘ಮತ್ಸ್ಯಾಶ್ರಯ ಯೋಜನೆ’ಯಡಿ ೨೦೨೨-೨೩ನೇ ಸಾಲಿನಲ್ಲಿ ೧೪೮ ಮಂದಿಗೆ ಹಾಗೂ ೨೦೨೪-೨೫ನೇ ಅವಽಯಲ್ಲಿ ೨೭೫ ಮಂದಿಗೆ ಯೋಜನೆ ಮಂಜೂರಾಗಿದೆ. ‘ಪ್ರಧಾನಮಂತ್ರಿ ಮತ್ಸ್ಯ ಸಂಪದ’ ಯೋಜನೆಗೂ ಬೇಡಿಕೆ ಬಂದಿದ್ದು, ಮತ್ಸ್ಯ ಸಂಪದ ಯೋಜನೆಯಡಿ ನೀಡುವ ಸಬ್ಸಿಡಿ ಹೆಚ್ಚಾಗಿದೆ. ಇದಕ್ಕೆ ಕಡಿಮೆ ಬಂಡವಾಳ ಹಾಕಬೇಕಿದೆ. ಹಾಗಾಗಿ, ಈ ಯೋಜನೆಗೆ ಭಾರೀ ಬೇಡಿಕೆ ಉಂಟಾಗಿದೆ ಎಂದು ಹೇಳಲಾಗಿದೆ.

ನಂದಿನಿ-ಮೀನು ಬೂತ್‌ಗಳ ಸ್ಥಾಪನೆಗೆ ಪೈಪೋಟಿ: 

ಸರ್ಕಾರಿ ಜಾಗಗಳಲ್ಲಿ ನಂದಿನಿ ಮಳಿಗೆ ಹಾಗೂ ಮೀನು ಮಾರಾಟ ಮಳಿಗೆಗಳನ್ನು ತೆರೆಯಲು ಪೈಪೋಟಿ ಎದುರಾಗಿದೆ. ಖಾಸಗಿ ಜಾಗಕ್ಕಿಂತ ಸರ್ಕಾರಿ ಜಾಗಗಳಲ್ಲಿ ಸ್ಥಾಪಿಸಿದರೆ ಬಾಡಿಗೆ ಉಳಿತಾಯವಾಗಲಿದೆ. ಹೀಗಾಗಿ, ಪ್ರಮುಖ ಸರ್ಕಲ್, ಬಡಾವಣೆಗಳು, ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಜಾಗಗಳಲ್ಲಿ ಅವಕಾಶ ಮಾಡಿಕೊಡುವಂತೆ ಅರ್ಜಿ ಸಲ್ಲಿಸುತ್ತಿರುವುದು ಕಂಡುಬಂದಿದೆ.

” ವರ್ಷದಿಂದ ವರ್ಷಕ್ಕೆ ಮೀನಿನ ಖಾದ್ಯ ಸೇವಿಸುವವರ ಪ್ರಮಾಣ ಹೆಚ್ಚುತ್ತಿರುವುದರಿಂದ ಉತ್ಪಾದನೆಯೂ ಜಾಸ್ತಿಯಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕೊಳ ನಿರ್ಮಾಣ ಮಾಡಿ ಮೀನು ಮರಿ ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ಪ್ರೋತ್ಸಾಹಧನ ನೀಡಲಾಗುತ್ತದೆ. ಮತ್ಸ್ಯ ಸಂಪದ ಯೋಜನೆಗೂ ಜಿಲ್ಲೆಯಲ್ಲಿ ಭಾರೀ ಬೇಡಿಕೆ ಉಂಟಾಗಿದೆ.”

-ಮಂಜುನಾಥ್, ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ

ಆಂದೋಲನ ಡೆಸ್ಕ್

Recent Posts

ನಂ.ಗೂಡು | ಮತ್ತೆ ಕಳಚಿ ಬೀಳುತ್ತಿರುವ ಸೇತುವೆಯ ಸೀಲಿಂಗ್ ಕಾಂಕ್ರೀಟ್

ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…

15 mins ago

ರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ಯಾರೂ ಮಾಡಲು ಸಾಧ್ಯವಿಲ್ಲ : ಯಶ್

ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…

47 mins ago

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ : ಸಿಎಜಿ ವರದಿ

ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…

1 hour ago

ಶಾಸಕರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ : ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…

4 hours ago

ವಾರಣಾಸಿ ಏರ್‌ಫೋರ್ಟ್‌ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಆಕಸ್ಮಿಕ ಗುಂಡಿನ ದಾಳಿ ; ಇಬ್ಬರಿಗೆ ಗಾಯ

ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…

5 hours ago

ನೈಸ್ ಯೋಜನೆ ಸರ್ಕಾರದ ವಶಕ್ಕೆ ; ಮುಖ್ಯಮಂತ್ರಿ ಡಿಕೆಶಿಗೆ ಪತ್ರ ಬರೆದು ಒತ್ತಾಯಿಸಿದ ಹೆಚ್.ಡಿ.ಕುಮಾರಸ್ವಾಮಿ

ತಕ್ಷಣವೇ ನೈಸ್ ರಸ್ತೆ ಟೋಲ್ ಸಂಗ್ರಹಕ್ಕೆ ತಡೆ ಹಾಕಬೇಕು ಎಂದು ಕೇಂದ್ರ ಸಚಿವರ ಅಗ್ರಹ ಹೈಕೋರ್ಟ್ ಅಭಿಪ್ರಾಯದಂತೆ ನೈಸ್ ಯೋಜನೆಯನ್ನು…

5 hours ago