Andolana originals

ಫೈಜುಲ್ಲಾ + ನಟರಾಜ್ = ಫೈಜ್ನಟ್ರಾಜ್

ಪ್ರದೀಪ್ ಮುಮ್ಮಡಿ

ಸೈಯದ್ ಫೈಜುಲ್ಲಾ ಅವರ ಬದುಕಿನ ರೀತಿಯೇ ಅಪೂರ್ವ ಹಾಗೂ ಅನುಕರಣೀಯವಾದದ್ದು. ೧೯೭೨ರಲ್ಲಿ ದಾವಣಗೆರೆಯ ಸಂತೆಬೆನ್ನೂರಿನ ಬಾಬಾ ಸಾಹೇಬ್ ಹಾಗೂ ಖಮರುನ್ನೀಸ ಎಂಬ ದಂಪತಿ ಮಗನಾಗಿ ಸೈಯದ್ ಫೈಜುಲ್ಲಾ ಜನಿಸಿದರು. ಆ ಊರಿನವರೇ ಆದ ಶಿವಪ್ಪ, ಗಿರಿಜಮ್ಮ ಎಂಬ ದಂಪತಿಯ ಮಗ ನಟರಾಜ ಅವರೊಂದಿಗೆ ಬಾಲ್ಯದಿಂದ ಮೂಡಿಬಂದ ಅವಿನಾಭಾವ ಸ್ನೇಹವಿತ್ತು. ಎಲ್ಲದಕ್ಕೂ ಕೊರತೆಯಿದ್ದ ಆ ದಿನಗಳಲ್ಲಿ ಬಡತನವೇ ಇವರಿಬ್ಬರನ್ನು ಬಯಸಿತ್ತು. ಬಡತನವನ್ನೇ ಸವಾಲಾಗಿ ಸ್ವೀಕರಿಸಿ ಒಟ್ಟಿಗೆ ಓದಿ ಇಬ್ಬರೂ ಸರ್ಕಾರಿ ಕೆಲಸಕ್ಕೆ ಸೇರಿದರು.

೧೯೯೭ರ ಒಂದು ಕರಾಳ ದಿನದಂದು ಚಳ್ಳಕೆರೆಯಲ್ಲಿ ನಡೆದ ಅಪಘಾತದಲ್ಲಿ ನಟರಾಜ್ ತೀರಿ ಕೊಂಡರು. ವಯಸ್ಸಾದ ತಂದೆ ತಾಯಿ ಅಕ್ಕ-ತಂಗಿ ತಮ್ಮ ಇದ್ದ ತುಂಬು ಕುಟುಂಬದ ಜವಾಬ್ದಾರಿ ಯನ್ನು ಹೊತ್ತಿದ್ದ ನಟರಾಜ್ ಇದ್ದಕ್ಕಿದ್ದಂತೆತೀರಿ ಕೊಂಡದ್ದು, ಇಡೀ ಕುಟುಂಬಕ್ಕೆ ಬದುಕು ಆತ್ಮವಿಶ್ವಾಸವನ್ನೇ ಇಲ್ಲವಾಗಿಸಿತು. ಅಂತಹ ಕಷ್ಟದ ಸಂದರ್ಭದಲ್ಲಿ ಮನುಷ್ಯ ಪ್ರೀತಿಯನ್ನು ನಂಬಿದ್ದ ಫೈಜುಲ್ಲಾ ಆ ಕುಟುಂಬದ ಮಗನ ಸ್ಥಾನ ಅರ್ಥಾತ್ ನಟರಾಜ್ ಅವರ ಜಾಗವನ್ನು ತುಂಬಿದರು. ಅಷ್ಟೇ ಅಲ್ಲದೆ, ಸ್ನೇಹಿತನ ಹೆಸರನ್ನೇ ತನ್ನ ಹೆಸರಿನೊಂದಿಗೆ ಕಾನೂನಾತ್ಮಕವಾಗಿ ಸೇರಿಸಿ ಅಂದಿನಿಂದ ಫೈಜ್ನಟ್ರಾಜ್ ಸಂತೆಬೆನ್ನೂರು ಆಗಿ ನಿಜವಾದ ಸ್ನೇಹಕ್ಕೆ ಮಾದರಿಯಾದರು.

ನಟರಾಜ್ ಸಾವಿನ ನಂತರ ಅದೇ ಕೊರಗಿನಲ್ಲಿ ಅವರ ತಂದೆಯೂ ಅಸುನೀಗಿದರು. ನಟರಾಜರ ಸಾವಿನ ನಂತರ ಬಂದ ಸ್ವಲ್ಪ ಹಣದಿಂದ ಗಿರಿಜಮ್ಮ ಅವರಿಗೆ ಎರಡು ಎಮ್ಮೆಗಳನ್ನು ತೆಗೆದುಕೊಟ್ಟು ಆರ್ಥಿಕ ಸ್ವಾವಲಂಬನೆಗೆ ನೆರವಾದರು. ಕ್ರಮೇಣ ಮಗ ಮತ್ತು ಗಂಡನ ಚಿಂತೆಯಲ್ಲಿ ಗಿರಿಜಮ್ಮನೂ ತೀರಿಕೊಂಡರು. ಎಂತಹ ಕಠಿಣ ಸಂದರ್ಭದಲ್ಲೂ ಸ್ನೇಹಿತನ ಕುಟುಂಬದೊಂದಿಗೆ ನಿಂತ ಫೈಜ್ನಟ್ರಾಜ್ ಇತರ ಸ್ನೇಹಿತರೊಟ್ಟಿಗೆ ಸೇರಿ ಗುಡಿಸಲಿದ್ದ ಜಾಗದಲ್ಲಿ ಕೆಂಪಂಚಿನ ಮನೆಯನ್ನು ನಿರ್ಮಿಸಿದರು. ನಟರಾಜ್ ಅವರ ತಂಗಿ ಮದುವೆ ಮಾಡಿದ್ದಲ್ಲದೆ, ತಮ್ಮನಿಗೂ ವಿವಾಹ ಮಾಡುವ ಮೂಲಕ ಸಾಂಸಾರಿಕ ಜವಾಬ್ದಾರಿಯನ್ನು ಕಟ್ಟಿಕೊಟ್ಟರು.

ಈಗ ಎಲ್ಲರೂ ಸುಸ್ಥಿತಿಯಲ್ಲಿದ್ದಾರೆ. ಈಗಲೂ ಯಾವುದೇ ಹಬ್ಬ ಹರಿದಿನಗಳಲ್ಲಿ ನಟರಾಜ್ ಹಾಗೂ ಫೈಜ್ನಟ್ರಾಜ್ ಅವರ ಕುಟುಂಬಗಳ ಸದಸ್ಯರು ಒಟ್ಟಿಗೆ ಸೇರುತ್ತಾರೆ. ನೆಂಟರು ಇಷ್ಟರಾಗಿ ಒಂದೇ ಕುಟುಂಬವಾಗಿದ್ದಾರೆ. ಹಿಂದೂ – ಮುಸ್ಲಿಂ ತಾಕಲಾಟಗಳು ಅತಿರೇಕದಲ್ಲಿರುವ ಪ್ರಸಕ್ತ ಸಂದರ್ಭದಲ್ಲಿ ನೀವು ಹೀಗೆ ಬದುಕಲು ಪ್ರೇರಣೆ ಏನು? ಎಂದು ಕೇಳಿದರೆ, ‘ಹಿಂದೂ ಮುಸ್ಲಿಂಗಿಂತ ಸದ್ಯಕ್ಕೆ ಮನುಷ್ಯನಾಗುವುದು ಮುಖ್ಯ ಗೆಳೆಯ ಹುಲ್ಲಲ್ಲಿ ಮುಳ್ಳು ಬೇಡ ದನಕರುಗಳನ್ನೂ ಪ್ರೀತಿಸುವುದು ಮುಖ್ಯ ಗೆಳೆಯ ಎದೆಯಲೊಂದು ತುಟಿಯಲೊಂದು ಮಾತುಗಳೇಕೆ ಹೇಳು ನಾಲ್ಕು ದಿನದ ಬದುಕು, ಬೇಕಾಗಿ ಬಾಳುವುದು ಮುಖ್ಯ ಗೆಳೆಯ ಮಸೀದಿ ಮಂದಿರ ಚರ್ಚುಗಳಿರಲಿ ಅವುಗಳ ಪಾಡಿಗೆ ಬಿಟ್ಟು ಬಿಡು ನೆಮ್ಮದಿ ಎಂದರೆ ಈಗ ಹಸಿದವನಿಗನ್ನವನಿಕ್ಕುವುದು ಮುಖ್ಯ ಗೆಳೆಯ’ ಎಂದು ಕವಿತೆ ಹೇಳುತ್ತಾರೆ. ಹೀಗೆ ಸೌಹಾರ್ದ ಬದುಕಿನ ಮಾದರಿಯಂತಿರುವ ಫೈಜ್ನಟ್ರಾಜ್ ತಮ್ಮ ಸಾಹಿತ್ಯ ಸೇವೆಯಿಂದಲೂ ನಾಡಿಗೆ ಬೇಕಾದವರಾಗಿದ್ದಾರೆ.

ಸೃಜನಶೀಲ ಬರವಣಿಗೆಯಲ್ಲಿ ತಮ್ಮನ್ನು ತಾವು ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಫೈಜ್ನಟ್ರಾಜ್ ಸಂತೆ ಬೆನ್ನೂರು ಕಾವ್ಯನಾಮದೊಂದಿಗೆ ಬರೆಯು ತ್ತಾರೆ. ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಇದುವರೆಗೂ ೧೩ ಕೃತಿಗಳನ್ನು ರಚಿಸಿದ್ದಾರೆ. ಸದ್ದು ಮಾಡದೆ, ಸುದ್ದಿಯಾಗದೇ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡವರು.

ಫೈಜ್ ಅವರು ತಮ್ಮ ಕನ್ನಡ ಅಧ್ಯಾಪಕ ಡಿ.ಎಸ್. ರಾಮಚಂದ್ರ ಮತ್ತು ಗೆಳೆಯ ನಟರಾಜರಿಂದ ಸಾಹಿತ್ಯಕ ಸ್ಛೂರ್ತಿ ಪಡೆದವರು. ಹಲವಾರು ಪ್ರಶಸ್ತಿಗಳೂ ಅವರನ್ನು ಅರಸಿ ಬಂದಿವೆ. ಮನುಷ್ಯನಿಗೆ ಮಾನವೀಯಳಜಿ ಮುಖ್ಯವೇ ಹೊರತು ಜಾತಿ ಅಥವಾ ಮತ್ಯಾವುದೂ ಅಲ್ಲ! ಅನ್ನುವ ಫೈಜ್ನಟ್ರಾಜ್ ಬದುಕು ಇತರರಿಗೆ ಮಾದರಿ.

ಸಾಮರಸ್ಯಕ್ಕೆ ಬೇರೆ ಹೆಸರು ಬೇಕೆ?:  ನಟರಾಜ್ ಸಾವಿನ ನಂತರ ಅದೇ ಕೊರಗಿನಲ್ಲಿ ಅವರ ತಂದೆಯೂ ಅಸುನೀಗಿದರು. ನಟರಾಜರ ಸಾವಿನ ನಂತರ ಬಂದ ಸ್ವಲ್ಪ ಹಣದಿಂದ ಗಿರಿಜಮ್ಮ ಅವರಿಗೆ ಎರಡು ಎಮ್ಮೆಗಳನ್ನು ತೆಗೆದುಕೊಟ್ಟು ಆರ್ಥಿಕ ಸ್ವಾವಲಂಬನೆಗೆ ನೆರವಾದರು. ಕ್ರಮೇಣ ಮಗ ಮತ್ತು ಗಂಡನ ಚಿಂತೆಯಲ್ಲಿ ಗಿರಿಜಮ್ಮನೂ ತೀರಿಕೊಂಡರು.ಎಂತಹ ಕಠಿಣ ಸಂದರ್ಭದಲ್ಲೂ ಸ್ನೇಹಿತನ ಕುಟುಂಬದೊಂದಿಗೆ ನಿಂತ ಫೈಜ್ನಟ್ರಾಜ್ ಇತರ ಸ್ನೇಹಿತರೊಟ್ಟಿಗೆ ಸೇರಿ ಗುಡಿಸಲಿದ್ದ ಜಾಗದಲ್ಲಿ ಕೆಂಪಂಚಿನ ಮನೆಯನ್ನು ನಿರ್ಮಿಸಿದರು

ಆಂದೋಲನ ಡೆಸ್ಕ್

Recent Posts

ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಡಿಸ್ಚಾರ್ಜ್‌

ರಾಯಚೂರು: ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ರಾಯಚೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆಯಲ್ಲಿ…

3 mins ago

ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್‌ ಬಹಿರಂಗಪಡಿಸಲಿ: ಶಾಸಕ ತನ್ವೀರ್‌ ಸೇಠ್‌

ಮೈಸೂರು: ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್‌ ಬಹಿರಂಗಪಡಿಸಲು ಎಂದು ಶಾಸಕ ತನ್ವೀರ್‌ ಸೇಠ್‌ ಆಗ್ರಹಿಸಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ…

1 hour ago

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಅಕ್ರಮ ತಡೆಗೆ ಹದ್ದಿನ ಕಣ್ಣು

ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಯಾವುದೇ ಅಕ್ರಮ ನಡೆಯದಂತೆ ಪರೀಕ್ಷಾ ಬೋರ್ಡ್‌ ಹದ್ದಿನ ಕಣ್ಣಿಟ್ಟಿದೆ. ನಾಳೆಯಿಂದ…

2 hours ago

ರಾಮನಗರ| ಜಿಮ್‌ ಟ್ರೇನರ್‌ಗೆ ಪ್ರೇಯಸಿಯಿಂದಲೇ ಚಾಕು ಇರಿತ

ರಾಮನಗರ: ಜಿಮ್‌ ಟ್ರೇನರ್‌ಗೆ ಪ್ರೇಯಸಿಯೇ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ರಾಮನಗರ ತಾಲ್ಲೂಕಿನಲ್ಲಿ ನಡೆದಿದೆ. ರಾಮನಗರದ ಬಿಡದಿಯಲ್ಲಿ ಈ…

2 hours ago

ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿಗೆ ಸುಪ್ರೀಂಕೋರ್ಟ್‌ ರಿಲೀಫ್‌

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸುಬ್ಬಾರೆಡ್ಡಿಗೆ ಸುಪ್ರೀಂಕೋರ್ಟ್‌ ಬಗ್‌ ರಿಲೀಫ್‌ ನೀಡಿದೆ. ಶಾಸಕ ಸ್ಥಾನದಿಂದ ಅವರನ್ನು…

2 hours ago

ಶ್ರೀಮಂತರು ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಕೊಡುವುದರಲ್ಲಿ ತಪ್ಪೇನು: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಶ್ರೀಮಂತರು ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಕೊಡುವುದರಲ್ಲಿ ತಪ್ಪೇನಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರಶ್ನೆ ಮಾಡಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ…

2 hours ago