Andolana originals

ಅರಮನೆಗಿಂತ ಹೆಚ್ಚು ಅರಳಿಮರದಡಿ ಜೀವಿಸುವ ಧಮ್ಮ

ಮಾನಸಗಂಗೋತ್ರಿಯಲ್ಲಿ ಪೂರ್ಣಿಮೆ ಆಚರಣೆಗೆ ದಶಕ

ಇಂದು ಸಂಜೆ ೫ಗಂಟೆಗೆ ‘ಧಮ್ಮ ಪಯಣ’

ಗೌತಮ ಉದ್ಯಾನವನದಲ್ಲಿ ಧ್ಯಾನ, ಗಾಯನ ಕಾರ್ಯಕ್ರಮ

ಮೈಸೂರು: ಗೌತಮ ಬುದ್ಧರ ಚಿಂತನೆಗಳನ್ನು ಬಿತ್ತಲು ಒಂದು ವೈಭವೋಪೇತ ವಾತಾವರಣಬೇಕಿಲ್ಲ. ಅದು ಸರಳವಾಗಿ ಪ್ರಕೃತಿಯಲ್ಲಿಯೇ ಹರಡುತ್ತದೆ. ಹೆಚ್ಚೆಂದರೆ ನಿಮಗೆ ಕುಳಿತು ಮಾತನಾಡಲು ಒಂದು ಮರದ ನೆರಳು ಸಾಕು. ಅರಳಿಮರವಾದರೆ ಇನ್ನೂ ಸ್ವಾದ. ನೀವು ಗಮನಿಸಿ, ಬುದ್ಧರು ಅರಮನೆಯಿಂದ ಅರಳಿಮರದ ಕಡೆಗೆ ನಡೆದು, ಅರಳಿಮರದ ನೆರಳಿನಲ್ಲಿಯೇ ತಮ್ಮ ಬದುಕಿನ ಬಹುಭಾಗವನ್ನು ಕಳೆದರು. ಗಿಡ ಮರ ಬಳ್ಳಿಗಳ ಆಶ್ರಯದಲ್ಲಿ ಧಮ್ಮ ಬೋಧಿಸುತ್ತಾ ಹೊರಟರು. ಹಾಗಾಗಿ ಧಮ್ಮದಲ್ಲಿ ಅರಮನೆಗಿಂತ ಅರಳಿಮರಕ್ಕೆ ಶ್ರೇಷ್ಠವಾದ ಸ್ಥಾನವನ್ನು ಕಲ್ಪಿಸಲಾಗಿದೆ.

೧೩ ವರ್ಷಗಳ ಹಿಂದೆ ಮಾನಸಗಂಗೋತ್ರಿಯಲ್ಲಿ ಪಿಜಿ ವಿದ್ಯಾರ್ಥಿನಿಲಯದ ಮುಂಭಾಗದಲ್ಲಿರುವ ಅರಳಿಮರದ ಕೆಳಗೆ ನೀರವ ವಾತಾವರಣ ಇತ್ತು. ಆದರೆ, ಈಗ ಅಲ್ಲಿ ಗೌತಮ ಬುದ್ಧ ಮತ್ತು ಆತನ ಧಮ್ಮದ ಬೆಳಕು ಪಸರಿಸುವ ಮೂಲಕ ಮಾನವತೆಯ ಬೆಳದಿಂಗಳು ಹರಡಿದಂತಹ ವಾತಾವರಣ ಇರುತ್ತದೆ. ಇದಕ್ಕೆ ಆಗ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಬಿ.ಬಸವರಾಜು ಅವರ ಪರಿಶ್ರಮ ಕಾರಣ. ಅವರೊಂದಿಗೆ ಹಲವರು ಕೈಜೋಡಿಸಿದ್ದರು.

ಆಂದೋಲನ ಡೆಸ್ಕ್

Recent Posts

ಕೊಡಗು ; ವ್ಯಕ್ತಿ ಬಲಿ ಪಡೆದಿದ್ದ ರೌಡಿ ಆನೆ ಕೊನೆಗೂ ಸೆರೆ

ಕೊಡಗು : ಕಳೆದ ಕೆಲ ದಿನಗಳಿಂದ ಉಪಟಳ ನೀಡುವ ಜತೆಗೆ ವ್ಯಕ್ತಿಯ ಮೇಲೆ ದಾಳಿ ಮಾಡಿ ಬಲಿ ಪಡೆದಿದ್ದ ಕಾಡಾನೆಯನ್ನು…

6 hours ago

ಸೋಮವಾರದಿಂದಲೇ ತಂಬಾಕು ಖರೀದಿ : ಗೋಯಲ್‌ ಭರವಸೆ

ಬೆಂಗಳೂರು : ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ತಂಬಾಕು ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ…

7 hours ago

ಸೃಜನಶೀಲತೆಗೆ  ʻಎಐʼ ಕುತ್ತು : ಲೇಖಕ ನಾಗಭೂಷಣ ಸ್ವಾಮಿ

ಬೆಂಗಳೂರು : ಸಾಹಿತ್ಯದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಸಾಕಷ್ಟು ಅಪಾಯಗಳು ಎದುರಾಗುತ್ತವೆ, ಮನುಷ್ಯನ ಸೃಜನಶೀಲ ಚಿಂತನೆಗೆ ಎಐ ತಂತ್ರಜ್ಞಾನ ಮಾರಕವಾಗಲಿದೆ…

7 hours ago

ಊಹಾ ಪತ್ರಿಕೋದ್ಯಮ ಬಿಟ್ಟು, ಸತ್ಯವನ್ನೇ ಬರೆಯಿರಿ : ಪತ್ರಕರ್ತರಿಗೆ ಮುಖ್ಯಮಂತ್ರಿ ಸಲಹೆ

ಬೆಂಗಳೂರು : ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು. ಸರ್ಕಾರ ಕಟ್ಟ ಕಡೆಯ ಮನುಷ್ಯರ…

8 hours ago

ಕೈ ಸಾಲವಾಗಿ 25 ಕೋಟಿ ನೀಡುವ ಆಮಿಷ : ಹುಬ್ಬಳ್ಳಿಯ ವ್ಯಕ್ತಿಗೆ ಮೈಸೂರಿನ ಐವರಿಂದ ಲಕ್ಷಾಂತರ ರೂ. ವಂಚನೆ

ಮೈಸೂರು : ಹುಬ್ಬಳ್ಳಿಯ ಹರ್ಷ ಎಂಬುವವರಿಗೆ ಕೈ ಸಾಲವಾಗಿ 25 ಕೋಟಿ ರೂ. ನೀಡುತ್ತೇವೆ ಎಂದು ಆಮಿಷವೊಡ್ಡಿ ಮೈಸೂರು ಮೂಲದ…

8 hours ago

ಮಹಿಳೆಯರಿಗೆ ಋತುಚಕ್ರದ ರಜೆ ಕಡ್ಡಾಯ : ನಾಗಲಕ್ಷ್ಮೀ ಚೌಧರಿ

ಮೈಸೂರು : ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಋತುಚಕ್ರದ ರಜೆ ಕಡ್ಡಾಯವಾಗಿ ಕೊಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ…

9 hours ago