Andolana originals

ರಿಲ್ಯಾಕ್ಸ್‌ ಮೂಡ್‌ನಲ್ಲಿ ದಸರಾ ಗಜಪಡೆ

ಜಿ.ತಂಗಂ ಗೋಪಿನಾಥಂ

ಮೈಸೂರು: ಹುಲ್ಲು ತಿನ್ನುತ್ತಾ ಫೋಟೋಗೆ ಪೋಸ್ ಕೊಡುತ್ತಿದ್ದ ಅಭಿಮನ್ಯು, ಮಜ್ಜನಕ್ಕೆ ಮೈಯೊಡ್ಡಿದ್ದ ಕಂಜನ್ ಮತ್ತು ಸುಗ್ರೀವ, ಕೆಸರಿನಲ್ಲಿ ಮಹೇಂದ್ರನ ಚಿನ್ನಾಟ ದಣಿವಾರಿಸಿಕೊಳ್ಳುತ್ತಿದ್ದ ಧನಂಜಯ, ಪ್ರಶಾಂತ, ಗೋಪಿ, ಭೀಮ, ಏಕಲವ್ಯ, ಸೊಪ್ಪಿನಿಂದ ಮೈಉಜ್ಜಿಕೊಳ್ಳುತ್ತಿದ್ದ ಲಕ್ಷ್ಮಿಮತ್ತು ಹಿರಣ್ಯ…!

ಇದು ದಸರಾ ಮಹೋತ್ಸವದ ಜಂಬೂಸವಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭಿಮನ್ನು ನೇತೃತ್ವದ ಗಜಪಡೆ ಭಾನುವಾರ ಅರಮನೆ ಆವರಣದಲ್ಲಿ ರಿಲ್ಯಾಕ್ಸ್ ಮೂಡ್‌ಗೆ ಜಾರಿದ ಸುಂದರ ದೃಶ್ಯಗಳು.

ಶನಿವಾರವಷ್ಟೇ ಸತತ 5ನೇ ಬಾರಿ 750 ಕೆ.ಜಿ. ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಅಭಿಮನ್ಯು ಭಾನುವಾರ ಅರಮನೆ ಅಂಗಳದ ಆನೆ ಬಿಡಾರದಲ್ಲಿ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದ. ಬೆಳಗ್ಗೆಯೇ ಸ್ನಾನ ಮಾಡಿ, ಕುಸುರೆ, ಸೊಪ್ಪು ತಿಂದು ತನಗಾಗಿಯೇ ನಿರ್ಮಿಸಿರುವ ಶೆಡ್‌ ನಲ್ಲಿ ಹುಲ್ಲು ತಿನ್ನುತ್ತಾ ವಿಶ್ರಾಂತಿ ಪಡೆಯುತ್ತಿದ್ದ. ಈ ವೇಳೆ ಅದರ ಮಾವುತ ವಸಂತ ತುಂಬಾ ಖುಷಿಯಿಂದಲೇ ಮುತ್ತುಕೊಟ್ಟು ಮುದ್ದಾಡುತ್ತಿದ್ದರು. ಕಾವಾಡಿ ರಾಜು ಕೂಡ ಅಭಿಮನ್ಯುಗೆ ಬೇಕಾದ ಆಹಾರವನ್ನು ನೀಡುತ್ತಿದ್ದ ದೃಶ್ಯ ಕಂಡುಬಂತು.

ಧನಂಜಯ, ಗೋಪಿ, ಪ್ರಶಾಂತ, ಹಿರಣ್ಯಾ ಹಸಿ ಹುಲ್ಲು, ಸೊಪ್ಪು ಮೇಯುತ್ತಾ ನಿಂತಿದ್ದವು, ಮತ್ತೊಂದು ಕಡೆ ಏಕಲವ್ಯ, ಭೀಮ, ರೋಹಿತ್, ಲಕ್ಷ್ಮೀ ಮೇಯುತ್ತಾ ವಿಶ್ರಾಂತಿ ಪಡೆಯುತ್ತಿದ್ದವು. ಮರದ ಅಡಿಯಲ್ಲಿ ನಿಂತಿದ್ದ ಮಹೇಂದ್ರ ಮಾತ್ರ ಕೆಸರಿನಲ್ಲಿ ಆಟವಾಡುತ್ತಿದ್ದ ದೃಶ್ಯ ಕಂಡುಬಂತು.

ಇನ್ನೂ ಅರಮನೆಯ ಆನೆ ಬಿಡಾರದಲ್ಲಿರುವ ದೊಡ್ಡದಾದ ತೊಟ್ಟಿಯಲ್ಲಿ ಸುಗ್ರೀವ ಮತ್ತು ಕಂಜನ್ ಮಜ್ಜನಕ್ಕೆ ಮೈಯೊಡ್ಡಿದ್ದರು. ಮಾವುತ ಜಿ.ಜೆ.ಶಂಕರ್, ಸುಗ್ರೀವ ಆನೆಯನ್ನು, ಕಾವಾಡಿ ಕಿರಣ್ ಕಂಜನ್ ಆನೆಯನ್ನು ಮಲಗಿಸಿ ಪೈಪ್‌ ಸಹಾಯದಿಂದ ನೀರು ಚಿಮ್ಮಿಸಿ ಬ್ರಶ್ ಸಹಾಯದಿಂದ‌ ಮೈಯೆಲ್ಲಾ ಉಜ್ಜಿ ಸ್ನಾನ ಮಾಡಿಸುತ್ತಿದ್ದರು. ಒಟ್ಟಾರೆಯಾಗಿ 14 ಆನೆಗಳು ಯಶಸ್ವಿಯಾಗಿ ದಸರಾ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದವು.

ಆನೆಗಳನ್ನು ನೋಡಲು ಮುಗಿಬಿದ್ದ ಜನತೆ.. ಜಂಬೂಸವಾರಿಯ ಮರು ದಿನವಾದ ಭಾನುವಾರ ಮೈಸೂರು ಅರಮನೆ ಆವರಣವು ಪ್ರವಾಸಿಗರಿಂದ ಕೂಡಿತ್ತು. ಪ್ರವಾಸಿಗರು ಅರಮನೆಯನ್ನು ವೀಕ್ಷಿಸಿ ಬಳಿಕ, ದಸರಾ ಆನೆಗಳನ್ನು ನೋಡಲು ಮುಗಿಬಿದ್ದರು. ಕುತೂಹಲದಿಂದ ಆನೆ ಬಿಡಾರದತ್ತ ಕುಟುಂಬ ಸಮೇತ ಧಾವಿಸಿ, ಪ್ಲೇಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

ಕಾಡಿನ ಮಕ್ಕಳ ಕಲರವ: ಗಜಪಡೆಯ ಮಾವುತರು, ಕಾವಾಡಿಯ ಪುಟಾಣಿ ಮಕ್ಕಳು ವಿವಿಧ ಆಟೋಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂಭ್ರಮಿಸಿದ್ದರು.

ಇಂದು ಕಾಡಿನತ್ತ ಪಯಣ: ದಸರಾ ಮಹೋತ್ಸವದ ಜಂಬೂಸವಾರಿಯನ್ನು ಯಶಸ್ವಿಯಾಗಿ ಮುಗಿಸಿರುವ ದಸರಾ ಗಜಪಡೆ ಇಂದು ಕಾಡಿನಿಂದ ನಾಡಿಗೆ ಹೊರಡಲು ಸಜ್ಜಾಗಿವೆ. ಅವುಗಳೊಂದಿಗೆ ಮಾವುತರು ಹಾಗೂ ಕಾವಾಡಿಗರು ಸಹ ತಮ್ಮ ಕುಟುಂಬ ಸಮೇತ ತಮ್ಮ ಸ್ವಸ್ಥಾನಕ್ಕೆ ತೆರಳಲು ಸಿದ್ಧವಾಗಿದ್ದಾರೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಅನುಮಾನ ಬಗೆಹರಿಸಿ

ರಾಜ್ಯದ ಬಹಳಷ್ಟು ಜನರು ಆನ್‌ಲೈನ್ -ಆಫ್ಲೈನ್ ಮೂಲಕ ನೋಂದಣಿ ಮಾಡಿಸುವ ಮೂಲಕ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅನೇಕರಲ್ಲಿ ಗೊಂದಲ…

9 hours ago

ಓದುಗರ ಪತ್ರ: ಕನ್ನಡ ಒಗ್ಗಟ್ಟು

ಕನ್ನಡ ಒಗ್ಗಟ್ಟು ಕಾವೇರಿಯ ಹೆಸರಲ್ಲಿ ಕಂಡಿದೆ ಕನ್ನಡ ನಾಯಕರ ಒಗ್ಗಟ್ಟು ಆಳುವವರ ಜೊತೆ ಕೈ ಜೋಡಿಸಿದರೆ ಬಿಡಿಸಲಿವೆ ಹಲವು ಬಿಕ್ಕಟ್ಟು…

9 hours ago

ಓದುಗರ ಪತ್ರ: ರಾಜಕಾರಣದ ಸರಕು!

ರಾಜಕಾರಣದ ಸರಕು! ‘ನೀರಿಗಾಗಿ ತಮಿಳುನಾಡು ಸುಪ್ರೀಂಗೆ ಮೊರೆ!’ ನೀರಿzಗ ಹರಿಸಿದೆ ಕರ್ನಾಟಕ ಯಥೇಚ್ಛ ನೀರನು ಸಮುದ್ರ ತುಳುಕುವಷ್ಟು ಇಲ್ಲದಾಗ ಹರಿಸುವುದೆಂತು…

9 hours ago

ಓದುಗರ ಪತ್ರ: ಅಕ್ಕಿ ದರ ಏರಿಕೆಗೆ ಕಡಿವಾಣ ಅಗತ್ಯ

ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಅಕ್ಕಿ ಬೆಲೆ ಸಾಮಾನ್ಯ ಜನರ ನಿದ್ದೆಗೆಡಿಸಿದೆ. ತುಂಗಭದ್ರಾ ಜಲಾಶಯದ ಗೇಟ್ ರಿಪೇರಿಯಿಂದಾಗಿ ಸುಮಾರು ೭…

9 hours ago

ಸತ್ಯದ ಪ್ರತಿಪಾದಕರು ಮಾತ್ರ ಆದರ್ಶ ಆಗಬಲ್ಲರು

ಸಿ.ಹರಕುಮಾರ್, ಲೇಖಕ ಜನರ ನೆಮ್ಮದಿ ಕಸಿದುಕೊಂಡವರು, ನೆಮ್ಮದಿಯಿಂದಿರಲು ಸಾಧ್ಯವೆ? ಸತ್ಯದ ಪ್ರತಿಪಾದನೆ ಆ ಕ್ಷಣಕ್ಕೆ ಇಷ್ಟವಾಗದಿರಬಹುದು, ಶತ್ರುಗಳನ್ನು ಹುಟ್ಟುಹಾಕಬಹುದು, ಜೀರ್ಣಿಸಿಕೊಳ್ಳಲು…

9 hours ago

300 ಮಕ್ಕಳ ಶಿಕ್ಷಣಕ್ಕೆ ಶೇ.96ರಷ್ಟು ಸಂಪತ್ತನ್ನು ದಾನ ಮಾಡಿದ ಟೆಕ್ಕಿ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಬಾಲಕಾರ್ಮಿಕರಿಗಾಗಿ ಏಕಲವ್ಯ ಟ್ರಸ್ಟ್ ಸ್ಥಾಪನೆ  ಛತ್ತೀಸ್‌ಘಡದ ಭಿಲಾಯ್‌ಯ ವಿವೇಕ್ ಶಂಗಾರಿಯ ತಾಯಿ ತೀರಿಕೊಂಡಾಗ ಅವನಿಗೆ…

9 hours ago