Ambedkar Bhavan in Virajpet
ಮಳೆಗಾಲದಲ್ಲಿ ಮತ್ತಷ್ಟು ಕುಸಿಯುವ ಭೀತಿ ; ಸೂಕ್ತ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ
ಕಾಂಗೀರ ಬೋಪಣ್ಣ
ವಿರಾಜಪೇಟೆ: ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡ ಡಾ. ಬಿ.ಆರ್. ಅಂಬೇಡ್ಕರ್ ಭವನದ ತಡೆಗೋಡೆ ಅಲ್ಪ ಮಳೆಗೇ ಕುಸಿದಿದ್ದು, ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ.
ಹಿಂದಿನ ಸಂಸದರು ಹಾಗೂ ಹಾಲಿ ವಿಧಾನಪರಿಷತ್ ಸದಸ್ಯರ ಅನುದಾನದಲ್ಲಿ ಅಂಬೇಡ್ಕರ್ ಭವನ ಕಾರ್ಯನಿರ್ಹಣಾ ಸಮಿತಿ ನೇತೃತ್ವದಲ್ಲಿ ಅಂಬೇಡ್ಕರ್ ಭವನದ ಪಕ್ಕದ ಖಾಲಿ ಜಾಗಕ್ಕೆ ತಡೆಗೋಡೆ, ಇಂಟರ್ ಲಾಕ್ ಹಾಕಿ ಆಗತ್ಯ ಬಳಕೆಗೆ ಸಿದ್ಧಪಡಿಸಲಾಗಿತ್ತು. ಆದರೆ ಮುಂಗಾರು ಆರಂಭಕ್ಕೂ ಮುನ್ನವೇ ಸುರಿದ ಅಲ್ಪ ಮಳೆಗೆ ತಡೆಗೋಡೆ ಕುಸಿದಿದೆ. ಇದರಿಂದ ಇತರ ಕಾಮಗಾರಿಯೂ ಕಳಪೆ ಆಗಿರುವ ಅನುಮಾನ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಏ. ೧೪ರಂದು ಅಂಬೇಡ್ಕರ್ ಭವನದ ಉದ್ಘಾಟನೆಯನ್ನು ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಣ ನೆರವೇರಿಸಿದ್ದರು. ೨೦೦೫ರಿಂದ ಈ ಭವನದ ಕಾಮಗಾರಿ ಒಂದಲ್ಲ ಒಂದು ವಿಳಂಬವಾಗಿ ಮಂದಗತಿಯಿಂದ ನಡೆಯುತ್ತಿತ್ತು. ೧. ೮೦ ಕೋಟಿ ರೂ. ಗೂ ಅಽಕ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಭವನ ನಿರ್ಮಾಣ ಮಾಡಲಾಗಿತ್ತಾದರೂ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಹೀಗೆ ನಿರ್ಮಾಣಗೊಂಡಿದ್ದ ಕಟ್ಟಡ ಅಽಕಾರಿ ವರ್ಗದ ನಿರ್ಲಕ್ಷ ದಿಂದ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಪತ್ರಿಕೆಗಳಲ್ಲಿ ಈ ಬಗ್ಗೆ ಬಂದ ನಿರಂತರ ವರದಿಗಳಿಂದ ಇದಕ್ಕೆ ಬೀಗ ಹಾಕುವ ಕೆಲಸ ಆಗಿತ್ತು. ನಂತರ ಈಗಿನ ಶಾಸಕರ ಅವಽಯಲ್ಲಿ ಅಪೂರ್ಣಗೊಂಡಿರುವ ಕೆಲಸ ಮಾಡಲು ಹೆಚ್ಚುವರಿಯಾಗಿ ೨೫ ಲಕ್ಷ ರೂ. ಗಳ ವೆಚ್ಚದಲ್ಲಿ ಕಾಮಗಾರಿ ನಡೆದು ಉದ್ಘಾಟನೆಯೂ ಆಯಿತು.
ಇದೇ ಸಂದರ್ಭದಲ್ಲಿ ಇದಕ್ಕೆ ಹೊಂದಿಕೊಂಡಿದ್ದ ಖಾಲಿ ಜಾಗವನ್ನು ಭವನದ ಕೆಲವು ಉದ್ದೇಶಗಳಿಗೆ ಬಳಸಲು ನಿರ್ಧರಿಸಿ ಅದಕ್ಕೆ ಈ ಹಿಂದಿನ ಸಂಸದರ ೫ ಲಕ್ಷ ರೂ. ಮತ್ತು ವಿಧಾನಪರಿಷತ್ ಸದಸ್ಯರ ೫ ಲಕ್ಷ ರೂ. ಅನುದಾನದಲ್ಲಿ ಭೂ ತಡೆಗೋಡೆ ಮತ್ತಿತರ ಕಾಮಗಾರಿ ನಡೆಸಲಾಯಿತು. ಆದರೆ, ಇದೀಗ ಈ ಕಾಮಗಾರಿಯ ಭಾಗವಾದ ತಡೆಗೋಡೆ ಜನಬಳಕೆಗೂ ಮುಂಚೆಯೇ ಮಳೆಗೆ ಕುಸಿದಿದೆ.
ಮೇ ೧೯ರಂದು ಸಂಜೆ ಸುರಿದ ಮಳೆಗೆ ತಡೆಗೋಡೆ ಕುಸಿದಿದ್ದು, ಈ ಗೋಡೆಯ ಅವಶೇಷಗಳನ್ನು ಅಂದು ರಾತ್ರಿಯೇ ತರಾತುರಿಯಲ್ಲಿ ತೆಗೆದು ಟಾರ್ಪಾಲ್ನಿಂದ ಮುಚ್ಚಲಾಗಿತ್ತು. ಆದರೆ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲೂ ಹರಡಿ ಚರ್ಚೆಗೆ ಗ್ರಾಸವಾಗಿತ್ತು. ಇದು ಕಾಮಗಾರಿಯ ಗುಣಮಟ್ಟವನ್ನು ಸಾರಿ ಹೇಳುತ್ತಿದ್ದು, ಇದಕ್ಕೆ ನಿರ್ವಾಹಣಾ ಸಮಿತಿಯೇ ಹೊಣೆ ಎಂದು ಸ್ಥಳೀಯರು ದೂರಿದ್ದಾರೆ.
ಲಕ್ಷಾಂತರ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕಾಗುತ್ತದೆ. ಕಾಮಗಾರಿ ಮಾಡುವವರು, ಮಾಡಿಸುವವರು, ಮೇಲುಸ್ತುವಾರಿ ನೋಡಿಕೊಳ್ಳುವವರು ಎಲ್ಲರೂ ಇದಕ್ಕೆ ಜವಾಬ್ದಾರರಾಗುತ್ತಾರೆ. ಆದರೆ ಇಲ್ಲಿ ಬಳಕೆಗೂ ಮುನ್ನವೇ ತಡೆಗೋಡೆ ಕುಸಿದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಈ ಬಗ್ಗೆ ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯವಿದೆ.
ಇದು ಈ ಹಿಂದೆಯೇ ನಿರ್ಮಿಸಿದ ತಡೆಗೋಡೆಯಾಗಿತ್ತು. ಇದರ ಮೇಲಿನ ಖಾಲಿ ಜಾಗಕ್ಕೆ ನಾವು ಇಂಟರ್ಲಾಕ್ ಹಾಕುವ ಕೆಲಸ ಉದ್ಘಾಟನೆಗೂ ಮುಂಚೆ ಮಾಡಿದ್ದೆವು. ಇದು ಬೇರೆಡೆಯಿಂದ ತಂದು ಹಾಕಿದ ಮಣ್ಣಾಗಿರುವುದರಿಂದ
ಒತ್ತಡ ತಡೆಯದೆ ತಡೆಗೋಡೆ ಕುಸಿದಿದೆ. ಇಂದಿನಿಂದ ಮತ್ತೆ ಆ ತಡೆಗೋಡೆಯ ಮರು ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಸೂಕ್ತ ರೀತಿಯ ಕಾಮಗಾರಿ ನಡೆಸಲಾಗುತ್ತದೆ.
-ವಿ.ಕೆ.ಸತೀಶ್, ಅಂಬೇಡ್ಕರ್ ಭವನ ಕಾರ್ಯನಿರ್ವಹಣಾ ಸಮಿತಿ ಸದಸ್ಯರು
ಸ್ವಾಗತಾರ್ಹ ಸಂಕಲ್ಪ! ಮತ್ತೆ ಗುಡಿಗಿದ್ದಾರೆ ಮುಖ್ಯಮಂತ್ರಿಗಳು ‘ಭ್ರಷ್ಟಾಚಾರಿಗಳ ಬಡಿದು ಹಾಕುವೆ’ಎಂದು ಅಭಿವೃದ್ಧಿಗೆ ಮಾರಕ ಪ್ರಜೆಗಳ ಶೋಷಕ ಈ ಭ್ರಷ್ಟಾಚಾರ ಎಂಬ…
ಆಗಸ್ಟ್ ಹದಿನೈದು ಬಂತೆಂದರೆ ಸಾಕು, ನಮ್ಮಲ್ಲಿ ದೇಶಪ್ರೇಮದ ರೋಮಾಂಚನ. ಶಾಲೆ-ಕಚೇರಿಗಳಲ್ಲಿ ರಾಷ್ಟ್ರಧ್ವಜರೋಹಣ, ಸಿಹಿತಿಂಡಿ ಹಂಚಿಕೆ, ದೇಶಭಕ್ತಿ ಗೀತೆಗಳು ಮತ್ತು ಭಾಷಣಗಳು…
ಮೈಸೂರು ತಾಲ್ಲೂಕಿನ ಬ್ಯಾತಹಳ್ಳಿ ಮತ್ತು ದಡದಹಳ್ಳಿ ನಡುವೆ ಹರಿಯುತ್ತಿರುವ ಎಣ್ಣೆಹೊಳೆ ದಾಟಲು ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ದುಸ್ಥಿತಿಯಲ್ಲಿದೆ. ಈ…
ಗೋವಿಂದರಾಜು ಲಕ್ಷ್ಮೀಪುರ, ಇಂಗ್ಲಿಷ್ ಸಹಪ್ರಾಧ್ಯಾಪಕ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು ಐಪಿಎಸ್ ಅಧಿಕಾರಿ ಚೆನ್ನಬಸವಣ್ಣ ಅವರ ಅಲ್ಕೆಬುಲಾನದ ಹೃದಯದಿಂದ…
ವೈಡ್ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ‘ಫಸ್ಟ್ , ಯು ಹ್ಯಾವ್ ಟು ಬಿಲೀವ್ ಇನ್ ಇಟ್, ದೆನ್…
ದಾ.ರಾ.ಮಹೇಶ್ ಹನಗೋಡು ಹೋಬಳಿ ರೈತರು ಬೆಳೆದ ಸಿಹಿಗುಂಬಳಕ್ಕೆ ದೊರೆಯದ ಮಾರುಕಟ್ಟೆ ವೀರನಹೊಸಹಳ್ಳಿ: ಜೋಳ, ಶುಂಠಿ, ಮತ್ತಿತರ ಸಾಂಪ್ರದಾಯಿಕ ಕೃಷಿ ಬಿಟ್ಟು…