Andolana originals

ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರಿಗೆ ಸಂಕಷ್ಟ

ಲಕ್ಷ್ಮಿಕಾಂತ್ ಕೊಮಾರಪ್ಪ

ಹೂವು ಅರಳುತ್ತಿರುವುದರಿಂದ ಕಾಫಿ ಕೊಯ್ಲಿಗೆ ಅಡ್ಡಿ; ಹೆಚ್ಚುವರಿ ಕಾರ್ಮಿಕ ವೆಚ್ಚವನ್ನು ಭರಿಸಬೇಕಾದ ಅನಿವಾರ್ಯತೆ

ಸೋಮವಾರಪೇಟೆ: ತಾಲ್ಲೂಕಿನ ಗ್ರಾಮೀಣ, ನಗರ ಭಾಗಗಳಲ್ಲಿ ಕಳೆದ ವಾರ ಸುರಿದವರ್ಷಧಾರೆಯಿಂದ ಕಾಫಿ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದು, ಗಿಡಗಳಲ್ಲಿ ಹೂವು ಅರಳುತ್ತಿ ರುವುದರಿಂದ ಕಾಫಿ ಕೊಯ್ಲು ಮಾಡಲು ಸಾಧ್ಯವಾಗದೆ ನಷ್ಟ ಅನುಭವಿಸುತ್ತಿದ್ದಾರೆ.

ಕೊಡಗು ಮತ್ತು ಹಾಸನ ಜಿಲ್ಲೆಯಲ್ಲಿ ಕಾಫಿ ಕುಯ್ಲು ಕಾಲದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಹೂ ಅರಳಿದ್ದು, ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಹೂವು ಅರಳಿರುವುದರಿಂದ ಕೊಯ್ಲು ಕಾರ್ಯ ಸುಮಾರು ಹದಿನೈದು ದಿನಗಳವರೆಗೆ ವಿಸ್ತರಿಸಬಹುದು. ಇದ ರಿಂದ ರೈತರು ಹೆಚ್ಚುವರಿ ಕಾರ್ಮಿಕ ವೆಚ್ಚವನ್ನು ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಅಕಾಲಿಕ ಮಳೆಯಿಂದ ಕೊಡಗಿನ ಸೋಮವಾರಪೇಟೆ, ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು, ಆಲೂರು ತಾಲ್ಲೂಕುಗಳ ಕಾಫಿ ತೋಟಗಳಲ್ಲಿ ಶೇ.೪೦ ಭಾಗದಷ್ಟು ಹೂ ಅರಳಿದ್ದು, ಬೆಳಗಾರರು ಕಾಫಿ ಕುಯ್ಲನ್ನು ವಿಳಂಬ ಮಾಡುತ್ತಿದ್ದಾರೆ. ಅಕಾಲಿಕ ಮಳೆಯಿಂದ ಕಾಫಿ ಗಿಡಗಳಲ್ಲಿ ಅವಧಿಗೆ ಮುನ್ನವೇ ಮೊಗ್ಗು ಅರಳಿದ್ದು, ರೈತರು ಕೊಯ್ಲು ಮಾಡಲು ಸಾಧ್ಯವಾಗದೆ ದಿನ ದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜನವರಿಯಲ್ಲಿ ಸುರಿದ ಅಕಾಲಿಕ ಮಳೆಯಿಂದ ಕಾಫಿ ಗಿಡಗಳಲ್ಲಿ ಕಾಯಿ ಬೇಗನೆ ಹಣ್ಣಾಗುತ್ತಿವೆ. ಜೊತೆಗೆ ಮಳೆಯಿಂದ ಕಾಫಿ ಹಣ್ಣು ಉದುರಿ ನಷ್ಟವಾಗುತ್ತಿದೆ. ಗಿಡಗಳಿಗೆ ರೋಗ ಭೀತಿಯೂ ಎದುರಾಗಿದ್ದು, ಉದುರಿದ ಹಣ್ಣನ್ನು ಅಲ್ಲಿಯೇ ಬಿಟ್ಟರೆ ಗಿಡಗಳಿಗೆ ಬೆರಿ ಬೋರರ್ ಸಮಸ್ಯೆ ತಗುಲುವ ಸಾಧ್ಯತೆಯೂ ಇದೆ.

ಕಾಫಿ ಬೆಳೆಯಲ್ಲಿ ಹೂವಿನ ಪಾತ್ರ ಮಹತ್ವದಾಗಿದೆ. ವಾರ್ಷಿಕ ಬೆಳೆಯಾದ ಕಾಫಿ ತೋಟದಲ್ಲಿ ಪ್ರತಿ ವರ್ಷ ಬೆಳೆಗಾರರು ಜನವರಿ, ಫೆಬ್ರವರಿ ತಿಂಗಳಲ್ಲಿ ಕುಯ್ಲು ಮಾಡಿ ಏಪ್ರಿಲ್ ನಂತರ ಮಳೆ ಬಾರದಿದ್ದರೆ ಕೃತಕವಾಗಿ ಸ್ಪಿಂಕ್ಲರ್ ಮೂಲಕ ನೀರು ಸಿಂಪಡಿಸುತ್ತಾರೆ. ಇದರಿಂದ ಮುಂದಿನ ವರ್ಷದ ಫಸಲು ಉತ್ತಮವಾಗುತ್ತದೆ. ಆದರೆ ಇದೀಗ ಇತ್ತೀಚೆಗೆಸುರಿದ ಅಕಾಲಿಕ ಮಳೆಯಿಂದ ಕೆಲವೆಡೆ ಕಾಫಿ ಹೂವು ಸರಿಯಾಗಿ ಅರಳದೆ ನಷ್ಟವಾಗಿದ್ದು, ಇದು ಮುಂದಿನ ವರ್ಷ ಕಾಫಿ ಫಸಲಿನ ಮೇಲೆ ಪರಿಣಾಮ ಬೀರಲಿದೆ.

ಕೆಲ ಕಾರ್ಮಿಕರು ತಮಿಳುನಾಡು, ದಾವಣಗೆರೆ ಭಾಗದಿಂದ ಮಲೆನಾಡಿಗೆ ಬಂದಿದ್ದು, ಈ ಕಾರ್ಮಿಕರಿಗೆ ವಸತಿ ಆಹಾರದ ವ್ಯವಸ್ಥೆ ಕಾಫಿ ಬೆಳಗಾರರ ವ್ಯವಸ್ಥೆ ಮಾಡಬೇಕಿದೆ. ದಿನದಿಂದ ದಿನಕ್ಕೆ ಹಾವು ಏಣಿ ಆಟದಂತೆ ಕಾಫಿ ದರ ಏರಿಳಿಕೆ ಕಾಣುತ್ತಿದ್ದು, ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಕಾರ್ಮಿಕರು ದುಬಾರಿ ಬೆಲೆ ಕೇಳುತ್ತಿದ್ದಾರೆ. ಒಂದು ಕೆಜಿ ಕಾಫಿ ಕೊಯ್ಲಿಗೆ ಆರರಿಂದ ಎಂಟು ರೂ.ವರೆಗೆ ದರ ನಿಗದಿಪಡಿಸುತ್ತಿದ್ದು, ಕಾರ್ಮಿಕರಿಗೆ ಕೆಲಸ ನೀಡಲು ಸಾಧ್ಯವಾಗದೆ ಅವರು ತಮ್ಮ ಊರಿಗೆ ಹೋದರೆ ಬೆಳೆಗಾರರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ಕಾಡು ಬೆಕ್ಕುಗಳ ಪಾಲಾಗುತ್ತಿರುವ ಕಾಫಿ ಹಣ್ಣು…: 

ಮಲೆನಾಡು ಪಶ್ಚಿಮಘಟ್ಟ ಭಾಗದಲ್ಲಿ ಕಂಡು ಬರುವ ಕಾಡುಬೆಕ್ಕು ಕಾಫಿ ಹಣ್ಣುಗಳನ್ನು ಇಷ್ಟಪಡುವುದು ಸಾಮಾನ್ಯ. ಆದರೆ ಈ ವರ್ಷ ಕಾಫಿ ಕುಯ್ಲು ವಿಳಂಬವಾಗಿರುವುದರಿಂದ ಗಿಡದಲ್ಲಿರುವ ಕಾಫಿ ಹಣ್ಣುಗಲ್ಲಾ  ಕಾಡುಬೆಕ್ಕುಗಳ ಪಾಲಾಗುತ್ತಿವೆ. ಇದು ಬೆಳೆಗಾರರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

” ಅಕಾಲಿಕ ಮಳೆಯಿಂದಕಾಫಿ ಗಿಡಗಳಲ್ಲಿ ಅವಧಿಗೆ ಮುನ್ನವೇ ಮೊಗ್ಗು ಅರಳುತ್ತಿದೆ. ಜನವರಿಯಲ್ಲಿ ಬಂದ ಅಕಾಲಿಕ ಮಳೆಯಿಂದ ಹೂ ಅರಳಿ ಕಾಫಿ ಗಿಡಗಳಲ್ಲಿ ಕಾಫಿ ಕಾಯಿ ಬೇಗನೆ ಹಣ್ಣಾಗುತ್ತಿದೆ. ಮಳೆಯಿಂದ ಗಿಡಗಳಲ್ಲಿ ರೋಗ ಭೀತಿ ಉಂಟಾಗಿದೆ. ಅಕಾಲಿಕ ಮಳೆ ಹಾಗೂ ಬಿಸಿಲಿನಿಂದ ಗಿಡಗಳಿಗೆ ಬೆರಿ ಬೋರರ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

-ಹಿರಿಕರ ರಮೇಶ್, ಕಾಫಿ ಬೆಳೆಗಾರರು,

” ಸೋಮವಾರಪೇಟೆ ಮತ್ತು ಸಕಲೇಶಪುರ ಭಾಗದ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆ ಬೀಳುತ್ತಿರುವು ದರಿಂದ ಕಾಫಿ ತೋಟದಲ್ಲಿ ಹೂ ಅರಳಿದೆ. ಇದು ಕೊಯ್ಲಿಗೆ ತೊಂದರೆ ಉಂಟು ಮಾಡಿದೆ. ಕೆಲವು ಗಿಡಗಳಲ್ಲಿ ಕಾಫಿ ಹಣ್ಣು ಉದುರುತ್ತಿದೆ. ವನ್ಯಪ್ರಾಣಿಗಳ ಉಪಟಳ, ಕಾರ್ಮಿಕರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ನಡುವೆಯೂ ಕೃಷಿ ಮಾಡಿದ್ದ ಬೆಳೆಗಾರರು ಈಗ ನಷ್ಟ ಅನುಭವಿಸುವಂತಾಗಿದೆ.”

 -ಶ್ರೀಕಾಂತ್ ಪಾಲಳ್ಳಿ, ಕಾಫಿ ಬೆಳೆಗಾರರು, ಸಕಲೇಶಪುರ 

 

 

ಆಂದೋಲನ ಡೆಸ್ಕ್

Recent Posts

ಎಲ್‌ಪಿಜಿ ಕೊರತೆ; ಜನರ ಆತಂಕ ದೂರ ಮಾಡಬೇಕಿದೆ

ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧಕ್ಕಿಂತಲ್ಲೂ ಹೆಚ್ಚು ಸದ್ದು ಮಾಡುತ್ತಿರುವುದು ಭಾರತದಲ್ಲಿನ ಎಲ್‌ಪಿಜಿ ಪೂರೈಕೆ ವಿಚಾರ. ಯುದ್ಧೋನ್ಮಾದ ವೈರತ್ವ ಹೊಂದಿರುವ…

3 hours ago

ಭಾರತ-ಗಲ್ಛ್ ರಾಷ್ಟ್ರಗಳ ಸಂಬಂಧಕ್ಕೆ ಧಕ್ಕೆ ಇಲ್ಲ!

ಶುಭಾ ಖಟಾವಕರ ಮ್ಹೆತ್ರಸ್ ಬಲಾಢ್ಯ ರಾಷ್ಟ್ರಗಳಾದ ಅಮೆರಿಕ -ಇಸ್ರೇಲ್, ಇರಾನ್ ಮೇಲೆ ದಾಳಿ ಶುರು ಮಾಡಿ ೧೩-೧೪ ದಿನಗಳೇ ಕಳೆದು…

3 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಕಾಂಗ್ರೆಸ್‌ನಲ್ಲಿ ನಿರ್ಣಾಯಕ ಘಟ್ಟಕ್ಕೆ ತಲುಪಿದ ಅಧಿಕಾರ ಹಂಚಿಕೆ

ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಕಚ್ಚಾಟ ನಿರ್ಣಾಯಕ ಘಟ್ಟಕ್ಕೆ ತಲುಪಿದಂತೆ ಕಾಣುತ್ತಿದೆ. ಕಾರಣ ಅಧಿಕಾರ ಹಂಚಿಕೆಯ ಮಾತು ಉಳಿದುಕೊಂಡಿದೆ…

4 hours ago

‘ಕೈಗೂಡಿದ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯ ಕನಸು’

ನವೀನ್ ಡಿಸೋಜ ದೀರ್ಘಕಾಲದ ಬೇಡಿಕೆಗೆ ಸರ್ಕಾರದ ಸ್ಪಂದನೆ; ಕೊಡವರ ಶ್ರೇಯೋಭಿವೃದ್ಧಿಗೆ ಅನುಕೂಲ ಮಡಿಕೇರಿ:ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ…

4 hours ago

ನಗರಸಭೆಗೆ ಗೆಜ್ಜಲಗೆರೆ-ಗೊರವನಹಳ್ಳಿ ಸೇರ್ಪಡೆಗೆ ವಿರೋಧ

ಹೇಮಂತ್‌ ಕುಮಾರ್‌  ಮಂಡ್ಯ: ಪುರಸಭೆಯಾಗಿದ್ದ ಮದ್ದೂರು ಟೌನ್ ಆಡಳಿತ ನಗರಸಭೆಯಾಗಿ ಪರಿವರ್ತನೆ ಗೊಂಡಿದೆ. ಈ ನಗರಸಭೆಗೆ ಅಕ್ಕಪಕ್ಕದ ಗೆಜ್ಜಲಗೆರೆ ಗ್ರಾಮ…

4 hours ago

ಮಧ್ಯಾಹ್ನದ ಬಿಸಿಯೂಟಕ್ಕೂ ತಟ್ಟಲಿದೆ ಗ್ಯಾಸ್ ಬಿಸಿ?

ಗಿರೀಶ್ ಹುಣಸೂರು ಸಿಲಿಂಡರ್ ರೀಫಿಲ್ಲಿಂಗ್‌ಗೆ ೨೫ ದಿನಗಳ ಅವಧಿ ನಿಗದಿ; ವಸತಿ ಶಾಲೆಗಳು, ಹಾಸ್ಟೆಲ್‌ಗಳಿಗೆ ಬಿಸಿ ತಟ್ಟುವ ಸಂಭವ ಮೈಸೂರು: ಮಧ್ಯಪ್ರಾಚ್ಯದಲ್ಲಿ…

4 hours ago