Andolana originals

ಫುಟ್‌ಪಾತ್‌ಗಳಿಗೆ ಸಿಮೆಂಟ್ ಟೈಲ್ಸ್ ಬಳಕೆಯಿಂದ ಪರಿಸರಕ್ಕೆ ಹಾನಿ

ಮೈಸೂರು ಗ್ರಾಹಕರ ಪರಿಷತ್‌ ಸೇರಿದಂತೆ ಸಾರ್ವಜನಿಕರ ಆಕ್ರೋಶ
ವಾಸು ವಿ.ಹೊಂಗನೂರು

ಮೈಸೂರು: ನಗರದ ಫುಟ್‌ ಪಾತ್‌ಗಳಿಗೆ ಇಂಟರ್‌ಲಾಕ್ ಟೈಲ್ಸ್‌ ಗಳನ್ನು ಅಳವಡಿಸಿ ಸಿಮೆಂಟ್ ಹಾಕುತ್ತಿರುವುದರಿಂದ ಭೂಮಿಯಲ್ಲಿ ನೀರು ಇಂಗದೆ ಅಧಿಕ ಮಳೆ ಬಂದಾಗ ತಗ್ಗು ಪ್ರದೇಶಗಳಲ್ಲಿರುವ ನುಗ್ಗುತ್ತಿರುವುದು ಒಂದು ಸಮಸ್ಯೆಯಾದರೆ, ಮತ್ತೊಂದೆಡೆ ಪರಿಸರಕ್ಕೆ ಸಿಮೆಂಟ್ ಫುಟ್ ಪಾತ್‌ಗಳು ಮಾರಕವಾಗುತ್ತಿವೆ ಎಂದು ಮೈಸೂರು ಗ್ರಾಹಕರ ಪರಿಷತ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ನಗರದಲ್ಲಿ ಫುಟ್‌ಪಾತ್‌ಗಳಿಗೆ ಇಂಟರ್‌ಲಾಕ್ ಟೈಲ್ಸ್ ಅಳವಡಿಸುತ್ತಿದೆ. ಈ ಯೋಜನೆ ಪರಿಸರದ ಮೇಲೆ ಎಂಥ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಕಿಂಚಿತ್ತೂ ಅರಿವಿಲ್ಲದಿರುವುದು ಕಂಡು ಬಂದಿದೆ. ಬಿದ್ದ ಮಳೆ ನೀರು ಭೂಮಿಯಲ್ಲಿ ಇಂಗದೇ ಅಂತರ್ಜಲದ ಮಟ್ಟವೂ ಕುಸಿ ಯುವ ಸ್ಥಿತಿಯಲ್ಲಿವೆ. ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ಫುಟ್‌ಪಾತ್ ಹಾಗೂ ರಸ್ತೆಗಳಿಗೆ ಸಿಮೆಂಟ್ ಹಾಕುವ ಕಾಮಗಾರಿಯಿಂದಾಗಿ ಪರಿಸರ, ಪ್ರಾಣಿ ಪಕ್ಷಿಗಳಿಗೂ ಅಪಾಯ ಎದುರಾಗಿದೆ ಎಂದು ಪರಿಷತ್‌ನ ಮಾಜಿ ಅಧ್ಯಕ್ಷ ಭಾಮಿ ವಿ. ಶೆಣೈ ದೂರಿದ್ದಾರೆ.

ನಗರದ ಯಾದವಗಿರಿಯ ಚೆಲುವಾಂಬ ಉದ್ಯಾನ ಸೇರಿದಂತೆ ನಗರದ ಬಹುತೇಕ ಮುಖ್ಯ ರಸ್ತೆಗಳ ಫುಟ್‌ಪಾತ್‌ಗೆ ಇಂಟ‌ರ್ ಲಾಕ್ ಟೈಲ್ಸ್‌ಗಳನ್ನು ಬಳಸಿ ಸಿಮೆಂಟ್ ಹಾಕಲಾಗಿದೆ. ಇದರಿಂದಾಗಿ ಇಲ್ಲಿನ ಮರಗಿಡಗಳ ಬೆಳವಣಿಗೆ ಹಾಗೂ ಸುತ್ತಲ ಪರಿಸರಕ್ಕೆ ಹಾನಿಯುಂಟಾಗುತ್ತದೆ. ಮರಗಳ ಬೇರಿಗೆ ಉಸಿರಾಟದ ತೊಂದರೆ ಆಗುತ್ತದೆ. ಅಧಿಕಾರಿಗಳು ಈ ಬಗ್ಗೆ ಗಮನವೇ ಇಲ್ಲದವರಂತೆ ವರ್ತಿಸಿದ್ದಾರೆ ಎಂದು ತಿಳಿಸಿದರು.

ಈ ಹಿಂದೆಯೇ ಈ ಬಗ್ಗೆ ಪಾಲಿಕೆಗೆ ದೂರು ನೀಡಿದ್ದರೂ ಕ್ರಮ ಜರುಗಿಸಿಲ್ಲ. ಕಳೆದ ವಾರ ಬಿದ್ದ ಮಳೆಯಿಂದಾಗಿ ಯಾದವಗಿರಿ ಸಮೀಪದ ರಾಜರಾಜೇಶ್ವರಿನಗರದಲ್ಲಿಕೊಳಚೆನಿರ್ಮೂಲನ ಮಂಡಳಿ ನಿರ್ಮಿಸಿರುವ ಅಪಾರ್ಟ್‌ ಮೆಂಟ್‌ಗೆ ನೀರು ನುಗ್ಗಿ ಅನೇಕ ಕುಟುಂಬಗಳಿಗೆ ತೊಂದರೆ ಯಾಗಿದೆ. ಇದಕ್ಕೆ ಪಾಲಿಕೆಯ ಇಂಥ ಯೋಜನೆಗಳೇ ಕಾರಣ ಎಂದು ಮೈಗ್ರಾಪ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

ಮಣ್ಣಿನ ಸವಕಳಿ, ಬಿಸಿಲಿನ ತಾಪಮಾನ ಏರಿಕೆ ಜೊತೆಯಲ್ಲಿ ವಾತಾವರಣ ಕಲುಷಿತ ಗೊಳ್ಳುವ ಆತಂಕ ಎದುರಾಗಿದೆ. ಸಿಮೆಂಟ್ ಬಳಕೆ ಯೋಜನೆಗೆ ಬದಲಿಯಾಗಿ, ಕಲ್ಲು ಅಥವಾ ಇತರ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕು. ಪಾರ್ಕ್‌ಗಳ ಅಭಿವೃದ್ಧಿ ಹೆಸರಲ್ಲಿ ಸಿಮೆಂಟ್ ಇಟ್ಟಿಗೆ ಬಳಸುವುದು ಸೂಕ್ತ ಕ್ರಮವಲ್ಲ. ಜಲಮೂಲ ಸಂರಕ್ಷಣೆಗೆ ಒತ್ತು ನೀಡ ಬೇಕು. ಆದರೆ, ಸಿಮೆಂಟ್ ಇಟ್ಟಿಗೆ ಬಳಸಿ ಫುಟ್‌ ಪಾತ್ ನಿರ್ಮಾಣ ಮಾಡುತ್ತಿರುವ ಈ ನಿರ್ಧಾರ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಚೆಲುವಾಂಬ ಉದ್ಯಾನದ ಸುತ್ತಲೂ ಫುಟ್ ಪಾತ್‌ಗೆ ಇಂಟರ್ ಲಾಕ್ ಟೈಲ್ಸ್‌ಗಳನ್ನು ಹಾಕಿ ಸಿಮೆಂಟ್ ಬಳಸಿರುವುದರಿಂದ ಭೂಮಿಯಲ್ಲಿ ಒಂದು ಹನಿ ನೀರು ಇಂಗುತ್ತಿಲ್ಲ. ಇದರಿಂದ ಅಂತರ್ಜಲ ಕೂಡ ಕಡಿಮೆಯಾಗುತ್ತದೆ. ಬಿಸಿಲಿನ ತಾಪ ಏರಿಕೆಯಾಗುತ್ತದೆ. ಕಳೆದ ವರ್ಷ ಮೈಸೂರಿನಲ್ಲಿ ಅತಿ ಹೆಚ್ಚು ತಾಪಮಾನವಿತ್ತು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಪಾಲಿಕೆ ಕ್ರಮ ವಹಿಸಬೇಕಾಗಿತ್ತು.
ನೀಲಾಂಬಿಕ, ಯಾದವಗಿರಿ ನಿವಾಸಿ ಹಾಗೂ ಮೈಗ್ರಾಪ ಸದಸ್ಯೆ

ಆಂದೋಲನ ಡೆಸ್ಕ್

Recent Posts

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

1 hour ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

2 hours ago

ಓದುಗರ ಪತ್ರ: ಇ-ಕೊಲಿ ಬ್ಯಾಕ್ಟೀರಿಯಾ ಪತ್ತೆ: ಮನಸ್ಸುಗಳಿಗಿಲ್ಲ ‘ಕೂಲ್‌ಕೂಲ್’

ದೇಶದ ಬಹುತೇಕ ರೈಲು ನಿಲ್ದಾಣದ ಫ್ಲಾಟ್‌ ಫಾರ್ಮ್‌ಗಳಲ್ಲಿ  ಸಾರ್ವಜನಿಕರು ಕುಡಿಯುವ ವಾಟರ್ ಕೂಲರ್‌ಗಳಲ್ಲಿ, ಇ-ಕೊಲಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ಕಂಟ್ರೋಲರ್…

5 hours ago

ಓದುಗರ ಪತ್ರ: ಕೆಎಸ್‌ಪಿಸಿಬಿಯನ್ನು ರಾಜಕೀಯ ಮುಕ್ತಗೊಳಿಸಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉನ್ನತ ಹುದ್ದೆಗಳಿಗೆ ತಜ್ಞರನ್ನು ಬಿಟ್ಟು ರಾಜಕೀಯ ವ್ಯಕ್ತಿಗಳನ್ನು ನೇಮಿಸುತ್ತಿರುವುದು ರಾಜ್ಯದ ಪರಿಸರ ಆಡಳಿತಕ್ಕೆ…

5 hours ago

ಓದುಗರ ಪತ್ರ: ಪರಸ್ಪರ ಗೌರವಕ್ಕೆ ಮತ್ತೊಮ್ಮೆ ಕನ್ನಡಿ

ದೇಶದ ೮೦ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಕ್ಷಣಗಳಲ್ಲಿ, ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನ ‘ಬುರ್ಜ್ ಖಲೀಫಾ’ದಲ್ಲಿ ಭಾರತದ ತ್ರಿವರ್ಣ…

5 hours ago

ನಡೆಯದ ಸಂಸತ್ ಕಲಾಪ; ಕುಗ್ಗಿದ ಮೋದಿ-ಶಾ ವರ್ಚಸ್ಸು

ದೆಹಲಿ ಕಣ್ಣೋಟ ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ಸಂಸತ್ ಎಂದರೆ ಪ್ರಜಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಿಕೊಂಡು ದೇಶದ ಸಮಸ್ಯೆಗಳು ಮತ್ತು…

5 hours ago