ಅಕ್ಕನ ಮನೆಯ ಖಾತೆಯನ್ನು ತನ್ನ ಹೆಸರಿಗೆ ಬದಲಿಸಿಕೊಂಡು ವಂಚನೆ
• ಶ್ರೀಧರ್ ಆರ್ ಭಟ್
ನಂಜನಗೂಡು: ವ್ಯಕ್ತಿಯೊಬ್ಬ ತನ್ನ ಸಹೋದರಿಯ ಮನೆಯ ಖಾತೆಯನ್ನು ಅಕ್ರಮವಾಗಿ ತನ್ನ ಹೆಸರಿಗೆ ಬದಲಿಸಿಕೊಂಡು ವಂಚಿಸಿ, ಆಕೆಯನ್ನು ಮನೆಯಿಂದ ಹೊರಹಾಕಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ಚಿನ್ನದಗುಡಿಹುಂಡಿ ಗ್ರಾಮದ ಕರಿಗಮ್ಮ ತನ್ನ ಸಹೋದರನಿಂದ ವಂಚನೆಗೆ ಒಳಗಾದವರು.
ಪ್ರಾಯದಲ್ಲೇ ಬೆಂಗಳೂರು ಸೇರಿ ಅವರಿವರ ಮನೆಯ ಮುಸುರೆ ತಿಕ್ಕಿ, ಕೂಲಿ ನಾಲಿ ಮಾಡಿ, ಒಂದಿಷ್ಟು ಕಾಸು ಕೂಡಿಟ್ಟ ಕರಿಗಮ ಅವರು ತಂದೆ ಬಸವೇಗೌಡರಿಂದ ತನಗೆ ದಾನವಾಗಿ ಬಂದ ಚಿನ್ನದಗುಡಿಹುಂಡಿ ಗ್ರಾಮದ ನಿವೇಶನದಲ್ಲಿ ಕೆಲ ವರ್ಷಗಳ ಹಿಂದೆ ಮನೆ ನಿರ್ಮಿಸಿದ್ದರು. ಆದರೆ, ತಂದೆಯಿಂದ ಬಂದ ನಿವೇಶನದಲ್ಲಿ ನಿರ್ಮಿಸಿದ ಮನೆಯಲ್ಲೀಗ ಕರಿಗಮ್ಮ ಅವರಿಗೇ ಜಾಗವಿಲ್ಲವಾಗಿದೆ. ಇತ್ತ ಅವರಿಗೆ ತಂದೆಯೂ ಇಲ್ಲ, ಅತ್ತ ಪತಿಯೂ ಇಲ್ಲ, ಮಕ್ಕಳೂ ಇಲ್ಲ. ಹೀಗಾಗಿ ಕರಿಗಮ್ಮ ಅವರ ಗೋಳು ಕೇಳುವವರಾರು ಎಂಬ ಪ್ರಶ್ನೆ ಉದ್ಭವಿಸಿದೆ.
ಸಹೋದರನೇ ತನಗೆ ವಂಚನೆ ಮಾಡಬಹುದು ಎಂದು ತಿಳಿಯದ ಕರಿಗಮ್ಮ ಅವರು ಮನೆಯನ್ನು ಸಹೋದರ ನಾಗರಾಜ ಅವರ ಸುಪರ್ದಿಗೆ ವಹಿಸಿ ಮತ್ತೆ ಬೆಂಗಳೂರಿಗೆ ತೆರಳಿದ್ದರು. ಕೆಲ ವರ್ಷಗಳ ನಂತರ ಮನೆಗೆ ಬಂದರೆ ‘ನಿನಗೆ ಈ ಮನೆಯಲ್ಲಿ ಜಾಗವೇ ಇಲ್ಲ’ ಎಂಬ ಮಾತು ಸಹೋದರನಿಂದ ಬಂದಾಗ ಕರಿಗಮ್ಮನ ಸ್ಥಿತಿ ಅಯೋಮಯವಾಯಿತು.
ಕರಿಗಮ್ಮ ಅವರು ತಮ್ಮ ತಂದೆ ಬಸವೇಗೌಡರಿಂದ ಬಂದ ನಿವೇಶನದ ಜಂಜರ್ ನಂ.633ರ 30X40 ಚದರಡಿ ನಿವೇಶನದಲ್ಲಿ ಮನೆ ನಿರ್ಮಿಸಿ ಪಂಚಾಯಿತಿಯಿಂದ ಖಾತೆಯನ್ನೂ ಮಾಡಿಸಿಕೊಂಡಿದ್ದರು. ಆದರೆ ಈಗ ಆ ಮನೆ ಕರಿಗಮ್ಮನಿಗೆ ತಿಳಿಯದ ಹಾಗೆ ಸಹೋದರ ನಾಗರಾಜು ಹೆಸರಿಗೆ ಖಾತೆಯಾಗಿದೆ.
ಸಹೋದರ ನಾಗರಾಜು ನೋಟರಿಯವರಿಂದ ಒಂದು ಅಫಿಡವಿಟ್ ಸಿದ್ಧಪಡಿಸಿ, ಆ ದಾಖಲೆಯ ಮೇಲೆ ಬದನವಾಳು ಪಂಚಾಯಿತಿಗೆ ತೆರಳಿ ಕುತಂತ್ರ ಮಾಡಿ ತನ್ನ ಹೆಸರಿಗೆ ಮನೆಯ ಖಾತೆಯನ್ನು ಬದಲಾಯಿಸಿ ಕೊಂಡು ನಾನು ಕಟ್ಟಿದ ಮನೆಯಿಂದ ನನ್ನನ್ನು ಹೊರಹಾಕಿದ್ದಾನೆ ಎಂಬುದು ಕರಿಗಮ್ಮನವರ ಆರೋಪವಾಗಿದೆ.
ಮನೆಯಿಲ್ಲದ ಈ ವಯೋವೃದ್ಧೆ ಈಗ ಅವರಿವರ ಮನೆಯ ಜಗುಲಿಯ ಮೇಲೆ ಕಾಲ ಕಳೆಯುತ್ತಾ, ಬೆಳಗಾದರೆ ನ್ಯಾಯಕ್ಕಾಗಿ ಕಂಡ ಕಂಡ ಮುಖಂಡರು ಮತ್ತು ಅಧಿಕಾರಿಗಳ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ.
ನೋಟರಿ ಅಫಿಡವಿಟ್ ಆಧಾರದ ಮೇಲೆ ಖಾತೆ ಬದಲಾವಣೆ ಮಾಡಿರುವುದು ಅಕ್ಷಮ್ಯ ಅಪರಾಧ. ಈ ಕುರಿತು ವರದಿ ತರಿಸಿಕೊಂಡು ತಪ್ಪಾಗಿದ್ದಲ್ಲಿ ಈ ಖಾತೆಯನ್ನು ರದ್ದುಪಡಿಸಲಾಗುವುದು.
-ಜೆರಾಲ್ಡ್ ರಾಜೇಶ್, ಇಒ, ತಾಪಂ.
ಹಿಂದಿದ್ದ ಪಿಡಿಒ ಈ ಖಾತೆ ಬದಲಾವಣೆ ಮಾಡಿದ್ದಾರೆ. ಮೇಲಧಿಕಾರಿಗಳಿಂದ ಆದೇಶ ಮಾಡಿಸಿದರೆ ಈ ಖಾತೆಯನ್ನು ಸ್ಥಗಿತಗೊಳಿ ಸುವೆ. ಈ ಕುರಿತು ಈಗಾಗಲೇ ಮೇಲಧಿಕಾರಿ ಗಳಿಗೆ ವರದಿ ನೀಡಿದ್ದೇನೆ.
-ಕರಿಯಪ್ಪ, ಪಿಡಿಒ, ಬದನವಾಳು ಗ್ರಾಪಂ
ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…
ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…
ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…
ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…
ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…
ಮೈಸೂರು : ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…