ಓದುಗರ ಪತ್ರ
ಸಾಂಪ್ರದಾಯಿಕ ಕೃಷಿ ಇಂದು ಹವಾಮಾನ ವೈಪರೀತ್ಯ ಮತ್ತು ಮಣ್ಣಿನ ಸವಕಳಿಯಿಂದ ಬಳಲುತ್ತಿದೆ.
ಇಂತಹ ಸಂದರ್ಭದಲ್ಲಿ ಹೈಡ್ರೋಪೋನಿಕ್ಸ್ ಕೇವಲ ತಂತ್ರಜ್ಞಾನವಲ್ಲ ಅದು ಕೃಷಿ ಲೋಕದ ಭವಿಷ್ಯದ ಆಶಾಕಿರಣ. ಈ ಪದ್ಧತಿಯಲ್ಲಿ ಕೇವಲ ಶೇ.೧೦ ನೀರನ್ನು ಬಳಸಿ ಶೇ.೪೦೦ ರಷ್ಟು ಇಳುವರಿ ಪಡೆಯಲು ಸಾಧ್ಯ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೆ ಈ ಸ್ಮಾರ್ಟ್ ಕೃಷಿ ಕೇವಲ ಶ್ರೀಮಂತರಿಗೆ ಸೀಮಿತವಾಗಬಾರದು. ಸರ್ಕಾರವು ಕೃಷಿ ಕೇಂದ್ರಗಳಲ್ಲಿ ಹೈಡ್ರೋಪೋನಿಕ್ಸ್ ಟೆಕ್-ಪಾರ್ಕ್ಗಳನ್ನು ಸ್ಥಾಪಿಸಿ ರೈತರಿಗೆ ರಿಯಾಯಿತಿ ದರದಲ್ಲಿ ಪೋಷಕಾಂಶಗಳ ಕಿಟ್ ಒದಗಿಸಬೇಕು. ಮುಖ್ಯವಾಗಿ ಕೀಟನಾಶಕ ಮುಕ್ತ ಬೆಳೆಗಳಿಗೆ ಪ್ರತ್ಯೇಕ ಪ್ರೀಮಿಯಂ ಮಾರುಕಟ್ಟೆ ನಿರ್ಮಿಸುವುದು ಸರ್ಕಾರದ ಆದ್ಯತೆಯಾಗಲಿ. ನಗರೀಕರಣದ ನಡುವೆಯೂ ಮಹಡಿ ಕೃಷಿ ಮಾಡುವವರಿಗೆ ತೆರಿಗೆ ವಿನಾಯಿತಿ ನೀಡುವ ಮೂಲಕ ನಗರ ಕೃಷಿಯನ್ನು ಪ್ರೋತ್ಸಾಹಿಸಬಹುದು. ಕೇವಲ ಮಣ್ಣಿನ ಮೇಲಿನ ಅವಲಂಬನೆ ಬಿಟ್ಟು ವಿಜ್ಞಾನದ ಬಲದಿಂದ ರೈತರು ಸ್ವಾವಲಂಬಿಗಳಾಗಲು ಸರ್ಕಾರ ದಾರಿದೀಪವಾಗಬೇಕು.
ಈ ತಂತ್ರಜ್ಞಾನವು ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿಯೊಬ್ಬ ರೈತನ ಹೊಲಕ್ಕೂ ತಲುಪಿದಾಗ ಮಾತ್ರ ನಿಜವಾದ ಕೃಷಿ ಸ್ವಾವಲಂಬನೆ ಸಾಧ್ಯ.
-ಡಾ. ಎಚ್.ಕೆ. ವಿಜಯಕುಮಾರ್,ಬೆಂಗಳೂರು
ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿಂದು ಹನೂರು ಎನ್ಕೌಂಟರ್ ಪ್ರಕರಣ ಭಾರೀ ಚರ್ಚೆಗೆ ಕಾರಣವಾಯಿತು. ಕಲಾಪ ಆರಂಭವಾದ ತಕ್ಷಣವೇ ವಿಷಯ ಪ್ರಸ್ತಾಪಿಸಿದ ಆರ್.ಅಶೋಕ್,…
ಕೊಡಗು: ಸಿದ್ದಾಪುರ ವ್ಯಾಪ್ತಿಯ ಶಿಲ್ಪ ಎಸ್ಟೇಟ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಬಂಗಾಳ ಮೂಲದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್ಕೌಂಟರ್ ಘಟನೆಯ…
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…
ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…