Andolana originals

ದುಸ್ಥಿತಿಯಲ್ಲಿ ಬ್ರಹ್ಮೇಶ್ವರ ದೇವಾಲಯ

ಮಹೇಶ್ ಕಿಕ್ಕೇರಿ

ನಿರ್ವಹಣೆಯಿಲ್ಲದೆ ಸೊರಗಿದ ಹೊಯ್ಸಳ ಶಿಲ್ಪಕಲೆಯ ಸ್ಮಾರಕ

ಕಿಕ್ಕೇರಿ: ಗ್ರಾಮದಲ್ಲಿರುವ ಹೊಯ್ಸಳರ ಶಿಲ್ಪಕಲಾ ವೈಭವದ ಪುರಾತನ ಬ್ರಹ್ಮೇಶ್ವರ ದೇವಾಲಯ ಇಂದಿಗೂ ಶಿಲ್ಪಕಲಾಪ್ರಿಯರನ್ನು ಆಕರ್ಷಿಸುತ್ತಿದೆ. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ ಈ ದೇವಾಲಯ ಅಳಿವಿನ ಅಂಚಿನತ್ತ ಸಾಗುತ್ತಿರುವುದು ನೋವಿನ ಸಂಗತಿ.

ಬೆಲೆ ಕಟ್ಟಲಾಗದ ಈ ಶಿಲ್ಪಕಲಾವೈಭವದ ದೇಗುಲದ ಮೇಲೆಲ್ಲ ಗಿಡಗಂಟಿಗಳು ಬೆಳೆದು ನಿಂತಿವೆ. ಅರಳಿ, ಆಲದ ಗಿಡಗಳ ಬೇರುಗಳು ಹರಡಿಕೊಂಡಿದ್ದು, ದೇವಾಲಯದ ಸೌಂದರ್ಯವೇ ಮಾಸಲಿದೆ ಎಂಬ ಆತಂಕ ಶಿಲ್ಪಕಲಾಪ್ರಿಯರದಾಗಿದೆ.

ಶಿಲ್ಪಕಲೆಯ ಅದ್ಭುತ ಕೌತುಕವನ್ನು ಹೊಂದಿರುವ ಈ ದೇವಾಲಯವು ಹೊಯ್ಸಳರ ಕೆತ್ತನೆಯ ಕಲಾಕುಸುರಿಗೆ ಹಿಡಿದ ಕನ್ನಡಿಯಂತಿದೆ. ದೇವಾಲಯದ ಗೋಡೆಗಳಲ್ಲಿ ಪುರಾಣ ಕಥೆಗಳು, ದೇವತೆಗಳು, ನರಸಿಂಹ, ವಿಷ್ಣು, ಶಿವ, ಗಜಸಂಹಾರ ಮುಂತಾದ ಶಿಲ್ಪಗಳನ್ನು ಅದ್ಭುತವಾಗಿ ಕೆತ್ತಲಾಗಿದೆ. ಅತ್ಯಂತ ಸೂಕ್ಷ್ಮ ಕೆತ್ತನೆಗಳುಳ್ಳ ಶಿಲಾ ಬಾಲಿಕೆಯರು, ಗಜಪಡೆ ಮುಂತಾದ ಮೂರ್ತಿಗಳು ಇಲ್ಲಿ ಜೀವವೆತ್ತಂತೆ ರೂಪುತಾಳಿವೆ.

ಇದನ್ನೂ ಓದಿ:-ದಸರಾ ದಶಮಂಟಪ ಬಹುಮಾನ ಆಯ್ಕೆ ಬಗ್ಗೆ ಅಸಮಾಧಾನ

ಗರ್ಭಗುಡಿಯ ಶಿಖರ ಹಾಗೂ ಸುತ್ತಲಿನ ಗೋಪುರಗಳು ಹೊಯ್ಸಳ ಶೈಲಿಯ ಕೌಶಲವನ್ನು ಸಾರುತ್ತಿವೆ. ಉಪ ದೇವಾಲಯಗಳಲ್ಲಿ ಗಣೇಶ, ಭದ್ರಕಾಳಿ, ಹನುಮ, ವಿಷ್ಣು ಸೇರಿದಂತೆ ಅನೇಕ ದೇವರುಗಳ ವಿಗ್ರಹಗಳಿವೆ. ಕ್ರಿಸ್ತಶಕ ೧೧೭೧ರಲ್ಲಿ ಹೊಯ್ಸಳ ರಾಜ ನರಸಿಂಹ ಪ್ರಥಮರ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಆದರೆ ಅದಕ್ಕೂ ಮುನ್ನ ಗಂಗ ವಂಶದ ಕಾಲದಲ್ಲಿಯೇ ಇಲ್ಲೊಂದು ದೇವಾಲಯ ಇತ್ತು ಎಂಬುದಾಗಿ ಶಾಸನಗಳು ತಿಳಿಸುತ್ತವೆ. ದೇವಾಲಯದ ಗರ್ಭಗುಡಿಯಲ್ಲಿ ಬೃಹ್ಮನ ವಿಗ್ರಹವಿರುವುದರಿಂದ ಇದನ್ನು ಬ್ರಹ್ಮೇಶ್ವರ ದೇವಾಲಯ ಎಂದು ಕರೆಯಲಾಗಿದೆ. ಸರಿಯಾದ ಸಂರಕ್ಷಣೆ ಇಲ್ಲದಿದ್ದರೆ ಹೊಯ್ಸಳರ ಕಲಾವೈಭವವನ್ನು ಪ್ರತಿಬಿಂಬಿಸುವ ಈ ಸ್ಮಾರಕ ಮುಂದಿನ ಪೀಳಿಗೆ ನೋಡಲು ದುಸ್ತರವಾಗುವ ಅಪಾಯ ಎದುರಾಗಿದೆ.

ಗ್ರಾಮಸ್ಥರ ಕಳಕಳಿ: ಕಿಕ್ಕೇರಿ ಗ್ರಾಮಸ್ಥರು ಹಾಗೂ ಇತಿಹಾಸ ಪ್ರೇಮಿಗಳು, ಪುರಾತತ್ವ ಇಲಾಖೆಯು ತಕ್ಷಣ ಕ್ರಮ ಕೈಗೊಂಡು ದೇವಾಲಯವನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ದೇವಸ್ಥಾನವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಿದರೆ ಗ್ರಾಮೀಣ ಆರ್ಥಿಕತೆಗೆ ಬಲ ತುಂಬಿದಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಿಕ್ಕೇರಿಯ ಬ್ರಹ್ಮೇಶ್ವರ ದೇವಾಲಯ ಮಾತ್ರವಲ್ಲ, ಸುತ್ತಲಿನ ಪರಿಸರವೂ ನಿರ್ವಹಣೆಯಿಲ್ಲದೆ ಹಾಳು ಕೊಂಪೆಯಂತೆ ಭಾಸವಾಗುತ್ತಿದೆ. ಆದ್ದರಿಂದ ಅಳಿವಿನ ಅಂಚಿಗೆ ಹೋಗುವ ಮುನ್ನ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂಬುದು ಜಾಗೃತ ಮನಸ್ಸುಗಳ ಆಗ್ರಹವಾಗಿದೆ

ಆಂದೋಲನ ಡೆಸ್ಕ್

Recent Posts

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

8 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

13 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

17 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

17 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

17 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

20 hours ago