Andolana originals

ದುಸ್ಥಿತಿಯಲ್ಲಿ ಬ್ರಹ್ಮೇಶ್ವರ ದೇವಾಲಯ

ಮಹೇಶ್ ಕಿಕ್ಕೇರಿ

ನಿರ್ವಹಣೆಯಿಲ್ಲದೆ ಸೊರಗಿದ ಹೊಯ್ಸಳ ಶಿಲ್ಪಕಲೆಯ ಸ್ಮಾರಕ

ಕಿಕ್ಕೇರಿ: ಗ್ರಾಮದಲ್ಲಿರುವ ಹೊಯ್ಸಳರ ಶಿಲ್ಪಕಲಾ ವೈಭವದ ಪುರಾತನ ಬ್ರಹ್ಮೇಶ್ವರ ದೇವಾಲಯ ಇಂದಿಗೂ ಶಿಲ್ಪಕಲಾಪ್ರಿಯರನ್ನು ಆಕರ್ಷಿಸುತ್ತಿದೆ. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ ಈ ದೇವಾಲಯ ಅಳಿವಿನ ಅಂಚಿನತ್ತ ಸಾಗುತ್ತಿರುವುದು ನೋವಿನ ಸಂಗತಿ.

ಬೆಲೆ ಕಟ್ಟಲಾಗದ ಈ ಶಿಲ್ಪಕಲಾವೈಭವದ ದೇಗುಲದ ಮೇಲೆಲ್ಲ ಗಿಡಗಂಟಿಗಳು ಬೆಳೆದು ನಿಂತಿವೆ. ಅರಳಿ, ಆಲದ ಗಿಡಗಳ ಬೇರುಗಳು ಹರಡಿಕೊಂಡಿದ್ದು, ದೇವಾಲಯದ ಸೌಂದರ್ಯವೇ ಮಾಸಲಿದೆ ಎಂಬ ಆತಂಕ ಶಿಲ್ಪಕಲಾಪ್ರಿಯರದಾಗಿದೆ.

ಶಿಲ್ಪಕಲೆಯ ಅದ್ಭುತ ಕೌತುಕವನ್ನು ಹೊಂದಿರುವ ಈ ದೇವಾಲಯವು ಹೊಯ್ಸಳರ ಕೆತ್ತನೆಯ ಕಲಾಕುಸುರಿಗೆ ಹಿಡಿದ ಕನ್ನಡಿಯಂತಿದೆ. ದೇವಾಲಯದ ಗೋಡೆಗಳಲ್ಲಿ ಪುರಾಣ ಕಥೆಗಳು, ದೇವತೆಗಳು, ನರಸಿಂಹ, ವಿಷ್ಣು, ಶಿವ, ಗಜಸಂಹಾರ ಮುಂತಾದ ಶಿಲ್ಪಗಳನ್ನು ಅದ್ಭುತವಾಗಿ ಕೆತ್ತಲಾಗಿದೆ. ಅತ್ಯಂತ ಸೂಕ್ಷ್ಮ ಕೆತ್ತನೆಗಳುಳ್ಳ ಶಿಲಾ ಬಾಲಿಕೆಯರು, ಗಜಪಡೆ ಮುಂತಾದ ಮೂರ್ತಿಗಳು ಇಲ್ಲಿ ಜೀವವೆತ್ತಂತೆ ರೂಪುತಾಳಿವೆ.

ಇದನ್ನೂ ಓದಿ:-ದಸರಾ ದಶಮಂಟಪ ಬಹುಮಾನ ಆಯ್ಕೆ ಬಗ್ಗೆ ಅಸಮಾಧಾನ

ಗರ್ಭಗುಡಿಯ ಶಿಖರ ಹಾಗೂ ಸುತ್ತಲಿನ ಗೋಪುರಗಳು ಹೊಯ್ಸಳ ಶೈಲಿಯ ಕೌಶಲವನ್ನು ಸಾರುತ್ತಿವೆ. ಉಪ ದೇವಾಲಯಗಳಲ್ಲಿ ಗಣೇಶ, ಭದ್ರಕಾಳಿ, ಹನುಮ, ವಿಷ್ಣು ಸೇರಿದಂತೆ ಅನೇಕ ದೇವರುಗಳ ವಿಗ್ರಹಗಳಿವೆ. ಕ್ರಿಸ್ತಶಕ ೧೧೭೧ರಲ್ಲಿ ಹೊಯ್ಸಳ ರಾಜ ನರಸಿಂಹ ಪ್ರಥಮರ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಆದರೆ ಅದಕ್ಕೂ ಮುನ್ನ ಗಂಗ ವಂಶದ ಕಾಲದಲ್ಲಿಯೇ ಇಲ್ಲೊಂದು ದೇವಾಲಯ ಇತ್ತು ಎಂಬುದಾಗಿ ಶಾಸನಗಳು ತಿಳಿಸುತ್ತವೆ. ದೇವಾಲಯದ ಗರ್ಭಗುಡಿಯಲ್ಲಿ ಬೃಹ್ಮನ ವಿಗ್ರಹವಿರುವುದರಿಂದ ಇದನ್ನು ಬ್ರಹ್ಮೇಶ್ವರ ದೇವಾಲಯ ಎಂದು ಕರೆಯಲಾಗಿದೆ. ಸರಿಯಾದ ಸಂರಕ್ಷಣೆ ಇಲ್ಲದಿದ್ದರೆ ಹೊಯ್ಸಳರ ಕಲಾವೈಭವವನ್ನು ಪ್ರತಿಬಿಂಬಿಸುವ ಈ ಸ್ಮಾರಕ ಮುಂದಿನ ಪೀಳಿಗೆ ನೋಡಲು ದುಸ್ತರವಾಗುವ ಅಪಾಯ ಎದುರಾಗಿದೆ.

ಗ್ರಾಮಸ್ಥರ ಕಳಕಳಿ: ಕಿಕ್ಕೇರಿ ಗ್ರಾಮಸ್ಥರು ಹಾಗೂ ಇತಿಹಾಸ ಪ್ರೇಮಿಗಳು, ಪುರಾತತ್ವ ಇಲಾಖೆಯು ತಕ್ಷಣ ಕ್ರಮ ಕೈಗೊಂಡು ದೇವಾಲಯವನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ದೇವಸ್ಥಾನವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಿದರೆ ಗ್ರಾಮೀಣ ಆರ್ಥಿಕತೆಗೆ ಬಲ ತುಂಬಿದಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಿಕ್ಕೇರಿಯ ಬ್ರಹ್ಮೇಶ್ವರ ದೇವಾಲಯ ಮಾತ್ರವಲ್ಲ, ಸುತ್ತಲಿನ ಪರಿಸರವೂ ನಿರ್ವಹಣೆಯಿಲ್ಲದೆ ಹಾಳು ಕೊಂಪೆಯಂತೆ ಭಾಸವಾಗುತ್ತಿದೆ. ಆದ್ದರಿಂದ ಅಳಿವಿನ ಅಂಚಿಗೆ ಹೋಗುವ ಮುನ್ನ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂಬುದು ಜಾಗೃತ ಮನಸ್ಸುಗಳ ಆಗ್ರಹವಾಗಿದೆ

ಆಂದೋಲನ ಡೆಸ್ಕ್

Recent Posts

ಮೈಸೂರು | ಠಾಣಾ ಮಟ್ಟದಲ್ಲಿ ರೌಡಿ ಪ್ರತಿಬಂಧಕ ದಳ ಸ್ಥಾಪನೆ

ಮೈಸೂರು : ನಗರದಲ್ಲಿ ರೌಡಿಗಳ ಚಟುವಟಿಕೆಯನ್ನು ಹತ್ತಿಕ್ಕಲು ಮುಂದಾಗಿರುವ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು, ಸರ್ಕಾರದ ಆದೇಶದನ್ವಯ…

4 hours ago

ಮೈಸೂರು ʼಜಯದೇವʼಕ್ಕೆ ಹೃದಯ ಬಿರಿಯುವಷ್ಟು ಒತ್ತಡ

ಮೈಸೂರು: ದಶಕಗಳ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ದುಬಾರಿ ವೆಚ್ಚದ ಚಿಕಿತ್ಸೆ ಪಡೆಯುವುದನ್ನು ತಗ್ಗಿಸುವ ಜತೆಗೆ ಬೆಂಗಳೂರಿನ…

5 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ : ಚಿತ್ರೋದ್ಯಮವೂ ಪೈರಸಿ ಎಂಬ ಪೆಡಂಬೂತವೂ

ನಾಳಿದ್ದು 21ರಂದು ನಡೆಯುವ ನೀಟ್ ಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆಪ್‌ಅನ್ನು ಜೂ. 27ರ ವರೆಗೆ ತಾತ್ಕಾಲಿಕವಾಗಿ ಕೇಂದ್ರ ಸರ್ಕಾರ ಬ್ಯಾನ್…

5 hours ago

ಮೀಸಲಾತಿ ಸಾಂವಿಧಾನಿಕ ಹಕ್ಕು ; ಸಮಾನತೆಯ ಮೆಟ್ಟಿಲು

ಮೀಸಲಾತಿ ಸೌಲಭ್ಯ ಇದ್ದರೂ ಕಠಿಣ ಪರೀಕ್ಷೆ ಪಾಸ್ ಮಾಡಲೇಬೇಕು ಟಿ.ಕೆ. ಹರೀಶ್ ಐತಿಹಾಸಿಕವಾಗಿ ಮತ್ತು ಸಾಮಾಜಿಕವಾಗಿ ಶೋಷಣೆಗೊಳಗಾಗಿ, ಶಿಕ್ಷಣ ಹಾಗೂ…

5 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 19  ಶುಕ್ರವಾರ  

5 hours ago

ಮುಂಗಾರು ಮತ್ತೆ ಚುರುಕು ; ಮೈಸೂರು, ಮಂಡ್ಯ, ಕೊಡಗಿನಲ್ಲಿ ಮಳೆ ಸಾಧ್ಯತೆ

ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ…

14 hours ago