Andolana originals

ದುಸ್ಥಿತಿಯಲ್ಲಿ ಬ್ರಹ್ಮೇಶ್ವರ ದೇವಾಲಯ

ಮಹೇಶ್ ಕಿಕ್ಕೇರಿ

ನಿರ್ವಹಣೆಯಿಲ್ಲದೆ ಸೊರಗಿದ ಹೊಯ್ಸಳ ಶಿಲ್ಪಕಲೆಯ ಸ್ಮಾರಕ

ಕಿಕ್ಕೇರಿ: ಗ್ರಾಮದಲ್ಲಿರುವ ಹೊಯ್ಸಳರ ಶಿಲ್ಪಕಲಾ ವೈಭವದ ಪುರಾತನ ಬ್ರಹ್ಮೇಶ್ವರ ದೇವಾಲಯ ಇಂದಿಗೂ ಶಿಲ್ಪಕಲಾಪ್ರಿಯರನ್ನು ಆಕರ್ಷಿಸುತ್ತಿದೆ. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ ಈ ದೇವಾಲಯ ಅಳಿವಿನ ಅಂಚಿನತ್ತ ಸಾಗುತ್ತಿರುವುದು ನೋವಿನ ಸಂಗತಿ.

ಬೆಲೆ ಕಟ್ಟಲಾಗದ ಈ ಶಿಲ್ಪಕಲಾವೈಭವದ ದೇಗುಲದ ಮೇಲೆಲ್ಲ ಗಿಡಗಂಟಿಗಳು ಬೆಳೆದು ನಿಂತಿವೆ. ಅರಳಿ, ಆಲದ ಗಿಡಗಳ ಬೇರುಗಳು ಹರಡಿಕೊಂಡಿದ್ದು, ದೇವಾಲಯದ ಸೌಂದರ್ಯವೇ ಮಾಸಲಿದೆ ಎಂಬ ಆತಂಕ ಶಿಲ್ಪಕಲಾಪ್ರಿಯರದಾಗಿದೆ.

ಶಿಲ್ಪಕಲೆಯ ಅದ್ಭುತ ಕೌತುಕವನ್ನು ಹೊಂದಿರುವ ಈ ದೇವಾಲಯವು ಹೊಯ್ಸಳರ ಕೆತ್ತನೆಯ ಕಲಾಕುಸುರಿಗೆ ಹಿಡಿದ ಕನ್ನಡಿಯಂತಿದೆ. ದೇವಾಲಯದ ಗೋಡೆಗಳಲ್ಲಿ ಪುರಾಣ ಕಥೆಗಳು, ದೇವತೆಗಳು, ನರಸಿಂಹ, ವಿಷ್ಣು, ಶಿವ, ಗಜಸಂಹಾರ ಮುಂತಾದ ಶಿಲ್ಪಗಳನ್ನು ಅದ್ಭುತವಾಗಿ ಕೆತ್ತಲಾಗಿದೆ. ಅತ್ಯಂತ ಸೂಕ್ಷ್ಮ ಕೆತ್ತನೆಗಳುಳ್ಳ ಶಿಲಾ ಬಾಲಿಕೆಯರು, ಗಜಪಡೆ ಮುಂತಾದ ಮೂರ್ತಿಗಳು ಇಲ್ಲಿ ಜೀವವೆತ್ತಂತೆ ರೂಪುತಾಳಿವೆ.

ಇದನ್ನೂ ಓದಿ:-ದಸರಾ ದಶಮಂಟಪ ಬಹುಮಾನ ಆಯ್ಕೆ ಬಗ್ಗೆ ಅಸಮಾಧಾನ

ಗರ್ಭಗುಡಿಯ ಶಿಖರ ಹಾಗೂ ಸುತ್ತಲಿನ ಗೋಪುರಗಳು ಹೊಯ್ಸಳ ಶೈಲಿಯ ಕೌಶಲವನ್ನು ಸಾರುತ್ತಿವೆ. ಉಪ ದೇವಾಲಯಗಳಲ್ಲಿ ಗಣೇಶ, ಭದ್ರಕಾಳಿ, ಹನುಮ, ವಿಷ್ಣು ಸೇರಿದಂತೆ ಅನೇಕ ದೇವರುಗಳ ವಿಗ್ರಹಗಳಿವೆ. ಕ್ರಿಸ್ತಶಕ ೧೧೭೧ರಲ್ಲಿ ಹೊಯ್ಸಳ ರಾಜ ನರಸಿಂಹ ಪ್ರಥಮರ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಆದರೆ ಅದಕ್ಕೂ ಮುನ್ನ ಗಂಗ ವಂಶದ ಕಾಲದಲ್ಲಿಯೇ ಇಲ್ಲೊಂದು ದೇವಾಲಯ ಇತ್ತು ಎಂಬುದಾಗಿ ಶಾಸನಗಳು ತಿಳಿಸುತ್ತವೆ. ದೇವಾಲಯದ ಗರ್ಭಗುಡಿಯಲ್ಲಿ ಬೃಹ್ಮನ ವಿಗ್ರಹವಿರುವುದರಿಂದ ಇದನ್ನು ಬ್ರಹ್ಮೇಶ್ವರ ದೇವಾಲಯ ಎಂದು ಕರೆಯಲಾಗಿದೆ. ಸರಿಯಾದ ಸಂರಕ್ಷಣೆ ಇಲ್ಲದಿದ್ದರೆ ಹೊಯ್ಸಳರ ಕಲಾವೈಭವವನ್ನು ಪ್ರತಿಬಿಂಬಿಸುವ ಈ ಸ್ಮಾರಕ ಮುಂದಿನ ಪೀಳಿಗೆ ನೋಡಲು ದುಸ್ತರವಾಗುವ ಅಪಾಯ ಎದುರಾಗಿದೆ.

ಗ್ರಾಮಸ್ಥರ ಕಳಕಳಿ: ಕಿಕ್ಕೇರಿ ಗ್ರಾಮಸ್ಥರು ಹಾಗೂ ಇತಿಹಾಸ ಪ್ರೇಮಿಗಳು, ಪುರಾತತ್ವ ಇಲಾಖೆಯು ತಕ್ಷಣ ಕ್ರಮ ಕೈಗೊಂಡು ದೇವಾಲಯವನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ದೇವಸ್ಥಾನವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಿದರೆ ಗ್ರಾಮೀಣ ಆರ್ಥಿಕತೆಗೆ ಬಲ ತುಂಬಿದಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಿಕ್ಕೇರಿಯ ಬ್ರಹ್ಮೇಶ್ವರ ದೇವಾಲಯ ಮಾತ್ರವಲ್ಲ, ಸುತ್ತಲಿನ ಪರಿಸರವೂ ನಿರ್ವಹಣೆಯಿಲ್ಲದೆ ಹಾಳು ಕೊಂಪೆಯಂತೆ ಭಾಸವಾಗುತ್ತಿದೆ. ಆದ್ದರಿಂದ ಅಳಿವಿನ ಅಂಚಿಗೆ ಹೋಗುವ ಮುನ್ನ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂಬುದು ಜಾಗೃತ ಮನಸ್ಸುಗಳ ಆಗ್ರಹವಾಗಿದೆ

ಆಂದೋಲನ ಡೆಸ್ಕ್

Recent Posts

ಪೊಲಿಟಿಕಲ್‌ ಪ್ರೊಫೆಸರ್‌ ಇಲ್ಲದ 2 ವರ್ಷ

ಸ್ವಾಭಿಮಾನಕ್ಕೆ ಧಕ್ಕೆಯಾದರೆ ಬಂಡೇಳುವುದು ವಿ.ಶ್ರೀನಿವಾಸ ಪ್ರಸಾದ್‌ ಅವರ ಜಾಯಮಾನ ಸಿ.ಹರಕುಮಾರ್ ಸ್ವಾಭಿಮಾನದ ರಾಜಕಾರಣಕ್ಕೆ ಪರ್ಯಾಯವೆಂಬಂತಿದ್ದ ವಿ.ಶ್ರೀನಿವಾಸ ಪ್ರಸಾದ್ ರವರು ನಮ್ಮನ್ನಗಲಿ…

3 hours ago

ಆಂದೋಲನ ವಿಶೇಷ | ವಿಪಕ್ಷ ಮುಕ್ತ ಭಾರತ ; ಬಿಜೆಪಿ ಕನಸು?

ಐಟಿ, ಇಡಿ ಬಳಸಿಕೊಂಡು ಬೆದರಿಸುವ ತಂತ್ರ. ಬಿಜೆಪಿ ಸೇರ್ಪಡೆಯಾದ ನಂತರ ಎಲ್ಲ ಆರೋಪಿಗಳಿಂದ ಮುಕ್ತಿ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿರುವ…

4 hours ago

ಪ.ಬಂಗಾಳ ವಿಧಾನಸಭೆ ಚುನಾವಣೆ : 142 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ಆರಂಭ

ಕೋಲ್ಕತ್ತ : ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನ ಬುಧವಾರ(ಏ.29) ಬೆಳಿಗ್ಗೆ 7 ಗಂಟೆಗೆ…

4 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಏಪ್ರಿಲ್‌ 29 ಬುಧವಾರ

4 hours ago

ಹನೂರು: ಅಲಗುಮೂಲೆ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಕೊಂಡೋತ್ಸವ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಅಲಗುಮೂಲೆ ಗ್ರಾಮದಲ್ಲಿ 3 ವರ್ಷಕ್ಕೊಮ್ಮೆ ನಡೆಯುವ ಶ್ರೀ ಬಸವೇಶ್ವರ…

18 hours ago

ನಂಜನಗೂಡು: 6.2 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ನಂಜನಗೂಡು: ಗ್ಯಾರಂಟಿ ಯೋಜನೆಗಳ ಜೊತೆ ಅಭಿವೃದ್ಧಿ ಕೆಲಸಗಳಿಗೂ ಆದ್ಯತೆ ನೀಡಲಾಗುತ್ತಿದ್ದು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು…

18 hours ago