ಮೈಸೂರು: ವಾಹನವೊಂದರಲ್ಲಿ ಸಾಗಿಸುತ್ತಿದ್ದಾಗ ಕೆಳಗಡೆ ಬಿದ್ದ ಬಟ್ಟೆ ತುಂಬಿದ ಬಾಕ್ಸ್, ಆಟೋ ಚಾಲಕರೊಬ್ಬರಿಗೆ ಸಿಕ್ಕಿದ್ದು, ಅದನ್ನು ಮೈಸೂರಿನ ಬಾಲಕಿ ಯರ ಬಾಲಮಂದಿರಕ್ಕೆ ತಲುಪಿಸಿದ್ದಾರೆ.
ಶನಿವಾರ ಮಧ್ಯಾಹ್ನ ೨ ಗಂಟೆ ವೇಳೆಯಲ್ಲಿ ನಂಜನಗೂಡಿನಿಂದ ಗುಂಡ್ಲುಪೇಟೆ ಕಡೆಗೆ ತೆರಳುತ್ತಿದ್ದ ಸರಕು ಸಾಗಾಣಿಕೆ ವಾಹನದಲ್ಲಿದ್ದ ಬಾಕ್ಸ್ವೊಂದು ಬೇಗೂರು ಬಳಿ ರಸ್ತೆಗೆ ಬಿದ್ದಿದ್ದು, ಅದೇ ದಾರಿಯಲ್ಲಿ ಮೈಸೂರಿನ ಕಡೆಗೆ ಆಟೋ ರಿಕ್ಷಾದಲ್ಲಿ ಬರುತ್ತಿದ್ದ ನವೀನ್ ಅವರಿಗೆ ಆ ಬಾಕ್ಸ್ ಸಿಕ್ಕಿದೆ. ಆ ಬಾಕ್ಸ್ನ್ನು ವಾಪಸ್ ಮಾಡುವ ಸಲುವಾಗಿ ಅವರು ಆ ವಾಹನದ ಹಿಂದೆ ಒಂದಷ್ಟು ದೂರ ಹೋಗಿದ್ದಾರೆ.
ಆದರೆ, ಅದನ್ನು ಹಿಡಿಯಲು ಸಾಧ್ಯವಾಗಿಲ್ಲ. ಹಾಗಾಗಿ ಅವರು ಮೈಸೂರಿನ ಸಿದ್ದಾರ್ಥ ಲೇಔಟ್ನಲ್ಲಿರುವ ತಮ್ಮ ಮನೆಗೆ ವಾಪಸ್ ಬಂದಿದ್ದಾರೆ. ಆ ಬಾಕ್ಸ್ನಲ್ಲಿ ಹೆಣ್ಣುಮಕ್ಕಳು ಧರಿಸುವ ೧೫ ಹೊಸ ಚೂಡಿದಾರ್ಗಳು ಕಂಡುಬಂದಿವೆ. ಸಾಗಾಣಿಕೆ ವಾಹನದವರು ತಮ್ಮನ್ನು ಹುಡುಕಿಕೊಂಡು ಬರಬಹುದು ಎಂದು ನವೀನ್ ಭಾವಿಸಿದ್ದರು. ಹಾಗಾಗಿ ಆ ಬಾಕ್ಸ್ನ್ನು ಮಂಗಳವಾರದವರೆಗೆ ತಮ್ಮ ಮನೆಯಲ್ಲಿಯೇ ಇಟ್ಟುಕೊಂಡಿದ್ದರು.
ಆದರೆ, ಚೂಡಿದಾರ್ಗಳಿದ್ದ ಬಾಕ್ಸ್ ಅನ್ನು ಕೇಳಿಕೊಂಡು ಯಾರೂ ನವೀನ್ ಅವರನ್ನು ಸಂಪರ್ಕಿಸಲಿಲ್ಲ. ಆದ್ದರಿಂದ ಹೆಣ್ಣುಮಕ್ಕಳ ಚೂಡಿದಾರ್ಗಳಿದ್ದ ಬಾಕ್ಸ್ ಅನ್ನು ನವೀನ್ ಅವರು ಮೈಸೂರಿನ ಬಾಲಕಿಯರ ಬಾಲಮಂದಿರಕ್ಕೆ ತಲುಪಿಸಿದ್ದಾರೆ. ಅಲ್ಲಿರುವ ಹೆಣ್ಣುಮಕ್ಕಳಿಗೆ ಈ ಚೂಡಿದಾರ್ಗಳು ಉಪಯುಕ್ತವಾಗಬಹುದು ಎಂದು ಭಾವಿಸಿ ಅಲ್ಲಿಗೆ ಕೊಟ್ಟಿದ್ದೇನೆ ಎಂದು ಆಟೋ ಚಾಲಕ ನವೀನ್ ‘ಆಂದೋಲನ’ ದಿನಪತ್ರಿಕೆಗೆ ತಿಳಿಸಿದರು.
ವಾರಸುದಾರರು ಬಾಲಮಂದಿರ ಸಂಪರ್ಕಿಸಬಹುದು
ನವೀನ್ ಅವರು ಆ ಬಾಕ್ಸ್ನ್ನು ಮಂಗಳವಾರ ಬಾಲಮಂದಿರದಲ್ಲಿದ್ದ ಅಧ್ಯಕ್ಷರಾದ ಭಾಗ್ಯಶ್ರೀ ಅವರಿಗೆ ತಲುಪಿಸಿದ್ದಾರೆ. ಬಾಕ್ಸ್ನ ವಾರಸುದಾರರು ಬಾಲಮಂದಿರಕ್ಕೆ ಆಗಮಿಸಿ ಸೂಕ್ತ ಮಾಹಿತಿಗಳನ್ನು ನೀಡಿ ಅದನ್ನು ವಾಪಸ್ ಪಡೆಯಬಹುದು. ಮಾಹಿತಿಗೆ ಮೊ. ಸಂ. 9481831708/ 9845366774 ಸಂಪರ್ಕಿಸಬಹುದು ಎಂದು ಭಾಗ್ಯಶ್ರೀ ಅವರು ತಿಳಿಸಿದ್ದಾರೆ.
ಅದು ೨೦೦೬ರ ಸಮಯ. ಮೈಸೂರು ಈಗಿನಂತಿರಲಿಲ್ಲ. ಆದರೂ ಮೈಸೂರು ಇಂದಿಗಿಂತ ಹಿಂದೆಯೇನೂ ಇರಲಿಲ್ಲ. ಈಗಿನಷ್ಟೇ ಪ್ರವಾಸಿಗರು, ಹೂಡಿಕೆದಾರರನ್ನು ಆಕರ್ಷಿಸುತ್ತಿತ್ತು. ಮೈಸೂರಿನಲ್ಲಿ…
ಮನೆಗಳ ಗೇಟಿನ ಮುಂದೆಯೇ ಅಪರಿಚಿತರ ಕಾರು ನಿಲ್ಲಿಸುವ ಕೆಟ್ಟ ಪರಂಪರೆಯನ್ನು ಅನೇಕ ಕಡೆ ಕಾಣಬಹುದು. ಸೂರ್ಯಬೇಕರಿ ಬಳಿಯ ಎರಡನೇ ಅಡ್ಡರಸ್ತೆಯಲ್ಲಿ…
ಭಾರತೀಯ ರೈಲ್ವೆಯನ್ನು ನೆಚ್ಚಿಕೊಂಡಿರುವವರು ಕೊಟ್ಯಂತರ ಮಂದಿ ಇದ್ದಾರೆ. ಈ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ರೈಲು ನಿಲ್ದಾಣಗಳಲ್ಲಿ ರೈಲು ನೀರಿನ ಬಾಟಲಿಗಳ…
ಬೆಲೆ ಹೆಚ್ಚಳವೆಂಬುದು ಈಗ ಅನಿರೀಕ್ಷಿತವಲ್ಲವೆಂಬುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಸದ್ಯದಲ್ಲೆ ಇದಕ್ಕೆ ಸೇರ್ಪಡೆಯಾಗುವಂತಿದೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್…
ಪಂಜು ಗಂಗೊಳ್ಳಿ ಅವರ ವಾರದ ಅಂಕಣ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ‘ಲೋಟಸ್ ಪೆಟಲ್ ಫೌಂಡೇಶನ್’ ಸ್ಥಾಪನೆ ಜಾರ್ಖಂಡಿನ ರಾಂಚಿಯ ಕುಶಾಲ್ ರಾಜ್…
ಕೇಶವ್ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಿಂದ ಅಚ್ಚರಿಯ ಸಂಶೋಧನೆ! ಮೈಸೂರು: ಬಸವನಹುಳುಗಳನ್ನು ಜಮೀನುಗಳಲ್ಲಿ ರೈತರು ನೋಡಿದರೆ, ನಮ್ಮ…