Andolana originals

ಅಸ್ಸಾದಿಯವರ ಶಿಷ್ಯನಾಗಿದ್ದೇ ಅವಿಸ್ಮರಣೀಯ

• ಆದಿತ್ಯ ಸೊಂಡಿ, ಹಿರಿಯ ವಕೀಲರು, ಸುಪ್ರೀಂ ಕೋರ್ಟ್, ಹೊಸದಿಲ್ಲಿ

ಡಾ.ಮುಜಾಫರ್ ಅಸ್ಸಾದಿಯವರ ಶಿಷ್ಯನಾಗಿರುವುದು ನನ್ನ ಭಾಗ್ಯ ಎಂದು ನಂಬುತ್ತೇನೆ. ನಮ್ಮ ಭೇಟಿಯು ಯೋಜಿತವಲ್ಲದಿದ್ದರೂ, ಅದು ತಪ್ಪದೇ ಒಂದು ದೈವೀಕೃತ್ಯವಾಯಿ ತೇನೋ ಅನಿಸುತ್ತದೆ. 2007ರಲ್ಲಿ ನಾನು ನನ್ನ ಪಿಎಚ್.ಡಿ.ಗೆ ಸೇರುವ ಯೋಜನೆ ಮಾಡುತಿದ್ದೆ. ಆದರೆ, ಬೆಂಗಳೂರು ವಿಶ್ವವಿದ್ಯಾಲಯದ ಅರೆಬರೆ ಸಹಕಾರದ ತೊಂದರೆಯಿಂದ ಬೇಸರಗೊಂಡು, ಅದನ್ನು ತಳ್ಳಿಹಾಕಿದ್ದೆ. ನನ್ನ ಹಿಂದಿ ಮಾಸ್ಟರ್ ಡಾ. ಇಕ್ವಾಲ್ ಅಹ್ಮದ್ (ನನಗೆ ಪಿಎಚ್.ಡಿ.ಗೆ ಪ್ರೇರೇಪಿಸಿದ ಮಹತ್ವದ ವ್ಯಕ್ತಿ) ಮೈಸೂರು ವಿಶ್ವವಿದ್ಯಾನಿಲಯದ ಬಗ್ಗೆ ಅಸ್ಸಾದಿಯವರ ಶಿಷ್ಯನಾಗಿದ್ದೇ ನಿಸ್ವಾರ್ಥ ಸ್ನೇಹಭಾವ ಅವಿಸ್ಮರಣೀಯ ಸುಳಿವು ನೀಡಿದರು.

ಅವರು ಮೈಸೂರಿನಲ್ಲಿ ಬೆಳೆದವರಾಗಿದ್ದು, ಅದನ್ನು ಒಂದು ಕಲಿಕೆಗೆ ಸೂಕ್ತ ಸ್ಥಳವೆಂದು ತಿಳಿದಿದ್ದರು. ಅಸ್ಥಾದಿ ಯವರ ಪ್ರೊಫೈಲ್ ಅನ್ನು ಪರಿಶೀಲಿಸಿದಾಗ, ಅವರ ಸಂಶೋಧನಾ ಕ್ಷೇತ್ರಗಳು ನನ್ನ ವೈಯಕ್ತಿಕ ಮತ್ತು ಸಾಮಾಜಿಕ ಆಸಕ್ತಿಯ ವಿಷಯಗಳಾಗಿದ್ದವು. ಹಾಗಾಗಿ ಅವರ ಸಂಪರ್ಕಕ್ಕೆ ಬಂದೆ. ಈ ರೀತಿಯಾಗಿ ಆರಂಭವಾಯಿತು mentorship, ಸ್ನೇಹ ಮತ್ತು ಮಾರ್ಗ ದರ್ಶನದ ಒಂದು ಚಿರಸ್ಥಾಯಿ ಸಂಬಂಧ.

ಶ್ರೇಷ್ಠ ಜ್ಞಾನ ಮತ್ತು ವಿಶ್ಲೇಷಣೆಯ ಮಾದರಿ: ಅಸ್ಸಾದಿಯವರು ಸುಲಭವಾಗಿ ಗಮನ ಸೆಳೆಯುವಂಥ ಜ್ಞಾನ ಮತ್ತು ವಿಶ್ಲೇಷಣೆಯ ಸಾಮರ್ಥ್ಯ ಹೊಂದಿದ್ದರು. ಅವರ ವಿದ್ವತ್ತು ಮತ್ತು ಆಳವಾದ ಅಧ್ಯಯನವು ನನ್ನಂತಹವರಿಗಿಂತ ಅನೇಕಾನೇಕ ಮೆಟ್ಟಿಲುಗಳಷ್ಟು ಮುಂದೆ ಇತ್ತು. ಆದರೂ ಅವರು ನನ್ನಂತಹವರಿಗೆ ಅವಶ್ಯವಾಗಿರುವ ಧೀಮಂತಿಕೆಯನ್ನು ತೋರಿಸಿಕೊಟ್ಟರು. ನನ್ನ ಪ್ರಾಥಮಿಕ ನನ್ನ ಪಿಎಚ್.ಡಿ ನಂತರ, ಅವರು ಡಾ.ಇನ್ಸಾಲ್ ಅಹ್ಮದ್ ಮತ್ತು ನನಗೆ ಮೈಸೂರಿನಲ್ಲಿ ಬಿರಿಯಾನಿ ಉಪಚಾರ ಮಾಡಿದರು. ಮತ್ತೊಮ್ಮೆ, ತಮ್ಮ ಮನೆಯಲ್ಲಿಯೇ ಭೋಜನಕ್ಕೆ ಕರೆದು, ಕುಟುಂಬದ ಜೊತೆ ಸಮಯ
ಹಂಚಿಕೊಂಡರು. ಇದು ಅವರ ಉದಾರ ಮನಸ್ಸಿಗೆ ಒಂದು ಉತ್ತಮ ಉದಾಹರಣೆ.

ಸಂಶೋಧನಾ ಪ್ರಸ್ತಾವನೆಗಳನ್ನು ತೆಗೆದುಕೊಂಡು ಹೋದಾಗ, ಅದು ಅವ್ಯವಸ್ಥಿತ ಬರವಣಿಗೆಯಾಗಿತ್ತು. ಅದನ್ನು ಹೇಗೆ ಸುಧಾರಿಸಬೇಕು ಎಂಬುದನ್ನು ಕುರಿತು ಮಾರ್ಗದರ್ಶನ ನೀಡಿದರು. ಅಲ್ಲದೆ, ಬರವಣಿಗೆಯ ಶೈಲಿ ಮತ್ತು ರೂಪದಲ್ಲಿ
ಮಾರ್ಪಾಡು ಮಾಡಲು ಪ್ರೋತ್ಸಾಹಿಸಿದರು. ಅವರ ಸಕಾಲದ ಮಾರ್ಗದರ್ಶನದಿಂದ
ನನ್ನ ಮಹಾಪ್ರಬಂಧವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ನಾನು ಡಾಕ್ಟರೇಟ್ ಪದವಿಯನ್ನು ಗಳಿಸಲು ಸಾಧ್ಯವಾಯಿತು. ಅವರನ್ನು ನನ್ನ ಮಾರ್ಗದರ್ಶಕ ಎಂದು ಹೆಮ್ಮೆಪಟ್ಟು ಕರೆಯುತ್ತೇನೆ ಮತ್ತು ಅವರ ಅಧ್ಯಯನದ ಹಾದಿಯನ್ನು ಅನುಸರಿಸುತ್ತೇನೆ.

ಅಸ್ಥಾದಿಯವರ ಅಭ್ಯಾಸ ಕೇವಲ ಅಕಾಡೆಮಿಕ್ ಮಟ್ಟದಲ್ಲಿ ಮಾತ್ರವಲ್ಲ, ಸಮಕಾಲೀನ, ಸೈದ್ಧಾಂತಿಕ ಮತ್ತು ನೈತಿಕ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಮೈತ್ರಿ, ಮಾರ್ಗದರ್ಶನ, ಮತ್ತು ಅಭ್ಯಾಸದ ಮೂಲಕ ಅವರು ಹದವಾಗಿ ನನ್ನನ್ನು ಬೆಳೆಸಿದ್ದು, ಅವರು ನನಗೆ ಪ್ರೇರಣೆ ಮತ್ತು ಆಶೀರ್ವಾದದ ಮೂಲರಾಗಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಹೇಳಿಕೆಗೆ ಕಿಚ್ಚ ಸುದೀಪ್‌ ಕೆಂಡಾಮಂಡಲ

ಬೆಂಗಳೂರು:ಇತ್ತೀಚೆಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಕನ್ನಡ ಚಿತ್ರರಂಗದ ಹಲವರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. ಅಶ್ಲೀಲವಾಗಿ ಮಾತನಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ…

20 mins ago

ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಾಕಷ್ಟು ಅಭ್ಯರ್ಥಿಗಳಿದ್ದಾರೆ: ಎಚ್.ಡಿ.ಕುಮಾರಸ್ವಾಮಿ

ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್‌ ಪಕ್ಷದಿಂದ ದೂರ ಉಳಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ…

38 mins ago

ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಬಜೆಟ್ ಬಗ್ಗೆ ಟೀಕೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಮೈಸೂರು: ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಬಜೆಟ್‌ ಬಗ್ಗೆ ಟೀಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ…

52 mins ago

ಎಸ್‌ಡಿಪಿಐ ರಾಜ್ಯಾಧ್ಯಕ್ಷ ಮಜಿದ್‌ ಪ್ರಯಾಣಿಸುತ್ತಿದ್ದ ಕಾರ್‌ನಲ್ಲಿ ಬೆಂಕಿ: ಅದೃಷ್ಟವಶಾತ್‌ ಪಾರು

ಮಡಿಕೇರಿ: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಮಜಿದ್‌ ಪ್ರಯಾಣಿಸುತ್ತಿದ್ದ ಕಾರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್‌ ಪಾರಾಗಿದ್ದಾರೆ. ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ…

2 hours ago

ಓದುಗರ ಪತ್ರ: ಜಲಪುರಿ ಬಡಾವಣೆ ರಸ್ತೆ ದುರಸ್ತಿ ಮಾಡಿ

ಮೈಸೂರಿನ ಜಲಪುರಿ ಬಡಾವಣೆಯ  ಪೊಲೀಸ್ ಆಸ್ಪತ್ರೆ ಮುಂಭಾಗದ  ರಸ್ತೆ ತೀರಾ ಹದಗೆಟ್ಟಿದೆ.  ಕಾಳಿಕಾಂಬ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ಕೆಲವು…

3 hours ago

ಓದುಗರ ಪತ್ರ: ಐಪಿಎಲ್‌ನಲ್ಲಿ ಭಾರತೀಯ ಆಟಗಾರರೇ ಆಡಲಿ

೨೦೦೮ರಲ್ಲಿ ಭಾರತದಲ್ಲಿ ಶುರುವಾದ ‘ಇಂಡಿಯನ್ ಪ್ರೀಮಿಯರ್ ಲೀಗ್’  (ಐಪಿಎಲ್) ಕ್ರಿಕೆಟ್ ಆಟವು ಇಡೀ ದೇಶದ ಗಮನ ಸೆಳೆದಿದೆ.  ಐಪಿಎಲ್ ತಂಡಗಳಲ್ಲಿ …

3 hours ago