Andolana originals

ಅಸ್ಸಾದಿಯವರ ಶಿಷ್ಯನಾಗಿದ್ದೇ ಅವಿಸ್ಮರಣೀಯ

• ಆದಿತ್ಯ ಸೊಂಡಿ, ಹಿರಿಯ ವಕೀಲರು, ಸುಪ್ರೀಂ ಕೋರ್ಟ್, ಹೊಸದಿಲ್ಲಿ

ಡಾ.ಮುಜಾಫರ್ ಅಸ್ಸಾದಿಯವರ ಶಿಷ್ಯನಾಗಿರುವುದು ನನ್ನ ಭಾಗ್ಯ ಎಂದು ನಂಬುತ್ತೇನೆ. ನಮ್ಮ ಭೇಟಿಯು ಯೋಜಿತವಲ್ಲದಿದ್ದರೂ, ಅದು ತಪ್ಪದೇ ಒಂದು ದೈವೀಕೃತ್ಯವಾಯಿ ತೇನೋ ಅನಿಸುತ್ತದೆ. 2007ರಲ್ಲಿ ನಾನು ನನ್ನ ಪಿಎಚ್.ಡಿ.ಗೆ ಸೇರುವ ಯೋಜನೆ ಮಾಡುತಿದ್ದೆ. ಆದರೆ, ಬೆಂಗಳೂರು ವಿಶ್ವವಿದ್ಯಾಲಯದ ಅರೆಬರೆ ಸಹಕಾರದ ತೊಂದರೆಯಿಂದ ಬೇಸರಗೊಂಡು, ಅದನ್ನು ತಳ್ಳಿಹಾಕಿದ್ದೆ. ನನ್ನ ಹಿಂದಿ ಮಾಸ್ಟರ್ ಡಾ. ಇಕ್ವಾಲ್ ಅಹ್ಮದ್ (ನನಗೆ ಪಿಎಚ್.ಡಿ.ಗೆ ಪ್ರೇರೇಪಿಸಿದ ಮಹತ್ವದ ವ್ಯಕ್ತಿ) ಮೈಸೂರು ವಿಶ್ವವಿದ್ಯಾನಿಲಯದ ಬಗ್ಗೆ ಅಸ್ಸಾದಿಯವರ ಶಿಷ್ಯನಾಗಿದ್ದೇ ನಿಸ್ವಾರ್ಥ ಸ್ನೇಹಭಾವ ಅವಿಸ್ಮರಣೀಯ ಸುಳಿವು ನೀಡಿದರು.

ಅವರು ಮೈಸೂರಿನಲ್ಲಿ ಬೆಳೆದವರಾಗಿದ್ದು, ಅದನ್ನು ಒಂದು ಕಲಿಕೆಗೆ ಸೂಕ್ತ ಸ್ಥಳವೆಂದು ತಿಳಿದಿದ್ದರು. ಅಸ್ಥಾದಿ ಯವರ ಪ್ರೊಫೈಲ್ ಅನ್ನು ಪರಿಶೀಲಿಸಿದಾಗ, ಅವರ ಸಂಶೋಧನಾ ಕ್ಷೇತ್ರಗಳು ನನ್ನ ವೈಯಕ್ತಿಕ ಮತ್ತು ಸಾಮಾಜಿಕ ಆಸಕ್ತಿಯ ವಿಷಯಗಳಾಗಿದ್ದವು. ಹಾಗಾಗಿ ಅವರ ಸಂಪರ್ಕಕ್ಕೆ ಬಂದೆ. ಈ ರೀತಿಯಾಗಿ ಆರಂಭವಾಯಿತು mentorship, ಸ್ನೇಹ ಮತ್ತು ಮಾರ್ಗ ದರ್ಶನದ ಒಂದು ಚಿರಸ್ಥಾಯಿ ಸಂಬಂಧ.

ಶ್ರೇಷ್ಠ ಜ್ಞಾನ ಮತ್ತು ವಿಶ್ಲೇಷಣೆಯ ಮಾದರಿ: ಅಸ್ಸಾದಿಯವರು ಸುಲಭವಾಗಿ ಗಮನ ಸೆಳೆಯುವಂಥ ಜ್ಞಾನ ಮತ್ತು ವಿಶ್ಲೇಷಣೆಯ ಸಾಮರ್ಥ್ಯ ಹೊಂದಿದ್ದರು. ಅವರ ವಿದ್ವತ್ತು ಮತ್ತು ಆಳವಾದ ಅಧ್ಯಯನವು ನನ್ನಂತಹವರಿಗಿಂತ ಅನೇಕಾನೇಕ ಮೆಟ್ಟಿಲುಗಳಷ್ಟು ಮುಂದೆ ಇತ್ತು. ಆದರೂ ಅವರು ನನ್ನಂತಹವರಿಗೆ ಅವಶ್ಯವಾಗಿರುವ ಧೀಮಂತಿಕೆಯನ್ನು ತೋರಿಸಿಕೊಟ್ಟರು. ನನ್ನ ಪ್ರಾಥಮಿಕ ನನ್ನ ಪಿಎಚ್.ಡಿ ನಂತರ, ಅವರು ಡಾ.ಇನ್ಸಾಲ್ ಅಹ್ಮದ್ ಮತ್ತು ನನಗೆ ಮೈಸೂರಿನಲ್ಲಿ ಬಿರಿಯಾನಿ ಉಪಚಾರ ಮಾಡಿದರು. ಮತ್ತೊಮ್ಮೆ, ತಮ್ಮ ಮನೆಯಲ್ಲಿಯೇ ಭೋಜನಕ್ಕೆ ಕರೆದು, ಕುಟುಂಬದ ಜೊತೆ ಸಮಯ
ಹಂಚಿಕೊಂಡರು. ಇದು ಅವರ ಉದಾರ ಮನಸ್ಸಿಗೆ ಒಂದು ಉತ್ತಮ ಉದಾಹರಣೆ.

ಸಂಶೋಧನಾ ಪ್ರಸ್ತಾವನೆಗಳನ್ನು ತೆಗೆದುಕೊಂಡು ಹೋದಾಗ, ಅದು ಅವ್ಯವಸ್ಥಿತ ಬರವಣಿಗೆಯಾಗಿತ್ತು. ಅದನ್ನು ಹೇಗೆ ಸುಧಾರಿಸಬೇಕು ಎಂಬುದನ್ನು ಕುರಿತು ಮಾರ್ಗದರ್ಶನ ನೀಡಿದರು. ಅಲ್ಲದೆ, ಬರವಣಿಗೆಯ ಶೈಲಿ ಮತ್ತು ರೂಪದಲ್ಲಿ
ಮಾರ್ಪಾಡು ಮಾಡಲು ಪ್ರೋತ್ಸಾಹಿಸಿದರು. ಅವರ ಸಕಾಲದ ಮಾರ್ಗದರ್ಶನದಿಂದ
ನನ್ನ ಮಹಾಪ್ರಬಂಧವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ನಾನು ಡಾಕ್ಟರೇಟ್ ಪದವಿಯನ್ನು ಗಳಿಸಲು ಸಾಧ್ಯವಾಯಿತು. ಅವರನ್ನು ನನ್ನ ಮಾರ್ಗದರ್ಶಕ ಎಂದು ಹೆಮ್ಮೆಪಟ್ಟು ಕರೆಯುತ್ತೇನೆ ಮತ್ತು ಅವರ ಅಧ್ಯಯನದ ಹಾದಿಯನ್ನು ಅನುಸರಿಸುತ್ತೇನೆ.

ಅಸ್ಥಾದಿಯವರ ಅಭ್ಯಾಸ ಕೇವಲ ಅಕಾಡೆಮಿಕ್ ಮಟ್ಟದಲ್ಲಿ ಮಾತ್ರವಲ್ಲ, ಸಮಕಾಲೀನ, ಸೈದ್ಧಾಂತಿಕ ಮತ್ತು ನೈತಿಕ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಮೈತ್ರಿ, ಮಾರ್ಗದರ್ಶನ, ಮತ್ತು ಅಭ್ಯಾಸದ ಮೂಲಕ ಅವರು ಹದವಾಗಿ ನನ್ನನ್ನು ಬೆಳೆಸಿದ್ದು, ಅವರು ನನಗೆ ಪ್ರೇರಣೆ ಮತ್ತು ಆಶೀರ್ವಾದದ ಮೂಲರಾಗಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರು ಬದಲಾವಣೆ : ಸಂಸದ ಯದುವೀರ್‌

ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…

7 hours ago

ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಇಳುವರಿ ಜೊತೆಗೆ ಹೆಚ್ಚಿನ ಆದಾಯ ಪಡೆಯರಿ : ರೈತರಿಗೆ ಸಿಎಂ ಕರೆ

ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…

7 hours ago

ಟಿ-20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ :ಸೂರ್ಯಕುಮಾರ್ ಯಾದವ್ ನಾಯಕ

ಹೊಸದಿಲ್ಲಿ: ಮುಂಬರುವ ಐಸಿಸಿ ಟಿ-೨೦ ವಿಶ್ವಕಪ್‌ಗಾಗಿ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್…

7 hours ago

ಮೊಟ್ಟೆ ಕ್ಯಾನ್ಸರ್‌ ಕಾರಕವಲ್ಲ : ಕೇಂದ್ರ ವರದಿ

ಹೊಸದಿಲ್ಲಿ : ಮೊಟ್ಟೆ ಸೇವೆನೆಗೆ ಸುರಕ್ಷಿತವಾಗಿದ್ದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಾಗುವ ಯಾವುದೇ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಆಹಾರ…

7 hours ago

‘ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಿ’ : ಶಿವಶಂಕರ್ ಸೂಚನೆ

ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…

8 hours ago

ಮೈಸೂರು | ನಾಳೆಯಿಂದ ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ

ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…

8 hours ago