Andolana originals

ಬಹುರೂಪಿ ನಾಟಕೋತ್ಸವಕ್ಕೆ ವರ್ಣರಂಜಿತ ತೆರೆ

ಮೈಸೂರು: ‘ಇವ ನಮ್ಮವ… ಇವ ನಮ್ಮವ…’ ಬಸವಣ್ಣನವರ ವಚನದ ಸಾಲಿನ ಆಶಯವನ್ನು ಹೊತ್ತು ಕಳೆದ ಆರು ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿಗೆ ರಂಗರಸದೌತಣವನ್ನು ಉಣ ಬಡಿಸಿದ 24ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಸೋಮವಾರ ವರ್ಣರಂಜಿತ ತೆರೆ ಬಿತ್ತು.

ಆರು ವೇದಿಕೆಗಳಲ್ಲಿ ನಿತ್ಯ ನಾನಾ ಭಾಷೆಗಳ ನಾಟಕಗಳು, ವೈವಿಧ್ಯಮಯ ಜನಪದ ಕಾರ್ಯಕ್ರಮ, ಚಲನಚಿತ್ರೋತ್ಸವ, ಕರಕುಶಲ ಹಾಗೂ ಪುಸ್ತಕ ಪ್ರದರ್ಶನ, ಬಸವಣ್ಣನವರ ವಚನದ ಛಾಯಾಚಿತ್ರಗಳ 3ಡಿ ಪ್ರದರ್ಶನ, ವಚನ ವಾಚನದ ಮೂಲಕ ಪ್ರೇಕ್ಷಕ ವರ್ಗಕ್ಕೆ ರಸದೌತಣ ಉಣಬಡಿಸಿತು.

ಪುಸ್ತಕ ಮೇಳ, ದೇಶಿ ತಿನಿಸು ಮೇಳ, ಕರಕುಶಲ ಮೇಳ ಹೀಗೆ ನಾನಾ ಕಾರ್ಯಕ್ರಮಗಳ ಮೂಲಕ ಎಲ್ಲಾ ವಯೋಮಾನದ ಮತ್ತು ವರ್ಗದ ಜನರನು ಬೆಸೆಯಿತು.

ನಾಟಕೋತ್ಸವಕ್ಕಾಗಿ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು 300ಕ್ಕೂ ಹೆಚ್ಚಿನ ಕಲಾವಿದರು ತಮ್ಮ ಕಲಾ ಪ್ರದರ್ಶಿಸಿದರು. ರಂಗಾಯಣದ ಭೂಮಿಗೀತ, ವನರಂಗ, ಕಲಾಮಂದಿರ, ಕಿರುರಂಗಮಂದಿರ ವೇದಿಕೆಗಳಲ್ಲಿ ಕನ್ನಡದ 12 ಹಾಗೂ ತುಳು ಭಾಷೆಯ ಒಂದು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕೋಲ್ಕತ್ತಾ ಮಣಿಪುರ, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳ 6 ನಾಟಕಗಳೂ ಸೇರಿದಂತೆ ಒಟ್ಟು 19 ನಾಟಕಗಳು ಮತ್ತು ಮಹಿಳಾ ಆಶಯವುಳ್ಳ ಒಂದು ಯಕ್ಷಗಾನ ಪ್ರದರ್ಶನಗೊಂಡವು.

ಜನಪದೋತ್ಸವದಲ್ಲಿ ಚಂದದ ದೃಶ್ಯಾವಳಿ

ಮೈಸೂರು: ತುಳುನಾಡಿನ ಕಂಗೀಲು ನೃತ್ಯದ ವೈಭೋಗ, ಉಡುಪಿಯ ಕರಗ ಕೋಲಾಟದ ಸೊಗಡು..! ಇದು 24ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಕೊನೆಯ ದಿನವಾದ ಸೋಮವಾರದ ಜನಪದೊತ್ಸವದಲ್ಲಿ ಕಂಡು ಬಂದ ಚಂದದ ದೃಶ್ಯಾವಳಿಗಳು.

ಕಿಂದರಿಜೋಗಿ ಆವರಣದಲ್ಲಿ ಸುಳ್ಯದ ಬಂಗ್ಲೆ ಗುಡ್ಡೆಯ ಸುಗಿಪು ಜಾನಪದ ಕಲಾ ತಂಡದ ಕಂಗೀಲು ಪಾತ್ರಧಾರಿಗಳು ತೆಂಗಿನ ತಿಲಂಗ ಧರಿಸಿ ಕುಣಿಯುತ್ತಿದ್ದ ಬಗೆ ನೋಡುಗರನ್ನು ಒಂದು ಕ್ಷಣ ಅವಕ್ಕಾಗಿಸಿತು. ಕಂಗೀಲು ಒಂದು ಜಾನಪದ ಕುಣಿತವೂ ಹೌದು, ಆಚರಣೆಯೂ ಹೌದು. ಊರಿಗೆ ಬಂದ ಮಾರಿಯನ್ನು ಓಡಿಸುವ ಆಶಯವಿರುವ ಈ ಜನಪದ ಕುಣಿತ ತುಳುನಾಡಿನ ಪ್ರಮುಖ ಪ್ರದರ್ಶಕ ಕಲೆ ಆಗಿದ್ದು, ಸಾಂಸ್ಕೃತಿಕ ನಗರಿಯ ರಂಗಾಸಕ್ತರು ಈ ಕಲೆಯ ಸವಿ ಸವಿದರು.

ಉಡುಪಿಯ ಉದ್ಯಾವರದ ಪುನೀತ್ ತಂಡದ ಕಲಾವಿದರು ನಡೆಸಿಕೊಟ್ಟ ಕರಗ ಕೋಲಾಟ ಅದ್ಭುತವಾಗಿ ಮೂಡಿಬಂತು. ತಮಟೆ ಮತ್ತು ನಾದಸ್ವರದ ನಾದಕ್ಕೆ ತಲೆ ಮೇಲೆ ಅಲಂಕೃತಗೊಂಡ ಕರಗ ಹೊತ್ತು ಕೈಯಲ್ಲಿ ಬಣ್ಣ ಬಳಿದ ಕೋಲುಗಳನ್ನು ಹಿಡಿದು ಕಲಾವಿದರು ಪ್ರದರ್ಶಿಸಿದ ನೃತ್ಯ ಬಹರೂಪಿಗೆ ಮೆರುಗು ತಂದಿತು.

ಕೊನೆಯ ದಿನ ಮೇಳೈಸಿದ ರಂಗಕಲೆ

ಮೈಸೂರು: ಕೊನೆಯ ದಿನದ ಬಹುರೂಪಿಯಲ್ಲಿ ರಂಗಾಯಣದ ಅಂಗಳದಲ್ಲಿ ರಂಗ ಕಲೆ ಮೇಳೈಸಿತು. ಮಧ್ಯಾಹ್ನದವರೆಗೂ ರಂಗಾಯಣದ ಆವರಣ ಭಣಗುಟ್ಟುತ್ತಿತ್ತು. ಸಂಜೆಯಾಗುತ್ತಲೇ ರಂಗಾಯಣದತ್ತ ಆಗಮಿಸಿದ ನೂರಾರು ಸಾರ್ವಜನಿಕರು ನಾಟಕೋತ್ಸವದ ಸಂಭ್ರಮದಲ್ಲಿ ಭಾಗಿಯಾದರು.

ಅಂತಿಮ ದಿನದಂದು ಪ್ರದರ್ಶನಗೊಂಡ ಪ್ರಶಾಂತ್ ಹಿರೇಮಠ ನಿರ್ದೆಶನದ ಕನ್ನಡ ಭಾಷೆಯ ‘ಪಾರ್ಶ್ವಸಂಗೀತ’, ಹೌದಮ್ ವಿಕ್ಟರ್‌ ಸಿಂಗ್ ನಿರ್ದೆಶನದ ಸಂಭಾಷಣಾ ‘ಅಬೊರಿಜಿನಲ್ ಕೈ’, ದಿನೇಶ್ ಚಮಾಳಿಗೆ ನಿರ್ದೇಶನದ ಕನ್ನಡ ಭಾಷೆಯ ‘ಬೆರಳೆ ಕೊರಳ್’, ಜೆ.ಪಿ.ತೂಮಿನಾಡು ನಿರ್ದೆಶನದ ತುಳು ಭಾಷೆಯ ಕಥೆ ಎಡೇಂಡು’ ನಾಟಕಗಳು ಪ್ರಮುಖ ಆಕರ್ಷಣೆಯಾಗಿದ್ದವು.

ಜಿ ತಂಗಂ ಗೋಪಿನಾಥಂ

ಮೂಲತಃ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಗೋಪಿನಾಥಂ ಗ್ರಾಮದವನಾದ ನಾನು ಸದ್ಯ,‌ ಮೈಸೂರಿನಲ್ಲಿ ನೆಲೆಸಿದ್ದೇನೆ. 2019ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿಎ ( ಇತಿಹಾಸ, ಐಚ್ಛಿಕ ಕನ್ನಡ, ಪತ್ರಿಕೋದ್ಯಮ ) ಪದವಿಯನ್ನು ಮುಗಿಸಿದ್ದೇನೆ. ನಂತರ 2021ರಲ್ಲಿ‌ ಮೈಸೂರು ವಿಶ್ವವಿದ್ಯಾನಿಲಯದ‌ಲ್ಲಿ ಎಂಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ‌ 2 ವರ್ಷಗಳ ‌ಕಾಲ ಅನುಭವ ಪಡೆದುಕೊಂಡಿದ್ದೇನೆ. ವಿಜಯವಾಣಿ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ಸಹಾಯಕ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಕಳೆದ 8 ತಿಂಗಳಿಂದ ಮೈಸೂರಿನ ಆಂದೋಲನ‌ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

Recent Posts

ಓದುಗರ ಪತ್ರ: ಯಥಾ ರಾಜ.. ತಥಾ ಅಧಿಕಾರಿ

‘ಸರಿಯಾಗಿ ಕೆಲಸ ಮಾಡದಿದ್ದರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ. ನಾಚಿಕೆ ಆಗಲ್ವ ನಿಮಗೆ.. ಜನರನ್ನು ಯಾಕೆ ಹೀಗೆ ಸಾಯಿಸುತ್ತೀರಿ. ಯುವ ಅಧಿಕಾರಿಗಳಾದ…

3 mins ago

ಸೇವಾ ಕೈಂಕರ್ಯದ ಪ್ರತಿರೂಪ ಚೈತನ್ಯ ಚಾರಿಟಬಲ್ ಟ್ರಸ್ಟ್‌

ಮಹಿಳೆಯರು, ಮಕ್ಕಳ ಸಬಲೀಕರಣವೇ ಸಂಸ್ಥೆಯ ಧ್ಯೇಯ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸೇವೆ ಮಾಡುವ ಸಂಸ್ಥೆಗಳು ವಿರಳ. ಅಂತಹ ವಿರಳಾತೀತ ವಿರಳ…

26 mins ago

ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್‌ ಟ್ರೋಫಿಗೆ ಚಾಲನೆ

ಮಡಿಕೇರಿ: ಪಾಂಡಂಡ ಕುಟ್ಟಪ್ಪ ಅವರ ಕನಸಿನ ಕೂಸಾದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡ ಹಿನ್ನೆಲೆಯಲ್ಲಿ ಕೊಡವ…

2 hours ago

ಹಲವು ಹೊಸ ದಾಖಲೆಗಳಿಗೆ ಷರಾ ಬರೆದ 2025

ಗಿರೀಶ್‌ ಹುಣಸೂರು  ೨೦೨೫ನೇ ಸಾಲಿನಲ್ಲಿ ದೇಶ, ರಾಜ್ಯದಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಭಾರತ ಮೂಲದ ಶುಭಾಂಶು ಶುಕ್ಲಾ ಬಾಹ್ಯಾಕಾಶದಲ್ಲಿ ೧೮…

2 hours ago

ಸಫಾರಿ ನಿರ್ಬಂಧ: ಮೈಸೂರಿನತ್ತ ಪ್ರವಾಸಿಗರ ದಂಡು

ಕೆ.ಬಿ.ರಮೇಶನಾಯಕ ಮೈಸೂರು: ಮಾನವ-ವನ್ಯಜೀವಿಗಳ ಸಂಘರ್ಷವನ್ನು ತಡೆಯಲು ಬಂಡೀಪುರ, ನಾಗರ ಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಸಫಾರಿಗೆ ನಿರ್ಬಂಧ ವಿಧಿಸಿರುವುದರ ನಡುವೆಯೂ ಕ್ರಿಸ್ಮಸ್,…

3 hours ago

ಸಿಲಿಂಡರ್ ಸ್ಪೋಟ ಪ್ರಕರಣ : ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…

11 hours ago