Andolana originals

ಜಂಬೂಸವಾರಿಗೆ ಕಳೆ ತಂದ ಕಲಾ ತಂಡಗಳು

ಎಚ್. ಎಸ್.ದಿನೇಶ್ ಕುಮಾರ್

೮೦ಕ್ಕೂ ಹೆಚ್ಚು ಕಲಾ ತಂಡಗಳು ಭಾಗಿ; ಮೆರವಣಿಗೆಯಲ್ಲಿ ನಾಡು, ನುಡಿ, ಕಲೆ, ಸಂಸ್ಕೃತಿ ಅನಾವರಣ

ಮೈಸೂರು: ವೀರಭದ್ರ ಕುಣಿತ.., ನಂದಿ ಕಂಬ.., ಜಗ್ಗಲಿಗೆ ಮೇಳ.., ಕಂಗೀಲು ಕುಣಿತ.., ಹುಲಿ ವೇಷ.., ಪಟ ಕುಣಿತ.., ತಮಿಳುನಾಡಿನ ಕರಗ ತಪ್ಪಟಂ.., ದೊಣ್ಣೆ ವರಸೆ.., ಕರಡಿ, ಮಹಿಷ ವೇಷ… ಹೀಗೆ ೮೦ಕ್ಕೂ ಹೆಚ್ಚು ಕಲಾ ತಂಡಗಳು ದಸರಾ ಮಹೋತ್ಸವದ ಅಂತಿಮ ದಿನವಾದ ಗುರುವಾರ ನಡೆದ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಾರ್ವಜನಿಕರ ಮನಸೂರೆಗೊಂಡವು.

ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಮೈಸೂರು ಅರಮನೆ ಮುಂಭಾಗದಿಂದ ಜಂಬೂ ಸವಾರಿ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳ ಕಲಾ ತಂಡಗಳು ಸಾಗಿದವು.

ಪ್ರತಿಯೊಂದು ಕಲಾ ತಂಡವೂ ಆಯಾಯ ಜಿಲ್ಲೆಯ ಕಲೆ, ಸಂಸ್ಕೃತಿ ಹಾಗೂ ವಿಶೇಷತೆಗಳನ್ನು ಬಿಂಬಿಸಿದವು. ಮೊದಲಿಗೆ ಉಡಿಗಾಲ ಮಹದೇವಪ್ಪ ತಂಡದವರು ನಂದಿ ಧ್ವಜ ಕುಣಿತ, ಕೆ.ಆರ್.ಮೊಹಲ್ಲಾ ನಿವಾಸಿಗಳು ಹಾಗೂ ಆಕಾಶವಾಣಿ ಕಲಾವಿದರ ತಂಡದಿಂದ ವೀರಭದ್ರ ಕುಣಿತ, ಬೆಂಗಳೂರು ಹಾಗೂ ಮಂಡ್ಯ ಕಲಾವಿದರು ಕೊಂಬು-ಕಹಳೆ, ಉಡುಪಿಯ ಕಲಾವಿದರಿಂದ ಕುಡುಬಿ ಗುಮಟೆ ನೃತ್ಯ, ಬೆಳಗಾವಿ ಕಲಾವಿದರ ಕರಪಾಲ ನೃತ್ಯ, ಚಿಕ್ಕಬಳ್ಳಾಪುರ ಕಲಾವಿದರ ಗಾರುಡಿ ಗೊಂಬೆ ನೃತ್ಯ, ದಕ್ಷಿಣ ಕನ್ನಡ ಜಿಲ್ಲೆಯ ಕಂಗೀಲು ಕುಣಿತ, ತಮಿಳುನಾಡಿನ ಕರಗ ತಪ್ಪಟಂ, ಉತ್ತರ ಕನ್ನಡ ಜಿಲ್ಲೆಯ ಢಕ್ಕೆ ಕುಣಿತ, ಹಾವೇರಿ, ಶಿವಮೊಗ್ಗ ಹಾಗೂ ದಾವಣಗೆರೆಯ ಡೊಳ್ಳು ಕುಣಿತಗಳು ಸಾರ್ವಜನಿಕರ ಗಮನ  ಸೆಳೆದವು.

ಬಳ್ಳಾರಿಯ ಬುಡಕಟ್ಟು ಜನರ ಹಕ್ಕಿಪಿಕ್ಕಿ ನೃತ್ಯ, ಮಹರ್ಷಿ ವಾಲ್ಮೀಕಿ ತಂಡದವರ ಮರಗಾಲು ಕುಣಿತ, ಪದ್ಮಶ್ರೀ ಪ್ರಸನ್ನಕುಮಾರ್ ಹಾಗೂ ನಾಡೋಜ ಮುನಿವೆಂಕಟಪ್ಪ ಅವರ ತಮಟೆ ವಾದನ, ಶಹನಾಯಿ ವಾದನ, ಗಣಿ ವಾದನ, ಗುಜರಾತ್‌ನ ಗರ್ಭಾ ಬುಡಕಟ್ಟು ನೃತ್ಯ, ನಾದಸ್ವರ, ಲೇಂಗಿ ನೃತ್ಯ, ಬೇಡರ ವೇಷ, ಚಂಡೆ ವಾದನ ಜಂಬೂ ಸವಾರಿ ಮೆರವಣಿಗೆಗೆ ಮೆರುಗು ತಂದವು.

ಬಸವಳಿದ ಕಲಾವಿದರು: ಅರಮನೆ ಆವರಣದಲ್ಲಿ ಆರಂಭವಾದ ಜಂಬೂಸವಾರಿ ಮೆರವಣಿಗೆಯಲ್ಲಿ ಅದ್ಭುತವಾಗಿ ಹೆಜ್ಜೆ ಹಾಕಿದ ಕಲಾವಿದರು. ಆಯುರ್ವೇದ ಆಸ್ಪತ್ರೆ ಬಳಿ ಬರುತ್ತಿದ್ದಂತೆ ಮಂಕಾದಂತೆ ಕಂಡುಬಂದರು. ಈ ವೇಳೆ ಬಿಸಿಲು ಇಲ್ಲದ ಕಾರಣ ಸಮಾಧಾನಚಿತ್ತದಿಂದಲೇ ಕಲಾವಿದರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ನೀರು, ಮಜ್ಜಿಗೆ ವಿತರಣೆ: ದಾರಿಯುದ್ದಕ್ಕೂ ಕಲಾವಿದರಿಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳವರು ಹಾಗೂ ದಸರಾ ಸಮಿತಿ ವತಿಯಿಂದ ನೀರು, ಮಜ್ಜಿಗೆ ವಿತರಿಸಲಾಯಿತು.

ಆಂದೋಲನ ಡೆಸ್ಕ್

Recent Posts

ಕಾರು ಚಾಲಕನ ಪುತ್ರನಿಗೆ ಟಿಕೆಟ್‌ ನೀಡಿ ಗೆಲ್ಲಿಸಿಕೊಂಡು ಬಂದ ದಳಪತಿ ವಿಜಯ್‌!

ಚೆನ್ನೈ : ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್‌ ಅವರ ಕಾರು ಚಾಲಕನ…

9 hours ago

ಬಿಜೆಪಿಗೆ ಮೂರು ರಾಜ್ಯಗಳಲ್ಲಿ ಗೆಲುವು : ಮೈಸೂರಲ್ಲಿ ಸಂಭ್ರಮಾಚರಣೆ

ಮೈಸೂರು : ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಮೂರು ರಾಜ್ಯಗಳಲ್ಲಿ ಗೆಲುವು ಲಭಿಸಿದ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಜೆಪಿ…

9 hours ago

ವಿಜಯ್‌ ಭೇಟಿಯಾಗಿ ತ್ರಿಶಾ ಅಭಿನಂದನೆ

ಚೆನ್ನೈ : ನಟಿ ತ್ರಿಶಾ ಕೃಷ್ಣನ್ ತಮ್ಮ ಹುಟ್ಟುಹಬ್ಬದ ನಿಮಿತ್ತ ಸೋಮವಾರ ಬೆಳಿಗ್ಗೆ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.…

10 hours ago

ತಮಿಳುನಾಡು| ಸಿಎಂ ಎಂ.ಕೆ.ಸ್ಟಾಲಿನ್‌ಗೆ ಸೋಲು

ಚೆನ್ನೈ: ತಮಿಳುನಾಡಿನ ಹಾಲಿ ಸಿಎಂ ಎಂ.ಕೆ.ಸ್ಟಾಲಿನ್‌ ಸ್ವ ಕ್ಷೇತ್ರದಲ್ಲೇ ಸೋಲು ಅನುಭವಿಸಿದ್ದಾರೆ. ಈ ಮೂಲಕ ಸತತ 2ನೇ ಬಾರಿಗೆ ಸರ್ಕಾರ…

12 hours ago

ದಾವಣಗೆರೆ ದಕ್ಷಿಣ ಉಪಚುನಾವಣೆ: ಕೈ ಅಭ್ಯರ್ಥಿ ಸಮರ್ಥ್‌ ಶಾಮನೂರು ಜಯಭೇರಿ

ದಾವಣಗೆರೆ: ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ.…

13 hours ago

ಪ್ರಧಾನಿ ಮೋದಿ ದೂರದೃಷ್ಟಿಯ ನಾಯಕತ್ವಕ್ಕೆ ಎನ್‌ಡಿಎ ಭರ್ಜರಿ ಗೆಲುವು: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ವಿಕಸಿತ ಭಾರತದ ಮೇಲೆ ಜನರು ಹೊಂದಿರುವ ನಂಬಿಕೆಯಿಂದಾಗಿ ಎನ್‌ಡಿಎ…

14 hours ago