Andolana originals

ನಾಣ್ಯ, ಅಂಚೆ ಚೀಟಿಗಳಲ್ಲಿ ಅಂಬೇಡ್ಕರ್ ಅನಾವರಣ!

ಚಿರಂಜೀವಿ ಸಿ. ಹುಲ್ಲಹಳ್ಳಿ

೨೦ ವರ್ಷಗಳಿಂದ ಅಂಚೆ ಚೀಟಿ, ನಾಣ್ಯ ಸಂಗ್ರಹಿಸಿರುವ ಮುಳುಬಾಗಿಲಿನ ಸತೀಶ್

ಮೈಸೂರು: ಬಾಬಾ ಸಾಹೇಬರ ಪ್ರಜ್ಞೆಯ ಬೆಳಕು ಚೆಲ್ಲುವ ಬಹುರೂಪಿ ನಾಟಕೋತ್ಸವದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳು, ಅವರ ಆಶಯಗಳನ್ನು ದರ್ಶಿಸುವ ರೂಪಕಗಳು ಮೈದಾಳಿವೆ. ವಿಶೇಷವೆಂದರೆ ೧೦ ಸಾವಿರ ನಾಣ್ಯಗಳಲ್ಲಿ ಅಂಬೇಡ್ಕರ್ ಅವರನ್ನು ಕಾಣುವ ಅಪರೂಪದ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಇತಿಹಾಸದ ವಿದ್ಯಾರ್ಥಿಯಾಗಿರುವ ಸತೀಶ್, ಹಾಸನ ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾ ಲಯದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಸಂಬಳದ ಅರ್ಧ ಹಣವನ್ನು ಇದಕ್ಕಾಗಿ ಮೀಸಲಿಟ್ಟು, ದೇಶದ ಮೂಲೆ ಮೂಲೆಗಳನ್ನು ಸುತ್ತಿ ೧೦ ಸಾವಿರ ನಾಣ್ಯಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡುವ ಮೂಲಕ, ಮುಂದಿನ ಪೀಳಿಗೆಗೆ ಸಂವಿಧಾನದ ಆಶಯಗಳು, ನಾಡಿನ ಇತಿಹಾಸ ತಿಳಿಸುವ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ.

ಕಳೆದ ೪ ವರ್ಷಗಳಿಂದ ನಾಡಿನ ಮೂಲೆ ಮೂಲೆಗಳಲ್ಲಿ ಪ್ರದರ್ಶನ ನೀಡುತ್ತಾ ಬಂದಿದ್ದು, ಇದು ಅವರ ೧೪೭ನೇ ಪ್ರದರ್ಶನವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ಶತಮಾನೋತ್ಸವ ನೆನಪಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊರತಂದ ವಿಶೇಷ ನಾಣ್ಯವನ್ನು ಸಂಗ್ರಹಿಸಲು ದೇಶದ ಎಲ್ಲ ರಾಜ್ಯಗಳಲ್ಲಿ ಸುತ್ತಾಡಿ ೧೦ ಸಾವಿರ ನಾಣ್ಯ ಸಂಗ್ರಹಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಮಹಾರಾಷ್ಟ್ರ ವ್ಯಕ್ತಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

೫೦೦ ಸ್ವಾತಂತ್ರ್ಯ ಹೋರಾಟಗಾರರ ಅಂಚೆ ಚೀಟಿಗಳು: ಅಂಬೇಡ್ಕರ್ ೭೫ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ೧೯೬೫ರಲ್ಲಿ ಬಾಬಾ ಸಾಹೇಬರ ಮೊದಲ ಅಂಚೆಚೀಟಿ ಬಿಡುಗಡೆ ಮಾಡಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಬಂದಿರುವ ಬಾಬಾ ಸಾಹೇಬರ ಅಂಚೆಚೀಟಿಗಳು, ಸಂವಿಧಾನದ ಆರ್ಟಿಕಲ್‌ಗೆ ಅನುಗುಣವಾಗಿರುವ ಇತರೆ ಅಂಚೆ ಚೀಟಿಗಳು, ಸ್ವಾತಂತ್ರ್ಯ ಹೋರಾಟಗಾರರ ೫೦೦ ವಿಶೇಷ ಸ್ಟಾಂಪ್‌ಗಳ ಪ್ರದರ್ಶನ ಇಲ್ಲಿ ಮೇಳೈಸಿದೆ.

ಇಲ್ಲಿಯ ವರೆಗೂ ೧೪೭ ಪ್ರದರ್ಶನ ನೀಡಿರುವ ಸತೀಶ್ ಪ್ರದರ್ಶನದ ಸ್ಥಳಕ್ಕೆ ತಮ್ಮ ಸ್ವಂತ ಖರ್ಚಿನಲ್ಲೇ ತೆರಳುತ್ತಿ ದ್ದಾರೆ. ಇದರಲ್ಲಿ ಕೇವಲ ೨೦ರಿಂದ ೨೨ ಪ್ರದರ್ಶ ನಗಳಲ್ಲಿ ಮಾತ್ರ ಗೌರವಧನ ಮತ್ತು ಪ್ರಯಾಣ ಭತ್ಯೆಯನ್ನು ಕೊಟ್ಟಿದ್ದಾರೆ.

ಸತೀಶ್ ಅವರಿಗೆ ರಾಷ್ಟ್ರೀಯ ಪುರಸ್ಕಾರ:  ವಿಶ್ವದ ಮೊದಲ ಖಾದಿ ಅಂಚೆ, ತ್ರಿಡಿ ಸ್ಟ್ಯಾಂಪ್, ಪ್ಲಾಸ್ಟಿಕ್ ಸ್ಟ್ಯಾಂಪ್, ವಿಶ್ವದ ಮೊದಲ ರೇಷ್ಮೆ ಲಕೋಟೆ, ಅಂಚೆ ಇಲಾಖೆ ಹೊರತಂದಿರುವ ಅಂಬೇಡ್ಕರ್ ಅವರ ಎಲ್ಲ ಚೀಟಿಗಳನ್ನು ಸಂಗ್ರಹಿಸಿರುವ ಸತೀಶ್ ಅವರು ೪ ರಾಷ್ಟ್ರೀಯ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

” ಗಿನ್ನಿಸ್ ದಾಖಲೆ ನಿರೀಕ್ಷೆ ಲಿಮ್ಕಾ ಮತ್ತು ಗಿನ್ನಿಸ್ ದಾಖಲೆಯಾಗುವಷ್ಟು ನಾಣ್ಯಗಳು ಇವರ ಬಳಿ ಇವೆ. ಹಳೆಯ ದಾಖಲೆಗಳ ಪ್ರಕಾರ ೮ ಸಾವಿರ ನಾಣ್ಯಗಳು ಈ ದಾಖಲೆಗೆ ಭಾಜನವಾಗಿದ್ದು, ನನ್ನ ಬಳಿ ಈಗ ೧೦ ಸಾವಿರ ನಾಣ್ಯಗಳಿವೆ. ಆದರೆ, ಈ ದಾಖಲೆಗಳಿಗೆ ಅರ್ಜಿ ಸಲ್ಲಿಸಲು ಸಮಯವಿಲ್ಲದೆ ಪ್ರದರ್ಶನ ನೀಡುತ್ತಿದ್ದೇನೆ ಎನ್ನುತ್ತಾರೆ ಸತೀಶ್.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ | ನೀರು ಬಿಟ್ಟು ರೈತರಿಗೆ ಅನುಕೂಲ ಕಲ್ಪಿಸಿ

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯು ವನಸಿರಿ ನಾಡು ಎಂದೆ ಪ್ರಸಿದ್ಧಿ ಪಡೆದಿದೆ ಹಾಗೆ ಜಲಾಶಯಗಳ ಬೀಡು ಎಂದು ಹೆಸರು ಪಡೆದುಕೊಂಡಿದೆ. ಈಗ…

17 hours ago

ಓದುಗರ ಪತ್ರ | ಈ ವಿಶಾಲ ಪಾರ್ಕ್‌ಗೆ ಬೇಕು ಶೌಚಾಲಯ

ಮೈಸೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಕುವೆಂಪು ನಗರದ ಎಂ -ಬ್ಲಾಕ್ ನಲ್ಲಿರುವ ಭಾರತ್ ಮಾತಾ ಉದ್ಯಾನವನವು ಕುವೆಂಪು ನಗರದ ಪ್ರಮುಖ…

17 hours ago

ಓದುಗರ ಪತ್ರ | ಚರಂಡಿ ಸೇರುತ್ತಿರುವ ನೀರಿಗೆ ‘ತಡೆ’ಹಾಕಿ

ಮೈಸೂರಿನ ವಿಜಯನಗರ ಎರಡನೇ ಹಂತದ ದಿವ್ಯರೂಪ ಕಲ್ಯಾಣ ಮಂಟಪದ ಸಮೀಪ ಮೂರು ವಾರಗಳಿಂದ ದಿನದಲ್ಲಿ ಆರು ಗಂಟೆಗಳ ಕಾಲ ಪ್ರತಿ…

17 hours ago

ನಾಡಿನುದ್ದಕ್ಕೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಕಂಪು

ಡಿಸೆಂಬರ್‌ನಲ್ಲಿ ವಜ್ರಮಹೋತ್ಸವ ; ಸಂಭ್ರಮಕ್ಕೆ ಸಿದ್ಧತೆ ಚಿರಂಜೀವಿ ಸಿ.ಹುಲ್ಲಹಳ್ಳಿ ಕರ್ನಾಟಕದ ನೆಲ, ಜಲ, ಭಾಷೆಯ ಏಳಿಗೆಗಾಗಿ ಕಾವ್ಯ, ಸಾಹಿತ್ಯ ಮತ್ತು…

17 hours ago

ಗಾಂಧಿ ಅಭಿಯಾನ ಅರಿವಿನ ಯಾನ ; ಗಾಂಧಿ ವಾದಕ್ಕೆ ಮನಸೋತಿದ್ದ ಬಳ್ಳಾರಿ ಸಿದ್ದಮ್ಮ

ಡಾ. ಎಂ. ಡಿ. ಉಮೇಶ, ಉಪನ್ಯಾಸಕರು, ಗಾಂಧಿ ಅಧ್ಯಯನ ಕೇಂದ್ರ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಬಳ್ಳಾರಿ ಸಿದ್ದಮ್ಮನವರು ೧೯೦೩ರಲ್ಲಿ ಬಸೆಟಪ್ಪ…

18 hours ago

ಗಾಂಧಿ ಅಭಿಯಾನ ಅರಿವಿನ ಯಾನ ; ಆಹಾರದ ಕುರಿತು ಕೆಲವು ಚಿಲ್ಲರೆ ಪ್ರಯೋಗಗಳು

ನಾನು ನನ್ನನ್ನು ಆಳವಾಗಿ ಪರಿಶೋಧಿಸಿಕೊಂಡಂತೆಲ್ಲ ನನ್ನ ಆಂತರಿಕ ಮತ್ತು ಬಾಹ್ಯ ವಿಷಯಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ನನಗೆ ತೋರಿತು. ನನ್ನ…

18 hours ago